ETV Bharat / entertainment

ಕಾಶ್ಮೀರದಲ್ಲಿ 'ಸತ್ಯ ಪ್ರೇಮ್​ ಕಿ ಕಥಾ' ರೊಮ್ಯಾಂಟಿಕ್​ ಹಾಡಿನ ಶೂಟಿಂಗ್

author img

By

Published : Apr 6, 2023, 4:43 PM IST

ಕಣಿವೆ ನಾಡಿನಲ್ಲಿ 'ಸತ್ಯ ಪ್ರೇಮ್​ ಕಿ ಕಥಾ' ಸಿನಿಮಾದ ರೊಮ್ಯಾಂಟಿಕ್​ ಹಾಡಿನ ಶೂಟಿಂಗ್ ಶುರುವಾಗಿದೆ.

shooting
ಸತ್ಯ ಪ್ರೇಮ್​ ಕಿ ಕಥಾ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕಾಗಿ ಪ್ರಸಿದ್ಧ ಬಾಲಿವುಡ್​ ನಿರ್ದೇಶಕರು ಮತ್ತು ತಾರೆಯರು ಈ ವರ್ಷ ಕಾಶ್ಮೀರಕ್ಕೆ ಪ್ರಯಾಣಿಸಿದ್ದಾರೆ. ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ಕಣಿವೆ ನಾಡಿನಲ್ಲಿ ಹಿಂದಿ ಸಿನಿಮಾಗಳ ಶೂಟಿಂಗ್​ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿನ ಕೆಲವು ಪ್ರದೇಶಗಳು ಸಿನಿಮಾದಲ್ಲಿನ ಲವ್​, ರೊಮ್ಯಾಂಟಿಕ್​ ಸೀನ್​ಗಳನ್ನು ಸೆರೆಹಿಡಿಯಲು ಅದ್ಭುತ ಸ್ಥಳವಾಗಿದೆ. ಹೀಗಾಗಿ ಬಾಲಿವುಡ್​ ಚಿತ್ರರಂಗ ಹೆಚ್ಚಾಗಿ ಕಾಶ್ಮೀರದ ಕಡೆಗೆ ತಮ್ಮ ಒಲವು ತೋರಿಸುತ್ತಿದೆ.

ಮಾರ್ಚ್​ ಆರಂಭದಲ್ಲಿ ನಟ ರಣವೀರ್​ ಸಿಂಗ್​ ಮತ್ತು ನಟಿ ಆಲಿಯಾ ಭಟ್​ "ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ" ಸಿನಿಮಾದ ಲವ್​ ಸಾಂಗ್​ ಅನ್ನು ಚಿತ್ರೀಕರಿಸಲು ಕಾಶ್ಮೀರದ ಪಹಲ್ಗಾಮ್​ಗೆ ತೆರಳಿದ್ದರು. ಬಳಿಕ ಹೆಸರಾಂತ ಬಾಲಿವುಡ್​ ನಟ ಸಂಜಯ್​ ದತ್​ ತಮ್ಮ ಮುಂಬರುವ ಚಲನಚಿತ್ರ 'ಲಿಯೋ'ನ ತಮಿಳು ಆವೃತ್ತಿಯನ್ನು ಚಿತ್ರೀಕರಿಸಲು ಅಲ್ಲಿಗೆ ಭೇಟಿ ನೀಡಿದ್ದರು. ಇದೀಗ 'ಸತ್ಯ ಪ್ರೇಮ್​ ಕಿ ಕಥಾ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬಾಲಿವುಡ್​ ತಾರೆಯರಾದ ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅಡ್ವಾಣಿ ಬುಧವಾರ ಗಂಡರ್​ಬಾಲ್​ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾದ ಸೋನಾಮಾರ್ಗ್​ಗೆ ತೆರಳಿದ್ದಾರೆ.

ಕಾರ್ತಿಕ್​ ಮತ್ತು ಕಿಯಾರಾ ತಮ್ಮ 'ಸತ್ಯ ಪ್ರೇಮ್​ ಕಿ ಕಥಾ' ಸಿನಿಮಾದ ಶೂಟಿಂಗ್​ ಅನ್ನು ಸೋನಾಮಾರ್ಗ್​ನಲ್ಲಿ ಪ್ರಾರಂಭಗೊಳಿಸಿದ್ದಾರೆ ಎಂದು ಚಿತ್ರತಂಡದ ಸಿಬ್ಬಂದಿಯೊಬ್ಬರು ಈಟಿವಿ ಭಾರತ್​ಗೆ ತಿಳಿಸಿದ್ದಾರೆ. ಈ ಮಧ್ಯೆ ಕಣಿವೆ ನಾಡಿನ ಬ್ಯೂಟಿಫುಲ್​ ಫೋಟೋಗಳನ್ನು ಸಿನಿ ತಾರೆಯರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಸಿನಿಮಾದ ಬಗ್ಗೆ ಮತ್ತು ಅಲ್ಲಿನ ಹವಮಾನದ ಬಗ್ಗೆ ಅಪ್​ಡೇಟ್​ ನೀಡುತ್ತಿದ್ದಾರೆ.

