ETV Bharat / city

ಸ್ಮಾರ್ಟ್​ ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್​​​​ಗಳು! - undefined

ದಾವಣಗೆರೆಯ ಹಲವು ರಸ್ತೆಗಳು ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ರಸ್ತೆಗಳಾಗಿ ಮಾರ್ಪಾಡಾಗಿವೆ. ಹಲವೆಡೆ ಯುಜಿಡಿ ಬಾಕ್ಸ್​ಗಳು ಬೀಳುವ ಹಂತದಲ್ಲಿವೆ. ಹೀಗಾಗಿ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿದೆ ಹಲವು ಯುಜಿಡಿ ಬಾಕ್ಸ್
author img

By

Published : Jun 14, 2019, 7:27 PM IST

ದಾವಣಗೆರೆ: ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ. ಇತ್ತ ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್​​ಗಳು ಬೀಳುವ ಹಂತದಲ್ಲಿವೆ.

ಹೌದು, ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡಿದೆ. ಆಯ್ಕೆಗೊಂಡ ಬಳಿಕವೂ ಯೋಜನೆಗೆ ಸಂಬಂಧಿಸಿದ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್​​ಗಳು ಬೀಳುವ ಹಂತದಲ್ಲಿದ್ದು, ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿದೆ.

ನಗರದ ಹಳೇ ಕುಂದುವಾಡದಲ್ಲಿ‌ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿದೆ. ಇಲ್ಲಿ ಪ್ರತಿನಿತ್ಯ ಮಕ್ಕಳು ಸೇರಿ ಜನರು ಓಡಾಡುತ್ತಾರೆ. ಕೆಲ ದಿನಗಳ ಹಿಂದೆ ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದಾರೆ.

ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್​ಗಳು

ಪಾಲಿಕೆ ನಿರ್ಲಕ್ಷ್ಯ...

ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರುತ್ತಾರೆ. ನಗರದ ಹಲವೆಡೆ ಯುಜಿಡಿ ಬಾಕ್ಸ್​ಗಳು ಅರ್ಧ ಬಿದ್ದು ಹೋಗಿವೆ. ಹೀಗಿದ್ದರೂ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರಲ್ಲಿ ಜಲಸಿರಿ ಯೋಜನೆಯಡಿ ಪೈಪ್​ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಈ ವೇಳೆ ಪೈಪ್ ಹಾಕಿದ ಬಳಿಕ ಸರಿಯಾಗಿ ಗುಂಡಿ ಮುಚ್ಚದೆ, ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹಲವೆಡೆ ಗುಂಡಿಗಳನ್ನು ಹಾಗೇ ಬಿಟ್ಟು ಕಾಮಗಾರಿ‌ ಮುಗಿಸಲಾಗಿದೆ ಎನ್ನಲಾಗಿದೆ.

ದಾವಣಗೆರೆ: ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ. ಇತ್ತ ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್​​ಗಳು ಬೀಳುವ ಹಂತದಲ್ಲಿವೆ.

ಹೌದು, ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡಿದೆ. ಆಯ್ಕೆಗೊಂಡ ಬಳಿಕವೂ ಯೋಜನೆಗೆ ಸಂಬಂಧಿಸಿದ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್​​ಗಳು ಬೀಳುವ ಹಂತದಲ್ಲಿದ್ದು, ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿದೆ.

ನಗರದ ಹಳೇ ಕುಂದುವಾಡದಲ್ಲಿ‌ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿದೆ. ಇಲ್ಲಿ ಪ್ರತಿನಿತ್ಯ ಮಕ್ಕಳು ಸೇರಿ ಜನರು ಓಡಾಡುತ್ತಾರೆ. ಕೆಲ ದಿನಗಳ ಹಿಂದೆ ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದಾರೆ.

ದಾವಣಗೆರೆಯಲ್ಲಿ ಬೀಳುವ ಹಂತದಲ್ಲಿವೆ ಹಲವು ಯುಜಿಡಿ ಬಾಕ್ಸ್​ಗಳು

ಪಾಲಿಕೆ ನಿರ್ಲಕ್ಷ್ಯ...

ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರುತ್ತಾರೆ. ನಗರದ ಹಲವೆಡೆ ಯುಜಿಡಿ ಬಾಕ್ಸ್​ಗಳು ಅರ್ಧ ಬಿದ್ದು ಹೋಗಿವೆ. ಹೀಗಿದ್ದರೂ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರಲ್ಲಿ ಜಲಸಿರಿ ಯೋಜನೆಯಡಿ ಪೈಪ್​ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಈ ವೇಳೆ ಪೈಪ್ ಹಾಕಿದ ಬಳಿಕ ಸರಿಯಾಗಿ ಗುಂಡಿ ಮುಚ್ಚದೆ, ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹಲವೆಡೆ ಗುಂಡಿಗಳನ್ನು ಹಾಗೇ ಬಿಟ್ಟು ಕಾಮಗಾರಿ‌ ಮುಗಿಸಲಾಗಿದೆ ಎನ್ನಲಾಗಿದೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಬೆಣ್ಣೆನಗರಿ ಖ್ಯಾತಿಯ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ದರು, ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿವೆ, ಇನ್ನೂ ಇತ್ತ ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ..

ಹೌದು.. ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡಿದೆ, ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನೂ ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದು ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದಾರೆ, ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿದೆ.. ನಗರದ ಹಳೇ ಕುಂದುವಾಡದಲ್ಲಿ‌ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿದೆ, ಇಲ್ಲಿ ಪ್ರತಿನಿತ್ಯ ಜನಗಳು, ಮಕ್ಕಳು ನಡೆದಾಡುತ್ತಾರೆ, ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೊ ಎಂಬ ಆತಂಕದಲ್ಲಿ ಪೋಷಕರಿದ್ದಾರೆ..

ಪಾಲಿಕೆ ನಿರ್ಲಕ್ಷ್ಯ

ಮಹಾನಗರ ಪಾಲಿಕೆಗೆ ಹಲವು ಭಾರಿ ಮಾಹಿತಿ ನೀಡಿದ್ದರು, ಸರಿಪಡಿಸಿದೇ ನಿರ್ಲಕ್ಯ ವಹಿಸಿದೆ, ನಗರದ ಹಲವೆಡೆ ಯುಜಿಡಿ ಬಾಕ್ಸ್ ಗಳು ಅರ್ಧ ಬಿದ್ದು ಹೋಗಿವೆ, ಹೀಗಿದ್ದರು ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ದಾವಣಗೆರೆ ನಗರಲ್ಲಿ ಜಲಸಿರಿ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತಿದ್ದೆ, ಈ ವೇಳೆ ಪೈಪ್ ಹಾಕಿದ ಬಳಿಕ ಸರಿಯಾಗಿ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸಲಾಗುತ್ತಿದ್ದೆ, ಹಲವೆಡೆ ಗುಂಡಿಗಳನ್ನು ಹಾಗೇ ಬಿಟ್ಟು ಕಾಮಗಾರಿ‌ ಮುಗಿಸಲಾಗಿದೆ.

ಒಟ್ಟಾರೆ ಸರ್ಕಾರಿ ಕಾಮಗಾರಿಗಳು ನಿರ್ಲಕ್ಷ್ಯ ಹಂತ ತಲುಪುತ್ತಿವೆ, ಯುಜಿಡಿ ಬಾಕ್ಸ್ ಗಳು ಬಿದ್ದಿವೆ, ನೀರಿನ ಪೈಪ್ ಲೈನ್ ಕಾಮಗಾರಿ ವೇಳೆ ಗುಂಡಿಗಳು ಬಿದ್ದಿದ್ದು, ಹೆಚ್ಚಿನ ಅವಘಡ ಸಂಭವಿಸುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ.

ಪ್ಲೊ..

