ETV Bharat / entertainment

ಮಹೇಶ್​ ಬಾಬು ಅಭಿನಯದ 'ಗುಂಟೂರು ಖಾರಂ' ಸಿನಿಮಾ ಟ್ರೇಲರ್ ಬಿಡುಗಡೆ-ನೋಡಿ

author img

By ETV Bharat Karnataka Team

Published : Jan 8, 2024, 8:39 AM IST

Guntur Kaaram movie trailer released: ತ್ರಿವಿಕ್ರಮ್ ನಿರ್ದೇಶನವಿರುವ ಮಹೇಶ್ ಬಾಬು, ಶ್ರೀಲೀಲಾ ಅಭಿನಯದ ಹೊಸ ಸಿನಿಮಾ 'ಗುಂಟೂರು ಖಾರಂ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

Mahesh Babu
ಮಹೇಶ್​ ಬಾಬು

ಮಹೇಶ್ ಬಾಬು, ಶ್ರೀಲೀಲಾ ಅಭಿನಯದ 'ಗುಂಟೂರು ಖಾರಂ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಜನವರಿ 12ರಂದು ಸಿನಿಮಾ ತೆರೆಗೆ ಬರಲಿದೆ. ತ್ರಿವಿಕ್ರಮ್​ ಶ್ರೀನಿವಾಸ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಹನ್ನೆರಡು ವರ್ಷಗಳ ಬಿಡುವಿನ​ ಬಳಿಕ ಮಹೇಶ್​ ಬಾಬು ಹಾಗು ತ್ರಿವಿಕ್ರಮ್ ಜೊತೆಯಾಗಿದ್ದಾರೆ.

  • " class="align-text-top noRightClick twitterSection" data="">

ಅತಡು ಮತ್ತು ಖಲೇಜಾ ಚಿತ್ರಗಳಲ್ಲಿ ಇಬ್ಬರು ಕೆಲಸ ಮಾಡಿದ್ದರು. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್, ಪ್ರಕಾಶ್​ ರಾಜ್​ ಮತ್ತು ಸುನೀಲ್ ಸೇರಿದಂತೆ ಹಲವರು ಅಭಿನಯಿಸಿದ್ದರು.

ಟ್ರೇಲರ್​​ನಲ್ಲಿ ಮಹೇಶ್​ ಬಾಬು​ ಮಾಸ್ ಲುಕ್​ನಲ್ಲಿ​ ಅವತರಿಸಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳಿಗೆ ಇಷ್ಟವಾಗುವ ಖಡಕ್ ​ಡೈಲಾಗ್​ಗಳಿವೆ. ಗುಂಟೂರಿನ ಭೂಗತ ಪಾತಕಿಯೊಬ್ಬನ ಕುರಿತ ಕಥೆಯ ಕುರಿತು ಟ್ರೇಲರ್ ಸುಳಿವು ನೀಡಿದೆ. ಚಿತ್ರಕ್ಕೆ ಎಸ್.ಥಮನ್ ಸಂಗೀತ, ಮನೋಜ್ ಪರಮಹಂಸ ಮತ್ತು ಪಿ.ಎಸ್.ವಿನೋದ್ ಛಾಯಾಗ್ರಹಣ ಮತ್ತು ನವೀನ್ ನೂಲಿ ಸಂಕಲನವಿದೆ. ಎರಡನೇ ಹಿರೋಯಿನ್​ ಆಗಿ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ಒಟ್ಟು 3 ಹಾಡುಗಳು ರಿಲೀಸ್​ ಆಗಿವೆ. ಕುರಚಿ ಮಡತಪೆಟ್ಟಿ ಹಾಡು ವಿಶೇಷ​ ಬೀಟ್ಸ್​​ನಿಂದ ಗಮನ ಸೆಳೆಯುತ್ತಿದೆ.

