ETV Bharat / entertainment

ಹುಟ್ಟುಹಬ್ಬದಂದು 'ಕಸ್ಟಡಿ'ಯಲ್ಲಿ ತೆಲುಗು ಸೂಪರ್​ಸ್ಟಾರ್​ ನಾಗ ಚೈತನ್ಯ

author img

By

Published : Nov 23, 2022, 3:27 PM IST

Updated : Nov 23, 2022, 4:06 PM IST

ನಾಗ ಚೈತನ್ಯ ಪ್ರಸ್ತುತ 'ಎನ್‌ಸಿ 22' ಚಿತ್ರದಲ್ಲಿ ಬ್ಯುಸಿಯಾಗಿದ್ದು, ನಿರ್ಮಾಪಕರು ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟರ್ ಒಂದನ್ನು ಅನಾವರಣಗೊಳಿಸಿದ್ದಾರೆ.

Custody first look unveiled  on  Naga Chaitanya birthday
'ಕಸ್ಟಡಿ'ಯಲ್ಲಿ ತೆಲುಗು ಸೂಪರ್​ಸ್ಟಾರ್​ ನಾಗ ಚೈತನ್ಯ

ತೆಲುಗು ಚಿತ್ರರಂಗದ ಸೂಪರ್​ಸ್ಟಾರ್​ ಅಕ್ಕಿನೇನಿ ನಾಗ ಚೈತನ್ಯ ಇಂದು 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟನಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿತ್ತಿದ್ದಾರೆ.

ಪ್ರಸ್ತುತ 'ಎನ್‌ಸಿ 22' ಚಿತ್ರದಲ್ಲಿ ಬ್ಯುಸಿಯಾಗಿದ್ದು, ನಿರ್ಮಾಪಕರು ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟರ್ ಒಂದನ್ನು ಅನಾವರಣಗೊಳಿಸಿದ್ದಾರೆ. ನಿರ್ಮಾಪಕರು ಈ ಪೋಸ್ಟರ್​​ಗೆ 'ಕಸ್ಟಡಿ' ಎಂಬ ಕುತೂಹಲಕಾರಿ ಶೀರ್ಷಿಕೆ ಕೊಟ್ಟಿದ್ದಾರೆ. ಉಗ್ರ ಅವತಾರದಲ್ಲಿ ನಾಗ ಚೈತನ್ಯ ಅವರ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ.

Custody first look unveiled  on  Naga Chaitanya birthday
ತೆಲುಗು ಸೂಪರ್​ಸ್ಟಾರ್​ ನಾಗ ಚೈತನ್ಯ

ಪ್ರಮುಖ ಚಲನಚಿತ್ರ ನಿರ್ಮಾಪಕ ವೆಂಕಟ್ ಪ್ರಭು ಅವರ ನಿರ್ದೇಶನದಲ್ಲಿ ನಾಗ ಚೈತನ್ಯ ಅವರ 'ಎನ್‌ಸಿ 22' ಸಿನಿಮಾ ಶೂಟಿಂಗ್ ಎರಡು ತಿಂಗಳ ಹಿಂದೆ ಆರಂಭವಾಗಿದೆ. ತೆಲುಗು, ತಮಿಳು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ತಾತ್ಕಾಲಿಕವಾಗಿ 'ಎನ್‌ಸಿ 22' ಎಂದು ಹೆಸರಿಸಲಾಗಿತ್ತು. ಈಗ ಅದೇ ಚಿತ್ರನಿರ್ಮಾಪಕರು 'ಕಸ್ಟಡಿ' ಎಂದು ಬರೆದಿರುವ ಪೋಸ್ಟರ್ ರಿಲೀಸ್​ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಕೃತಿ ಶೆಟ್ಟಿ ಜೊತೆ ನಾಗ ಚೈತನ್ಯ ನಟಿಸುತ್ತಿರುವ ಈ ಸಿನಿಮಾ ಅವರ ವೃತ್ತಿಜೀವನದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದು. ಶ್ರೀನಿವಾಸ ಚಿತ್ತೂರಿ ಅವರು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಅವತಾರ್​ 2 ಬಿಡುಗಡೆಗೆ ಸಜ್ಜು.. ಬೆಂಗಳೂರಿನಲ್ಲಿ ಟಿಕೆಟ್​ ದರ ಕೇಳಿದ್ರೆ ತಲೆ ತಿರುಗುತ್ತೆ

