ETV Bharat / entertainment

'ಸತ್ಯಭಾಮ' ಟೀಸರ್​ ಔಟ್​: ಆ್ಯಕ್ಷನ್​ ಮೂಡ್​ನಲ್ಲಿ ಪೊಲೀಸ್​ ಅಧಿಕಾರಿ ಕಾಜಲ್​ ಅಗರ್ವಾಲ್​

author img

By ETV Bharat Karnataka Team

Published : Nov 10, 2023, 7:06 PM IST

Satyabhama teaser out: ಕಾಜಲ್​ ಅಗರ್ವಾಲ್​ ನಟನೆಯ 'ಸತ್ಯಭಾಮ' ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

Kajal Aggarwal starrer Sathyabhama movie teaser out
'ಸತ್ಯಭಾಮ' ಟೀಸರ್​ ಔಟ್​: ಆಕ್ಷನ್​ ಮೂಡ್​ನಲ್ಲಿ ಪೊಲೀಸ್​ ಅಧಿಕಾರಿ ಕಾಜಲ್​ ಅಗರ್ವಾಲ್​

'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಟಾಲಿವುಡ್​ ಸ್ಟಾರ್​ ನಟಿ ಕಾಜಲ್​ ಅಗರ್ವಾಲ್​ ಇದೀಗ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ 'ಸತ್ಯಭಾಮ'ದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇಂದು ಈ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಆ್ಯಕ್ಷನ್​​ ಮೂಡ್​ನಲ್ಲಿ ಬಂದಿರುವ ಟೀಸರ್​ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.

  • " class="align-text-top noRightClick twitterSection" data="">

ಟೀಸರ್​ನಲ್ಲೇನಿದೆ?: ಹುಡುಗಿಯೊಬ್ಬಳ ಕೊಲೆ ಪ್ರಕರಣವನ್ನು ಭೇದಿಸುವಾಗ ದಕ್ಷ ಪೊಲೀಸ್​ ಅಧಿಕಾರಿ ಸತ್ಯಭಾಮಾ (ಕಾಜಲ್​) ಎದುರಿಸಿದ ಸವಾಲುಗಳೇನು? ಎಂಬುದನ್ನು ಟೀಸರ್​ನಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ. ಕೊಲೆಗಡುಕರ ಕೈಗೆ ಸಿಕ್ಕ ಹುಡುಗಿಯ ಜೀವ ಉಳಿಸಲು ಸತ್ಯಭಾಮಾ ಪ್ರಯತ್ನಿಸುತ್ತಾಳೆ. ಆದರೆ, ಹುಡುಗಿ ಸಾಯುತ್ತಾಳೆ. ಹೀಗಾಗಿ ಸತ್ಯಭಾಮಾಳನ್ನು ಮತ್ತೊಂದೆಡೆ ವರ್ಗಾವಣೆ ಮಾಡಲಾಗುತ್ತದೆ.

ಈ ಪ್ರಕರಣ ನಿಮ್ಮ ಕೈಯಲ್ಲಿ ಇಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್​ ಅಧಿಕಾರಿ ಪ್ರಕಾಶ್​ ರಾಜ್​. ಆದರೆ, ಹುಡುಗಿಯೊಬ್ಬಳು ತನ್ನ ಜೊತೆ ಇರುವಾಗಲೇ ಪ್ರಾಣ ಕಳೆದುಕೊಂಡಿರುವುದರಿಂದ ಸತ್ಯಭಾಮಾಗೆ ಪಾಪಪ್ರಜ್ಞೆ ಕಾಡುತ್ತದೆ. ಈ ಕ್ರಮದಲ್ಲಿ ಕೊಲೆಹಂತಕರನ್ನು ಹುಡುಕುವ ಕೆಲಸದಲ್ಲಿ ತೊಡಗುತ್ತಾಳೆ. ತನ್ನ ಹುಡುಕಾಟದ ದಾರಿಯಲ್ಲಿ ಅಡ್ಡ ಬಂದ ಖಳನಾಯಕರ ಜೊತೆ ಫೈಟ್​ ಮಾಡುತ್ತಾಳೆ. ಫುಲ್​ ಆ್ಯಕ್ಷನ್ ​ ಮೂಡ್​ನಲ್ಲಿ ಕಾಜಲ್​ ಕಾಣಿಸಿಕೊಂಡಿದ್ದು, ಟೀಸರ್​ ಪವರ್​ ಫುಲ್​ ಆಗಿದೆ.

