ETV Bharat / entertainment

'ಅನಿಮಲ್​'ಗೆ ರಶ್ಮಿಕಾಗೂ ಮುನ್ನ ಪರಿಣಿತಿ ಚೋಪ್ರಾಗೆ ಆಫರ್​ ನೀಡಿದ್ದ ನಿರ್ದೇಶಕ ಸಂದೀಪ್ ರೆಡ್ಡಿ

author img

By ETV Bharat Karnataka Team

Published : Dec 24, 2023, 9:27 PM IST

'ಅನಿಮಲ್​' ಚಿತ್ರದ ನಾಯಕಿ ಪಾತ್ರದ ಆಯ್ಕೆಯ ಬಗ್ಗೆ ಕುತೂಹಲಕಾರಿ ಸಂಗತಿಯನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಬಹಿರಂಗಪಡಿಸಿದ್ದಾರೆ.

not Rashmika mandanna Parineeti Chopra is the first choice of animal movie
'ಅನಿಮಲ್​'ಗೆ ರಶ್ಮಿಕಾಗೂ ಮುನ್ನ ಪರಿಣಿತಿ ಚೋಪ್ರಾಗೆ ಆಫರ್​ ನೀಡಿದ್ರು ನಿರ್ದೇಶಕ ಸಂದೀಪ್ ರೆಡ್ಡಿ

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ತೆರೆಕಂಡ 'ಅನಿಮಲ್​' ಚಿತ್ರದ ಮೂಲಕ ಬಹುದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಇವರು ಈವರೆಗೆ ಎರಡು ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದರೂ, ಅವು ಅಭಿಮಾನಿಗಳ ಮನದಲ್ಲಿ ಉಳಿಯುವಂತಹ ಕಥೆಗಳೇ ಆಗಿವೆ. ಅದರ ಜೊತೆಗೆ ಪಾತ್ರಗಳ ಆಯ್ಕೆ ಮಾಡುವ ಬಗ್ಗೆಯೂ ಫ್ಯಾನ್ಸ್​ ಚರ್ಚೆ ನಡೆಸುತ್ತಿದ್ದಾರೆ. ನಾಯಕ, ನಾಯಕಿಯರ ಸೆಲೆಕ್ಷನ್​ ಮಾಡೋದ್ರಲ್ಲಿ ಅವರು ಸಮಾನ ಎಂದು ಹೊಗಳುತ್ತಾರೆ.

'ಕಬೀರ್​ ಸಿಂಗ್​' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು 'ಅನಿಮಲ್​' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಯಶಸ್ಸನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸಿನಿಮಾ ನಾಯಕಿಯರ ಆಯ್ಕೆಯ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ಸಂದೀಪ್​ ರೆಡ್ಡಿ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಕಬೀರ್​ ಸಿಂಗ್​ ಮತ್ತು ಅನಿಮಲ್​ ಎರಡೂ ಚಿತ್ರಗಳಲ್ಲಿನ ನಾಯಕಿ ಪಾತ್ರಕ್ಕೆ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮೊದಲ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅದೂ ಅಲ್ಲದೇ 'ಅನಿಮಲ್​' ವಿಚಾರವಾಗಿ ಅವರಲ್ಲಿ ಈಗಾಗಲೇ ಕ್ಷಮೆ ಕೇಳಿದ್ದೇನೆ" ಎಂದಿದ್ದಾರೆ.

"ನನಗೆ ಪರಿಣಿತಿ ಚೋಪ್ರಾ ಅವರ ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಿನಿಮಾಗಳಲ್ಲಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಾನು ಯಾವಾಗಲೂ ಬಯಸುತ್ತೇನೆ. ಆರಂಭದಲ್ಲಿ 'ಕಬೀರ್​ ಸಿಂಗ್​' ಚಿತ್ರದಲ್ಲಿ ಪ್ರೀತಿ ಪಾತ್ರವನ್ನು ಅವರಿಂದಲೇ ಮಾಡಿಸಬೇಕು ಎಂದುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಈ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ವಿಚಾರ ಅವರಿಗೂ ಗೊತ್ತು. ನಂತರದಲ್ಲಿ 'ಅನಿಮಲ್​' ಸಿನಿಮಾಗೆ ಅವರೇ ನಾಯಕಿಯಾಗಿ ಆಯ್ಕೆಯಾದಾಗ ಖುಷಿಯಾಯಿತು. ಚಿತ್ರೀಕರಣ ಪ್ರಾರಂಭವಾಗುವ ಒಂದೂವರೆ ವರ್ಷದ ಮೊದಲು ಅವರು ಈ ಯೋಜನೆಗೆ ಸಹಿ ಹಾಕಿದರು. ಆದರೆ ಚಿತ್ರದ ಕೆಲವು ಅಂಶಗಳಲ್ಲಿ ಗೀತಾಂಜಲಿಯಾಗಿ (ಅನಿಮಲ್​ ಚಿತ್ರದ ನಾಯಕಿಯ ಹೆಸರು) ಅವರನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಅದೇ ವಿಷಯವನ್ನು ಅವರಿಗೂ ಹೇಳಿದೆ. ಸಾರಿ, ಸಿನಿಮಾಗಿಂತ ಯಾವುದೂ ದೊಡ್ಡದಲ್ಲ. ಅದಕ್ಕೆ ಈ ನಿರ್ಧಾರ ತೆಗೆದುಕೊಂಡೆ. ಅನಿಮಲ್​ಗೆ ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದೆ. ನನ್ನ ಮಾತಿನಿಂದ ಆಕೆಗೆ ಬಹಳ ನೋವಾಯಿತು. ಆದರೆ, ನಾನು ಯಾಕೆ ಹಾಗೆ ಹೇಳಿದೆ ಎಂದು ನಂತರ ಆಕೆ ಅರ್ಥ ಮಾಡಿಕೊಂಡಳು" ಎಂದು ಸಂದೀಪ್​ ಹೇಳಿದರು.

