ETV Bharat / entertainment

ಮಾಸ್ ಆ್ಯಕ್ಷನ್ ಜೊತೆ ಸಂಬಂಧಗಳ ಮೌಲ್ಯ ತಿಳಿಸಿದ 'ರಾಣ'ನಿಗೆ ಮನಸೋತ ಪ್ರೇಕ್ಷಕರು

author img

By

Published : Nov 11, 2022, 6:01 PM IST

ರಾಣ ಸಿನಿಮಾ ಇಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರ ಮಂದಿಗಳಲ್ಲಿ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

actor Shreyas Manju starrer raana movie review
ರಾಣ ಸಿನಿಮಾ ವಿಮರ್ಷೆ

ಪಡ್ಡೆಹುಲಿ ಸಿನಿಮಾ ಬಳಿಕ ಶ್ರೇಯಸ್ ಮಂಜು ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಣ ಇಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಟ್ರೈಲರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿದ್ದ ರಾಣ ಸಿನಿಮಾ ಅಂದುಕೊಂಡಂತೆ ಮಾಸ್ ಆ್ಯಕ್ಷನ್ ಜೊತೆಗೆ ಸಂಬಂಧಗಳ ಮೌಲ್ಯ ಹೇಳುವ ಚಿತ್ರವಾಗಿದೆ.

ಮಧ್ಯಮ ವರ್ಗದ ಕುಟುಂಬದ ನಾಯಕ ರಾಣ ಅಂದ್ರೆ ಶ್ರೇಯಸ್ ಮಂಜು ದಕ್ಷ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುತ್ತಾನೆ. ಈ ಕಾರಣಕ್ಕೆ ನಾಯಕ ತಮ್ಮ ಹಳ್ಳಿಯಿಂದ ಸಿಲಿಕಾನ್ ಸಿಟಿಗೆ ಬರುತ್ತಾನೆ. ಇಲ್ಲಿ ಸ್ನೇಹಿತರ ಜೊತೆ ಕಾರ್​ ಡ್ರೈವಿಂಗ್ ಕೆಲಸ ಮಾಡಿಕೊಂಡು, ಪೊಲೀಸ್ ಅಧಿಕಾರಿಯಾಗಲು ಪೊಲೀಸ್ ಕ್ಯಾಂಪ್​ನಲ್ಲಿ ಟ್ರೈನಿಂಗ್ ಮಾಡುತ್ತಿರುತ್ತಾನೆ.

ಈ ಮಧ್ಯೆ ತಮ್ಮ ಹಳ್ಳಿಯ ಮಹಿಳೆಯೋರ್ವರ ಗಂಡ ನಾಪತ್ತೆ ಆಗಿದ್ದಾನೆ ಅಂತಾ ಹುಡುಕಲು ಶುರು ಮಾಡಿದಾಗ ಅಲ್ಲಿ ಕಪಾಲಿ ಎಂಬ ದೊಡ್ಡ ರೌಡಿಯ ಅನ್ಯಾಯದ ಲೋಕ ತೆರೆದುಕೊಳ್ಳುತ್ತದೆ. ಆಗ ನಾಯಕ ನಟ ರೌಡಿಯ ವಿರುದ್ಧ ಹೇಗೆ ತಿರುಗಿ ಬೀಳುತ್ತಾನೆ? ಅಂದುಕೊಂಡಂತೆ ರಾಣ ಪೊಲೀಸ್ ಅಧಿಕಾರಿಯಾಗುತ್ತಾನಾ? ಅನ್ನೋದು ರಾಣ ಚಿತ್ರದ ಕಥೆ.

ರಾಣ ಸಿನಿಮಾ ಬಿಡುಗಡೆ

ರಾಣ ಪಾತ್ರದಲ್ಲಿ ಶ್ರೇಯಸ್ ಮಂಜು ಅವರು ತಮ್ಮ ಹಿಂದಿನ ಸಿನಿಮಾಗಿಂತ ಆ್ಯಕ್ಟಿಂಗ್ ಜೊತೆ ಮಾಸ್ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ನಾಯಕನ ಅತ್ತೆ ಮಗಳಾಗಿ ರೀಷ್ಮಾ ನಾಣಯ್ಯ ಮಿಂಚಿಸಿದ್ದಾರೆ. ರಾಣ ಸ್ನೇಹಿತರಾಗಿ ಅಶೋಕ್, ಗಿರಿ ಹಾಗು ಕಾಮಿಡಿ ಶೋ ಪ್ರವೀಣ್ ಆಗಾಗ ತಮ್ಮ ಪಂಚಿಂಗ್ ಮಾತುಗಳಿಂದ ಕಚಗುಳಿ ಕೊಡ್ತಾರೆ.

