ETV Bharat / city

ರಕ್ತವೇ ಉತ್ಪತ್ತಿಯಾಗದ ವಿಚಿತ್ರ ಕಾಯಿಲೆ: ಬಡ ತಂದೆಗೆ ಮಗಳ ಉಳಿಸಲು ಬೇಕಿದೆ 32 ಲಕ್ಷ ರೂ. - ಶಿಕಾರಿಪುರ ತಾಲೂಕಿನ ಬಾಲಕಿಗೆ ವಿಚಿತ್ರ ಕಾಯಿಲೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಾಲಕಿಯೊಬ್ಬಳು ರಕ್ತವೇ ಉತ್ಪತ್ತಿಯಾಗದ ವಿಚಿತ್ರ ಕಾಯಿಲೆಯಿಂದ ಬಳಲುದ್ದಾರೆ. ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಆಪರೇಷನ್ ಮಾಡಬೇಕು. ಇದಕ್ಕೆ ಸುಮಾರು 32 ಲಕ್ಷ ಬೇಕಿದ್ದು, ಪೋಷಕರು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ರಕ್ತವೇ ಉತ್ಪತ್ತಿಯಾಗದ ವಿಚಿತ್ರ ಕಾಯಿಲೆ
author img

By

Published : Oct 12, 2019, 2:42 PM IST

ಶಿವಮೊಗ್ಗ: ಮನುಷ್ಯನ ದೇಹದಲ್ಲಿ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಈ ಬಾಲಕಿ ದೇಹದಲ್ಲಿ ಆರು ವರುಷಗಳಿಂದ ರಕ್ತವೇ ಉತ್ಪತ್ತಿಯಾಗುತ್ತಿಲ್ಲ ಎಂದರೆ ನೀವು ನಂಬಲೇಬೇಕು.

ಹೌದು.., 9 ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿದ್ದಂತೆ ಊಟ - ತಿಂಡಿಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡ ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ.

ರಕ್ತವೇ ಉತ್ಪತ್ತಿಯಾಗದ ವಿಚಿತ್ರ ಕಾಯಿಲೆ ಈ ಬಾಲಕಿಗೆ

ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿ ದೇವಿ ದಂಪತಿಗಳ ಪುತ್ರಿ ಹೇಮಾವತಿ, ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಸುಮಾರು ಆರು ವರ್ಷಗಳೇ ಕಳೆದಿವೆ. ರಕ್ತಹೀನತೆಯಿಂದಾಗಿ ಇದ್ದಕ್ಕಿಂದಂತೆ ಒದ್ದಾಡುವ ಮಗಳ ಸಂಕಟ ನೋಡದೆ ಆಕೆಯ ಪೋಷಕರು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದಾರೆ. ಈ ಬಾಲಕಿಯ ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ 20 ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈಕೆಯ ಪೋಷಕರು ಇದಕ್ಕಾಗಿಯೇ ಪ್ರತಿ ತಿಂಗಳು 4 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಬೇಕಿದೆ. ನಾನಾ ಪ್ರಯತ್ನದ ನಡುವೆಯೂ ಗುಣಮುಖವಾಗದಿರುವುದು ವೈದ್ಯರಿಗೂ ಸವಾಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ.

6 ವರ್ಷದಿಂದ ಇವಳಿಗೆ ರಕ್ತ ಕೊಡಿಸಿದ್ದು, ಈವರೆಗೆ ಸುಮಾರು 3 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಒಂದು ದಿನ ಕೂಲಿ ಹೋಗದಿದ್ದರೆ ಜೀವನ ಕಷ್ಟ ಎಂಬ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಮಗಳಿಗೆ ಪ್ರತಿ ತಿಂಗಳು ರಕ್ತ ಹೊಂದಿಸಬೇಕು. ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಆಪರೇಷನ್ ಮಾಡಬೇಕು. ಇದಕ್ಕೆ ಸುಮಾರು 32 ಲಕ್ಷ ರೂ. ಬೇಕು ಎನ್ನುತ್ತಿದ್ದಾರೆ. ಹೊಟ್ಟೆಪಾಡೇ ಕಷ್ಟವಾಗಿರುವಾಗಿರುವಾಗ ಇಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ತರುವುದು ಎಂದು ಗೊತ್ತಾಗುತ್ತಿಲ್ಲ. ಆದರೆ, ಮಗಳು ಪಡುವ ಕಷ್ಟ ಭಗವಂತನಿಗೆ ಗೊತ್ತು. ಸಹೃದಯಿಗಳು ಸಹಕಾರ ನೀಡಿದರೆ ಮಗು ಉಳಿಯುತ್ತದೆ ಎನ್ನುತ್ತಾರೆ ಆಕೆಯ ತಂದೆ ಮಂಜಪ್ಪ.