ಹೀಗಾಗಿ ಪರಿಣಿತ ಚೋಪ್ರಾಗೆ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯಿತು. 'ಅನಿಮಲ್​' ಚಿತ್ರದ ಮೂಲಕ ನ್ಯಾಷನಲ್​ ಕ್ರಶ್ ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆಯೂರುವ ಪರ್ಫಾಮೆನ್ಸ್​ ನೀಡಿದ್ದಾರೆ. ನಟ​ ರಣಬೀರ್​ ಕಪೂರ್​ ಅವರಿಗೂ ಅತ್ಯಂತ ಬಿಗ್​ ಹಿಟ್​ ನೀಡಿದ ಸಿನಿಮಾ ಇದಾಗಿದೆ. ಅಲ್ಲದೇ ರಣಬೀರ್​ ಅವರ 'ಸಂಜು' ಚಿತ್ರದ ದಾಖಲೆಯನ್ನು ಇದು ಧೂಳಿಪಟ ಮಾಡಿದೆ. ಸದ್ಯ ನಿರ್ದೇಶಕ ಸಂದೀಪ್​, 'ಅನಿಮಲ್​' ಸೀಕ್ವೆಲ್​ 'ಅನಿಮಲ್ ಪಾರ್ಕ್'ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಾದ್ಯಂತ ₹800 ಕೋಟಿ ಸಮೀಪಿಸಿದ 'ಅನಿಮಲ್'​: ರಣ್​ಬೀರ್​ - ರಶ್ಮಿಕಾಗೆ ಬಹುದೊಡ್ಡ ಯಶಸ್ಸು

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇತ್ತೀಚೆಗೆ ತೆರೆಕಂಡ 'ಅನಿಮಲ್​' ಚಿತ್ರದ ಮೂಲಕ ಬಹುದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ. ಇವರು ಈವರೆಗೆ ಎರಡು ಚಿತ್ರಗಳನ್ನು ಮಾತ್ರ ನಿರ್ದೇಶಿಸಿದ್ದರೂ, ಅವು ಅಭಿಮಾನಿಗಳ ಮನದಲ್ಲಿ ಉಳಿಯುವಂತಹ ಕಥೆಗಳೇ ಆಗಿವೆ. ಅದರ ಜೊತೆಗೆ ಪಾತ್ರಗಳ ಆಯ್ಕೆ ಮಾಡುವ ಬಗ್ಗೆಯೂ ಫ್ಯಾನ್ಸ್​ ಚರ್ಚೆ ನಡೆಸುತ್ತಿದ್ದಾರೆ. ನಾಯಕ, ನಾಯಕಿಯರ ಸೆಲೆಕ್ಷನ್​ ಮಾಡೋದ್ರಲ್ಲಿ ಅವರು ಸಮಾನ ಎಂದು ಹೊಗಳುತ್ತಾರೆ.

'ಕಬೀರ್​ ಸಿಂಗ್​' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಮತ್ತು 'ಅನಿಮಲ್​' ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಯಶಸ್ಸನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸಿನಿಮಾ ನಾಯಕಿಯರ ಆಯ್ಕೆಯ ಬಗ್ಗೆ ಕುತೂಹಲಕಾರಿ ವಿಚಾರಗಳನ್ನು ಸಂದೀಪ್​ ರೆಡ್ಡಿ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ, ಕಬೀರ್​ ಸಿಂಗ್​ ಮತ್ತು ಅನಿಮಲ್​ ಎರಡೂ ಚಿತ್ರಗಳಲ್ಲಿನ ನಾಯಕಿ ಪಾತ್ರಕ್ಕೆ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಮೊದಲ ಆಯ್ಕೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಅದೂ ಅಲ್ಲದೇ 'ಅನಿಮಲ್​' ವಿಚಾರವಾಗಿ ಅವರಲ್ಲಿ ಈಗಾಗಲೇ ಕ್ಷಮೆ ಕೇಳಿದ್ದೇನೆ" ಎಂದಿದ್ದಾರೆ.

