ETV Bharat / city

ಲಿವರ್​ ಕಸಿ ಯಶಸ್ವಿ...ವ್ಯಕ್ತಿಗೆ ಪುನರ್ಜನ್ಮ ನೀಡಿದ ವೈದ್ಯರು

author img

By

Published : Jan 22, 2020, 7:26 PM IST

Updated : Jan 22, 2020, 8:55 PM IST

ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿ ಅಶೋಕ್​ ಕುಮಾರ್​ ಎಂಬವರಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಮರು ಜನ್ಮ ನೀಡಿದ್ದಾರೆ.

liver-transplant-surgery-successful
ಚಿಕಿತ್ಸೆ ಪಡೆದ ಅಶೋಕ್ ಕುಮಾರ್​​

ಹುಬ್ಬಳ್ಳಿ: ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಮರು ಜನ್ಮ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಶಸ್ತ್ರಚಿಕಿತ್ಸೆಗೊಳಗಾದ ಉಮಾ ಮತ್ತು ಅಶೋಕ ದಂಪತಿ, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಸಂಜಯ್ ಗೋವಿಲ್​ ಮಾತನಾಡಿ, ರೈಲ್ವೆ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರ ಅಶೋಕ್ ಕುಮಾರ್​​ಗೆ (53) 2015ರಲ್ಲಿ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಯಕೃತ್​​​ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು ಎಂದರು.

ಚಿಕಿತ್ಸೆ ಪಡೆದ ಅಶೋಕ್​, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ

ಹೀಗಾಗಿ, 2016ರಲ್ಲೇ ಯಶಸ್ವಿಯಾಗಿ ಯಕೃತ್​ ಕಸಿ ಮಾಡಲಾಯಿತು. ಅಂದು ಅಂಗಾಗ ಕಸಿ ಮಾಡಿದ ಬಳಿಕ ಏನಾಗುತ್ತದೋ ಎಂಬ ಆತಂಕ ನಮ್ಮಲ್ಲಿತ್ತು. ಚಿಕಿತ್ಸೆ ಪಡೆದು 4 ವರ್ಷಗಳಾಗಿದೆ. ಈಗವರು ಆರೋಗ್ಯದಿಂದಿದ್ದು, ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ವೈದ್ಯ ದಂಪತಿ ಸಂತಸ ವ್ಯಕ್ತಪಡಿಸಿದರು.

ಅಶೋಕ್​ ಕುಮಾರ್​ ಮಾತನಾಡಿ, ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲೇ ಮೂರು ವಾರಗಳಿದ್ದೆ. ಈ ಸಂದರ್ಭದಲ್ಲಿ ಸರಳ ವ್ಯಾಯಾಮ ಮಾಡುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ಕಡ್ಡಾಯವಾಗಿ ಔಷಧಗಳನ್ನು ಸೇವಿಸುತ್ತಿದ್ದೆ. ಪ್ರಸ್ತುತ ಎಲ್ಲರಂತೆ ಆರೋಗ್ಯಕರ ಜೀವನ ನಡೆಸುತ್ತಿದ್ದೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಎಂದರು.

ಹುಬ್ಬಳ್ಳಿ: ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಮರು ಜನ್ಮ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಶಸ್ತ್ರಚಿಕಿತ್ಸೆಗೊಳಗಾದ ಉಮಾ ಮತ್ತು ಅಶೋಕ ದಂಪತಿ, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಸಂಜಯ್ ಗೋವಿಲ್​ ಮಾತನಾಡಿ, ರೈಲ್ವೆ ವಲಯದಲ್ಲಿ ಕೆಲಸ ಮಾಡುತ್ತಿರುವ ನೌಕರ ಅಶೋಕ್ ಕುಮಾರ್​​ಗೆ (53) 2015ರಲ್ಲಿ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಯಕೃತ್​​​ನಲ್ಲಿ ಸಮಸ್ಯೆ ಇರುವುದು ಪತ್ತೆಯಾಗಿತ್ತು ಎಂದರು.

