ETV Bharat / city

ನೀವು ಚಾಮುಂಡಿ ದೇವಿಯ ಪುಷ್ಪಾರ್ಚನೆ ಮಾಡುವ ಅವಕಾಶ ಕಳೆದುಕೊಂಡಿದ್ದೇ ಈ ಕಾರಣದಿಂದ.. ಪ್ರತಾಪ್​ ಸಿಂಹ

author img

By

Published : Aug 22, 2022, 3:52 PM IST

Updated : Aug 22, 2022, 8:16 PM IST

ಕೊಡಗಿನ ಮೇಲೆ ಟಿಪ್ಪು ದಂಡೆತ್ತಿ ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಪಕ್ಕದ ಜಿಲ್ಲೆಗಳಿಂದ ಕೆಲವು ಕಾರ್ಯಕರ್ತರನ್ನು ಕರೆದುಕೊಂಡು ಬಂದರೆ ಹೆದರುತ್ತಾರಾ ಎಂದು ಕಾಂಗ್ರೆಸ್​ನಿಂದ ಹಮ್ಮಿಕೊಂಡಿರುವ ಮಡಿಕೇರಿ ಚಲೋ ಯಾತ್ರೆ ಬಗ್ಗೆ ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯಿಸಿದರು.

pratap-simha
ಸಂಸದ ಪ್ರತಾಪ್​ ಸಿಂಹ

ಮೈಸೂರು : ಟಿಪ್ಪು ಕೊಡಗಿಗೆ ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದರೆ ಕೊಡವರು ಹೆದರುತ್ತಾರೆಯೇ. ನೀವು ಮಡಿಕೇರಿ ಯಾತ್ರೆಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಪಕ್ಕದ ಕೇರಳ ರಾಜ್ಯದ ಎಸ್​ಡಿಪಿಐನ ನಿಮ್ಮ ಸಾಕು ಮಕ್ಕಳನ್ನು ಕರೆತಂದರೂ ಮಡಿಕೇರಿಯವರು ಹೆದರುವುದಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗಸ್ಟ್ 26 ರಂದು ಕಾಂಗ್ರೆಸ್​ ಮಡಿಕೇರಿ ಚಲೋ ಯಾತ್ರೆ ಹಮ್ಮಿಕೊಂಡಿದ್ದು, ಈ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಜೊತೆಗೆ 2017 ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಿದ್ದೀರಿ. ಅದಕ್ಕೆ ಮುಂದೆ ನಿಮಗೆ ಚಾಮುಂಡೇಶ್ವರಿ ತಾಯಿ ಅವಕಾಶ ಕೊಡಲಿಲ್ಲ. ಈಗ ಮಡಿಕೇರಿಯ ಬಸವೇಶ್ವರ ದೇವಾಲಯಕ್ಕೆ ಹೋಗಿ ಬಸವ ತತ್ವದ ಅನುಯಾಯಿಗಳಿಗೆ ನೋವುಂಟು ಮಾಡಿದ್ದೀರಿ ಎಂದರು.

ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಟೀಕೆ

ಬಸವೇಶ್ವರ ಅನುಯಾಯಿಗಳ ನಂಬಿಕೆ ಒಡೆದಂತೆ : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಬಸವ ಅನುಯಾಯಿಗಳನ್ನು ಒಡೆಯಲು ಪ್ರಯತ್ನ ಮಾಡಿದ್ದರು. ಈಗ ಬಸವೇಶ್ವರ ದೇವಾಲಯಕ್ಕೆ ಮಾಂಸ ತಿಂದು ಹೋಗಿ ಅನುಯಾಯಿಗಳು ನಂಬಿಕೆ ಒಡೆಯುವ ಕೆಲಸ ಮಾಡಿದ್ದಾರೆ. ಬಸವ ಅನುಯಾಯಿಗಳು ಮಾಂಸಾಹಾರವನ್ನು ತ್ಯಜಿಸಿದವರು ಎಂದರು.

