ETV Bharat / entertainment

ಪ್ಯಾನ್​ ಇಂಡಿಯಾ ಚಿತ್ರ 'ಸಿಕಾಡಾ' ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆಗೊಳಿಸಿದ ಮೇಘನಾ ರಾಜ್​, ಪ್ರಜ್ವಲ್​ ದೇವರಾಜ್​

author img

By

Published : Aug 19, 2023, 4:33 PM IST

Cicada first look poster: ಪ್ಯಾನ್​ ಇಂಡಿಯಾ 'ಸಿಕಾಡಾ' ಚಿತ್ರದ ಕನ್ನಡದ ಫಸ್ಟ್​ ಲುಕ್​ ಪೋಸ್ಟರ್​ ಅನ್ನು ಸ್ಯಾಂಡಲ್​ವುಡ್​ ನಟರಾದ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಬಿಡುಗಡೆಗೊಳಿಸಿದ್ದಾರೆ.

cicada
ಸಿಕಾಡಾ

ಪ್ಯಾನ್​ ಇಂಡಿಯಾ 'ಸಿಕಾಡಾ' ಚಿತ್ರದ ಕನ್ನಡದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆಯಾಗಿದೆ. ಸ್ಯಾಂಡಲ್​ವುಡ್​ ನಟರಾದ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಸಿನಿಮಾದ ಪೋಸ್ಟರ್​ ರಿಲೀಸ್​ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಕೃಷಿ ಸಚಿವ ಎನ್​.ಹೆಚ್​ ಶಿವಶಂಕರ ರೆಡ್ಡಿ ಕೂಡ ಸಾಥ್​ ನೀಡಿ, 'ಸಿಕಾಡಾ' ಚಿತ್ರಕ್ಕೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸಿದರು. ​ ​

'ಸಿಕಾಡಾ' ಚಿತ್ರವನ್ನು ಶ್ರೀಜಿತ್ ಎಡವನ ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ರಜಿತ್ ಸಿ.ಆರ್, ಗಾಯತ್ರಿ ಮಯೂರ, ಜೈಸ್ ಜೋಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಅಟ್ಟಪಾಡಿ, ವಾಗಮೋನ್​, ಕೊಚ್ಚಿ ಮುಂತಾದೆಡೆ 'ಸಿಕಾಡಾ' ಚಿತ್ರೀಕರಣ ನಡೆದಿದೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದೆ.

'ಸಿಕಾಡಾ'ದ ವಿಶೇಷತೆ: 'ಸಿಕಾಡಾ' ಚಿತ್ರದ ಒಂದು ವಿಶೇಷತೆಯೆಂದರೆ, ಪ್ರತಿ ಅವತರಣಿಕೆಯ ಚಿತ್ರಕ್ಕೂ ಪ್ರತ್ಯೇಕ ಟ್ಯೂನ್​ಗಳನ್ನು ಕಂಪೋಸ್​ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ನಾಲ್ಕು ಭಾಷೆಗಳಲ್ಲಿ ಆ ಭಾಷೆಯ ನೇಟಿವಿಟಿಗೆ ಹೊಂದುವಂತಹ ಟ್ಯೂನ್​ಗಳನ್ನು ಸಂಯೋಜಿಸಲಾಗಿದೆ. ನಾಲ್ಕು ಭಾಷೆಯ ಅವತರಣಿಕೆಗಳಿಗೆಂದೇ ಒಟ್ಟು 24 ಹೊಸ ಹಾಡುಗಳನ್ನು ಕಂಪೋಸ್​ ಮಾಡಿರುವುದು ವಿಶೇಷ. ಇದು 'ಸಿಕಾಡಾ'ದ ವಿಶಿಷ್ಟ ಲಕ್ಷಣವಾಗಿದೆ.