ವಿಚಿತ್ರ ಕಾಯಿಲೆಗೆ ಒಳಗಾಗಿರುವ ಬಾಲಕಿಯ ನೆರವಿಗೆ ರಾಜ್ಯದ ಜನ ಸಹಾಯ ಹಸ್ತ ಚಾಚಬೇಕಿದೆ. ಸಹಾಯ ಮಾಡ ಬಯಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು. ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್​ ಸಂಖ್ಯೆ 8151073504 ಗೆ ಸಂಪರ್ಕಿಸಬಹುದು.

ಬ್ಯಾಂಕ್ ಖಾತೆ ಸಂಖ್ಯೆ: 10803101013296
ಐಎಫ್‌ಎಸ್‌ಸಿ ಕೋಡ್: ಪಿಕೆಜಿಬಿ 0010803

ಶಿವಮೊಗ್ಗ: ಮನುಷ್ಯನ ದೇಹದಲ್ಲಿ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಈ ಬಾಲಕಿ ದೇಹದಲ್ಲಿ ಆರು ವರುಷಗಳಿಂದ ರಕ್ತವೇ ಉತ್ಪತ್ತಿಯಾಗುತ್ತಿಲ್ಲ ಎಂದರೆ ನೀವು ನಂಬಲೇಬೇಕು.

ಹೌದು.., 9 ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದ್ದಕ್ಕಿದ್ದಂತೆ ಊಟ - ತಿಂಡಿಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡ ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ.

ರಕ್ತವೇ ಉತ್ಪತ್ತಿಯಾಗದ ವಿಚಿತ್ರ ಕಾಯಿಲೆ ಈ ಬಾಲಕಿಗೆ

ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿ ದೇವಿ ದಂಪತಿಗಳ ಪುತ್ರಿ ಹೇಮಾವತಿ, ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಸುಮಾರು ಆರು ವರ್ಷಗಳೇ ಕಳೆದಿವೆ. ರಕ್ತಹೀನತೆಯಿಂದಾಗಿ ಇದ್ದಕ್ಕಿಂದಂತೆ ಒದ್ದಾಡುವ ಮಗಳ ಸಂಕಟ ನೋಡದೆ ಆಕೆಯ ಪೋಷಕರು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗದೇ ಕಂಗಾಲಾಗಿದ್ದಾರೆ. ಈ ಬಾಲಕಿಯ ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ 20 ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈಕೆಯ ಪೋಷಕರು ಇದಕ್ಕಾಗಿಯೇ ಪ್ರತಿ ತಿಂಗಳು 4 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಬೇಕಿದೆ. ನಾನಾ ಪ್ರಯತ್ನದ ನಡುವೆಯೂ ಗುಣಮುಖವಾಗದಿರುವುದು ವೈದ್ಯರಿಗೂ ಸವಾಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ.

6 ವರ್ಷದಿಂದ ಇವಳಿಗೆ ರಕ್ತ ಕೊಡಿಸಿದ್ದು, ಈವರೆಗೆ ಸುಮಾರು 3 ಲಕ್ಷ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಒಂದು ದಿನ ಕೂಲಿ ಹೋಗದಿದ್ದರೆ ಜೀವನ ಕಷ್ಟ ಎಂಬ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಮಗಳಿಗೆ ಪ್ರತಿ ತಿಂಗಳು ರಕ್ತ ಹೊಂದಿಸಬೇಕು. ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಆಪರೇಷನ್ ಮಾಡಬೇಕು. ಇದಕ್ಕೆ ಸುಮಾರು 32 ಲಕ್ಷ ರೂ. ಬೇಕು ಎನ್ನುತ್ತಿದ್ದಾರೆ. ಹೊಟ್ಟೆಪಾಡೇ ಕಷ್ಟವಾಗಿರುವಾಗಿರುವಾಗ ಇಷ್ಟೊಂದು ದೊಡ್ಡ ಮೊತ್ತ ಎಲ್ಲಿಂದ ತರುವುದು ಎಂದು ಗೊತ್ತಾಗುತ್ತಿಲ್ಲ. ಆದರೆ, ಮಗಳು ಪಡುವ ಕಷ್ಟ ಭಗವಂತನಿಗೆ ಗೊತ್ತು. ಸಹೃದಯಿಗಳು ಸಹಕಾರ ನೀಡಿದರೆ ಮಗು ಉಳಿಯುತ್ತದೆ ಎನ್ನುತ್ತಾರೆ ಆಕೆಯ ತಂದೆ ಮಂಜಪ್ಪ.

ವಿಚಿತ್ರ ಕಾಯಿಲೆಗೆ ಒಳಗಾಗಿರುವ ಬಾಲಕಿಯ ನೆರವಿಗೆ ರಾಜ್ಯದ ಜನ ಸಹಾಯ ಹಸ್ತ ಚಾಚಬೇಕಿದೆ. ಸಹಾಯ ಮಾಡ ಬಯಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು. ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್​ ಸಂಖ್ಯೆ 8151073504 ಗೆ ಸಂಪರ್ಕಿಸಬಹುದು.

