ETV Bharat / city

ಧಾರವಾಡ ಅಪಘಾತ ಪ್ರಕರಣ: ಪ್ರತಿಭಟಿಸಲು ನಿರ್ಧರಿಸಿದ ಮೃತರ ಸಂಬಂಧಿಕರು!

author img

By

Published : Jan 28, 2021, 7:18 PM IST

ಧಾರವಾಡದ ಇಟ್ಟಿಗಟ್ಟಿ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ ಕಿರಿದಾಗಿದ್ದು, ತಕ್ಷಣ ಆ ರಸ್ತೆ ಅಗಲೀಕರಣ ಮಾಡಿ ಪ್ರತಿಯೊಬ್ಬರ ಪ್ರಾಣ ಉಳಿಸುವ ಕೆಲಸ ಮಾಡಬೇಕಿದೆ ಎಂದು ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರು ಒತ್ತಾಯಿಸಿದ್ದಾರೆ.

Deceased relatives decide to protest against state government
ಸಭೆ ನಡೆಸಿದ ಮೃತರ ಸಂಬಂಧಿಕರು

ದಾವಣಗೆರೆ: ಧಾರವಾಡದಲ್ಲಿ ನಡೆದಿದ್ದ ಅಪಘಾತದಲ್ಲಿ ನಲವತ್ತು ವರ್ಷದ 9 ಸ್ನೇಹಿತೆಯರು ಸಾವಿನಲ್ಲೂ ಒಂದಾದ ದುರಂತಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ರಾಷ್ಟ್ರೀಯ ಹೆದ್ದಾರಿ ಚಿಕ್ಕದಾಗಿರುವುದೇ ಆ ಕರಾಳ ಘಟನೆಗೆ ಕಾರಣ ಎಂದು ಆಡಳಿತ ವ್ಯವಸ್ಥೆಯ ವೈಫಲ್ಯಗಳನ್ನು ಎತ್ತಿ ತೋರಿಸಲು ಮೃತರ ಸಂಬಂಧಿಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ...ಪ್ರವಾಸಕ್ಕೆ ಹೊರಟವರ ಬದುಕು ದಾರುಣ ಅಂತ್ಯ: ಸಾವಲ್ಲೂ ಒಂದಾಯ್ತು 40 ವರ್ಷದ ಗೆಳೆತನ

ಸರ್ಕಾರದ ವೈಫಲ್ಯವನ್ನು ತೋರಿಸಿ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಲು ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭಟಿಸಲು ವೈದ್ಯರ ತಂಡ ಚಿಂತನೆ ನಡೆಸಿದೆ. ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ (ಇಟ್ಡಿಗಟ್ಟಿ ಗ್ರಾಮದ ಬಳಿ) ಮಿನಿ ಬಸ್​ ಮತ್ತು ಟಿಪ್ಪರ್​​​​​​ ನಡುವೆ ಭೀಕರ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಒಟ್ಟು 11 ಮಂದಿ ಮೃತಪಟ್ಟಿದ್ದರು. ಅದರಲ್ಲಿ 9 ಸ್ನೇಹಿತೆಯರು, ಇಬ್ಬರು ಚಾಲಕರು ಅಸುನೀಗಿದ್ದರು.

ಪ್ರತಿಭಟಿಸಲು ನಿರ್ಧರಿಸಿದ ಮೃತರ ಸಂಬಂಧಿಕರು

ಫೆಬ್ರವರಿ 6ರಂದು ದಾವಣಗೆರೆ ಐಎಂಎ ಹಾಲ್​​ನಿಂದ ಆರಂಭವಾಗಲಿರುವ ಪ್ರತಿಭಟನಾ ಜಾಥಾ ಧಾರವಾಡದ ಅಪಘಾತ ಸ್ಥಳಕ್ಕೆ (ಇಟ್ಟಿಗಟ್ಟಿ ಬಳಿ) ಸೇರಿ, ಸರ್ಕಾರದ ಕಣ್ಣು ತೆರೆಸಲು ಮೌನ ಪ್ರತಿಭಟನೆ‌ ನಡೆಸಲಿದೆ. ಇಟ್ಟಿಗಟ್ಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಲಿದೆ. ಮೃತರ ಕುಟುಂಬದ ಸದಸ್ಯರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಮುಂದಿನ ದಿನಗಳಲ್ಲಿ ಅನಾಹುತಗಳು ಸಂಭವಿಸದಂತೆ ಸುಸಜ್ಜಿತ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಲಾಗುತ್ತದೆ.

ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಕೆಲ ಪತಿಯಂದಿರು, ಮಕ್ಕಳು, ತಾಯಂದಿರು ಹಾಗೂ ವೈದ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಮೃತರ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ. ಈ ಪ್ರತಿಭಟನೆ ಯಾವುದೇ ಪಕ್ಷಗಳ ಪರ, ವಿರುದ್ಧ ಅಲ್ಲ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ. ಕಿರಿದಾದ ಈ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯುವುದೇ ಪ್ರತಿಭಟನೆ ಉದ್ದೇಶ.

