ETV Bharat / city

ತಪ್ಪಿ ನಡೆದರೆ ಸಾಮಾಜಿಕ ಜಾಲತಾಣಗಳಲ್ಲಿ ಬಯ್ಯಬೇಡಿ, ಕಚೇರಿಗೆ ಬಂದು ಬೈಯಿರಿ: ಕಟೀಲ್​

author img

By

Published : Aug 29, 2019, 7:54 PM IST

ನಾನೆಷ್ಟೇ ಎತ್ತರಕ್ಕೆ ಹೋದರೂ ದ.ಕ ಜಿಲ್ಲೆಯ ಜನತೆಗೆ ರಾಜ್ಯಾಧ್ಯಕ್ಷ ಅಲ್ಲ. ಸಾಮಾನ್ಯ ಕಾರ್ಯಕರ್ತ. ಜ್ಞಾನವಂತ, ವಿದ್ವಾಂಸ, ಶಿಕ್ಷಣ ತಜ್ಞ ಅಲ್ಲ. ಸಂಘದ ನಿಷ್ಠಾವಂತ ಕಾರ್ಯಕರ್ತನಷ್ಟೇ. ಸಾರ್ವಜನಿಕ ಜೀವನದಲ್ಲಿದ್ದೇನೆ. ಬರುವ ಟೀಕೆಗಳನ್ನು ಸ್ವೀಕರಿಸಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​​ ಹೇಳಿದರು.

A congratulatory event to nalin kumar katil after swearing thr state BJP president

ಮಂಗಳೂರು: ನಾನು ತಪ್ಪಿ ನಡೆದರೆ ವಾಟ್ಸಪ್​, ಟ್ವಿಟರ್, ಫೇಸ್​ಬುಕ್​ನಲ್ಲಿ ಬಯ್ಯಬೇಡಿ. ನನ್ನ ಮನೆಗೆ ಅಥವಾ ನನ್ನ ಕಚೇರಿಗೆ ಬಂದು ಬೈಯಿರಿ. ಏಕೆಂದರೆ, ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನೆಷ್ಟೇ ಎತ್ತರಕ್ಕೆ ಹೋದರೂ ದ.ಕ ಜಿಲ್ಲೆಯ ಜನತೆಗೆ ರಾಜ್ಯಾಧ್ಯಕ್ಷ ಅಲ್ಲ. ಸಾಮಾನ್ಯ ಕಾರ್ಯಕರ್ತ. ಜ್ಞಾನವಂತ, ವಿದ್ವಾಂಸ, ಶಿಕ್ಷಣ ತಜ್ಞ ಅಲ್ಲ. ಸಂಘದ ನಿಷ್ಠಾವಂತ ಕಾರ್ಯಕರ್ತನಷ್ಟೇ. ಸಾರ್ವಜನಿಕ ಜೀವನದಲ್ಲಿದ್ದೇನೆ ಟೀಕೆಗಳನ್ನು ಸ್ವೀಕರಿಸಬೇಕು ಎಂದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​​

ಹೋರಾಡಿದರೆ ಬಿಜೆಪಿಯಲ್ಲಿ ಚುನಾವಣೆ ಸೀಟು ಸಿಗುತ್ತದೆ ಎಂಬುದು ಕೆಲವರಲ್ಲಿ ತಪ್ಪು ಕಲ್ಪನೆಯಿದೆ. ಇಲ್ಲಿ ಕೆಲಸಕ್ಕೆ ಮಾತ್ರ ಸೀಟು ಸಿಗುವುದು ಎಂಬುದನ್ನು ಅರಿಯಬೇಕು. ಆದ್ದರಿಂದ, ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಪಟ್ಟು ದುಡಿಯುತ್ತೇನೆ. ಆದರೆ ಈಗ ರಾಜ್ಯಾಧ್ಯಕ್ಷನಾಗಿದ್ದೇನೆ. ಗ್ರಾಮ ಗ್ರಾಮಕ್ಕೆ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಬೇಸರ ಮಾಡಿಕೊಳ್ಳಬೇಡಿ. ಸಮರ್ಥರಾದ ಏಳು ಶಾಸಕರಿದ್ದಾರೆ. ಅವರೇ ಮುಂದಿನ ನಿಮ್ಮ ಸಂಸದರು ಎಂದು ನಳಿನ್ ಕುಮಾರ್ ಹೇಳಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಅಂಗಾರ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಹಾಲಾಡಿ ಶ್ರೀನಿವಾಸಶೆಟ್ಟಿ, ದ.ಕ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಯೋಗೀಶ್ ಭಟ್​ ಇದ್ದರು.

