ETV Bharat / city

ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಅಪಘಾತ : ವ್ಯಕ್ತಿ ಸ್ಥಳದಲ್ಲೇ ಸಾವು!

author img

By

Published : Jan 7, 2022, 2:31 PM IST

ವಿದ್ಯುತ್ ತಂತಿ ಸ್ಕೂಟರ್ ಸವಾರನ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳ್ತಂಗಡಿ ತಾಲೂಕಿನ ದಿಡುಪೆ ರಸ್ತೆಯ ಹೇಡ್ಯ ಎಂಬಲ್ಲಿ ಈ ಘಟನೆ ನಡೆದಿದೆ..

belthangady
ಕೊಯ್ಯೂರು ಮಲೆಬೆಟ್ಟು ನಿವಾಸಿ ರಘು-ಮೃತರು

ಬೆಳ್ತಂಗಡಿ : ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಕೂಟರ್ ಸವಾರನ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಿಡುಪೆ ರಸ್ತೆಯ ಹೇಡ್ಯ ಎಂಬಲ್ಲಿ ಗುರುವಾರ (ಜ. 6) ತಡರಾತ್ರಿ ನಡೆದಿದೆ.

ಕೊಯ್ಯೂರು ಮಲೆಬೆಟ್ಟು ನಿವಾಸಿ ರಘು ಮೃತರು. ಇವರು ಉಜಿರೆಯಲ್ಲಿ ಹೋಟೆಲ್ ಉದ್ಯಮ ನಡೆಸುತಿದ್ದು, ತನ್ನ ಹೋಟೆಲ್​​ನಲ್ಲಿ ಕೆಲಸ ಮಾಡುತಿದ್ದ ನೌಕರನನ್ನು ರಾತ್ರಿ ಅವರ ಮನೆಗೆ ಬಿಟ್ಟು ಹಿಂದಿರುಗುವ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ.

belthangady
ರಘು -ಮೃತ ದೇಹ

ಹೇಡ್ಯ ಜಂಕ್ಷನ್ ಬಳಿ ಪಿಕಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುರಿದು ಬಿದ್ದು ತಂತಿ ರಸ್ತೆಯಲ್ಲಿತ್ತು. ತಕ್ಷಣ ಸ್ಥಳೀಯರು ತೆರವು ಕಾರ್ಯ ಮಾಡುತ್ತಿದ್ದು, ದೂರದಿಂದ ಸ್ಕೂಟರ್ ಬರುವುದನ್ನು ಗಮನಿಸಿದ ಕೆಲವರು ನಿಲ್ಲಿಸಲು ಸೂಚಿಸಿದ್ದಾರೆ.

ಆದರೆ, ಮಧ್ಯರಾತ್ರಿಯಾದ್ದರಿಂದ‌ ಹೆದರಿ ಅವರು ಸ್ಕೂಟರ್ ನಿಲ್ಲಿಸದೇ ಮುಂದೆ ಚಲಿಸಿದಾಗ ತುಂಡಾಗಿ ಬಿದ್ದಿರುವ ವಿದ್ಯುತ್​​ ತಂತಿ ಇವರ ಕುತ್ತಿಗೆಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾಭದ ಆಮಿಷವೊಡ್ಡಿ ಹುಬ್ಬಳ್ಳಿಯ ಉದ್ಯಮಿಗೆ 32 ಲಕ್ಷ ರೂ. ವಂಚನೆ

ಬೆಳ್ತಂಗಡಿ : ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಕೂಟರ್ ಸವಾರನ ಕುತ್ತಿಗೆಗೆ ಸಿಲುಕಿ ಬಿದ್ದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಿಡುಪೆ ರಸ್ತೆಯ ಹೇಡ್ಯ ಎಂಬಲ್ಲಿ ಗುರುವಾರ (ಜ. 6) ತಡರಾತ್ರಿ ನಡೆದಿದೆ.

ಕೊಯ್ಯೂರು ಮಲೆಬೆಟ್ಟು ನಿವಾಸಿ ರಘು ಮೃತರು. ಇವರು ಉಜಿರೆಯಲ್ಲಿ ಹೋಟೆಲ್ ಉದ್ಯಮ ನಡೆಸುತಿದ್ದು, ತನ್ನ ಹೋಟೆಲ್​​ನಲ್ಲಿ ಕೆಲಸ ಮಾಡುತಿದ್ದ ನೌಕರನನ್ನು ರಾತ್ರಿ ಅವರ ಮನೆಗೆ ಬಿಟ್ಟು ಹಿಂದಿರುಗುವ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ.

belthangady
ರಘು -ಮೃತ ದೇಹ

ಹೇಡ್ಯ ಜಂಕ್ಷನ್ ಬಳಿ ಪಿಕಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮುರಿದು ಬಿದ್ದು ತಂತಿ ರಸ್ತೆಯಲ್ಲಿತ್ತು. ತಕ್ಷಣ ಸ್ಥಳೀಯರು ತೆರವು ಕಾರ್ಯ ಮಾಡುತ್ತಿದ್ದು, ದೂರದಿಂದ ಸ್ಕೂಟರ್ ಬರುವುದನ್ನು ಗಮನಿಸಿದ ಕೆಲವರು ನಿಲ್ಲಿಸಲು ಸೂಚಿಸಿದ್ದಾರೆ.

ಆದರೆ, ಮಧ್ಯರಾತ್ರಿಯಾದ್ದರಿಂದ‌ ಹೆದರಿ ಅವರು ಸ್ಕೂಟರ್ ನಿಲ್ಲಿಸದೇ ಮುಂದೆ ಚಲಿಸಿದಾಗ ತುಂಡಾಗಿ ಬಿದ್ದಿರುವ ವಿದ್ಯುತ್​​ ತಂತಿ ಇವರ ಕುತ್ತಿಗೆಗೆ ಸಿಲುಕಿ ರಸ್ತೆಗೆ ಎಸೆಯಲ್ಪಟ್ಟು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಲಾಭದ ಆಮಿಷವೊಡ್ಡಿ ಹುಬ್ಬಳ್ಳಿಯ ಉದ್ಯಮಿಗೆ 32 ಲಕ್ಷ ರೂ. ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.