"ನನಗೆ ಪರಿಣಿತಿ ಚೋಪ್ರಾ ಅವರ ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಿನಿಮಾಗಳಲ್ಲಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲು ನಾನು ಯಾವಾಗಲೂ ಬಯಸುತ್ತೇನೆ. ಆರಂಭದಲ್ಲಿ 'ಕಬೀರ್​ ಸಿಂಗ್​' ಚಿತ್ರದಲ್ಲಿ ಪ್ರೀತಿ ಪಾತ್ರವನ್ನು ಅವರಿಂದಲೇ ಮಾಡಿಸಬೇಕು ಎಂದುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಈ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ವಿಚಾರ ಅವರಿಗೂ ಗೊತ್ತು. ನಂತರದಲ್ಲಿ 'ಅನಿಮಲ್​' ಸಿನಿಮಾಗೆ ಅವರೇ ನಾಯಕಿಯಾಗಿ ಆಯ್ಕೆಯಾದಾಗ ಖುಷಿಯಾಯಿತು. ಚಿತ್ರೀಕರಣ ಪ್ರಾರಂಭವಾಗುವ ಒಂದೂವರೆ ವರ್ಷದ ಮೊದಲು ಅವರು ಈ ಯೋಜನೆಗೆ ಸಹಿ ಹಾಕಿದರು. ಆದರೆ ಚಿತ್ರದ ಕೆಲವು ಅಂಶಗಳಲ್ಲಿ ಗೀತಾಂಜಲಿಯಾಗಿ (ಅನಿಮಲ್​ ಚಿತ್ರದ ನಾಯಕಿಯ ಹೆಸರು) ಅವರನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಅದೇ ವಿಷಯವನ್ನು ಅವರಿಗೂ ಹೇಳಿದೆ. ಸಾರಿ, ಸಿನಿಮಾಗಿಂತ ಯಾವುದೂ ದೊಡ್ಡದಲ್ಲ. ಅದಕ್ಕೆ ಈ ನಿರ್ಧಾರ ತೆಗೆದುಕೊಂಡೆ. ಅನಿಮಲ್​ಗೆ ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದೆ. ನನ್ನ ಮಾತಿನಿಂದ ಆಕೆಗೆ ಬಹಳ ನೋವಾಯಿತು. ಆದರೆ, ನಾನು ಯಾಕೆ ಹಾಗೆ ಹೇಳಿದೆ ಎಂದು ನಂತರ ಆಕೆ ಅರ್ಥ ಮಾಡಿಕೊಂಡಳು" ಎಂದು ಸಂದೀಪ್​ ಹೇಳಿದರು.

ಹೀಗಾಗಿ ಪರಿಣಿತ ಚೋಪ್ರಾಗೆ ರಶ್ಮಿಕಾ ಮಂದಣ್ಣರನ್ನು ಆಯ್ಕೆ ಮಾಡಲಾಯಿತು. 'ಅನಿಮಲ್​' ಚಿತ್ರದ ಮೂಲಕ ನ್ಯಾಷನಲ್​ ಕ್ರಶ್ ಬಾಲಿವುಡ್​ನಲ್ಲಿ ಭದ್ರವಾಗಿ ನೆಲೆಯೂರುವ ಪರ್ಫಾಮೆನ್ಸ್​ ನೀಡಿದ್ದಾರೆ. ನಟ​ ರಣಬೀರ್​ ಕಪೂರ್​ ಅವರಿಗೂ ಅತ್ಯಂತ ಬಿಗ್​ ಹಿಟ್​ ನೀಡಿದ ಸಿನಿಮಾ ಇದಾಗಿದೆ. ಅಲ್ಲದೇ ರಣಬೀರ್​ ಅವರ 'ಸಂಜು' ಚಿತ್ರದ ದಾಖಲೆಯನ್ನು ಇದು ಧೂಳಿಪಟ ಮಾಡಿದೆ. ಸದ್ಯ ನಿರ್ದೇಶಕ ಸಂದೀಪ್​, 'ಅನಿಮಲ್​' ಸೀಕ್ವೆಲ್​ 'ಅನಿಮಲ್ ಪಾರ್ಕ್'ಗೆ ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಾದ್ಯಂತ ₹800 ಕೋಟಿ ಸಮೀಪಿಸಿದ 'ಅನಿಮಲ್'​: ರಣ್​ಬೀರ್​ - ರಶ್ಮಿಕಾಗೆ ಬಹುದೊಡ್ಡ ಯಶಸ್ಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.