ಹುಬ್ಬಳ್ಳಿ: ಗೋಕುಲ ರಸ್ತೆ ಕೆ.ಎಸ್.ಶರ್ಮಾ ಆವರಣದಲ್ಲಿರುವ ಸಂಜೀವಿನಿ ಕೋವಿಡ್ ಕೇರ್ ಸೆಂಟರ್ಗೆ ಕೊನೆಗೂ ಸ್ವಚ್ಛತಾ ಭಾಗ್ಯ ದೊರೆತಿದೆ. ಈ ಸೆಂಟರ್ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಸೋಂಕಿತರು ಅಲ್ಲಿನ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈಟಿವಿ ಭಾರತದಲ್ಲಿ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತ್ತು.
![Toilet Cleaning](https://etvbharatimages.akamaized.net/etvbharat/prod-images/kn-hbl-07-etv-bharat-impact-av-7208089_21072020184819_2107f_1595337499_56.jpg)
ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಂಜೀವಿನಿ ಕೇರ್ ಸೆಂಟರ್ನ ಸ್ವಚ್ಛತೆಗೆ ಕ್ರಮ ಕೈಗೊಂಡಿದ್ದಾರೆ. ಶೌಚಾಲಯ ಹಾಗೂ ಸ್ನಾನಗೃಹಗಳು ಗಬ್ಬೆದ್ದು ನಾರುತ್ತಿದ್ದು, ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಕಸ ಗುಡಿಸುತ್ತಾರೆ, ಶೌಚಾಲಯ ಸ್ವಚ್ಛ ಮಾಡಿ ವಾರಗಳೇ ಕಳೆದಿವೆ ಎಂದು ಸೋಂಕಿತರು ದೂರಿದ್ದರು.