ETV Bharat / city

ಮನೆಯಲ್ಲಿಯೇ ಸರಳವಾಗಿ ರಂಜಾನ್ ಆಚರಿಸಿದ ಮುಸ್ಲಿಂ ಬಾಂಧವರು

author img

By

Published : May 24, 2020, 11:58 AM IST

ಕೊರೊನಾ ಪರಿಣಾಮ ಮಸೀದಿಗೆ ತೆರಳಿ ಸಾಮೂಹಿಕ ನಮಾಜ್​ ಮಾಡದಂತೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಮಂಗಳೂರಿನ ಮುಸ್ಲಿಂ ಬಾಂಧವರು ಸರಳವಾಗಿ ಮನೆಯಲ್ಲಿಯೇ ನಮಾಜ್​ ನೆರವೇರಿಸಿದರು.

ಸರಳವಾಗಿ ಮನೆಯಲ್ಲಿಯೇ ನಮಾಜ್​ ನೆರವೇರಿಸಿದ  ಮುಸ್ಲಿಂ ಬಾಂಧವರು
ಸರಳವಾಗಿ ಮನೆಯಲ್ಲಿಯೇ ನಮಾಜ್​ ನೆರವೇರಿಸಿದ ಮುಸ್ಲಿಂ ಬಾಂಧವರು

ಮಂಗಳೂರು: ಕೊರೊನಾ ಭೀತಿ ಹಾಗೂ‌ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಸರಳವಾಗಿ ರಂಜಾನ್ ನಮಾಜ್​ ನೆರವೇರಿಸಿದರು.

ಸರಳವಾಗಿ ಮನೆಯಲ್ಲಿಯೇ ನಮಾಜ್​ ನೆರವೇರಿಸಿದ ಮುಸ್ಲಿಂ ಬಾಂಧವರು

ಕೊರೊನಾ ಪರಿಣಾಮ ಮಸೀದಿಗೆ ತೆರಳಿ ಸಾಮೂಹಿಕ ನಮಾಜ್​ ಮಾಡದಂತೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಸರಳವಾಗಿ ಮನೆ ಮಂದಿಯೇ ಸೇರಿ ನಮಾಜ್​ ನೆರವೇರಿಸಿದರು. ಪ್ರತಿ ವರ್ಷ ರಂಜಾನ್​ಗೆ 15 ದಿನಕ್ಕೂ ಮೊದಲೇ ಹಬ್ಬದ ಕಳೆ ಕಟ್ಟುತ್ತಿತ್ತು, ಹೊಸಬಟ್ಟೆ ಖರೀದಿ, ಅತ್ತರ್, ಖರ್ಜೂರ ಮುಂತಾದವುಗಳ ಖರೀದಿಗೆ ಮುಗಿಬೀಳುತ್ತಿದ್ದ ಮುಸ್ಲಿಂ ಬಾಂಧವರು, ಈ ಬಾರಿ ಈ ಎಲ್ಲದಕ್ಕೂ ಸ್ವಯಂ ಕಡಿವಾಣ ಹಾಕಿಕೊಂಡಿದ್ದಾರೆ. ಪದ್ಧತಿಯಂತೆ ಸರಳ ರೀತಿಯಲ್ಲಿ ರಂಜಾನ್ ಆಚರಿಸಲಾಗುತ್ತದೆ. ಎಲ್ಲರೂ ಸರ್ಕಾರ ಹಾಗೂ ಖಾಜಿಗಳು ನೀಡಿರುವ ಆದೇಶವನ್ನು ಪಾಲಿಸುತ್ತಿದ್ದಾರೆ.

ಈ ಕುರಿತು ಮಂಗಳೂರಿನ ಅಜಿಜುದ್ದೀನ್ ರಸ್ತೆಯಲ್ಲಿರುವ ಕಂದಕ್ ಫ್ರೆಂಡ್ಸ್ ಬಳಗದ ಅಧ್ಯಕ್ಷ ಎಂ.ಕೆ.ಫಯಾಝ್ ಮಾತನಾಡಿ, ಮಂಗಳೂರಿನ ಖಾಜಿಯವರು ಆದೇಶಿಸಿದಂತೆ ನಾವು ಈ ಬಾರಿ ಸರಳವಾಗಿ ರಂಜಾನ್ ಆಚರಣೆ ಮಾಡುತ್ತಿದ್ದೇವೆ. ಆದ್ದರಿಂದ ನಮಾಜ್ ಅನ್ನು ಮಸೀದಿಗಳಿಗೆ ಹೋಗಿ ಮಾಡದೇ, ಮನೆಗಳಲ್ಲಿಯೇ ನೆರವೇರಿಸುತ್ತಿದ್ದೇವೆ. ಹೊಸಬಟ್ಟೆಗಳನ್ನು ಖರೀದಿಸದೆ ಆ ಹಣವನ್ನು ಬಡವರಿಗೆ ದಾನ ನೀಡುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ದೃಷ್ಟಿಯಿಂದ ಹೊರಗೆ ಹೋಗದೆ ಮನೆಯಲ್ಲಿಯೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ಮಂಗಳೂರು: ಕೊರೊನಾ ಭೀತಿ ಹಾಗೂ‌ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಮುಸ್ಲಿಂ ಬಾಂಧವರು ಮನೆಯಲ್ಲಿಯೇ ಸರಳವಾಗಿ ರಂಜಾನ್ ನಮಾಜ್​ ನೆರವೇರಿಸಿದರು.