ಸಂಕ್ರಾಂತಿಗೆ 'ಡಬಲ್​ ಡಬಲ್'​ ಧಮಾಕ: ಸಂಕ್ರಾಂತಿ ಹಬ್ಬಕ್ಕೆ ಗುಂಟೂರು ಖಾರಂ ಅಲ್ಲದೆ, 'ಸೈಂಧವ್', 'ಹನುಮಾನ್' ಮತ್ತು ನಾಗಾರ್ಜುನ ಅವರ 'ನಾ ಸಾಮಿ ರಂಗ' ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಗುಂಟೂರು ಖಾರಂ' ಸಾಂಗ್​: ಮಹೇಶ್ ಬಾಬು, ಶ್ರೀಲೀಲಾ ಭರ್ಜರಿ ಡ್ಯಾನ್ಸ್

ಮಹೇಶ್ ಬಾಬು, ಶ್ರೀಲೀಲಾ ಅಭಿನಯದ 'ಗುಂಟೂರು ಖಾರಂ' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಜನವರಿ 12ರಂದು ಸಿನಿಮಾ ತೆರೆಗೆ ಬರಲಿದೆ. ತ್ರಿವಿಕ್ರಮ್​ ಶ್ರೀನಿವಾಸ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ. ಹನ್ನೆರಡು ವರ್ಷಗಳ ಬಿಡುವಿನ​ ಬಳಿಕ ಮಹೇಶ್​ ಬಾಬು ಹಾಗು ತ್ರಿವಿಕ್ರಮ್ ಜೊತೆಯಾಗಿದ್ದಾರೆ.

  • " class="align-text-top noRightClick twitterSection" data="">

ಅತಡು ಮತ್ತು ಖಲೇಜಾ ಚಿತ್ರಗಳಲ್ಲಿ ಇಬ್ಬರು ಕೆಲಸ ಮಾಡಿದ್ದರು. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಜಯರಾಮ್, ಪ್ರಕಾಶ್​ ರಾಜ್​ ಮತ್ತು ಸುನೀಲ್ ಸೇರಿದಂತೆ ಹಲವರು ಅಭಿನಯಿಸಿದ್ದರು.

ಟ್ರೇಲರ್​​ನಲ್ಲಿ ಮಹೇಶ್​ ಬಾಬು​ ಮಾಸ್ ಲುಕ್​ನಲ್ಲಿ​ ಅವತರಿಸಿದ್ದಾರೆ. ಮಹೇಶ್ ಬಾಬು ಅಭಿಮಾನಿಗಳಿಗೆ ಇಷ್ಟವಾಗುವ ಖಡಕ್ ​ಡೈಲಾಗ್​ಗಳಿವೆ. ಗುಂಟೂರಿನ ಭೂಗತ ಪಾತಕಿಯೊಬ್ಬನ ಕುರಿತ ಕಥೆಯ ಕುರಿತು ಟ್ರೇಲರ್ ಸುಳಿವು ನೀಡಿದೆ. ಚಿತ್ರಕ್ಕೆ ಎಸ್.ಥಮನ್ ಸಂಗೀತ, ಮನೋಜ್ ಪರಮಹಂಸ ಮತ್ತು ಪಿ.ಎಸ್.ವಿನೋದ್ ಛಾಯಾಗ್ರಹಣ ಮತ್ತು ನವೀನ್ ನೂಲಿ ಸಂಕಲನವಿದೆ. ಎರಡನೇ ಹಿರೋಯಿನ್​ ಆಗಿ ಮೀನಾಕ್ಷಿ ಚೌಧರಿ ನಟಿಸಿದ್ದಾರೆ. ಒಟ್ಟು 3 ಹಾಡುಗಳು ರಿಲೀಸ್​ ಆಗಿವೆ. ಕುರಚಿ ಮಡತಪೆಟ್ಟಿ ಹಾಡು ವಿಶೇಷ​ ಬೀಟ್ಸ್​​ನಿಂದ ಗಮನ ಸೆಳೆಯುತ್ತಿದೆ.

ಸಂಕ್ರಾಂತಿಗೆ 'ಡಬಲ್​ ಡಬಲ್'​ ಧಮಾಕ: ಸಂಕ್ರಾಂತಿ ಹಬ್ಬಕ್ಕೆ ಗುಂಟೂರು ಖಾರಂ ಅಲ್ಲದೆ, 'ಸೈಂಧವ್', 'ಹನುಮಾನ್' ಮತ್ತು ನಾಗಾರ್ಜುನ ಅವರ 'ನಾ ಸಾಮಿ ರಂಗ' ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಗುಂಟೂರು ಖಾರಂ' ಸಾಂಗ್​: ಮಹೇಶ್ ಬಾಬು, ಶ್ರೀಲೀಲಾ ಭರ್ಜರಿ ಡ್ಯಾನ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.