ಜಮೀರ್​ಗೆ ಹಂದಿ ಮಾಂಸ ತಿನ್ನಲು ಹೇಳಿ : ಸಿದ್ದರಾಮಯ್ಯ ಅವರೇ ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ ಎಂದು ಹೇಳಿದ್ದಿರಿ. ಹಾಗಾದರೆ, ನಿಮ್ಮ ಪಕ್ಷದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್​​ ಅವರಿಗೆ ಹಂದಿ ಮಾಂಸ ತಿನ್ನಲು ಹೇಳಿ. ಅದನ್ನು ಹೇಳಲು ನಿಮಗೆ ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಮೊಟ್ಟೆ ಎಸೆದಿದ್ದಕ್ಕೆ ಖಂಡನೆ : ಮೊಟ್ಟೆ ಎಸೆದಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರು ಖಂಡಿಸಿದ್ದಾರೆ. ಅಲ್ಲದೇ ಈ ರೀತಿ ಕೃತ್ಯ ಮಾಡಬಾರದು ಎಂದು ಹೇಳಿದ್ದೇವೆ ಎಂದರು.

ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮಾಡುವಾಗ ಕಾಂಗ್ರೆಸ್​ನ ಅನೇಕ ಹಿರಿಯ ನಾಯಕರು ಸಿದ್ದರಾಮಯ್ಯ ಜೊತೆ ಪದಯಾತ್ರೆಯಲ್ಲಿ ಇದ್ದರು. ಅಲ್ಲದೇ ಗಣಿ ವಿಚಾರದಲ್ಲಿ ರಾಜ್ಯದ ಜನರಿಗೆ ಆಕ್ರೋಶವಿತ್ತು. ಬಿಜೆಪಿ ಆ ಸಂದರ್ಭದಲ್ಲಿ ಕೆಜೆಪಿಯಾಗಿ ಒಡೆದಿತ್ತು. ಇದರ ಫಲವಾಗಿ ಸಿದ್ದರಾಮಯ್ಯ 119 ಸೀಟುಗಳಿಂದ ಮುಖ್ಯಮಾಂತ್ರಿಯಾದರು ಎಂದು ಹೇಳಿದರು.

ಪಾದಯಾತ್ರೆಗೆ ಅನುಮತಿ ಕೊಡುವ ವಿಚಾರ ಗುಪ್ತಚರ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಸಂಸದರು ತಿಳಿಸಿದರು.

ಇದನ್ನೂ ಓದಿ : ಮೊಟ್ಟೆ ಎಸೆದಿದ್ದಕ್ಕೆ ಮಡಿಕೇರಿ ಚಲೋ ಕೈಬಿಡಿ, ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ: ಹೆಚ್‌ ವಿಶ್ವನಾಥ್

ಮೈಸೂರು : ಟಿಪ್ಪು ಕೊಡಗಿಗೆ ಬಂದಾಗಲೇ ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದರೆ ಕೊಡವರು ಹೆದರುತ್ತಾರೆಯೇ. ನೀವು ಮಡಿಕೇರಿ ಯಾತ್ರೆಗೆ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಪಕ್ಕದ ಕೇರಳ ರಾಜ್ಯದ ಎಸ್​ಡಿಪಿಐನ ನಿಮ್ಮ ಸಾಕು ಮಕ್ಕಳನ್ನು ಕರೆತಂದರೂ ಮಡಿಕೇರಿಯವರು ಹೆದರುವುದಿಲ್ಲ ಎಂದು ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗಸ್ಟ್ 26 ರಂದು ಕಾಂಗ್ರೆಸ್​ ಮಡಿಕೇರಿ ಚಲೋ ಯಾತ್ರೆ ಹಮ್ಮಿಕೊಂಡಿದ್ದು, ಈ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. ಜೊತೆಗೆ 2017 ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟನೆ ಮಾಡಿದ್ದೀರಿ. ಅದಕ್ಕೆ ಮುಂದೆ ನಿಮಗೆ ಚಾಮುಂಡೇಶ್ವರಿ ತಾಯಿ ಅವಕಾಶ ಕೊಡಲಿಲ್ಲ. ಈಗ ಮಡಿಕೇರಿಯ ಬಸವೇಶ್ವರ ದೇವಾಲಯಕ್ಕೆ ಹೋಗಿ ಬಸವ ತತ್ವದ ಅನುಯಾಯಿಗಳಿಗೆ ನೋವುಂಟು ಮಾಡಿದ್ದೀರಿ ಎಂದರು.