ಇದನ್ನೂ ಓದಿ: 'ಗಂಟುಮೂಟೆ' ಖ್ಯಾತಿಯ ನಿಶ್ಚಿತ್ ಕೊರೋಡಿ ನಟನೆಯ 'ಸಪ್ಲೈಯರ್ ಶಂಕರ' ಮೋಷನ್​ ಪೋಸ್ಟರ್​ ರಿಲೀಸ್​

ಅಲ್ಲದೇ ನಿರ್ದೇಶಕ ಶ್ರೀಜಿತ್ ಎಡವನ ಸಂಗೀತ ಸಂಯೋಜಕರೂ ಹೌದು. ಅವರು 'ಪ್ರೀತಿ ನನ್ನ ಕವಿಯೇ' ಮತ್ತು 'ನೆಂಜೋಡು ಚೆರ್ತು'ನಂತಹ ಸಂಗೀತ ಹಿಟ್​ಗಳನ್ನು ಸಂಯೋಜಿಸುವ ಮೂಲಕ ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯವನ್ನು ರವಿತೇಜ ಅಮರನಾರಾಯಣ ಬರೆದಿದ್ದಾರೆ.

ಶೀಘ್ರದಲ್ಲೇ ಬಿಡುಗಡೆ: ನವೀನ್ ರಾಜ್ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿದ್ದು, ಶೈಜಿತ್ ಕುಮಾರನ್ ಸಂಕಲನ ಮಾಡಿದ್ದಾರೆ. ತಿರ್ನಾ ಫಿಲ್ಮ್ಸ್ ಮತ್ತು ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ ನಿರ್ಮಿಸಿದ್ದಾರೆ‌.‌ ಸದ್ಯ ಟೈಟಲ್​ನಿಂದ ಗಮನ ಸೆಳೆಯುತ್ತಿರೋ ಸಿಕಾಡಾ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಮೇಘನಾ- ಪ್ರಜ್ವಲ್​ ಸಿನಿಮಾ: ಇನ್ನೂ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ 'ತತ್ಸಮ ತದ್ಭವ' ಸಿನಿಮಾ ಮೂಲಕ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಶಾಲ್​ ಆತ್ರೇಯ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪನ್ನಗ ಭರಣ ಬಂಡವಾಳ ಹೂಡಿದ್ದಾರೆ. ಸ್ಫೂರ್ತಿ ಅನಿಲ್​ ಅವರು ಪನ್ನಗ ಭರಣ ಅವರ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಒಂದು ಹಾಡಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ತತ್ಸಮ ತದ್ಭವ ಚಿತ್ರತಂಡದಿಂದ 'ದೂರಿ ಲಾಲಿ ಚಾಲೆಂಜ್': ಗೆದ್ರೆ ಮೇಘನಾ ರಾಜ್ ಭೇಟಿಯಾಗುವ ಚಾನ್ಸ್

ಪ್ಯಾನ್​ ಇಂಡಿಯಾ 'ಸಿಕಾಡಾ' ಚಿತ್ರದ ಕನ್ನಡದ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆಯಾಗಿದೆ. ಸ್ಯಾಂಡಲ್​ವುಡ್​ ನಟರಾದ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ ಸಿನಿಮಾದ ಪೋಸ್ಟರ್​ ರಿಲೀಸ್​ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಕೃಷಿ ಸಚಿವ ಎನ್​.ಹೆಚ್​ ಶಿವಶಂಕರ ರೆಡ್ಡಿ ಕೂಡ ಸಾಥ್​ ನೀಡಿ, 'ಸಿಕಾಡಾ' ಚಿತ್ರಕ್ಕೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸಿದರು. ​ ​

'ಸಿಕಾಡಾ' ಚಿತ್ರವನ್ನು ಶ್ರೀಜಿತ್ ಎಡವನ ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ರಜಿತ್ ಸಿ.ಆರ್, ಗಾಯತ್ರಿ ಮಯೂರ, ಜೈಸ್ ಜೋಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಬೆಂಗಳೂರು, ಅಟ್ಟಪಾಡಿ, ವಾಗಮೋನ್​, ಕೊಚ್ಚಿ ಮುಂತಾದೆಡೆ 'ಸಿಕಾಡಾ' ಚಿತ್ರೀಕರಣ ನಡೆದಿದೆ. ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬಂದಿದೆ.

