ETV Bharat / city

ಆಯುಧಪೂಜೆ ವಿಶೇಷ: ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಪೊಲೀಸರು

ಸದಾ ಖಾಕಿ ಧರಿಸಿ ಕರ್ತವ್ಯದಿಂದ ಹಿಂದೆ ಓಡುವ ಪೊಲೀಸರು ಆಯುಧ ಪೂಜೆ ಹಾಗೂ ವಿಜಯದಶಿಯ ಅಂಗವಾಗಿ ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆಯಲ್ಲಿ ಪಾಲ್ಗೊಂಡ ದೃಶ್ಯಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಪೊಲೀಸ್​ ಠಾಣೆಗಳಲ್ಲಿ ಕಂಡು ಬಂತು.

author img

By

Published : Oct 8, 2019, 5:03 AM IST

ಆಯುಧಪೂಜೆ ವಿಶೇಷ: ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಪೊಲೀಸರು

ಮಂಗಳೂರು/ಕಡಬ: ವಿಜಯದಶಮಿ ಹಾಗೂ ಆಯುಧ ಪೂಜೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಉಪ್ಪಿನಂಗಡಿ, ನೆಲ್ಯಾಡಿ ಪೊಲೀಸ್​ ಠಾಣೆಗಳ ಪೊಲೀಸರು ಭಾನುವಾರ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು.

vijayadashami and Ayudha puja special: police staff wore traditional dress
ಆಯುಧಪೂಜೆ ವಿಶೇಷ: ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಪೊಲೀಸರು

ಪ್ರತೀ ದಿನವೂ ಕೆಲಸಗಳ ಒತ್ತಡ, ಪ್ರಕರಣಗಳ ಹಿಂದೆ ಬೀಳುವ ಪೊಲೀಸರು ಭಾನುವಾರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದು ಕಂಡುಬಂತು. ಬೆಳಗ್ಗೆಯಿಂದಲೇ ವಿವಿಧ ಠಾಣಾಧಿಕಾರಿಗಳು, ಪೊಲೀಸ್ ಸಿಬಂದಿ, ಗೃಹರಕ್ಷಕರು ಒಟ್ಟು ಸೇರಿ ತಮ್ಮ ಕರ್ತವ್ಯಗಳ ನಡುವೆಯೂ ಪೊಲೀಸ್ ಠಾಣೆಗಳನ್ನು ಸ್ವಚ್ಛ ಮಾಡಿ, ತಳಿರು ತೋರಣಗಳು, ಬಲೂನುಗಳು ಹೂವುಗಳನ್ನು ಕಟ್ಟುವ ಮೂಲಕ ಶೃಂಗಾರ ಮಾಡಿದರು.

ನಂತರ ಪೂಜೆಯ ವೇಳೆ ಆರಂಭವಾಗುತ್ತಿದ್ದಂತೆ ಎಲ್ಲಾ ಪೊಲೀಸರೂ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆಗೆ ಆಗಮಿಸಿದರು. ಪುರುಷರು ಲುಂಗಿ, ಶರ್ಟ್, ಶಾಲು ಧರಿಸಿದರೆ ಮಹಿಳೆಯರು ಸೀರೆ ತೊಟ್ಟು, ಸಂಭ್ರಮದಿಂದ ಆಯುಧ ಪೂಜಾ ವಿಧಿ ವಿಧಾನಗಳನ್ನು ನಿರ್ವಹಿಸಿದರು. ಒಟ್ಟಿನಲ್ಲಿ ಸದಾ ಖಾಕಿ ಧರಿಸಿ ಕರ್ತವ್ಯದಿಂದ ಹಿಂದೆ ಓಡುವ ಪೊಲೀಸರು ಅಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

ಮಂಗಳೂರು/ಕಡಬ: ವಿಜಯದಶಮಿ ಹಾಗೂ ಆಯುಧ ಪೂಜೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ಉಪ್ಪಿನಂಗಡಿ, ನೆಲ್ಯಾಡಿ ಪೊಲೀಸ್​ ಠಾಣೆಗಳ ಪೊಲೀಸರು ಭಾನುವಾರ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು.

vijayadashami and Ayudha puja special: police staff wore traditional dress
ಆಯುಧಪೂಜೆ ವಿಶೇಷ: ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದ ಪೊಲೀಸರು

