ಮೈಸೂರು: ವ್ಯಕ್ತಿಯ ಮೇಲೆ ಹಲ್ಲೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುಂದಾದ ಘಟನೆ ತಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ. ರಂಗಸಮುದ್ರ ಪಿಡಿಒ ತಿಲಕ್ ರಾಜ್ ವಿರುದ್ಧ ಗೂಂಡಾ ವರ್ತನೆ ಆರೋಪ ಕೇಳಿ ಬಂದಿದೆ.
ಸಾರ್ವಜನಿಕರ ಮೇಲೆ ಏಕವಚನದಲ್ಲೇ ಪದ ಬಳಕೆ ಮಾಡಿರುವ ತಿಲಕ್ ರಾಜ್ ಹಲ್ಲೆಗೆ ಮುಂದಾಗಿದ್ದಾನೆ. ಗ್ರಾಮ ಪಂಚಾಯಿತಿಗೆ ಸೇರಿದ ಮಳಿಗೆಗಳನ್ನ ಹರಾಜು ನಡೆಸದೆ ಏಕಾಏಕಿ ಉಳ್ಳವರಿಗೆ ಪಿಡಿಒ ತಿಲಕ್ ರಾಜ್ ನೀಡಿದ್ದಾನೆ. ಮಳಿಗೆ ವಿಚಾರವಾಗಿ ಪ್ರಶ್ನೆ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ಪಿಡಿಒ ತಿಲಕ್ ರಾಜ್ಗೆ ವರುಣ ಕ್ಷೇತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಕೃಪಾ ಕಟಾಕ್ಷ ಇದೆ ಎನ್ನಲಾಗಿದೆ. ಕರ್ತವ್ಯ ನಿರ್ವಹಿಸಿರುವ ಎಲ್ಲಾ ಪಂಚಾಯಿತಿಗಳಲ್ಲೂ ಇದೆ ರೀತಿ ಗೂಂಡಾ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈತನ ವರ್ತನೆಗೆ ಗ್ರಾಮಸ್ಥರು ತೀವ್ರ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಆದೇಶ ಪಾಲಿಸದ ಮೈಸೂರು ಪಾಲಿಕೆ ಆಯುಕ್ತ: ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ನಿರ್ದೇಶನ