ಚಿಕಿತ್ಸೆ ಪಡೆದ ಅಶೋಕ್​, ವೈದ್ಯ ಸಂಜಯ್ ಗೋವಿಲ್ ಜಂಟಿ ಪತ್ರಿಕಾಗೋಷ್ಠಿ

ಹೀಗಾಗಿ, 2016ರಲ್ಲೇ ಯಶಸ್ವಿಯಾಗಿ ಯಕೃತ್​ ಕಸಿ ಮಾಡಲಾಯಿತು. ಅಂದು ಅಂಗಾಗ ಕಸಿ ಮಾಡಿದ ಬಳಿಕ ಏನಾಗುತ್ತದೋ ಎಂಬ ಆತಂಕ ನಮ್ಮಲ್ಲಿತ್ತು. ಚಿಕಿತ್ಸೆ ಪಡೆದು 4 ವರ್ಷಗಳಾಗಿದೆ. ಈಗವರು ಆರೋಗ್ಯದಿಂದಿದ್ದು, ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ವೈದ್ಯ ದಂಪತಿ ಸಂತಸ ವ್ಯಕ್ತಪಡಿಸಿದರು.

ಅಶೋಕ್​ ಕುಮಾರ್​ ಮಾತನಾಡಿ, ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲೇ ಮೂರು ವಾರಗಳಿದ್ದೆ. ಈ ಸಂದರ್ಭದಲ್ಲಿ ಸರಳ ವ್ಯಾಯಾಮ ಮಾಡುತ್ತಿದ್ದೆ. ವೈದ್ಯರ ಸಲಹೆ ಮೇರೆಗೆ ಕಡ್ಡಾಯವಾಗಿ ಔಷಧಗಳನ್ನು ಸೇವಿಸುತ್ತಿದ್ದೆ. ಪ್ರಸ್ತುತ ಎಲ್ಲರಂತೆ ಆರೋಗ್ಯಕರ ಜೀವನ ನಡೆಸುತ್ತಿದ್ದೇನೆ. ನನಗೆ ಪುನರ್ಜನ್ಮ ನೀಡಿದ ವೈದ್ಯರಿಗೆ ಧನ್ಯವಾದ ಎಂದರು.

Intro:ಹುಬ್ಬಳ್ಳಿ-02

ಕ್ಲಿಷ್ಟಕರವಾದ ಪಿತ್ತಜನಕಾಂಗದ ಜೀವಂತ ಕಸಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ರೋಗಿಯೊಬ್ಬರಿಗೆ ಮರು ಜನ್ಮ ನೀಡುವ ಮೂಲಕ ಬೆಂಗಳೂರಿನ ಬನ್ನೇರ್‌ಘಟ್ಟ ಆಪೋಲೊ ಆಸ್ಪತ್ರೆಯ ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ದು ತಮಗೆ ಸಂತಸವಾಗಿದೆ ಎಂದು ಶಸ್ತ್ರಚಿಕಿತ್ಸೆಗೆ ಉಮಾ ಮತ್ತು ಅಶೋಕ ದಂಪತಿ ಹರ್ಷ ವ್ಯಕ್ತಪಡಿಸಿದರು.