ಬ್ಯಾಂಕ್ ಖಾತೆ ಸಂಖ್ಯೆ: 10803101013296
ಐಎಫ್‌ಎಸ್‌ಸಿ ಕೋಡ್: ಪಿಕೆಜಿಬಿ 0010803

Intro:ಶಿವಮೊಗ್ಗ,
ಸ್ಪೇಷಲ್ - ಪ್ಯಾಕೇಜ್
ಆ್ಯಂಕರ್....
ಮನುಷ್ಯನ ದೇಹದಲ್ಲಿ ರಕ್ತದ ಪ್ರಮಾಣ ಸ್ವಲ್ಪ ಕಡಿಮೆಯಾದರೂ ಪ್ರಾಣಕ್ಕೆ ಅಪಾಯ ಅಂತಾರೆ ವೈದ್ಯರು. ಆದರೆ, ಈ ಬಾಲಕಿ ದೇಹದಲ್ಲಿ ರಕ್ತವೇ ಉತ್ಪತ್ತಿಯಾಗುತ್ತಿಲ್ಲ! ಹಾಗಾಂದ್ರೆ ಏನ್ ಈ ಸ್ಟೋರಿ ಅಂತಿರಾ ಇಲ್ಲಿದೇ ನೋಡಿ ಕಂಪ್ಲಿಟ್ ಡಿಟೆಲ್ಸ್......
ವಾ.ಓ...೧

ಹೌದು... ೯ ತಿಂಗಳು ಮಗುವಿದ್ದಾಗಲೇ ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಹೋಗಿದೆ. ಇದಕ್ಕಿಂದ್ದಂತೆ ಊಟ -ತಿಂಡಿಬಿಟ್ಟು ನೋವಿನಿಂದ ಬಳಲುತ್ತಿದ್ದ ಮಗಳ ವರ್ತನೆ ಕಂಡು ಪೋಷಕರು ಆಸ್ಪತ್ರೆಯ ಮೆಟ್ಟಿಲೇರಿದಾಗ ಇವಳಿಗೆ ದೇಹದಲ್ಲಿ ರಕ್ತ ಉತ್ಪತ್ತಿಯೇ ಆಗದ ವಿಚಿತ್ರ ಕಾಯಿಲೆ ಇದೆ ಎಂಬುದು ತಿಳಿದಿದೆ.
ಶಿಕಾರಿಪುರ ತಾಲೂಕಿನ ಕಿಟ್ಟದಹಳ್ಳಿ ನಿವಾಸಿ ಮಂಜಪ್ಪ ಹಾಗೂ ಲಕ್ಷ್ಮಿ ದೇವಿ ದಂಪತಿಗಳ ಪುತ್ರಿ ಹೇಮಾವತಿಯೇ ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿ. ಈಕೆಯ ದೇಹದಲ್ಲಿ ರಕ್ತ ಉತ್ಪಾದನೆ ನಿಂತು ಸುಮಾರು ಆರು ವರ್ಷಗಳೇ ಕಳೆದಿವೆ.
ರಕ್ತ ಹೀನತೆಯಿಂದಾಗಿ ಇದ್ದಕ್ಕಿಂದಂತೆ ಒದ್ದಾಡುವ ಮಗಳ ಸಂಕಟ ನೋಡದೇ ಆಕೆಯ ಪೋಷಕರು ಸರಕಾರಿ, ಖಾಸಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದರೂ ಸೂಕ್ತ ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ. ನಾನಾ ಪ್ರಯತ್ನದ ನಡೆವೆಯೂ ಗುಣಮುಖವಾಗದಿರುವುದು ವೈದ್ಯರಿಗೂ ಸವಾಲಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆ ಕೊಡಿಸುವಂತೆ ಸೂಚನೆ ನೀಡಿದ್ದಾರೆ.

