ETV Bharat / city

ಅನೈತಿಕ ಸಂಬಂಧ.. ಉಸಿರುಗಟ್ಟಿಸಿ ಹೆಂಡತಿ ಕೊಲೆ ಮಾಡಿದ ಪತಿರಾಯ!

ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಪತಿ, ತನ್ನ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ಪಟ್ಟಣದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ. ಸದ್ಯ ಆರೋಪಿ ರವಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

author img

By

Published : Jan 18, 2021, 11:13 AM IST

Updated : Jan 18, 2021, 1:01 PM IST

a-man-killed-his-wife-in-mysore
ಅನೈತಿಕ ಸಂಬಂಧ: ಉಸಿರುಗಟ್ಟಿಸಿ ಹೆಂಡತಿ ಕೊಲೆ ಮಾಡಿದ ಪತಿರಾಯ

ಮೈಸೂರು: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ, ಉಸಿರುಗಟ್ಟಿಸಿ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ಪಟ್ಟಣದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಸೌಮ್ಯ (30) ಮೃತ ರ್ದುದೈವಿ. ಕಳೆದ 11 ವರ್ಷಗಳ ಹಿಂದೆ ಕಲ್ಲುಣಿಕೆ ಹೌಸಿಂಗ್ ಬೋರ್ಡ್ ನಿವಾಸಿ ರವಿ ಎಂಬುವವರೊಂದಿಗೆ ಸೌಮ್ಯಳ ವಿವಾಹವಾಗಿತ್ತು. ಇವರಿಗೆ ಎರಡು ಗಂಡು ಮಕ್ಕಳು ಸಹ ಇದ್ದಾರೆ.

ಆದರೆ, ಸೌಮ್ಯ ಇನ್ನೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪತ್ನಿಯ ನಡವಳಿಕೆಯಿಂದ ಬೇಸರಗೊಂಡಿದ್ದ ರವಿ ಅನೇಕ ಬಾರಿ ಬುದ್ಧಿ ಹೇಳಿದ್ದ. ಆದರೂ ಪತ್ನಿ ತನ್ನ ನಡವಳಿಕೆ ಸರಿ ಮಾಡಿಕೊಳ್ಳದ್ದರಿಂದ ಬೇಸತ್ತ ಪತಿ, ಹೆಂಡತಿ ನಿದ್ರಿಸುತ್ತಿರುವಾಗ ವೆಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಮಧ್ಯರಾತ್ರಿ ಜನರನ್ನು ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಗ್ಯಾಂಗ್​ ಅಂದರ್

ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ರವಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮೈಸೂರು: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿ, ಉಸಿರುಗಟ್ಟಿಸಿ ಹೆಂಡತಿಯನ್ನೇ ಕೊಲೆ ಮಾಡಿರುವ ಘಟನೆ ಹುಣಸೂರು ಪಟ್ಟಣದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿದೆ.

ಮೂಲತಃ ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಸೌಮ್ಯ (30) ಮೃತ ರ್ದುದೈವಿ. ಕಳೆದ 11 ವರ್ಷಗಳ ಹಿಂದೆ ಕಲ್ಲುಣಿಕೆ ಹೌಸಿಂಗ್ ಬೋರ್ಡ್ ನಿವಾಸಿ ರವಿ ಎಂಬುವವರೊಂದಿಗೆ ಸೌಮ್ಯಳ ವಿವಾಹವಾಗಿತ್ತು. ಇವರಿಗೆ ಎರಡು ಗಂಡು ಮಕ್ಕಳು ಸಹ ಇದ್ದಾರೆ.

ಆದರೆ, ಸೌಮ್ಯ ಇನ್ನೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪತ್ನಿಯ ನಡವಳಿಕೆಯಿಂದ ಬೇಸರಗೊಂಡಿದ್ದ ರವಿ ಅನೇಕ ಬಾರಿ ಬುದ್ಧಿ ಹೇಳಿದ್ದ. ಆದರೂ ಪತ್ನಿ ತನ್ನ ನಡವಳಿಕೆ ಸರಿ ಮಾಡಿಕೊಳ್ಳದ್ದರಿಂದ ಬೇಸತ್ತ ಪತಿ, ಹೆಂಡತಿ ನಿದ್ರಿಸುತ್ತಿರುವಾಗ ವೆಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಮಧ್ಯರಾತ್ರಿ ಜನರನ್ನು ಅಡ್ಡಗಟ್ಟಿ ದರೋಡೆ ಮಾಡ್ತಿದ್ದ ಗ್ಯಾಂಗ್​ ಅಂದರ್

ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ರವಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Last Updated : Jan 18, 2021, 1:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.