ನಗರದಲ್ಲಿಂದು ವೈದ್ಯರು ಮತ್ತು ಶಸ್ತ್ರಚಿಕಿತ್ಸೆಗೆ ಒಳಗಾದವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‌ ನಂತರ
ಶಸ ಚಿಕಿತ್ಸೆ ಬಗ್ಗೆ ವಿವರ ನೀಡಿದ ಕ್ಲಿನಿಕಲ್ ಸಲಹೆಗಾರ, ಪಿತ್ತಜನಕಾಂಗದ ಶಸ್ತ್ರ ಚಿಕಿತ್ಸಕ ಡಾ. ಸಂಜಯ್ ಗೋವಿಲ್, ರೈಲ್ವೆ ವಲಯದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಾದ ಅಶೋಕ್ ಕುಮಾರ್ ವೆಂಕಟೇಶ್ವರನ್ (53) ಎಂಬುವರಿಗೆ 2015ರಲ್ಲಿ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಅವರಿಗೆ ಅನಾರೋಗ್ಯದ ಯಕೃತ್ತು ಇರುವುದು ಪತ್ತೆಯಾಗಿತ್ತು. ಹೀಗಾಗಿ, 2016ರಲ್ಲೇ ಯಶಸ್ವಿಯಾಗಿ ಯಕೃತಿನ ಕಸಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೀಗ ನಿಧಾನವಾಗಿ ರೋಗಿಯು ಗುಣಮುಖರಾಗಿದ್ದಾರೆ. ಅಲ್ಲದೆ, ಅವರ ಪತ್ನಿಯು ಕೂಡ ಆರೋಗ್ಯವಾಗಿದ್ದು, ಅವರ ಲೀವರ್ ಸಹಜ ಸ್ಥಿತಿಗೆ ಬಂದಿದ್ದು
ಕಳೆದ 4 ವರ್ಷಗಳಿಂದ ಅಶೋಕ್ ತನ್ನ ಹೊಸ ಅಂಗದೊಂದಿಗೆ ಅಸ್ವಸ್ಥತೆ ಹಾಗೂ ಅಸಹಜತೆಯ ಮತ್ತಿತರರ ಚಿಹ್ನೆಗಳಿಲ್ಲದೆ ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದಾರೆ. ಅವರು ಯಾವುದೇ ಆಹಾರ ಮತ್ತು ನಿರ್ಬಂಧಗಳಿಲ್ಲದೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಪಿತ್ತಜನಕಾಂಗದ ಕಸಿ ಇಲ್ಲದ ಸಾಮಾನ್ಯ ವ್ಯಕ್ತಿಯಂತೆಯೂ ತುಂಬಾ ಆನಂದದಿಂದ ಜೀವನವನ್ನು ನಡೆಸುತ್ತಿದ್ದಾರೆ ಎಂದರು.

ಅಶೋಕ್ ಪಿತ್ತಜನಕಾಂಗದ ಕಸಿ ಶಸಚಿಕಿತ್ಸೆ ನಂತರ ನಾನು ಕೇವಲ ಮೂರು ವಾರಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದೆ. ಈ ಸಂದರ್ಭದಲ್ಲಿ ಸರಳ ವ್ಯಾಯಾಮ ಮಾಡುತ್ತಿದ್ದೆ. ಅಲ್ಲದೆ, ನಿಯಮಿತ ಆರೋಗ್ಯಕರ ಆಹಾರ ಕ್ರಮದಲ್ಲಿ ಇರಿಸಲಾಗಿತು. ಆ ಸಂದರ್ಭದಲ್ಲಿ ನಾನು ಸಸ್ಯಾಹಾರವನ್ನು ಸೇವಿಸುತ್ತಿದ್ದೆ. ಆಮೇಲೆ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಮೂರು ತಿಂಗಳದವರೆಗೆ ಪ್ರತಿ 15 ದಿನಕ್ಕೊಮೆ ವೈದ್ಯರನ್ನು ಭೇಟಿ ಮಾಡಿ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೆ. ಕಸಿ ನಂತರ ಮೊದಲ ವರ್ಷ ಎರಡು ಔಷಧಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದೆ. ಅಲ್ಲದೆ, ಪ್ರಸ್ತುತ ನಾನು ಒಂದು ಔಷಧವನ್ನು ತೆಗೆದುಕೊ ಳ್ಳುತ್ತಿದ್ದೇನೆ. ಸಾಮಾನ್ಯ ಜೀವನಕ್ಕೆ ನಾನು ಮರಳಿದ್ದು, ಸಂಪೂರ್ಣವಾಗಿ ದೇಹ ರಚನೆ ಹೊಂದಿದ್ದೇನೆ. ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದು, ಪ್ರತಿ ನಿತ್ಯ ವಾಕಿಂಗ್ ಮಾಡುತ್ತಿದ್ದೇನೆ. ಎಲ್ಲರಂತೆ ನಾನು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದೇನೆ. ನನಗೆ ಪುನರ್ಜನ್ಮ ನೀಡಿದ್ದು ವೈದ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳುವಾಗ ಭಾವುಕರಾದರು.

ಬೈಟ್ - ಡಾ. ಸಂಜಯ್ ಗೋವಿಲ್ , ವೈದ್ಯ (white shirt)
ಬೈಟ್ - ಅಶೋಕ ಕುಮಾರ್, ಶಸ್ತ್ರ ಚಿಕಿತ್ಸೆಗೊಳಗಾದವರುBody:H B GaddadConclusion:Etv hubli
Last Updated : Jan 22, 2020, 8:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.