ETV Bharat / city

ಸಿಎಂ ಬದಲಾವಣೆ ವಿಚಾರ: ಸಿದ್ದರಾಮಯ್ಯ, ನೀವು ಕುಳಿತುಕೊಂಡು ಡಿಸೈಡ್ ಮಾಡಿ ಎಂದ ಬಿಎಸ್​ವೈ

author img

By

Published : Jan 11, 2021, 11:39 AM IST

Updated : Jan 11, 2021, 11:56 AM IST

ಜನವರಿ 13 ಮತ್ತು 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಅಂದು ಸಂಪುಟ ವಿಸ್ತರಣೆಯಾಗಲಿದೆಯೋ ಅಥವಾ ಪುನರ್ ರಚನೆಯಾಗಲಿದೆಯೋ ಎಂದು ನಿಮಗೆ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ನೀವು (ಮಾಧ್ಯಮದವರು) ಕುಳಿತುಕೊಂಡು ಡಿಸೈಡ್ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅವರು ಲೇವಡಿ ಮಾಡಿದರು.

ಸುತ್ತೂರಿನ ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ವೈ

ಸುತ್ತೂರಿನ ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ‌ ಅವರು, ಜನವರಿ 13 ಮತ್ತು 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಅಂದು ಸಂಪುಟ ವಿಸ್ತರಣೆಯಾಗಲಿದೆಯೋ ಅಥವಾ ಪುನರ್ ರಚನೆಯಾಗಲಿದೆಯೋ ಎಂದು ನಿಮಗೇ ಗೊತ್ತಾಗಲಿದೆ ಎಂದರು.

ಕೋವಿಡ್-19 ನಂತರ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಜನಪರ, ಅಭಿವೃದ್ಧಿ ಬಜೆಟ್ ನೀಡಲಿದ್ದೇವೆ‌. ಮಾರ್ಚ್​ ವೇಳೆಗೆ ಬಜೆಟ್ ತಯಾರಿ ಪೂರ್ಣಗೊಳ್ಳಲಿದ್ದು, ಉತ್ತಮ ಬಜೆಟ್ ಮಂಡಿಸುವ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು.

ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ನೀವು (ಮಾಧ್ಯಮದವರು) ಕುಳಿತುಕೊಂಡು ಡಿಸೈಡ್ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅವರು ಲೇವಡಿ ಮಾಡಿದರು.

ಸುತ್ತೂರಿನ ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್​ವೈ

ಸುತ್ತೂರಿನ ಹೆಲಿಪ್ಯಾಡ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ‌ ಅವರು, ಜನವರಿ 13 ಮತ್ತು 14 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಅಂದು ಸಂಪುಟ ವಿಸ್ತರಣೆಯಾಗಲಿದೆಯೋ ಅಥವಾ ಪುನರ್ ರಚನೆಯಾಗಲಿದೆಯೋ ಎಂದು ನಿಮಗೇ ಗೊತ್ತಾಗಲಿದೆ ಎಂದರು.

ಕೋವಿಡ್-19 ನಂತರ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಈ ಹಿನ್ನೆಲೆಯಲ್ಲಿ ಜನಪರ, ಅಭಿವೃದ್ಧಿ ಬಜೆಟ್ ನೀಡಲಿದ್ದೇವೆ‌. ಮಾರ್ಚ್​ ವೇಳೆಗೆ ಬಜೆಟ್ ತಯಾರಿ ಪೂರ್ಣಗೊಳ್ಳಲಿದ್ದು, ಉತ್ತಮ ಬಜೆಟ್ ಮಂಡಿಸುವ ವಿಶ್ವಾಸವಿದೆ ಎಂದು ಇದೇ ವೇಳೆ ತಿಳಿಸಿದರು.

Last Updated : Jan 11, 2021, 11:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.