ಶಿವಮೊಗ್ಗ: ಅಕ್ರಮ ನಾಟಾ ಸಂಗ್ರಹ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದ್ದು, ಓರ್ವ ಪರಾರಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹೊಸಬೀಡು ಗ್ರಾಮದಲ್ಲಿ ನಡೆದಿದೆ.
ಹೊಸಬೀಡು ಗ್ರಾಮದ ಪೂರ್ಣೇಶ್ ಗೌಡ ಎಂಬಾತ ತಾನು ತೋಟದಲ್ಲಿ ನಿರ್ಮಿಸುತ್ತಿರುವ ಮನೆಗೆ ಬೇಕಾದ ನಾಟಾ ಅನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
![illegal nata collection: 2 arrested](https://etvbharatimages.akamaized.net/etvbharat/prod-images/kn-smg-03-forestarrest-7204213_25092021000428_2509f_1632508468_551.jpg)
ಪೂರ್ಣೇಶ್ ಮನೆ ಮೇಲೆ ದಾಳಿ ನಡೆಸಿದಾಗ ಅಕ್ರಮವಾಗಿ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಬೀಟೆ ದಾಸ್ತಾನು ಇರುವುದು ಕಂಡು ಬಂದಿದೆ. ಈ ವೇಳೆ ಅರಣ್ಯ ಸಿಬ್ಬಂದಿಯನ್ನು ತಳ್ಳಿ ಪೂರ್ಣೇಶ್ ಪರಾರಿಯಾಗಿದ್ದಾನೆ.
![illegal nata collection: 2 arrested](https://etvbharatimages.akamaized.net/etvbharat/prod-images/kn-smg-03-forestarrest-7204213_25092021000428_2509f_1632508468_828.jpg)
ಈತನ ಮಾಹಿತಿ ಮೇರೆಗೆ ಮುನ್ನಾ ಅಲಿಯಾಸ್ ಮೊಹಮ್ಮದ್ ಸಲೀಂ ಹಾಗೂ ಕೆ.ಹೈದರ್ ಅನ್ನು ಬಂಧಿಸಲಾಗಿದೆ. ಇವರು ಕಾಡಿನಿಂದ ಮರ ತಂದು ನಾಟಾ ಮಾಡಿ ಮನೆ ನಿರ್ಮಾಣಕ್ಕೆ ಬಳಸುತ್ತಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ. ಸದ್ಯ ಒಂದು ಪಿಕಪ್ ವಾಹನನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಪರಾರಿಯಾದರೂ ಸಹ ಅರಣ್ಯ ಇಲಾಖೆಯು ಯಾವ ಸಿಬ್ಬಂದಿಯನ್ನು ಸಹ ವಜಾ ಮಾಡಿಲ್ಲ ಎಂಬುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮುಂಡ್ರಾ ಬಂದರಿನಲ್ಲಿ ಹೆರಾಯಿನ್ ಪತ್ತೆ ಪ್ರಕರಣ: ಪ್ರಶ್ನೆಗೆ ಉತ್ತರಿಸದೆ ಹೋದ ಕೇಂದ್ರ ಬಂದರು ಸಚಿವ