ಇನ್ನು ಅನಿಮೇಷನ್​ನಲ್ಲಿ ಪ್ರಖ್ಯಾತಿ ಪಡೆದಿರುವ ರಾಘವೇಂದ್ರ ಅವರು ಕಪಾಲಿ ಎಂಬ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಕೋಟೆ ಪ್ರಭಾಕರ್ ಕೊಟ್ಟ ಕ್ಯಾರೆಕ್ಟರ್​ಗೆ ಜೀವ ತುಂಬಿದ್ದಾರೆ. ಮೋಹನ್ ಧನರಾಜ್ ಎಂಬ ಯುವ ಪ್ರತಿಭೆ ಚಿತ್ರದಲ್ಲಿ ಬರುವ ಕಪಾಲಿ ತಮ್ಮನಾಗಿ ಖಳನಟನಾಗಿ ಅಬ್ಬರಿಸಿದ್ದಾರೆ. ರಜಿನಿ ಭಾರದ್ವಾಜ್ ಒಂದು ವಿಶೇಷ ರೋಲ್​ನಲ್ಲಿ ಕಾಣಿಸಿಕೊಂಡಿದ್ದು, ವಿಶೇಷ ಹಾಡೊಂದರಲ್ಲಿ ಸಂಯುಕ್ತ ಹೆಗ್ಡೆ ಸೊಂಟ ಬಳುಕಿಸಿದ್ದಾರೆ.

ರನ್ನ, ಪೊಗುರು ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಂದ ಕಿಶೋರ್, ಸ್ಕ್ರೀನ್ ಪ್ಲೇ ಹೇಳುವುದರಲ್ಲಿ ಗೊಂದಲಕ್ಕೆ ಬಿದ್ದವರಂತೆ ಕಾಣ್ತಾರೆ. ಆದರೆ ಚಿತ್ರದಲ್ಲಿ ಬರುವ ಆ್ಯಕ್ಷನ್ ಸಿಕ್ವೇನ್ಸ್​​ಗಳು ಮಾಸ್ ಪ್ರೇಕ್ಷಕರಿಗೆ ಚಿತ್ರದ ಕೆಲ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಮರೆಸುತ್ತೆ. ಇನ್ನು ಚಂದನ್ ಶೆಟ್ಟಿ ಗಲ್ಲಿ ಬಾಯ್ ಹಾಡನ್ನು ಹೊರತು ಪಡಿಸಿದರೆ ಹಿನ್ನಲೆ ಸಂಗೀತದಲ್ಲಿ ಹೊಸತನ ಕಾಣುವುದಿಲ್ಲ. ಶೇಖರ್ ಚಂದ್ರ ಕ್ಯಾಮರಾ ವರ್ಕ್ ಚಿತ್ರದ ಉತ್ತಮ ಭಾಗವಾಗಿದೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ರಾಣ ತೆರೆಗೆ; ಸಿನಿಮಾ ಬೆಂಬಲಿಸಿ ಎಂದ ಕಾಂತಾರ ಟೀಂ

ಇನ್ನು ರಾಣ ಸಿನಿಮಾ ಫಸ್ಟ್ ಶೋ ನೋಡಲು ನಟ ಶ್ರೇಯಸ್ ಮಂಜು, ನಟಿಯರಾದ ರೀಷ್ಮಾ ನಾಣಯ್ಯ, ರಜಿನಿ ಭರದ್ವಾಜ್ , ನಿರ್ದೇಶಕ ನಂದ ಕಿಶೋರ್, ಖಳ ನಾಯಕನ ಪಾತ್ರಧಾರಿ ರಾಘವೇಂದ್ರ ಸೇರಿದಂತೆ ಇಡೀ ರಾಣ ಚಿತ್ರತಂಡ ಆಗಮಿಸಿತ್ತು. ಸಿನಿಮಾ ಪ್ರೇಕ್ಷಕರ ಜೊತೆ ಚಿತ್ರ ನೋಡುವ ಮೂಲಕ ಎಂಜಾಯ್ ಮಾಡಿದ್ರು.