ಸರಳವಾಗಿ ಮನೆಯಲ್ಲಿಯೇ ನಮಾಜ್​ ನೆರವೇರಿಸಿದ ಮುಸ್ಲಿಂ ಬಾಂಧವರು

ಕೊರೊನಾ ಪರಿಣಾಮ ಮಸೀದಿಗೆ ತೆರಳಿ ಸಾಮೂಹಿಕ ನಮಾಜ್​ ಮಾಡದಂತೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಸರಳವಾಗಿ ಮನೆ ಮಂದಿಯೇ ಸೇರಿ ನಮಾಜ್​ ನೆರವೇರಿಸಿದರು. ಪ್ರತಿ ವರ್ಷ ರಂಜಾನ್​ಗೆ 15 ದಿನಕ್ಕೂ ಮೊದಲೇ ಹಬ್ಬದ ಕಳೆ ಕಟ್ಟುತ್ತಿತ್ತು, ಹೊಸಬಟ್ಟೆ ಖರೀದಿ, ಅತ್ತರ್, ಖರ್ಜೂರ ಮುಂತಾದವುಗಳ ಖರೀದಿಗೆ ಮುಗಿಬೀಳುತ್ತಿದ್ದ ಮುಸ್ಲಿಂ ಬಾಂಧವರು, ಈ ಬಾರಿ ಈ ಎಲ್ಲದಕ್ಕೂ ಸ್ವಯಂ ಕಡಿವಾಣ ಹಾಕಿಕೊಂಡಿದ್ದಾರೆ. ಪದ್ಧತಿಯಂತೆ ಸರಳ ರೀತಿಯಲ್ಲಿ ರಂಜಾನ್ ಆಚರಿಸಲಾಗುತ್ತದೆ. ಎಲ್ಲರೂ ಸರ್ಕಾರ ಹಾಗೂ ಖಾಜಿಗಳು ನೀಡಿರುವ ಆದೇಶವನ್ನು ಪಾಲಿಸುತ್ತಿದ್ದಾರೆ.

ಈ ಕುರಿತು ಮಂಗಳೂರಿನ ಅಜಿಜುದ್ದೀನ್ ರಸ್ತೆಯಲ್ಲಿರುವ ಕಂದಕ್ ಫ್ರೆಂಡ್ಸ್ ಬಳಗದ ಅಧ್ಯಕ್ಷ ಎಂ.ಕೆ.ಫಯಾಝ್ ಮಾತನಾಡಿ, ಮಂಗಳೂರಿನ ಖಾಜಿಯವರು ಆದೇಶಿಸಿದಂತೆ ನಾವು ಈ ಬಾರಿ ಸರಳವಾಗಿ ರಂಜಾನ್ ಆಚರಣೆ ಮಾಡುತ್ತಿದ್ದೇವೆ. ಆದ್ದರಿಂದ ನಮಾಜ್ ಅನ್ನು ಮಸೀದಿಗಳಿಗೆ ಹೋಗಿ ಮಾಡದೇ, ಮನೆಗಳಲ್ಲಿಯೇ ನೆರವೇರಿಸುತ್ತಿದ್ದೇವೆ. ಹೊಸಬಟ್ಟೆಗಳನ್ನು ಖರೀದಿಸದೆ ಆ ಹಣವನ್ನು ಬಡವರಿಗೆ ದಾನ ನೀಡುತ್ತಿದ್ದೇವೆ. ಜೊತೆಗೆ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ದೃಷ್ಟಿಯಿಂದ ಹೊರಗೆ ಹೋಗದೆ ಮನೆಯಲ್ಲಿಯೇ ಸರಳವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.