ಪೋಸ್ಟರ್​ನಲ್ಲಿ ನಾಗ ಚೈತನ್ಯ ಅವರು ಪ್ರಾಮಾಣಿಕ ಮತ್ತು ದೃಢನಿಶ್ಚಯದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವೆಂಕಟ್ ಪ್ರಭು ಅವರು ಸಂಪೂರ್ಣವಾಗಿ ಹೊಸ ಅವತಾರದಲ್ಲಿ ನಾಗ ಚೈತನ್ಯ ಅವರನ್ನು ಪ್ರಸ್ತುತಪಡಿಸಿದ್ದಾರೆ. ಪೋಸ್ಟರ್ ಪ್ರಭಾವಶಾಲಿಯಾಗಿದೆ. ಅವರು ತಮ್ಮ ಪ್ರತಿಯೊಂದು ಚಿತ್ರಕ್ಕೂ ವಿಶಿಷ್ಟ ಅಡಿಬರಹವನ್ನು ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. 'You Must be the Change You Wish to See in The World' ಇದು ಕಸ್ಟಡಿಯ ಟ್ಯಾಗ್‌ಲೈನ್.

ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ತಂಡ ಸದ್ಯ ಚಿತ್ರೀಕರಣದಲ್ಲಿ ನಿರತವಾಗಿದೆ. ಅರವಿಂದ್ ಸ್ವಾಮಿ ವಿರೋಧಿ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಿಯಾಮಣಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸಂಪತ್ ರಾಜ್, ಶರತ್‌ಕುಮಾರ್, ಪ್ರೇಮ್‌ಜಿ, ವೆನ್ನೆಲ ಕಿಶೋರ್, ಪ್ರೇಮಿ ವಿಶ್ವನಾಥ್ ಮುಂತಾದವರು ನಟಿಸಿದ್ದಾರೆ. ಇಸೈಜ್ಞಾನಿ ಇಳಯರಾಜ ಮತ್ತು ಯುವನ್ ಶಂಕರ್ ರಾಜಾ ಅವರ ಹಾಡುಗಳು ಈ ಚಿತ್ರಕ್ಕಿದೆ. ಪವನ್ ಕುಮಾರ್ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಅಬ್ಬೂರಿ ರವಿ ಸಂಭಾಷಣೆ ಇದ್ದು, ಎಸ್.ಆರ್. ಕತೀರ್ ಕ್ಯಾಮರಾವರ್ಕ್​ ಚಿತ್ರಕ್ಕಿದೆ. ನಿಭಾಯಿಸುತ್ತಿದ್ದಾರೆ.

ತೆಲುಗು ಚಿತ್ರರಂಗದ ಸೂಪರ್​ಸ್ಟಾರ್​ ಅಕ್ಕಿನೇನಿ ನಾಗ ಚೈತನ್ಯ ಇಂದು 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟನಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರಿತ್ತಿದ್ದಾರೆ.

ಪ್ರಸ್ತುತ 'ಎನ್‌ಸಿ 22' ಚಿತ್ರದಲ್ಲಿ ಬ್ಯುಸಿಯಾಗಿದ್ದು, ನಿರ್ಮಾಪಕರು ಅಭಿಮಾನಿಗಳಿಗಾಗಿ ವಿಶೇಷ ಪೋಸ್ಟರ್ ಒಂದನ್ನು ಅನಾವರಣಗೊಳಿಸಿದ್ದಾರೆ. ನಿರ್ಮಾಪಕರು ಈ ಪೋಸ್ಟರ್​​ಗೆ 'ಕಸ್ಟಡಿ' ಎಂಬ ಕುತೂಹಲಕಾರಿ ಶೀರ್ಷಿಕೆ ಕೊಟ್ಟಿದ್ದಾರೆ. ಉಗ್ರ ಅವತಾರದಲ್ಲಿ ನಾಗ ಚೈತನ್ಯ ಅವರ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ.

