ETV Bharat / city

ಶಾಸಕ ಸಾ.ರಾ. ಮಹೇಶ್ ಅವರೇ ನನ್ನ ಜಮೀನು ನನಗೆ ಕೊಡಿಸಿ: ಭೂ ಮಾಲೀಕನ ಮನವಿ

author img

By

Published : Jun 7, 2021, 5:20 PM IST

ನನಗೆ ಬೆದರಿಕೆ ಹಾಕಿ ಸಾ.ರಾ. ಮಹೇಶ್ ಅವರು ನನ್ನ ಜಮೀನನ್ನು ತಮ್ಮ ಸ್ನೇಹಿತರೊಬ್ಬರಿಗೆ ಕೊಡಿಸಿದ್ದಾರೆ. ಅಲ್ಲದೆ, ಹುಡುಗರನ್ನು ಬಿಟ್ಟು ತಂತಿ ಬೇಲಿ ಹಾಕಿಸಿದ್ದಾರೆ. ಕರೆ ಮಾಡಿ ಕೇಳಿದ್ರೆ, ಅದು ನನ್ನ ಸ್ನೇಹಿತನಿಗೆ ಸೇರಿದ ಜಾಗ, ನಿನ್ನ ಹತ್ತಿರ ದಾಖಲಾತಿ ಇದ್ದರೆ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ ಎಂದು ಭೂ ಮಾಲೀಕರೊಬ್ಬರು ಶಾಸಕ ಸಾ.ರಾ. ಮಹೇಶ್​ ವಿರುದ್ಧ ಆರೋಪ ಮಾಡಿದ್ದಾರೆ.

mla Mahesh has threaten and gave my land to his friends
ಶಾಸಕ ಮಹೇಶ್ ಮೇಲೆ​ ಭೂಕಬಳಿಕೆ ಆರೋಪ

ಮೈಸೂರು: ಶಾಸಕ ಸಾ. ರಾ. ಮಹೇಶ್​​ ಅವರು ಬೆದರಿಕೆ ಹಾಕಿ ನನ್ನ ಭೂಮಿಯನ್ನು ತಮ್ಮ ಸ್ನೇಹಿತನಿಗೆ ಕೊಡಿಸಿದ್ದಾರೆ. ದಯವಿಟ್ಟು ನಮ್ಮ ಜಮೀನನ್ನು ನನಗೆ ಬಿಡಿಸಿಕೊಡಿ ಎಂದು ಭೂ ಮಾಲೀಕರೊಬ್ಬರು ಮನವಿ ಮಾಡಿದ್ದಾರೆ.

ಭೂ ಮಾಲೀಕನಿಗೆ ಶಾಸಕ ಮಹೇಶ್ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸಂತ್ರಸ್ತ ಗಣಪತಿ ರೆಡ್ಡಿ, ತಾಲ್ಲೂಕಿನ ಕೆರ್ಗಳ್ಳಿ ಸರ್ವೆ ನಂಬರ್ 115ರಲ್ಲಿ 2014ರಲ್ಲಿ 2 ಎಕರೆ ಜಮೀನನ್ನ ಖರೀದಿಸಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನನ್ನ ಹೆಸರಿನಲ್ಲಿವೆ. ಆದ್ರೆ ಶಾಸಕ ಸಾ.ರಾ. ಮಹೇಶ್ ಅವರು ತಮ್ಮ ಸ್ನೇಹಿತ ಮಂಜುನಾಥ್ ಎಂಬುವರಿಗೆ ಆ ಜಾಗವನ್ನು ಕೊಡಿಸಿದ್ದಾರೆ. ಅಲ್ಲದೆ ತಮ್ಮ ಹುಡುಗರನ್ನು ಬಿಟ್ಟು ತಂತಿ ಬೇಲಿ ಹಾಕಿಸಿದ್ದಾರೆ ಎಂದು ದೂರಿದರು.

ಬೆದರಿಕೆ ಹಾಕಿ ಶಾಸಕ ಮಹೇಶ್​ ತಮ್ಮ ಸ್ನೇಹಿತರಿಗೆ ನನ್ನ ಭೂಮಿ ಕೊಡಿಸಿದ್ದಾರೆ ಎಂದ ಗಣಪತಿ ರೆಡ್ಡಿ

ಈ ಬಗ್ಗೆ ಸಾ.ರಾ. ಮಹೇಶ್ ಅವರಿಗೆ ಕರೆ ಮಾಡಿ ಕೇಳಿದ್ರೆ, ಅದು ನನ್ನ ಸ್ನೇಹಿತನಿಗೆ ಸೇರಿದ ಜಾಗ, ನಿನ್ನ ಹತ್ತಿರ ದಾಖಲಾತಿ ಇದ್ದರೆ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ತಮ್ಮ ಸ್ನೇಹಿತನ ಮಾತು ಕೇಳಿ ನನ್ನ ಜಮೀನನ್ನು ಅವರಿಗೆ ಕೊಡಿಸಿದ್ದಾರೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಭೂ ಮಾಲೀಕ ಗಣಪತಿ ರೆಡ್ಡಿ ಮನವಿ ಮಾಡಿದರು.