'ಸಿಕಾಡಾ'ದ ವಿಶೇಷತೆ: 'ಸಿಕಾಡಾ' ಚಿತ್ರದ ಒಂದು ವಿಶೇಷತೆಯೆಂದರೆ, ಪ್ರತಿ ಅವತರಣಿಕೆಯ ಚಿತ್ರಕ್ಕೂ ಪ್ರತ್ಯೇಕ ಟ್ಯೂನ್​ಗಳನ್ನು ಕಂಪೋಸ್​ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ನಾಲ್ಕು ಭಾಷೆಗಳಲ್ಲಿ ಆ ಭಾಷೆಯ ನೇಟಿವಿಟಿಗೆ ಹೊಂದುವಂತಹ ಟ್ಯೂನ್​ಗಳನ್ನು ಸಂಯೋಜಿಸಲಾಗಿದೆ. ನಾಲ್ಕು ಭಾಷೆಯ ಅವತರಣಿಕೆಗಳಿಗೆಂದೇ ಒಟ್ಟು 24 ಹೊಸ ಹಾಡುಗಳನ್ನು ಕಂಪೋಸ್​ ಮಾಡಿರುವುದು ವಿಶೇಷ. ಇದು 'ಸಿಕಾಡಾ'ದ ವಿಶಿಷ್ಟ ಲಕ್ಷಣವಾಗಿದೆ.

ಇದನ್ನೂ ಓದಿ: 'ಗಂಟುಮೂಟೆ' ಖ್ಯಾತಿಯ ನಿಶ್ಚಿತ್ ಕೊರೋಡಿ ನಟನೆಯ 'ಸಪ್ಲೈಯರ್ ಶಂಕರ' ಮೋಷನ್​ ಪೋಸ್ಟರ್​ ರಿಲೀಸ್​

ಅಲ್ಲದೇ ನಿರ್ದೇಶಕ ಶ್ರೀಜಿತ್ ಎಡವನ ಸಂಗೀತ ಸಂಯೋಜಕರೂ ಹೌದು. ಅವರು 'ಪ್ರೀತಿ ನನ್ನ ಕವಿಯೇ' ಮತ್ತು 'ನೆಂಜೋಡು ಚೆರ್ತು'ನಂತಹ ಸಂಗೀತ ಹಿಟ್​ಗಳನ್ನು ಸಂಯೋಜಿಸುವ ಮೂಲಕ ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಅದ್ಭುತವಾದ ಸಾಹಿತ್ಯವನ್ನು ರವಿತೇಜ ಅಮರನಾರಾಯಣ ಬರೆದಿದ್ದಾರೆ.

ಶೀಘ್ರದಲ್ಲೇ ಬಿಡುಗಡೆ: ನವೀನ್ ರಾಜ್ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿದ್ದು, ಶೈಜಿತ್ ಕುಮಾರನ್ ಸಂಕಲನ ಮಾಡಿದ್ದಾರೆ. ತಿರ್ನಾ ಫಿಲ್ಮ್ಸ್ ಮತ್ತು ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ವಂದನಾ ಮೆನನ್ ಮತ್ತು ಗೋಪಕುಮಾರ್ ಪಿ ನಿರ್ಮಿಸಿದ್ದಾರೆ‌.‌ ಸದ್ಯ ಟೈಟಲ್​ನಿಂದ ಗಮನ ಸೆಳೆಯುತ್ತಿರೋ ಸಿಕಾಡಾ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಮೇಘನಾ- ಪ್ರಜ್ವಲ್​ ಸಿನಿಮಾ: ಇನ್ನೂ ಮೇಘನಾ ರಾಜ್​ ಮತ್ತು ಪ್ರಜ್ವಲ್​ ದೇವರಾಜ್​ 'ತತ್ಸಮ ತದ್ಭವ' ಸಿನಿಮಾ ಮೂಲಕ ಜೊತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ವಿಶಾಲ್​ ಆತ್ರೇಯ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪನ್ನಗ ಭರಣ ಬಂಡವಾಳ ಹೂಡಿದ್ದಾರೆ. ಸ್ಫೂರ್ತಿ ಅನಿಲ್​ ಅವರು ಪನ್ನಗ ಭರಣ ಅವರ ಜೊತೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಒಂದು ಹಾಡಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ತತ್ಸಮ ತದ್ಭವ ಚಿತ್ರತಂಡದಿಂದ 'ದೂರಿ ಲಾಲಿ ಚಾಲೆಂಜ್': ಗೆದ್ರೆ ಮೇಘನಾ ರಾಜ್ ಭೇಟಿಯಾಗುವ ಚಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.