ದಾವಣಗೆರೆ: ಧಾರವಾಡದಲ್ಲಿ ನಡೆದಿದ್ದ ಅಪಘಾತದಲ್ಲಿ ನಲವತ್ತು ವರ್ಷದ 9 ಸ್ನೇಹಿತೆಯರು ಸಾವಿನಲ್ಲೂ ಒಂದಾದ ದುರಂತಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ರಾಷ್ಟ್ರೀಯ ಹೆದ್ದಾರಿ ಚಿಕ್ಕದಾಗಿರುವುದೇ ಆ ಕರಾಳ ಘಟನೆಗೆ ಕಾರಣ ಎಂದು ಆಡಳಿತ ವ್ಯವಸ್ಥೆಯ ವೈಫಲ್ಯಗಳನ್ನು ಎತ್ತಿ ತೋರಿಸಲು ಮೃತರ ಸಂಬಂಧಿಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ...ಪ್ರವಾಸಕ್ಕೆ ಹೊರಟವರ ಬದುಕು ದಾರುಣ ಅಂತ್ಯ: ಸಾವಲ್ಲೂ ಒಂದಾಯ್ತು 40 ವರ್ಷದ ಗೆಳೆತನ

ಸರ್ಕಾರದ ವೈಫಲ್ಯವನ್ನು ತೋರಿಸಿ ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಲು ಅಪಘಾತ ನಡೆದ ಸ್ಥಳದಲ್ಲಿ ಪ್ರತಿಭಟಿಸಲು ವೈದ್ಯರ ತಂಡ ಚಿಂತನೆ ನಡೆಸಿದೆ. ಧಾರವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ (ಇಟ್ಡಿಗಟ್ಟಿ ಗ್ರಾಮದ ಬಳಿ) ಮಿನಿ ಬಸ್​ ಮತ್ತು ಟಿಪ್ಪರ್​​​​​​ ನಡುವೆ ಭೀಕರ ಅಪಘಾತ ಸಂಭವಿಸಿ ದಾವಣಗೆರೆ ಮೂಲದ ಒಟ್ಟು 11 ಮಂದಿ ಮೃತಪಟ್ಟಿದ್ದರು. ಅದರಲ್ಲಿ 9 ಸ್ನೇಹಿತೆಯರು, ಇಬ್ಬರು ಚಾಲಕರು ಅಸುನೀಗಿದ್ದರು.

ಪ್ರತಿಭಟಿಸಲು ನಿರ್ಧರಿಸಿದ ಮೃತರ ಸಂಬಂಧಿಕರು

ಫೆಬ್ರವರಿ 6ರಂದು ದಾವಣಗೆರೆ ಐಎಂಎ ಹಾಲ್​​ನಿಂದ ಆರಂಭವಾಗಲಿರುವ ಪ್ರತಿಭಟನಾ ಜಾಥಾ ಧಾರವಾಡದ ಅಪಘಾತ ಸ್ಥಳಕ್ಕೆ (ಇಟ್ಟಿಗಟ್ಟಿ ಬಳಿ) ಸೇರಿ, ಸರ್ಕಾರದ ಕಣ್ಣು ತೆರೆಸಲು ಮೌನ ಪ್ರತಿಭಟನೆ‌ ನಡೆಸಲಿದೆ. ಇಟ್ಟಿಗಟ್ಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡಬೇಕೆಂದು ಒತ್ತಾಯಿಸಲಿದೆ. ಮೃತರ ಕುಟುಂಬದ ಸದಸ್ಯರು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಮುಂದಿನ ದಿನಗಳಲ್ಲಿ ಅನಾಹುತಗಳು ಸಂಭವಿಸದಂತೆ ಸುಸಜ್ಜಿತ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಲಾಗುತ್ತದೆ.

ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿರುವ ಕೆಲ ಪತಿಯಂದಿರು, ಮಕ್ಕಳು, ತಾಯಂದಿರು ಹಾಗೂ ವೈದ್ಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಮೃತರ ಆತ್ಮಕ್ಕೆ ಶಾಂತಿ ಕೋರಲಿದ್ದಾರೆ. ಈ ಪ್ರತಿಭಟನೆ ಯಾವುದೇ ಪಕ್ಷಗಳ ಪರ, ವಿರುದ್ಧ ಅಲ್ಲ ಎಂದು ವೈದ್ಯರ ತಂಡ ಸ್ಪಷ್ಟಪಡಿಸಿದೆ. ಕಿರಿದಾದ ಈ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆಯುವುದೇ ಪ್ರತಿಭಟನೆ ಉದ್ದೇಶ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.