ಮಂಗಳೂರು: ನಾನು ತಪ್ಪಿ ನಡೆದರೆ ವಾಟ್ಸಪ್​, ಟ್ವಿಟರ್, ಫೇಸ್​ಬುಕ್​ನಲ್ಲಿ ಬಯ್ಯಬೇಡಿ. ನನ್ನ ಮನೆಗೆ ಅಥವಾ ನನ್ನ ಕಚೇರಿಗೆ ಬಂದು ಬೈಯಿರಿ. ಏಕೆಂದರೆ, ನಾನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹೇಳಿದರು.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನೆಷ್ಟೇ ಎತ್ತರಕ್ಕೆ ಹೋದರೂ ದ.ಕ ಜಿಲ್ಲೆಯ ಜನತೆಗೆ ರಾಜ್ಯಾಧ್ಯಕ್ಷ ಅಲ್ಲ. ಸಾಮಾನ್ಯ ಕಾರ್ಯಕರ್ತ. ಜ್ಞಾನವಂತ, ವಿದ್ವಾಂಸ, ಶಿಕ್ಷಣ ತಜ್ಞ ಅಲ್ಲ. ಸಂಘದ ನಿಷ್ಠಾವಂತ ಕಾರ್ಯಕರ್ತನಷ್ಟೇ. ಸಾರ್ವಜನಿಕ ಜೀವನದಲ್ಲಿದ್ದೇನೆ ಟೀಕೆಗಳನ್ನು ಸ್ವೀಕರಿಸಬೇಕು ಎಂದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​​

ಹೋರಾಡಿದರೆ ಬಿಜೆಪಿಯಲ್ಲಿ ಚುನಾವಣೆ ಸೀಟು ಸಿಗುತ್ತದೆ ಎಂಬುದು ಕೆಲವರಲ್ಲಿ ತಪ್ಪು ಕಲ್ಪನೆಯಿದೆ. ಇಲ್ಲಿ ಕೆಲಸಕ್ಕೆ ಮಾತ್ರ ಸೀಟು ಸಿಗುವುದು ಎಂಬುದನ್ನು ಅರಿಯಬೇಕು. ಆದ್ದರಿಂದ, ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಪಟ್ಟು ದುಡಿಯುತ್ತೇನೆ. ಆದರೆ ಈಗ ರಾಜ್ಯಾಧ್ಯಕ್ಷನಾಗಿದ್ದೇನೆ. ಗ್ರಾಮ ಗ್ರಾಮಕ್ಕೆ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಬೇಸರ ಮಾಡಿಕೊಳ್ಳಬೇಡಿ. ಸಮರ್ಥರಾದ ಏಳು ಶಾಸಕರಿದ್ದಾರೆ. ಅವರೇ ಮುಂದಿನ ನಿಮ್ಮ ಸಂಸದರು ಎಂದು ನಳಿನ್ ಕುಮಾರ್ ಹೇಳಿದರು.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ಅಂಗಾರ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಹಾಲಾಡಿ ಶ್ರೀನಿವಾಸಶೆಟ್ಟಿ, ದ.ಕ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಯೋಗೀಶ್ ಭಟ್​ ಇದ್ದರು.

Intro:ಮಂಗಳೂರು: ನಾನು ತಪ್ಪಿ ನಡೆದರೆ ವ್ಯಾಟ್ಸ್ ಆ್ಯಪ್, ಟ್ವಿಟರ್, ಫೇಸ್ ಬುಕ್ ನಲ್ಲಿ ಬೈಯ್ಯಬೇಡಿ. ನನ್ನ ಮನೆಗೆ ಬಂದು, ನನ್ನ ಕೊಠಡಗೆ ಕರೆದು ಬೈಯಿರಿ. ನಾನು ವ್ಯಾಟ್ಸ್ ಆ್ಯಪ್, ಟ್ವಿಟರ್, ಫೇಸ್ ಬುಕ್ ಯಾವುದನ್ನೂ ನೋಡುವುದಿಲ್ಲ. ಯಾಕೆಂದರೆ ನನ್ನಲ್ಲಿರುವುದು ಲಾಟ್ ಪೋಟ್ ಮೊಬೈಲ್ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದ ನವಭಾರತ ಸರ್ಕಲ್ ಬಳಿಯಿರುವ ರಮಣ ಪೈ ಸಭಾಂಗಣದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರಿಗೆ ನಡೆದ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.