ಕಾಶ್ಮೀರದ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಪ್ರಣಯದ ಹಾಡನ್ನು ಚಿತ್ರೀಕರಿಸಲಾಗಿದೆ. ಸಿನಿಮಾವು ಕೊನೆಯ ಹಂತದ ನಿರ್ಮಾಣದಲ್ಲಿದೆ. 'ಸತ್ಯ ಪ್ರೇಮ್​ ಕಿ ಕಥಾ' ಹಿಂದಿ ಲವ್​ ರೊಮ್ಯಾಂಟಿಕ್​ ಸಿನಿಮಾವಾಗಿದ್ದು, ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಗಜರಾಜ್​ ರಾವ್​ ಮತ್ತು ಸುಪ್ರಿಯಾ ಪಾಠಕ್​ ಇದ್ದಾರೆ. ಜೂನ್ 29 ರಂದು, ಮರಾಠಿ ಚಲನಚಿತ್ರ ನಿರ್ಮಾಪಕ ಸಮೀರ್ ವಿದ್ವಾನ್ಸ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಕೊನೆಯದಾಗಿ 'ಬೂಲ್​ ಭುಲೈಯಾ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅಡ್ವಾಣಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಈ ಸಿನಿಮಾದ ಜೊತೆಗೆ ಕಿಯಾರಾ ಅಡ್ವಾಣಿ ಟಾಲಿವುಡ್​ ನಟ ರಾಮ್​ ಚರಣ್​ ಅಭಿನಯದ ಗೇಮ್​ ಚೇಂಜರ್​ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ RC 15 ಎಂದು ಅನೌನ್ಸ್​ ಆಗಿತ್ತು. ಆದರೆ ಇತ್ತೀಚೆಗೆ ರಾಮ್​ ಚರಣ್​ ಹುಟ್ಟುಹಬ್ಬಕ್ಕೆ ನಿರ್ದೇಶಕ ಶಂಕರ್​ ಅವರು ಗೇಮ್​ ಚೇಂಜರ್​ ಎನ್ನುವ ಟೈಟಲ್​ ಕೂಡ ರಿವೀಲ್​ ಮಾಡಿದ್ದರು. ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರಿದ 'ದಸರಾ': ಗೆಲುವಿನ ನಗೆ ಬೀರಿದ ಟಾಲಿವುಡ್​

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕಾಗಿ ಪ್ರಸಿದ್ಧ ಬಾಲಿವುಡ್​ ನಿರ್ದೇಶಕರು ಮತ್ತು ತಾರೆಯರು ಈ ವರ್ಷ ಕಾಶ್ಮೀರಕ್ಕೆ ಪ್ರಯಾಣಿಸಿದ್ದಾರೆ. ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ಕಣಿವೆ ನಾಡಿನಲ್ಲಿ ಹಿಂದಿ ಸಿನಿಮಾಗಳ ಶೂಟಿಂಗ್​ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿನ ಕೆಲವು ಪ್ರದೇಶಗಳು ಸಿನಿಮಾದಲ್ಲಿನ ಲವ್​, ರೊಮ್ಯಾಂಟಿಕ್​ ಸೀನ್​ಗಳನ್ನು ಸೆರೆಹಿಡಿಯಲು ಅದ್ಭುತ ಸ್ಥಳವಾಗಿದೆ. ಹೀಗಾಗಿ ಬಾಲಿವುಡ್​ ಚಿತ್ರರಂಗ ಹೆಚ್ಚಾಗಿ ಕಾಶ್ಮೀರದ ಕಡೆಗೆ ತಮ್ಮ ಒಲವು ತೋರಿಸುತ್ತಿದೆ.