ಜೊತೆಗೆ ಈ ಬಗ್ಗೆ ಕಳೆದ 5 ತಿಂಗಳ ಹಿಂದೆಯೇ ಜೈಪುರ ಠಾಣೆಯಲ್ಲಿ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಗಣಪತಿ ರೆಡ್ಡಿ ಅಳಲು ತೋಡಿಕೊಂಡರು.

ಮೈಸೂರು: ಶಾಸಕ ಸಾ. ರಾ. ಮಹೇಶ್​​ ಅವರು ಬೆದರಿಕೆ ಹಾಕಿ ನನ್ನ ಭೂಮಿಯನ್ನು ತಮ್ಮ ಸ್ನೇಹಿತನಿಗೆ ಕೊಡಿಸಿದ್ದಾರೆ. ದಯವಿಟ್ಟು ನಮ್ಮ ಜಮೀನನ್ನು ನನಗೆ ಬಿಡಿಸಿಕೊಡಿ ಎಂದು ಭೂ ಮಾಲೀಕರೊಬ್ಬರು ಮನವಿ ಮಾಡಿದ್ದಾರೆ.

ಭೂ ಮಾಲೀಕನಿಗೆ ಶಾಸಕ ಮಹೇಶ್ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದೆ. ಈ ಕುರಿತು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಸಂತ್ರಸ್ತ ಗಣಪತಿ ರೆಡ್ಡಿ, ತಾಲ್ಲೂಕಿನ ಕೆರ್ಗಳ್ಳಿ ಸರ್ವೆ ನಂಬರ್ 115ರಲ್ಲಿ 2014ರಲ್ಲಿ 2 ಎಕರೆ ಜಮೀನನ್ನ ಖರೀದಿಸಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನನ್ನ ಹೆಸರಿನಲ್ಲಿವೆ. ಆದ್ರೆ ಶಾಸಕ ಸಾ.ರಾ. ಮಹೇಶ್ ಅವರು ತಮ್ಮ ಸ್ನೇಹಿತ ಮಂಜುನಾಥ್ ಎಂಬುವರಿಗೆ ಆ ಜಾಗವನ್ನು ಕೊಡಿಸಿದ್ದಾರೆ. ಅಲ್ಲದೆ ತಮ್ಮ ಹುಡುಗರನ್ನು ಬಿಟ್ಟು ತಂತಿ ಬೇಲಿ ಹಾಕಿಸಿದ್ದಾರೆ ಎಂದು ದೂರಿದರು.

ಬೆದರಿಕೆ ಹಾಕಿ ಶಾಸಕ ಮಹೇಶ್​ ತಮ್ಮ ಸ್ನೇಹಿತರಿಗೆ ನನ್ನ ಭೂಮಿ ಕೊಡಿಸಿದ್ದಾರೆ ಎಂದ ಗಣಪತಿ ರೆಡ್ಡಿ

ಈ ಬಗ್ಗೆ ಸಾ.ರಾ. ಮಹೇಶ್ ಅವರಿಗೆ ಕರೆ ಮಾಡಿ ಕೇಳಿದ್ರೆ, ಅದು ನನ್ನ ಸ್ನೇಹಿತನಿಗೆ ಸೇರಿದ ಜಾಗ, ನಿನ್ನ ಹತ್ತಿರ ದಾಖಲಾತಿ ಇದ್ದರೆ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ತಮ್ಮ ಸ್ನೇಹಿತನ ಮಾತು ಕೇಳಿ ನನ್ನ ಜಮೀನನ್ನು ಅವರಿಗೆ ಕೊಡಿಸಿದ್ದಾರೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಭೂ ಮಾಲೀಕ ಗಣಪತಿ ರೆಡ್ಡಿ ಮನವಿ ಮಾಡಿದರು.

ಜೊತೆಗೆ ಈ ಬಗ್ಗೆ ಕಳೆದ 5 ತಿಂಗಳ ಹಿಂದೆಯೇ ಜೈಪುರ ಠಾಣೆಯಲ್ಲಿ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಗಣಪತಿ ರೆಡ್ಡಿ ಅಳಲು ತೋಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.