ಪಡ್ಡೆಹುಲಿ ಸಿನಿಮಾ ಬಳಿಕ ಶ್ರೇಯಸ್ ಮಂಜು ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಣ ಇಂದು ರಾಜ್ಯಾದ್ಯಂತ 150ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುವ ಮೂಲಕ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಟ್ರೈಲರ್​ನಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿದ್ದ ರಾಣ ಸಿನಿಮಾ ಅಂದುಕೊಂಡಂತೆ ಮಾಸ್ ಆ್ಯಕ್ಷನ್ ಜೊತೆಗೆ ಸಂಬಂಧಗಳ ಮೌಲ್ಯ ಹೇಳುವ ಚಿತ್ರವಾಗಿದೆ.

ಮಧ್ಯಮ ವರ್ಗದ ಕುಟುಂಬದ ನಾಯಕ ರಾಣ ಅಂದ್ರೆ ಶ್ರೇಯಸ್ ಮಂಜು ದಕ್ಷ ಪೊಲೀಸ್ ಅಧಿಕಾರಿಯಾಗುವ ಕನಸು ಕಾಣುತ್ತಾನೆ. ಈ ಕಾರಣಕ್ಕೆ ನಾಯಕ ತಮ್ಮ ಹಳ್ಳಿಯಿಂದ ಸಿಲಿಕಾನ್ ಸಿಟಿಗೆ ಬರುತ್ತಾನೆ. ಇಲ್ಲಿ ಸ್ನೇಹಿತರ ಜೊತೆ ಕಾರ್​ ಡ್ರೈವಿಂಗ್ ಕೆಲಸ ಮಾಡಿಕೊಂಡು, ಪೊಲೀಸ್ ಅಧಿಕಾರಿಯಾಗಲು ಪೊಲೀಸ್ ಕ್ಯಾಂಪ್​ನಲ್ಲಿ ಟ್ರೈನಿಂಗ್ ಮಾಡುತ್ತಿರುತ್ತಾನೆ.

ಈ ಮಧ್ಯೆ ತಮ್ಮ ಹಳ್ಳಿಯ ಮಹಿಳೆಯೋರ್ವರ ಗಂಡ ನಾಪತ್ತೆ ಆಗಿದ್ದಾನೆ ಅಂತಾ ಹುಡುಕಲು ಶುರು ಮಾಡಿದಾಗ ಅಲ್ಲಿ ಕಪಾಲಿ ಎಂಬ ದೊಡ್ಡ ರೌಡಿಯ ಅನ್ಯಾಯದ ಲೋಕ ತೆರೆದುಕೊಳ್ಳುತ್ತದೆ. ಆಗ ನಾಯಕ ನಟ ರೌಡಿಯ ವಿರುದ್ಧ ಹೇಗೆ ತಿರುಗಿ ಬೀಳುತ್ತಾನೆ? ಅಂದುಕೊಂಡಂತೆ ರಾಣ ಪೊಲೀಸ್ ಅಧಿಕಾರಿಯಾಗುತ್ತಾನಾ? ಅನ್ನೋದು ರಾಣ ಚಿತ್ರದ ಕಥೆ.

ರಾಣ ಸಿನಿಮಾ ಬಿಡುಗಡೆ

ರಾಣ ಪಾತ್ರದಲ್ಲಿ ಶ್ರೇಯಸ್ ಮಂಜು ಅವರು ತಮ್ಮ ಹಿಂದಿನ ಸಿನಿಮಾಗಿಂತ ಆ್ಯಕ್ಟಿಂಗ್ ಜೊತೆ ಮಾಸ್ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಿದ್ದಾರೆ. ನಾಯಕನ ಅತ್ತೆ ಮಗಳಾಗಿ ರೀಷ್ಮಾ ನಾಣಯ್ಯ ಮಿಂಚಿಸಿದ್ದಾರೆ. ರಾಣ ಸ್ನೇಹಿತರಾಗಿ ಅಶೋಕ್, ಗಿರಿ ಹಾಗು ಕಾಮಿಡಿ ಶೋ ಪ್ರವೀಣ್ ಆಗಾಗ ತಮ್ಮ ಪಂಚಿಂಗ್ ಮಾತುಗಳಿಂದ ಕಚಗುಳಿ ಕೊಡ್ತಾರೆ.