ಮಾರ್ಚ್​ ಆರಂಭದಲ್ಲಿ ನಟ ರಣವೀರ್​ ಸಿಂಗ್​ ಮತ್ತು ನಟಿ ಆಲಿಯಾ ಭಟ್​ "ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ" ಸಿನಿಮಾದ ಲವ್​ ಸಾಂಗ್​ ಅನ್ನು ಚಿತ್ರೀಕರಿಸಲು ಕಾಶ್ಮೀರದ ಪಹಲ್ಗಾಮ್​ಗೆ ತೆರಳಿದ್ದರು. ಬಳಿಕ ಹೆಸರಾಂತ ಬಾಲಿವುಡ್​ ನಟ ಸಂಜಯ್​ ದತ್​ ತಮ್ಮ ಮುಂಬರುವ ಚಲನಚಿತ್ರ 'ಲಿಯೋ'ನ ತಮಿಳು ಆವೃತ್ತಿಯನ್ನು ಚಿತ್ರೀಕರಿಸಲು ಅಲ್ಲಿಗೆ ಭೇಟಿ ನೀಡಿದ್ದರು. ಇದೀಗ 'ಸತ್ಯ ಪ್ರೇಮ್​ ಕಿ ಕಥಾ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬಾಲಿವುಡ್​ ತಾರೆಯರಾದ ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅಡ್ವಾಣಿ ಬುಧವಾರ ಗಂಡರ್​ಬಾಲ್​ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾದ ಸೋನಾಮಾರ್ಗ್​ಗೆ ತೆರಳಿದ್ದಾರೆ.

ಕಾರ್ತಿಕ್​ ಮತ್ತು ಕಿಯಾರಾ ತಮ್ಮ 'ಸತ್ಯ ಪ್ರೇಮ್​ ಕಿ ಕಥಾ' ಸಿನಿಮಾದ ಶೂಟಿಂಗ್​ ಅನ್ನು ಸೋನಾಮಾರ್ಗ್​ನಲ್ಲಿ ಪ್ರಾರಂಭಗೊಳಿಸಿದ್ದಾರೆ ಎಂದು ಚಿತ್ರತಂಡದ ಸಿಬ್ಬಂದಿಯೊಬ್ಬರು ಈಟಿವಿ ಭಾರತ್​ಗೆ ತಿಳಿಸಿದ್ದಾರೆ. ಈ ಮಧ್ಯೆ ಕಣಿವೆ ನಾಡಿನ ಬ್ಯೂಟಿಫುಲ್​ ಫೋಟೋಗಳನ್ನು ಸಿನಿ ತಾರೆಯರು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಸಿನಿಮಾದ ಬಗ್ಗೆ ಮತ್ತು ಅಲ್ಲಿನ ಹವಮಾನದ ಬಗ್ಗೆ ಅಪ್​ಡೇಟ್​ ನೀಡುತ್ತಿದ್ದಾರೆ.

ಕಾಶ್ಮೀರದ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಪ್ರಣಯದ ಹಾಡನ್ನು ಚಿತ್ರೀಕರಿಸಲಾಗಿದೆ. ಸಿನಿಮಾವು ಕೊನೆಯ ಹಂತದ ನಿರ್ಮಾಣದಲ್ಲಿದೆ. 'ಸತ್ಯ ಪ್ರೇಮ್​ ಕಿ ಕಥಾ' ಹಿಂದಿ ಲವ್​ ರೊಮ್ಯಾಂಟಿಕ್​ ಸಿನಿಮಾವಾಗಿದ್ದು, ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಗಜರಾಜ್​ ರಾವ್​ ಮತ್ತು ಸುಪ್ರಿಯಾ ಪಾಠಕ್​ ಇದ್ದಾರೆ. ಜೂನ್ 29 ರಂದು, ಮರಾಠಿ ಚಲನಚಿತ್ರ ನಿರ್ಮಾಪಕ ಸಮೀರ್ ವಿದ್ವಾನ್ಸ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಕೊನೆಯದಾಗಿ 'ಬೂಲ್​ ಭುಲೈಯಾ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅಡ್ವಾಣಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದರು.

ಈ ಸಿನಿಮಾದ ಜೊತೆಗೆ ಕಿಯಾರಾ ಅಡ್ವಾಣಿ ಟಾಲಿವುಡ್​ ನಟ ರಾಮ್​ ಚರಣ್​ ಅಭಿನಯದ ಗೇಮ್​ ಚೇಂಜರ್​ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ RC 15 ಎಂದು ಅನೌನ್ಸ್​ ಆಗಿತ್ತು. ಆದರೆ ಇತ್ತೀಚೆಗೆ ರಾಮ್​ ಚರಣ್​ ಹುಟ್ಟುಹಬ್ಬಕ್ಕೆ ನಿರ್ದೇಶಕ ಶಂಕರ್​ ಅವರು ಗೇಮ್​ ಚೇಂಜರ್​ ಎನ್ನುವ ಟೈಟಲ್​ ಕೂಡ ರಿವೀಲ್​ ಮಾಡಿದ್ದರು. ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ.

ಇದನ್ನೂ ಓದಿ: ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರಿದ 'ದಸರಾ': ಗೆಲುವಿನ ನಗೆ ಬೀರಿದ ಟಾಲಿವುಡ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.