Custody first look unveiled  on  Naga Chaitanya birthday
ತೆಲುಗು ಸೂಪರ್​ಸ್ಟಾರ್​ ನಾಗ ಚೈತನ್ಯ

ಪ್ರಮುಖ ಚಲನಚಿತ್ರ ನಿರ್ಮಾಪಕ ವೆಂಕಟ್ ಪ್ರಭು ಅವರ ನಿರ್ದೇಶನದಲ್ಲಿ ನಾಗ ಚೈತನ್ಯ ಅವರ 'ಎನ್‌ಸಿ 22' ಸಿನಿಮಾ ಶೂಟಿಂಗ್ ಎರಡು ತಿಂಗಳ ಹಿಂದೆ ಆರಂಭವಾಗಿದೆ. ತೆಲುಗು, ತಮಿಳು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ತಾತ್ಕಾಲಿಕವಾಗಿ 'ಎನ್‌ಸಿ 22' ಎಂದು ಹೆಸರಿಸಲಾಗಿತ್ತು. ಈಗ ಅದೇ ಚಿತ್ರನಿರ್ಮಾಪಕರು 'ಕಸ್ಟಡಿ' ಎಂದು ಬರೆದಿರುವ ಪೋಸ್ಟರ್ ರಿಲೀಸ್​ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.

ಕೃತಿ ಶೆಟ್ಟಿ ಜೊತೆ ನಾಗ ಚೈತನ್ಯ ನಟಿಸುತ್ತಿರುವ ಈ ಸಿನಿಮಾ ಅವರ ವೃತ್ತಿಜೀವನದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದು. ಶ್ರೀನಿವಾಸ ಚಿತ್ತೂರಿ ಅವರು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: ಅವತಾರ್​ 2 ಬಿಡುಗಡೆಗೆ ಸಜ್ಜು.. ಬೆಂಗಳೂರಿನಲ್ಲಿ ಟಿಕೆಟ್​ ದರ ಕೇಳಿದ್ರೆ ತಲೆ ತಿರುಗುತ್ತೆ

ಪೋಸ್ಟರ್​ನಲ್ಲಿ ನಾಗ ಚೈತನ್ಯ ಅವರು ಪ್ರಾಮಾಣಿಕ ಮತ್ತು ದೃಢನಿಶ್ಚಯದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವೆಂಕಟ್ ಪ್ರಭು ಅವರು ಸಂಪೂರ್ಣವಾಗಿ ಹೊಸ ಅವತಾರದಲ್ಲಿ ನಾಗ ಚೈತನ್ಯ ಅವರನ್ನು ಪ್ರಸ್ತುತಪಡಿಸಿದ್ದಾರೆ. ಪೋಸ್ಟರ್ ಪ್ರಭಾವಶಾಲಿಯಾಗಿದೆ. ಅವರು ತಮ್ಮ ಪ್ರತಿಯೊಂದು ಚಿತ್ರಕ್ಕೂ ವಿಶಿಷ್ಟ ಅಡಿಬರಹವನ್ನು ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. 'You Must be the Change You Wish to See in The World' ಇದು ಕಸ್ಟಡಿಯ ಟ್ಯಾಗ್‌ಲೈನ್.

ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ತಂಡ ಸದ್ಯ ಚಿತ್ರೀಕರಣದಲ್ಲಿ ನಿರತವಾಗಿದೆ. ಅರವಿಂದ್ ಸ್ವಾಮಿ ವಿರೋಧಿ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಿಯಾಮಣಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸಂಪತ್ ರಾಜ್, ಶರತ್‌ಕುಮಾರ್, ಪ್ರೇಮ್‌ಜಿ, ವೆನ್ನೆಲ ಕಿಶೋರ್, ಪ್ರೇಮಿ ವಿಶ್ವನಾಥ್ ಮುಂತಾದವರು ನಟಿಸಿದ್ದಾರೆ. ಇಸೈಜ್ಞಾನಿ ಇಳಯರಾಜ ಮತ್ತು ಯುವನ್ ಶಂಕರ್ ರಾಜಾ ಅವರ ಹಾಡುಗಳು ಈ ಚಿತ್ರಕ್ಕಿದೆ. ಪವನ್ ಕುಮಾರ್ ಅವರು ಈ ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಅಬ್ಬೂರಿ ರವಿ ಸಂಭಾಷಣೆ ಇದ್ದು, ಎಸ್.ಆರ್. ಕತೀರ್ ಕ್ಯಾಮರಾವರ್ಕ್​ ಚಿತ್ರಕ್ಕಿದೆ. ನಿಭಾಯಿಸುತ್ತಿದ್ದಾರೆ.

Last Updated : Nov 23, 2022, 4:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.