ETV Bharat / crime

ಮನ್ಸುಖ್​ ಹಿರೇನ್ ಡೆತ್​ ಕೇಸ್​: 'ಕೊಲೆ' ಶಂಕೆ ವ್ಯಕ್ತಪಡಿಸಿದ ಎಟಿಎಸ್

ಮನ್ಸುಖ್​ ಹಿರೇನ್ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ದಳವು ಪ್ರಾಥಮಿಕ ವರದಿ ಪ್ರಕಾರ ಇದು ಕೊಲೆ ​ ಎಂದು ಶಂಕೆ ವ್ಯಕ್ತಪಡಿಸಿದೆ.

author img

By

Published : Mar 9, 2021, 12:25 PM IST

Mansukh Hiren death: ATS suspects 'Murder'
ಮನ್ಸುಖ್​ ಹಿರೇನ್

ಮುಂಬೈ: ಉದ್ಯಮಿ ಮನ್ಸುಖ್​ ಹಿರೇನ್ ಸಾವಿನ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ.

ಮನ್ಸುಖ್​ರನ್ನು ಮೊದಲೇ ಕೊಂದು, ಅವರ ಬಾಯಿಗೆ ಕರವಸ್ತ್ರ ತುರುಕಿ ಕೊಲೆಗಾರರು ಮೃತದೇಹವನ್ನು ನದಿಗೆ ಎಸೆದಿದ್ದಾರೆ. ಯಾವಾಗ ದೇಹದೊಳಗೆ ನೀರು ಸಂಪೂರ್ಣ ತುಂಬಿ, ಊದಿಕೊಳ್ಳುತ್ತದೆಯೋ ಆಗ ಶವ ನದಿಯ ಮೇಲೆ ತೇಲುತ್ತದೆ. ಬಾಯಿಯೊಳಗೆ ಕರವಸ್ತ್ರ ತುರುಕಿದರೆ ದೇಹದೊಳಗೆ ಬೇಗ ನೀರು ಹೋಗುವುದಿಲ್ಲ. ಹೀಗಾಗಿ ಮೃತದೇಹ ಹೊರಗೆ ಕಾಣಲು ಇನ್ನೂ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಕೊಲೆಗಾರರ ಪ್ಲಾನ್​ ಆಗಿತ್ತು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಹಿನ್ನೆಲೆ

ಕೆಲ ದಿನಗಳ ಹಿಂದೆ ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್​ಯುವಿ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಸ್ಕಾರ್ಪಿಯೋ ಕಾರು ಮಾಲೀಕ ಮುಂಬೈ ಮೂಲದ ಮನ್ಸುಖ್​ ಹಿರೇನ್ ಎಂಬುದನ್ನು ಪತ್ತೆ ಹಚ್ಚಿತ್ತು. ಆದರೆ ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್​ ಹಿರೇನ್ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು.

ಮುಂಬೈ: ಉದ್ಯಮಿ ಮನ್ಸುಖ್​ ಹಿರೇನ್ ಸಾವಿನ ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಶಂಕಿಸಿದೆ.

ಮನ್ಸುಖ್​ರನ್ನು ಮೊದಲೇ ಕೊಂದು, ಅವರ ಬಾಯಿಗೆ ಕರವಸ್ತ್ರ ತುರುಕಿ ಕೊಲೆಗಾರರು ಮೃತದೇಹವನ್ನು ನದಿಗೆ ಎಸೆದಿದ್ದಾರೆ. ಯಾವಾಗ ದೇಹದೊಳಗೆ ನೀರು ಸಂಪೂರ್ಣ ತುಂಬಿ, ಊದಿಕೊಳ್ಳುತ್ತದೆಯೋ ಆಗ ಶವ ನದಿಯ ಮೇಲೆ ತೇಲುತ್ತದೆ. ಬಾಯಿಯೊಳಗೆ ಕರವಸ್ತ್ರ ತುರುಕಿದರೆ ದೇಹದೊಳಗೆ ಬೇಗ ನೀರು ಹೋಗುವುದಿಲ್ಲ. ಹೀಗಾಗಿ ಮೃತದೇಹ ಹೊರಗೆ ಕಾಣಲು ಇನ್ನೂ ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಕೊಲೆಗಾರರ ಪ್ಲಾನ್​ ಆಗಿತ್ತು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣ ಹಿನ್ನೆಲೆ

ಕೆಲ ದಿನಗಳ ಹಿಂದೆ ಉದ್ಯಮಿ ಮುಖೇಶ್​​ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಎಸ್​ಯುವಿ ಕಾರು ಪತ್ತೆಯಾಗಿತ್ತು. ಮುಂಬೈ ಕ್ರೈಂ ಬ್ರ್ಯಾಂಚ್​ ಹಾಗೂ ಎಟಿಎಸ್​ ಜಂಟಿಯಾಗಿ ಪ್ರಕರಣ ತನಿಖೆ ನಡೆಸುತ್ತಿದ್ದು, ಸ್ಕಾರ್ಪಿಯೋ ಕಾರು ಮಾಲೀಕ ಮುಂಬೈ ಮೂಲದ ಮನ್ಸುಖ್​ ಹಿರೇನ್ ಎಂಬುದನ್ನು ಪತ್ತೆ ಹಚ್ಚಿತ್ತು. ಆದರೆ ಮಾರ್ಚ್ 5ರಂದು ಥಾಣೆಯ ನದಿಯೊಂದರಲ್ಲಿ ಮನ್ಸುಖ್​ ಹಿರೇನ್ ಮೃತದೇಹ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.