ಇದನ್ನೂ ಓದಿ: 'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್​​ನಲ್ಲಿ ವಿಕ್ಕಿ ಕೌಶಲ್​​ - ತರಬೇತಿಯ ವಿಡಿಯೋ ನೋಡಿ

ಚಿತ್ರತಂಡ : ಕ್ರೈಂ ಥ್ರಿಲ್ಲರ್​ ಆಗಿ ಮೂಡಿ ಬಂದಿರುವ 'ಸತ್ಯಭಾಮ' ಸಿನಿಮಾವನ್ನು ಸುಮನ್​ ಚಿಕ್ಕಾಲ ನಿರ್ದೇಶಿಸಿದ್ದಾರೆ. ಔರಂ ಆರ್ಟ್ಸ್​ ಬ್ಯಾನರ್​ ಅಡಿಯಲ್ಲಿ ಬಾಬಿ ತಿಕ್ಕ ಮತ್ತು ಶ್ರೀನಿವಾಸ ರಾವ್​ ಟಕ್ಕಲಪಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀಚರಣ್​ ಪಕಾಲ ಸಂಗೀತವಿದೆ. ಮುಂದಿನ ವರ್ಷದ ಬೇಸಿಗೆ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಕಾಜಲ್​ 'ಸತ್ಯಭಾಮ' ಮಾತ್ರವಲ್ಲದೇ, 'ಇಂಡಿಯನ್ 2' ಚಿತ್ರದಲ್ಲಿ ಕಮಲ್​ ಹಾಸನ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಬಾಲಿವುಡ್​ನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಈ ಎಲ್ಲ ಚಿತ್ರಗಳು ಸದ್ಯ ಶೂಟಿಂಗ್​ ಹಂತದಲ್ಲಿದೆ.

ಇತ್ತೀಚೆಗೆ ಅವರು ನಟಿಸಿದ್ದ 'ಭಗವಂತ ಕೇಸರಿ' ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಕಂಡಿದೆ. ಅಕ್ಟೋಬರ್​ 19ರಂದು ದಸರಾ ಉಡುಗೊರೆಯಾಗಿ ತೆರೆ ಕಂಡ ಚಿತ್ರ ತೆಲುಗು ರಾಜ್ಯಗಳಲ್ಲಿ ಈಗಲೂ ಸದ್ದು ಮಾಡುತ್ತಿದೆ. ಅನಿಲ್​ ರವಿಪುಡಿ ಆಕ್ಷನ್​ ಕಟ್​ ಹೇಳಿರುವ ಸಿನಿಮಾದಲ್ಲಿನ ಬಾಲಯ್ಯ, ಶ್ರೀಲೀಲಾ ಮತ್ತು ಕಾಜಲ್​ ನಟನೆಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಇತ್ತೀಚೆಗಿನ ಮಾಹಿತಿಯಂತೆ ಸಿನಿಮಾ ಹಿಂದಿ ಭಾಷೆಗೂ ಡಬ್ ಆಗಲಿದೆ. ಈ ವಿಚಾರವನ್ನು ಇತ್ತೀಚೆಗೆ ನಡೆದ 'ಭಗವಂತ ಕೇಸರಿ' ಸಕ್ಸಸ್​ ಮೀಟ್​ನಲ್ಲಿ ನಂದಮೂರಿ ಬಾಲಕೃಷ್ಣ ಅನೌನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: ಹಿಂದಿ ಭಾಷೆಗೆ ಡಬ್​ ಆಗಲಿದೆ ಬಾಲಯ್ಯ ನಟನೆಯ ಬ್ಲಾಕ್​ಬಸ್ಟರ್​ 'ಭಗವಂತ ಕೇಸರಿ'