ಬೈಟ್; ಸುರೇಶ್. ಸ್ಥಳಿಯ..



Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಬೆಣ್ಣೆನಗರಿ ಖ್ಯಾತಿಯ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿದ್ದರು, ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿವೆ, ಇನ್ನೂ ಇತ್ತ ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದು, ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಎದುರಾಗಿದೆ..

ಹೌದು.. ದಾವಣಗೆರೆ ನಗರ ಸ್ಮಾರ್ಟ್ ಸಿಟಿಗೆ ಆಯ್ಕೆಗೊಂಡಿದೆ, ಆಯ್ಕೆಗೊಂಡ ಬಳಿಕ ಆಮೆಗತಿಯಲ್ಲಿ ಕೆಲಸ ನಡೆಯುತ್ತಿದೆ, ಇನ್ನೂ ಇತ್ತ ಹಲವೆಡೆ ಯುಜಿಡಿ ಬಾಕ್ಸ್ ಬೀಳುವ ಹಂತದಲ್ಲಿದ್ದು ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದಾರೆ, ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ‌ ನಿರ್ಮಾಣವಾಗಿದೆ.. ನಗರದ ಹಳೇ ಕುಂದುವಾಡದಲ್ಲಿ‌ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿದೆ, ಇಲ್ಲಿ ಪ್ರತಿನಿತ್ಯ ಜನಗಳು, ಮಕ್ಕಳು ನಡೆದಾಡುತ್ತಾರೆ, ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೊ ಎಂಬ ಆತಂಕದಲ್ಲಿ ಪೋಷಕರಿದ್ದಾರೆ..

ಪಾಲಿಕೆ ನಿರ್ಲಕ್ಷ್ಯ

ಮಹಾನಗರ ಪಾಲಿಕೆಗೆ ಹಲವು ಭಾರಿ ಮಾಹಿತಿ ನೀಡಿದ್ದರು, ಸರಿಪಡಿಸಿದೇ ನಿರ್ಲಕ್ಯ ವಹಿಸಿದೆ, ನಗರದ ಹಲವೆಡೆ ಯುಜಿಡಿ ಬಾಕ್ಸ್ ಗಳು ಅರ್ಧ ಬಿದ್ದು ಹೋಗಿವೆ, ಹೀಗಿದ್ದರು ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ದಾವಣಗೆರೆ ನಗರಲ್ಲಿ ಜಲಸಿರಿ ಯೋಜನೆಯಡಿ ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತಿದ್ದೆ, ಈ ವೇಳೆ ಪೈಪ್ ಹಾಕಿದ ಬಳಿಕ ಸರಿಯಾಗಿ ಗುಂಡಿ ಮುಚ್ಚದೇ ನಿರ್ಲಕ್ಷ್ಯ ವಹಿಸಲಾಗುತ್ತಿದ್ದೆ, ಹಲವೆಡೆ ಗುಂಡಿಗಳನ್ನು ಹಾಗೇ ಬಿಟ್ಟು ಕಾಮಗಾರಿ‌ ಮುಗಿಸಲಾಗಿದೆ.

ಒಟ್ಟಾರೆ ಸರ್ಕಾರಿ ಕಾಮಗಾರಿಗಳು ನಿರ್ಲಕ್ಷ್ಯ ಹಂತ ತಲುಪುತ್ತಿವೆ, ಯುಜಿಡಿ ಬಾಕ್ಸ್ ಗಳು ಬಿದ್ದಿವೆ, ನೀರಿನ ಪೈಪ್ ಲೈನ್ ಕಾಮಗಾರಿ ವೇಳೆ ಗುಂಡಿಗಳು ಬಿದ್ದಿದ್ದು, ಹೆಚ್ಚಿನ ಅವಘಡ ಸಂಭವಿಸುವ ಮುನ್ನ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ.

ಪ್ಲೊ..

ಬೈಟ್; ಸುರೇಶ್. ಸ್ಥಳಿಯ..



Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.