ಇನ್ನು ಅನಿಮೇಷನ್​ನಲ್ಲಿ ಪ್ರಖ್ಯಾತಿ ಪಡೆದಿರುವ ರಾಘವೇಂದ್ರ ಅವರು ಕಪಾಲಿ ಎಂಬ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಕೋಟೆ ಪ್ರಭಾಕರ್ ಕೊಟ್ಟ ಕ್ಯಾರೆಕ್ಟರ್​ಗೆ ಜೀವ ತುಂಬಿದ್ದಾರೆ. ಮೋಹನ್ ಧನರಾಜ್ ಎಂಬ ಯುವ ಪ್ರತಿಭೆ ಚಿತ್ರದಲ್ಲಿ ಬರುವ ಕಪಾಲಿ ತಮ್ಮನಾಗಿ ಖಳನಟನಾಗಿ ಅಬ್ಬರಿಸಿದ್ದಾರೆ. ರಜಿನಿ ಭಾರದ್ವಾಜ್ ಒಂದು ವಿಶೇಷ ರೋಲ್​ನಲ್ಲಿ ಕಾಣಿಸಿಕೊಂಡಿದ್ದು, ವಿಶೇಷ ಹಾಡೊಂದರಲ್ಲಿ ಸಂಯುಕ್ತ ಹೆಗ್ಡೆ ಸೊಂಟ ಬಳುಕಿಸಿದ್ದಾರೆ.

ರನ್ನ, ಪೊಗುರು ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಂದ ಕಿಶೋರ್, ಸ್ಕ್ರೀನ್ ಪ್ಲೇ ಹೇಳುವುದರಲ್ಲಿ ಗೊಂದಲಕ್ಕೆ ಬಿದ್ದವರಂತೆ ಕಾಣ್ತಾರೆ. ಆದರೆ ಚಿತ್ರದಲ್ಲಿ ಬರುವ ಆ್ಯಕ್ಷನ್ ಸಿಕ್ವೇನ್ಸ್​​ಗಳು ಮಾಸ್ ಪ್ರೇಕ್ಷಕರಿಗೆ ಚಿತ್ರದ ಕೆಲ ಸಣ್ಣಪುಟ್ಟ ನ್ಯೂನ್ಯತೆಗಳನ್ನು ಮರೆಸುತ್ತೆ. ಇನ್ನು ಚಂದನ್ ಶೆಟ್ಟಿ ಗಲ್ಲಿ ಬಾಯ್ ಹಾಡನ್ನು ಹೊರತು ಪಡಿಸಿದರೆ ಹಿನ್ನಲೆ ಸಂಗೀತದಲ್ಲಿ ಹೊಸತನ ಕಾಣುವುದಿಲ್ಲ. ಶೇಖರ್ ಚಂದ್ರ ಕ್ಯಾಮರಾ ವರ್ಕ್ ಚಿತ್ರದ ಉತ್ತಮ ಭಾಗವಾಗಿದೆ.

ಇದನ್ನೂ ಓದಿ: ಇಂದು ರಾಜ್ಯಾದ್ಯಂತ ರಾಣ ತೆರೆಗೆ; ಸಿನಿಮಾ ಬೆಂಬಲಿಸಿ ಎಂದ ಕಾಂತಾರ ಟೀಂ

ಇನ್ನು ರಾಣ ಸಿನಿಮಾ ಫಸ್ಟ್ ಶೋ ನೋಡಲು ನಟ ಶ್ರೇಯಸ್ ಮಂಜು, ನಟಿಯರಾದ ರೀಷ್ಮಾ ನಾಣಯ್ಯ, ರಜಿನಿ ಭರದ್ವಾಜ್ , ನಿರ್ದೇಶಕ ನಂದ ಕಿಶೋರ್, ಖಳ ನಾಯಕನ ಪಾತ್ರಧಾರಿ ರಾಘವೇಂದ್ರ ಸೇರಿದಂತೆ ಇಡೀ ರಾಣ ಚಿತ್ರತಂಡ ಆಗಮಿಸಿತ್ತು. ಸಿನಿಮಾ ಪ್ರೇಕ್ಷಕರ ಜೊತೆ ಚಿತ್ರ ನೋಡುವ ಮೂಲಕ ಎಂಜಾಯ್ ಮಾಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.