'ಭಗವಂತ ಕೇಸರಿ' ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಟಾಲಿವುಡ್​ ಸ್ಟಾರ್​ ನಟಿ ಕಾಜಲ್​ ಅಗರ್ವಾಲ್​ ಇದೀಗ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ 'ಸತ್ಯಭಾಮ'ದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇಂದು ಈ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಆ್ಯಕ್ಷನ್​​ ಮೂಡ್​ನಲ್ಲಿ ಬಂದಿರುವ ಟೀಸರ್​ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ.

  • " class="align-text-top noRightClick twitterSection" data="">

ಟೀಸರ್​ನಲ್ಲೇನಿದೆ?: ಹುಡುಗಿಯೊಬ್ಬಳ ಕೊಲೆ ಪ್ರಕರಣವನ್ನು ಭೇದಿಸುವಾಗ ದಕ್ಷ ಪೊಲೀಸ್​ ಅಧಿಕಾರಿ ಸತ್ಯಭಾಮಾ (ಕಾಜಲ್​) ಎದುರಿಸಿದ ಸವಾಲುಗಳೇನು? ಎಂಬುದನ್ನು ಟೀಸರ್​ನಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ. ಕೊಲೆಗಡುಕರ ಕೈಗೆ ಸಿಕ್ಕ ಹುಡುಗಿಯ ಜೀವ ಉಳಿಸಲು ಸತ್ಯಭಾಮಾ ಪ್ರಯತ್ನಿಸುತ್ತಾಳೆ. ಆದರೆ, ಹುಡುಗಿ ಸಾಯುತ್ತಾಳೆ. ಹೀಗಾಗಿ ಸತ್ಯಭಾಮಾಳನ್ನು ಮತ್ತೊಂದೆಡೆ ವರ್ಗಾವಣೆ ಮಾಡಲಾಗುತ್ತದೆ.

ಈ ಪ್ರಕರಣ ನಿಮ್ಮ ಕೈಯಲ್ಲಿ ಇಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್​ ಅಧಿಕಾರಿ ಪ್ರಕಾಶ್​ ರಾಜ್​. ಆದರೆ, ಹುಡುಗಿಯೊಬ್ಬಳು ತನ್ನ ಜೊತೆ ಇರುವಾಗಲೇ ಪ್ರಾಣ ಕಳೆದುಕೊಂಡಿರುವುದರಿಂದ ಸತ್ಯಭಾಮಾಗೆ ಪಾಪಪ್ರಜ್ಞೆ ಕಾಡುತ್ತದೆ. ಈ ಕ್ರಮದಲ್ಲಿ ಕೊಲೆಹಂತಕರನ್ನು ಹುಡುಕುವ ಕೆಲಸದಲ್ಲಿ ತೊಡಗುತ್ತಾಳೆ. ತನ್ನ ಹುಡುಕಾಟದ ದಾರಿಯಲ್ಲಿ ಅಡ್ಡ ಬಂದ ಖಳನಾಯಕರ ಜೊತೆ ಫೈಟ್​ ಮಾಡುತ್ತಾಳೆ. ಫುಲ್​ ಆ್ಯಕ್ಷನ್ ​ ಮೂಡ್​ನಲ್ಲಿ ಕಾಜಲ್​ ಕಾಣಿಸಿಕೊಂಡಿದ್ದು, ಟೀಸರ್​ ಪವರ್​ ಫುಲ್​ ಆಗಿದೆ.