ಪ್ರತೀ ದಿನವೂ ಕೆಲಸಗಳ ಒತ್ತಡ, ಪ್ರಕರಣಗಳ ಹಿಂದೆ ಬೀಳುವ ಪೊಲೀಸರು ಭಾನುವಾರ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದು ಕಂಡುಬಂತು. ಬೆಳಗ್ಗೆಯಿಂದಲೇ ವಿವಿಧ ಠಾಣಾಧಿಕಾರಿಗಳು, ಪೊಲೀಸ್ ಸಿಬಂದಿ, ಗೃಹರಕ್ಷಕರು ಒಟ್ಟು ಸೇರಿ ತಮ್ಮ ಕರ್ತವ್ಯಗಳ ನಡುವೆಯೂ ಪೊಲೀಸ್ ಠಾಣೆಗಳನ್ನು ಸ್ವಚ್ಛ ಮಾಡಿ, ತಳಿರು ತೋರಣಗಳು, ಬಲೂನುಗಳು ಹೂವುಗಳನ್ನು ಕಟ್ಟುವ ಮೂಲಕ ಶೃಂಗಾರ ಮಾಡಿದರು.

ನಂತರ ಪೂಜೆಯ ವೇಳೆ ಆರಂಭವಾಗುತ್ತಿದ್ದಂತೆ ಎಲ್ಲಾ ಪೊಲೀಸರೂ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆಗೆ ಆಗಮಿಸಿದರು. ಪುರುಷರು ಲುಂಗಿ, ಶರ್ಟ್, ಶಾಲು ಧರಿಸಿದರೆ ಮಹಿಳೆಯರು ಸೀರೆ ತೊಟ್ಟು, ಸಂಭ್ರಮದಿಂದ ಆಯುಧ ಪೂಜಾ ವಿಧಿ ವಿಧಾನಗಳನ್ನು ನಿರ್ವಹಿಸಿದರು. ಒಟ್ಟಿನಲ್ಲಿ ಸದಾ ಖಾಕಿ ಧರಿಸಿ ಕರ್ತವ್ಯದಿಂದ ಹಿಂದೆ ಓಡುವ ಪೊಲೀಸರು ಅಂದು ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.

Intro:ವಿಜಯದಶಮಿ ಹಾಗೂ ಆಯುಧ ಪೂಜೆಯ ಪ್ರಯುಕ್ತ ದಕ್ಷಿಣ ಕನ್ನಡದ ಕಡಬ, ಉಪ್ಪಿನಂಗಡಿ, ನೆಲ್ಯಾಡಿ ಪೋಲೀಸರು ಇಂದು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡದ್ದು ವಿಶೇಷವಾಗಿತ್ತು.

ಪ್ರತೀದಿನವು ಕೆಲಸಗಳ ಒತ್ತಡ,ಪ್ರಕರಣಗಳ ಹಿಂದೆ ಬೀಳುವ ಪೋಲೀಸರು ಇಂದು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದು ಕಂಡುಬಂತು. ಬೆಳಗಿನ ಸಮಯದಿಂದಲೇ ವಿವಿಧ ಠಾಣಾಧಿಕಾರಿಗಳು,ಪೋಲೀಸ್ ಸಿಬಂದಿಗಳು,ಗೃಹರಕ್ಷಕರು, ಒಟ್ಟು ಸೇರಿ ತಮ್ಮ ಕರ್ತವ್ಯಗಳ ನಡುವೆಯೂ ಪೋಲಿಸ್ ಠಾಣೆಗಳನ್ನು ಸ್ವಚ್ಚಮಾಡಿ, ತಳಿರು ತೋರಣಗಳು, ಬಲೂನುಗಳು ಹೂವುಗಳನ್ನು ಕಟ್ಟುವ ಮೂಲಕ ಶೃಂಗಾರಮಾಡಿದರು. ನಂತರ ಪೂಜಾ ವೇಳೆ ಆರಂಭವಾಗುತ್ತಿದ್ದಂತೆ ಎಲ್ಲಾ ಪೋಲೀಸರೂ ಸಾಂಪ್ರದಾಯಿಕ ಉಡುಗೆಯಲ್ಲಿ ಪೂಜೆಗೆ ಆಗಮಿಸಿದರು. ಪುರುಷರು ಲುಂಗಿ ಶರ್ಟ್,ಶಾಲು ಧರಿಸಿದರೆ ಮಹಿಳೆಯರು ಸೀರೆ ತೊಟ್ಟು, ಸಂಭ್ರಮದಿಂದ ಆಯುಧ ಪೂಜಾ ವಿಧಿ ವಿಧಾನಗಳನ್ನು ನಿರ್ವಹಿಸಿದರು.Body:ಪೋಲೀಸರು ಸಾಂಪ್ರದಾಯಿಕ ಉಡುಗೆಯಲ್ಲಿ.Conclusion:ಪ್ರಕಾಶ್ ಕಡಬ,ಸುಳ್ಯ(ಮಂಗಳೂರು)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.