ವಾ.ಓ ೨......
ಇನ್ನೂ ಈ ಬಾಲಕಿಗೆ ೨೦ ದಿನಕ್ಕೊಮ್ಮೆ ರಕ್ತ ಹಾಕಿಸಬೇಕು!
ಹೇಮವತಿಯ ದೇಹದಲ್ಲಿ ರಕ್ತ ಉತ್ಪಾದನೆ ಆಗದಿರುವುದರಿಂದ ಪ್ರತಿ ೨೦ ದಿನಕ್ಕೊಮ್ಮೆ ರಕ್ತ ಕೊಡಿಸುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಮಂಜಪ್ಪ ಅವರ ಕುಟುಂಬದವರು ಪ್ರತಿ ತಿಂಗಳು ಮಗಳಿಗೆ ರಕ್ತ ಕೊಡಿಸುವುದಕ್ಕಾಗಿ ೪ ಸಾವಿರಕ್ಕೂ ಹೆಚ್ಚು ಖರ್ಚು ಹಣ ಖರ್ಚು ಮಾಡಬೇಕಿದೆ. ಸುಮಾರು ೬ ವರ್ಷದಿಂದ ಇವಳಿಗೆ ರಕ್ತ ಕೊಡಿಸುತ್ತಿದ್ದೇವೆ ಇಲ್ಲಿಯವರೆಗೆ ಸುಮಾರು ೩ ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ . ಈಗ
ಆಪರೇಷನ್‌ಗೆ ೩೨ ಲಕ್ಷ! ಬೇಕು
ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಒಂದು ದಿನ ಕೂಲಿ ಹೋಗದಿದ್ದರೆ ಜೀವನ ಕಷ್ಟ ಎಂಬ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಮಗಳಿಗೆ ಪ್ರತೀ ತಿಂಗಳು ರಕ್ತ ಹೊಂದಿಸಬೇಕು. ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ನಾವು ಖಾಸಗಿ ಆಸ್ಪತ್ರೆಗೆ ಹೋದೆವು ಮಗಳ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇವೆ.
ಮಗು ಸಂಪೂರ್ಣ ಗುಣ ಆಗಬೇಕಿದ್ದರೆ ಆಫರೇಷನ್ ಮಾಡಬೇಕು. ಇದಕ್ಕೆ ಸುಮಾರು ೩೨ ಲಕ್ಷ ರೂ. ಹಣ ಬೇಕು ಎನ್ನುತ್ತಿದ್ದಾರೆ. ಹೊಟ್ಟೆಪಾಡೇ ಕಷ್ಟವಾಗಿರುವಾಗಿರುವಾಗ ಇಷ್ಟೊಂದು ಬಾರಿ ಮೊತ್ತ ಎಲ್ಲಿಂದ ತರುವುದು ಎಂದು ಗೊತ್ತಾಗುತ್ತಿಲ್ಲ. ಆದರೆ, ಮಗಳು ಪಡುವ ಕಷ್ಟ ಭಗವಂತನಿಗೆ ಗೊತ್ತು. ಹೀಗಾಗಿ ಮಗಳ ಚಿಕಿತ್ಸೆಗೆ ಎಲ್ಲಿಂದ ಹಣ ತರುವುದು ಎಂಬ ಚಿಂತೆಗೆ ಕಾಡುತ್ತಿದೆ ಹಾಗಾಗಿ
ಸಹೃದಯಿಗಳು ಸಹಕಾರ ನೀಡಿದರೆ ಮಗು ಉಳಿಯುತ್ತದೆ. ಎನ್ನುತ್ತಾರೆ ಮಂಜಪ್ಪ
ಬೈಟ್..... ಮಂಜಪ್ಪ ಮಗುವಿನ ತಂದೆ.

ಕನ್ ಕ್ಲೂಷನ್.....
ಒಟ್ಟಾರೆಯಾಗಿ ವಿಚಿತ್ರ ಕಾಯಿಲೆಗೆ ಒಳಗಾಗಿರುವ ಬಾಲಕಿಯ ನೇರವಿಗೆ ರಾಜ್ಯದ ಜನ ಸಹಾಯ ಹಸ್ತ ಚಾಚಬೇಕಿದೆ.ಜೊತೆಗೆ ಬಾಲಕಿಯ ಭವಿಷ್ಯವನ್ನ ಸೂದಾರಿಸಲು ಈ ಕೆಳಕಂಡ ಬ್ಯಾಂಕ್ ಖಾತೆಗೆ ನೇರವು ನೀಡುವುದರ ಜೊತೆಗೆ ಸಹಾಯ ಮಾಡಲಿ ಎನ್ನುವುದೇ ನಮ್ಮ ಆಶಯ
ಭೀಮಾನಾಯ್ಕ ಎಸ್ ಶಿವಮೊಗ್ಗ

ಬ್ಯಾಂಕ್, ಖಾತೆ ಸಂಖ್ಯೆ: ೧೦೮೦೩೧೦೧೦೧೩೨೯೬, ಐಎಫ್‌ಎಸ್‌ಸಿ ಕೋಡ್:ಪಿಕೆಜಿಬಿ ೦೦೧೦೮೦೩ ಇಲ್ಲಿಗೆ ಕಳಿಸಬಹುದು ಮತ್ತು ಹೆಚ್ಚಿನ ವಿವರಗಳಿಗೆ ಮೊ.ಸಂ. ೮೧೫೧೦೭೩೫೦೪ ಸಂಪರ್ಕಿಸುವಂತೆ ಕೋರಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.