ನಿಮ್ಮ ಶ್ರೀಮತಿ ಚಾಮುಂಡೇಶ್ವರಿ ಭಕ್ತೆ ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಆ ರೀತಿ ಹೇಳಿದರೆ ಬಂದು ಸಾರ್ವಜನಿಕವಾಗಿ ಹೇಳಿ. ಆಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ಟೀಕೆ

ಬಸವೇಶ್ವರ ಅನುಯಾಯಿಗಳ ನಂಬಿಕೆ ಒಡೆದಂತೆ : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ವೀರಶೈವರೇ ಬೇರೆ ಲಿಂಗಾಯತರೇ ಬೇರೆ ಎಂದು ಬಸವ ಅನುಯಾಯಿಗಳನ್ನು ಒಡೆಯಲು ಪ್ರಯತ್ನ ಮಾಡಿದ್ದರು. ಈಗ ಬಸವೇಶ್ವರ ದೇವಾಲಯಕ್ಕೆ ಮಾಂಸ ತಿಂದು ಹೋಗಿ ಅನುಯಾಯಿಗಳು ನಂಬಿಕೆ ಒಡೆಯುವ ಕೆಲಸ ಮಾಡಿದ್ದಾರೆ. ಬಸವ ಅನುಯಾಯಿಗಳು ಮಾಂಸಾಹಾರವನ್ನು ತ್ಯಜಿಸಿದವರು ಎಂದರು.

ಜಮೀರ್​ಗೆ ಹಂದಿ ಮಾಂಸ ತಿನ್ನಲು ಹೇಳಿ : ಸಿದ್ದರಾಮಯ್ಯ ಅವರೇ ಮಾಂಸ ತಿನ್ನಬೇಡಿ ಎಂದು ದೇವರು ಹೇಳಿಲ್ಲ ಎಂದು ಹೇಳಿದ್ದಿರಿ. ಹಾಗಾದರೆ, ನಿಮ್ಮ ಪಕ್ಷದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್​​ ಅವರಿಗೆ ಹಂದಿ ಮಾಂಸ ತಿನ್ನಲು ಹೇಳಿ. ಅದನ್ನು ಹೇಳಲು ನಿಮಗೆ ಧೈರ್ಯ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಮೊಟ್ಟೆ ಎಸೆದಿದ್ದಕ್ಕೆ ಖಂಡನೆ : ಮೊಟ್ಟೆ ಎಸೆದಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರು ಖಂಡಿಸಿದ್ದಾರೆ. ಅಲ್ಲದೇ ಈ ರೀತಿ ಕೃತ್ಯ ಮಾಡಬಾರದು ಎಂದು ಹೇಳಿದ್ದೇವೆ ಎಂದರು.

ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮಾಡುವಾಗ ಕಾಂಗ್ರೆಸ್​ನ ಅನೇಕ ಹಿರಿಯ ನಾಯಕರು ಸಿದ್ದರಾಮಯ್ಯ ಜೊತೆ ಪದಯಾತ್ರೆಯಲ್ಲಿ ಇದ್ದರು. ಅಲ್ಲದೇ ಗಣಿ ವಿಚಾರದಲ್ಲಿ ರಾಜ್ಯದ ಜನರಿಗೆ ಆಕ್ರೋಶವಿತ್ತು. ಬಿಜೆಪಿ ಆ ಸಂದರ್ಭದಲ್ಲಿ ಕೆಜೆಪಿಯಾಗಿ ಒಡೆದಿತ್ತು. ಇದರ ಫಲವಾಗಿ ಸಿದ್ದರಾಮಯ್ಯ 119 ಸೀಟುಗಳಿಂದ ಮುಖ್ಯಮಾಂತ್ರಿಯಾದರು ಎಂದು ಹೇಳಿದರು.

ಪಾದಯಾತ್ರೆಗೆ ಅನುಮತಿ ಕೊಡುವ ವಿಚಾರ ಗುಪ್ತಚರ ವರದಿ ಆಧಾರದ ಮೇಲೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದು ಸಂಸದರು ತಿಳಿಸಿದರು.

ಇದನ್ನೂ ಓದಿ : ಮೊಟ್ಟೆ ಎಸೆದಿದ್ದಕ್ಕೆ ಮಡಿಕೇರಿ ಚಲೋ ಕೈಬಿಡಿ, ರಾಜ್ಯದ ಸಮಸ್ಯೆಗಳನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ: ಹೆಚ್‌ ವಿಶ್ವನಾಥ್

Last Updated : Aug 22, 2022, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.