ETV Bharat / city

ಶಿವಮೊಗ್ಗದಲ್ಲಿ 32 ವರ್ಷದ ಮಹಿಳೆ ಜೊತೆ ಓಡಿಹೋದ 19 ವರ್ಷದ ಯುವಕ!

author img

By

Published : Dec 24, 2021, 3:53 PM IST

19 ವರ್ಷದ ಯುವಕ ಮತ್ತು 32 ವರ್ಷದ ಮಹಿಳೆ ಪ್ರೀತಿಸಿ ಮದುವೆಯಾಗಲು ಓಡಿ ಹೋಗಿರುವ ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ 32 ವರ್ಷದ ಮಹಿಳೆ ಜೊತೆ ಓಡಿಹೋದ 19 ವರ್ಷದ ಯುವಕ,Young Man elope with aunty in shivamogga
ಶಿವಮೊಗ್ಗದಲ್ಲಿ 32 ವರ್ಷದ ಮಹಿಳೆ ಜೊತೆ ಓಡಿಹೋದ 19 ವರ್ಷದ ಯುವಕ

ಶಿವಮೊಗ್ಗ: 32 ವರ್ಷದ ಮಹಿಳೆಯೊಬ್ಬಳು 19 ವರ್ಷದ ಮಗನನ್ನು ಅಪಹರಿಸಿದ್ದಾಳೆ ಎಂದು ಯುವಕನ ತಾಯಿ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಗೇನಹಳ್ಳಿಯ‌ ನಿವಾಸಿಯಾದ ಮಧು‌ (19) ಎಂಬಾತ ಅದೇ ಮಲ್ಲಿಗೇನಹಳ್ಳಿಯ 32 ವರ್ಷದ ಮಹಿಳೆ ಜೊತೆ ಓಡಿ ಹೋಗಿದ್ದಾನೆ ಎಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಧು ಆಟೋ‌ ಓಡಿಸಿಕೊಂಡಿದ್ದ. ಈತನಿಗೆ ಅರ್ಚನಾ ಎಂಬ ಮಹಿಳೆಯ ಪರಿಚಯವಾಗಿದ್ದು, ಇವರು ಮಲ್ಲಿಗೇನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಮಹಿಳೆಯ ಗಂಡ ತೀರಿ ಹೋಗಿದ್ದು, ಜೀವನ ನಡೆಸಲು ಅಂಗಡಿ ಮಾಡಿ ಕೊಂಡಿದ್ದರು. ಮಧು ಅಂಗಡಿಗೆ ಬಂದು ಹೋಗಿ ಮಾಡುವಾಗ ಮಹಿಳೆಯ ಪರಿಚಯವಾಗಿದೆ. ಪರಿಚಯ ಪ್ರಣಯಕ್ಕೆ ತಿರುಗಿ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 10 ರಂದು ಮಧು ಮನೆಯಿಂದ ಆಟೋ ಓಡಿಸಲು ಹೋಗಿದ್ದು, ವಾಪಸ್ ಮನೆಗೆ ಬಾರದೆ ಹೋದಾಗ ಯುವಕನ ತಾಯಿ ಗ್ರಾಮದಲ್ಲಿ ವಿಚಾರಿಸಿದ್ದಾರೆ. ಆಗ ಆತನ ಪ್ರೇಮ ಸಂಬಂಧದ ಬಗ್ಗೆ ಗೊತ್ತಾಗಿದೆ.

ಮದುವೆಯಾಗಲು ತಮಿಳುನಾಡಿನ ತನ್ನ ತವರು ಮನೆಗೆ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಯುವಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಇಬ್ಬರ ಫೋನ್ ಸ್ಚಿಚ್ ಆಫ್ ಆಗಿದೆ. ತನ್ನ ಮಗನನ್ನು ಹುಡುಕಿ ಕೊಡಿ ಎಂದು ಯುವಕನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

(ಇದನ್ನೂ ಓದಿ: ಕಳ್ಳರನ್ನು ಹಿಡಿಯಬೇಕಾದ ಪೊಲೀಸಪ್ಪನೇ ಇಲ್ಲಿ ವಿಲನ್: ಬೈಕ್ ಕಳ್ಳತನ ಮಾಡಿಸುತ್ತಿದ್ದ ಕಾನ್ಸ್​​ಟೇಬಲ್​​​​ ಬಂಧನ)

ಶಿವಮೊಗ್ಗ: 32 ವರ್ಷದ ಮಹಿಳೆಯೊಬ್ಬಳು 19 ವರ್ಷದ ಮಗನನ್ನು ಅಪಹರಿಸಿದ್ದಾಳೆ ಎಂದು ಯುವಕನ ತಾಯಿ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲಿಗೇನಹಳ್ಳಿಯ‌ ನಿವಾಸಿಯಾದ ಮಧು‌ (19) ಎಂಬಾತ ಅದೇ ಮಲ್ಲಿಗೇನಹಳ್ಳಿಯ 32 ವರ್ಷದ ಮಹಿಳೆ ಜೊತೆ ಓಡಿ ಹೋಗಿದ್ದಾನೆ ಎಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಧು ಆಟೋ‌ ಓಡಿಸಿಕೊಂಡಿದ್ದ. ಈತನಿಗೆ ಅರ್ಚನಾ ಎಂಬ ಮಹಿಳೆಯ ಪರಿಚಯವಾಗಿದ್ದು, ಇವರು ಮಲ್ಲಿಗೇನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದರು. ಮಹಿಳೆಯ ಗಂಡ ತೀರಿ ಹೋಗಿದ್ದು, ಜೀವನ ನಡೆಸಲು ಅಂಗಡಿ ಮಾಡಿ ಕೊಂಡಿದ್ದರು. ಮಧು ಅಂಗಡಿಗೆ ಬಂದು ಹೋಗಿ ಮಾಡುವಾಗ ಮಹಿಳೆಯ ಪರಿಚಯವಾಗಿದೆ. ಪರಿಚಯ ಪ್ರಣಯಕ್ಕೆ ತಿರುಗಿ ಓಡಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್ 10 ರಂದು ಮಧು ಮನೆಯಿಂದ ಆಟೋ ಓಡಿಸಲು ಹೋಗಿದ್ದು, ವಾಪಸ್ ಮನೆಗೆ ಬಾರದೆ ಹೋದಾಗ ಯುವಕನ ತಾಯಿ ಗ್ರಾಮದಲ್ಲಿ ವಿಚಾರಿಸಿದ್ದಾರೆ. ಆಗ ಆತನ ಪ್ರೇಮ ಸಂಬಂಧದ ಬಗ್ಗೆ ಗೊತ್ತಾಗಿದೆ.

ಮದುವೆಯಾಗಲು ತಮಿಳುನಾಡಿನ ತನ್ನ ತವರು ಮನೆಗೆ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಯುವಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಇಬ್ಬರ ಫೋನ್ ಸ್ಚಿಚ್ ಆಫ್ ಆಗಿದೆ. ತನ್ನ ಮಗನನ್ನು ಹುಡುಕಿ ಕೊಡಿ ಎಂದು ಯುವಕನ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

(ಇದನ್ನೂ ಓದಿ: ಕಳ್ಳರನ್ನು ಹಿಡಿಯಬೇಕಾದ ಪೊಲೀಸಪ್ಪನೇ ಇಲ್ಲಿ ವಿಲನ್: ಬೈಕ್ ಕಳ್ಳತನ ಮಾಡಿಸುತ್ತಿದ್ದ ಕಾನ್ಸ್​​ಟೇಬಲ್​​​​ ಬಂಧನ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.