ಇದನ್ನೂ ಓದಿ: 'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್​​ನಲ್ಲಿ ವಿಕ್ಕಿ ಕೌಶಲ್​​ - ತರಬೇತಿಯ ವಿಡಿಯೋ ನೋಡಿ

ಚಿತ್ರತಂಡ : ಕ್ರೈಂ ಥ್ರಿಲ್ಲರ್​ ಆಗಿ ಮೂಡಿ ಬಂದಿರುವ 'ಸತ್ಯಭಾಮ' ಸಿನಿಮಾವನ್ನು ಸುಮನ್​ ಚಿಕ್ಕಾಲ ನಿರ್ದೇಶಿಸಿದ್ದಾರೆ. ಔರಂ ಆರ್ಟ್ಸ್​ ಬ್ಯಾನರ್​ ಅಡಿಯಲ್ಲಿ ಬಾಬಿ ತಿಕ್ಕ ಮತ್ತು ಶ್ರೀನಿವಾಸ ರಾವ್​ ಟಕ್ಕಲಪಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀಚರಣ್​ ಪಕಾಲ ಸಂಗೀತವಿದೆ. ಮುಂದಿನ ವರ್ಷದ ಬೇಸಿಗೆ ಸಮಯದಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಕಾಜಲ್​ 'ಸತ್ಯಭಾಮ' ಮಾತ್ರವಲ್ಲದೇ, 'ಇಂಡಿಯನ್ 2' ಚಿತ್ರದಲ್ಲಿ ಕಮಲ್​ ಹಾಸನ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಬಾಲಿವುಡ್​ನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಈ ಎಲ್ಲ ಚಿತ್ರಗಳು ಸದ್ಯ ಶೂಟಿಂಗ್​ ಹಂತದಲ್ಲಿದೆ.

ಇತ್ತೀಚೆಗೆ ಅವರು ನಟಿಸಿದ್ದ 'ಭಗವಂತ ಕೇಸರಿ' ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಕಂಡಿದೆ. ಅಕ್ಟೋಬರ್​ 19ರಂದು ದಸರಾ ಉಡುಗೊರೆಯಾಗಿ ತೆರೆ ಕಂಡ ಚಿತ್ರ ತೆಲುಗು ರಾಜ್ಯಗಳಲ್ಲಿ ಈಗಲೂ ಸದ್ದು ಮಾಡುತ್ತಿದೆ. ಅನಿಲ್​ ರವಿಪುಡಿ ಆಕ್ಷನ್​ ಕಟ್​ ಹೇಳಿರುವ ಸಿನಿಮಾದಲ್ಲಿನ ಬಾಲಯ್ಯ, ಶ್ರೀಲೀಲಾ ಮತ್ತು ಕಾಜಲ್​ ನಟನೆಗೆ ಪ್ರೇಕ್ಷಕರು ಫುಲ್​ ಮಾರ್ಕ್ಸ್​ ಕೊಟ್ಟಿದ್ದಾರೆ. ಇತ್ತೀಚೆಗಿನ ಮಾಹಿತಿಯಂತೆ ಸಿನಿಮಾ ಹಿಂದಿ ಭಾಷೆಗೂ ಡಬ್ ಆಗಲಿದೆ. ಈ ವಿಚಾರವನ್ನು ಇತ್ತೀಚೆಗೆ ನಡೆದ 'ಭಗವಂತ ಕೇಸರಿ' ಸಕ್ಸಸ್​ ಮೀಟ್​ನಲ್ಲಿ ನಂದಮೂರಿ ಬಾಲಕೃಷ್ಣ ಅನೌನ್ಸ್​ ಮಾಡಿದ್ದಾರೆ.

ಇದನ್ನೂ ಓದಿ: ಹಿಂದಿ ಭಾಷೆಗೆ ಡಬ್​ ಆಗಲಿದೆ ಬಾಲಯ್ಯ ನಟನೆಯ ಬ್ಲಾಕ್​ಬಸ್ಟರ್​ 'ಭಗವಂತ ಕೇಸರಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.