Body:ಎತ್ತರಕ್ಕೆ ಏರಿದವ ಎತ್ತರ ಎತ್ತರಕ್ಕೆ ಹೋದಾಗ ಹತ್ತಿರ ಹತ್ತಿರವಾಗಬೇಕು. ನಾನು ಎಷ್ಟೇ ಎತ್ತರಕ್ಕೆ ಹೋದರೂ ದ.ಕ.ಜಿಲ್ಲೆಯ ಜನತೆಗೆ ರಾಜ್ಯಾಧ್ಯಕ್ಷ ಅಲ್ಲ. ಸಾಮಾನ್ಯ ಕಾರ್ಯಕರ್ತ. ನಾನು ಜ್ಞಾನವಂತ, ವಿದ್ವಾಂಸ, ಶಿಕ್ಷಣ ತಜ್ಞ ಅಲ್ಲ. ನಾನೊಬ್ಬ ಸಂಘದ ನಿಷ್ಠಾವಂತ ಕಾರ್ಯಕರ್ತ. ಅರ್ಹತೆ ಇತ್ತು ನನಗೆ ಹತ್ತಾರು ಟೀಕೆಗಳು ಬಂತು ನನಗೆ. ಸಾರ್ವಜನಿಕ ಜೀವನದಲ್ಲಿದ್ದೇನೆ ಟೀಕೆಗಳನ್ನು ಸ್ವೀಕರಿಸಬೇಕು. ಸಂಘದ ಶಾಖೆಗಳಲ್ಲಿ ಕಲಿತು ಎತ್ತರಕ್ಕೆ ಏರಿ ಇಂದು ಸಮಾಜವನ್ನು ತಿಳಿದು ಇಂದು ಸಂಘ ಸಮಾಜದ ಅಧ್ಯಯನದಲ್ಲಿ ಡಾಕ್ಟರೇಟ್ ಕೊಟ್ಟಿದೆ. ಇಂದು ನಾನಿಷ್ಟು ಎತ್ತರಕ್ಕೆ ಏರಿರುವುದಕ್ಕೆ, ಲೋಕಸಭೆ ಚುನಾವಣೆಯಲ್ಲಿ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿರುವುದಕ್ಕೆ ಸಂಘದ ಶಾಖೆಯೇ ಕಾರಣ ಎಂದು ನಳಿನ್ ಕುಮಾರ್ ಹೇಳಿದರು.

ಹೋರಾಟ ಮಾಡಿದರೆ ಬಿಜೆಪಿ ಯಲ್ಲಿ ಚುನಾವಣೆಗೆ ಸೀಟು ಸಿಗುತ್ತದೆ ಎಂಬ ಕೆಲವರಿಗೆ ತಪ್ಪು ಕಲ್ಪನೆಯಿದೆ. ನಿಮ್ಮ ಕೆಲಸಕ್ಕೆ ಮಾತ್ರ ಬಿಜೆಪಿಯಲ್ಲಿ ಸೀಟು ಸಿಗುತ್ತದೆ. ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿರುವುದರಿಂದ ಸಂಘದ ಹಿರಿಯರ ಸೂಚನೆಯನ್ನು ಪಾಲಿಸಿ ನಾನು ಬಿಜೆಪಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಜನರು ಪ್ರೀತಿಯಿಂದ ಮತ ನೀಡಿ ಗೆಲ್ಲಿಸಿದರು. ಆದ್ದರಿಂದ ಈ ಜಿಲ್ಲೆಯ ಅಭಿವೃದ್ಧಿಗೆ ಶ್ರಮಪಟ್ಟು ದುಡಿಯುತ್ತೇನೆ. ಆದರೆ ಈಗ ರಾಜ್ಯಾಧ್ಯಕ್ಷ ನಾಗಿದ್ದೇನೆ, ಇನ್ನು ಗ್ರಾಮ ಗ್ರಾಮಕ್ಕೆ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ. ಮನೆ ಮನೆಗೆ ಬರಲಾಗುವುದಿಲ್ಲ. ಕೋಲ ನೇಮಕ್ಕೆ ಬರಲಾಗುವುದಿಲ್ಲ. ಆದರೆ ಬೇಸರಿಸದಿರಿ‌, ನಾನು ರಾಜ್ಯದಲ್ಲಿ ಪ್ರವಾಸ ಕೈಗೊಂಡು ದ.ಕ.ಜಿಲ್ಲೆ ಎಂದರೆ ಏನು ಎಂಬುದನ್ನು ತೋರಿಸಿಕೊಡಲು ನೀವು ನನಗೆ ಅವಕಾಶಕೊಡಬೇಕು. ನಮ್ಮ ಸಮರ್ಥರಾದ ಏಳು ಮಂದಿ ಶಾಸಕರಿದ್ದಾರೆ ಅವರೇ ಮುಂದಿನ ನಿಮ್ಮ ಸಂಸದರು ಎಂದು ನಳಿನ್ ಕುಮಾರ್ ಹೇಳಿದರು.


Conclusion:ಕಾರ್ಯಕ್ರಮದ ಮೊದಲಿಗೆ ನಳಿನ್ ಕುಮಾರ್ ಸಂಘದ ತಮ್ಮ ಗುರು ಬಿ.ಕೆ.ರಮೇಶ್ ಅವರಿಗೆ ಅಭಿನಂದಿಸಿದರು.

ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಅಂಗಾರ, ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಾಜಿ ಸಚಿವ ಯೋಗೀಶ್ ಭಟ್, ಬಿಜೆಪಿ ಮುಖಂಡರಾದ ಬ್ರಿಜೇಶ್ ಚೌಟ, ಕೃಷ್ಣ ಪಾಲೆಮಾರ್ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru
ETV Bharat Logo

Copyright © 2024 Ushodaya Enterprises Pvt. Ltd., All Rights Reserved.