ETV Bharat / crime

ಕಾಲೇಜು ಯುವತಿಯನ್ನು ಕೊಲೆ ಮಾಡಿದ್ದ ಭಗ್ನಪ್ರೇಮಿಯ ಬಂಧನ - ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮ

Arrested
Arrested
author img

By

Published : Apr 7, 2021, 9:40 PM IST

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮದಲ್ಲಿ ಏಪ್ರಿಲ್ 5ರಂದು ಕಾಲೇಜು ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.

ಈರಣ್ಣ ಬಂಧಿತ ಆರೋಪಿಯಾಗಿದ್ದು, ತಾಲೂಕಿನ ಹಲ್ಕೂರು ಗ್ರಾಮದ ಕೆರೆಯ ಅಂಗಳದಲ್ಲಿರುವ ಜಾಲಿ ಗಿಡದ ನಡುವೆ ಅಡಗಿ ಕುಳಿತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಲೆಗೆ ಬಳಸಲಾಗಿದ್ದ ಮಚ್ಚು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿಯನ್ನು ಕೊಲೆ ಮಾಡಿ ದೊಡ್ಡಗೂಳ ಗ್ರಾಮದ ಕೆರೆಯ ಜಾಲಿ ಗಿಡದ ಬಳಿ ಎಳೆದುಕೊಂಡು ಹೋಗಿ ಮುಖ ಹಾಗೂ ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಪ್ರಕರಣದ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ದೊಡ್ಡಗೂಳ ಗ್ರಾಮದಲ್ಲಿ ಏಪ್ರಿಲ್ 5ರಂದು ಕಾಲೇಜು ಯುವತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದಾರೆ.

ಈರಣ್ಣ ಬಂಧಿತ ಆರೋಪಿಯಾಗಿದ್ದು, ತಾಲೂಕಿನ ಹಲ್ಕೂರು ಗ್ರಾಮದ ಕೆರೆಯ ಅಂಗಳದಲ್ಲಿರುವ ಜಾಲಿ ಗಿಡದ ನಡುವೆ ಅಡಗಿ ಕುಳಿತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಲೆಗೆ ಬಳಸಲಾಗಿದ್ದ ಮಚ್ಚು ಹಾಗೂ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಯುವತಿಯನ್ನು ಕೊಲೆ ಮಾಡಿ ದೊಡ್ಡಗೂಳ ಗ್ರಾಮದ ಕೆರೆಯ ಜಾಲಿ ಗಿಡದ ಬಳಿ ಎಳೆದುಕೊಂಡು ಹೋಗಿ ಮುಖ ಹಾಗೂ ಕುತ್ತಿಗೆಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಪ್ರಕರಣದ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.