ETV Bharat / city

ಎರಡೆಕರೆ ಜಮೀನಲ್ಲಿ ಸಮಗ್ರ ಕೃಷಿ: ಕೈ ತುಂಬ ಆದಾಯದ ಬೆಳೆ ತೆಗೆಯುವ ಚೆನ್ನಗಿರಿಯ ರೈತ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ರೈತ ಮೋತಿ ನಾಯ್ಕ್ ಸಮಗ್ರ ಕೃಷಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಡಿಮೆ ಜಮೀನಿನಲ್ಲೇ ಲಕ್ಷಾಂತರ ರೂಪಾಯಿ ಆದಾಯ ಗಳಿಕೆ ಇವರದ್ದು.

author img

By

Published : Aug 18, 2022, 7:53 PM IST

davanagere-farmer-successfully-integrated-farming-on-just-two-acres-of-land
ಎರಡೇ ಎಕರೆ ಜಮೀನಲ್ಲಿ ಸಮಗ್ರ ಕೃಷಿ: ಕೈ ತುಂಬಾ ಆದಾಯದ ಬೆಳೆಗಳ ಫಸಲು ತೆಗೆಯುವ ರೈತ

ದಾವಣಗೆರೆ: ಕರಿಮೆಣಸು, ಕಾಫಿಯನ್ನು ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಬೆಳೆಯಲಾಗುತ್ತದೆ. ದಾವಣಗೆರೆಯಲ್ಲೊಬ್ಬ ಮಾದರಿ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಕರಿ ಮೆಣಸು, ಕಾಫಿ ಮಾತ್ರವಲ್ಲದೇ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದು, ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಕೂಗಳತೆಯಲ್ಲಿರುವ ಕೌಳಿ ತಾಂಡದ ರೈತ ಮೋತಿ ನಾಯ್ಕ್ ಸಮಗ್ರ ಕೃಷಿ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ತೋಟದಲ್ಲೇ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಇವರು ಎರಡು ಎಕರೆ ಜಮೀನಿನಲ್ಲಿ ಕರಿಮೆಣಸು, ಕಾಫಿ ಮಾತ್ರವಲ್ಲದೆ ವಿವಿಧ ಬೆಳೆಗಳ ಕೃಷಿ ಮಾಡುತ್ತಿದ್ದಾರೆ. ದ್ರಾಕ್ಷಿ, ಶುಂಠಿ, ಪಪ್ಪಾಯ, ಸಪೋಟ, ಹಲಸು, ಬಾಳೆ, ಅರಿಶಿಣ ಹಾಗು ಅಡಿಕೆ ಹಾಕಿದ್ದಾರೆ.

ಇದಲ್ಲದೇ ಕಾಶ್ಮೀರಿ ಸೇಬು, ಮರ ಸೇಬು ಹಾಗೂ ಕಿತ್ತಳೆ ಗಿಡಗಳನ್ನು ನೆಟ್ಟಿದ್ದು ಫಸಲಿಗೆ ಕಾಯುತ್ತಿದ್ದಾರೆ. ಈ ಎಲ್ಲ ಬೆಳೆಗಳನ್ನು ಬೆಳೆಯಲು ಕೇವಲ ಎರಡು ಲಕ್ಷ ರೂಪಾಯಿ ವ್ಯಯಿಸಿರುವ ಮೋತಿ ನಾಯ್ಕ್, ವರ್ಷಕ್ಕೆ ಹದಿನೈದು ಲಕ್ಷ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ.

ಎರಡೇ ಎಕರೆ ಜಮೀನಲ್ಲಿ ಸಮಗ್ರ ಕೃಷಿ: ಕೈ ತುಂಬಾ ಆದಾಯದ ಬೆಳೆಗಳ ಫಸಲು ತೆಗೆಯುವ ರೈತ

ಅಡಿಕೆ ಗಿಡಗಳನ್ನು ಮಾರಾಟ ಮಾಡುವ ಇವರ ಬಳಿಯಿಂದ ಚಿಂತಾಮಣಿಯಿಂದ ರೈತರು ಆಗಮಿಸಿ ಹದಿನೈದು ಸಾವಿರ ಗಿಡಗಳನ್ನು ಖರೀದಿಸಿದ್ದಾರೆ. ರೈತರು ವಿವಿಧೆಡೆಯಿಂದ ಬಂದು ಬೆಳೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ. ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡ ತೋಟಕ್ಕೆ ಆಗಮಿಸಿ ಅಧ್ಯಯನ ಮಾಡುತ್ತಾರೆ ಎನ್ನುತ್ತಾರೆ ರೈತ ಮೋತಿ ನಾಯ್ಕ್.

ಎರೆಹುಳು ಗೊಬ್ಬರ: ಈ ಎಲ್ಲ ಬೆಳೆಗಳಿಗಾಗಿಯೇ ಮೋತಿನಾಯ್ಕ್ ಸ್ವತಃ ಎರೆಹುಳು ಗೊಬ್ಬರ ತಯಾರಿ ಮಾಡಿಕೊಳ್ಳುತ್ತಾರೆ. ಇದೇ ಗೊಬ್ಬರವನ್ನು ಬೆಳೆಗಳಿಗೆ ಉಪಯೋಗಿಸುತ್ತಿದ್ದಾರೆ. ಜತೆಗೆ ಬೇರೆ ಜಮೀನುಗಳಿಗೂ ಭೇಟಿ ನೀಡುವ ಇವರು ಅಲ್ಲಿಂದ ಸಸಿಗಳನ್ನು ತಂದು ಕೂಡ ತಮ್ಮ ತೋಟದಲ್ಲಿ ನೆಟ್ಟು ಸಮಗ್ರ ಕೃಷಿಯನ್ನು ಅನುಸರಿಸುತ್ತಿದ್ಧಾರೆ.

ರೈತ ಮೋತಿ ನಾಯ್ಕ್​ ಅವರು ವಿದ್ಯಾವಂತರೇನಲ್ಲ. ಆದರೂ, ಇವರು ಮಾದರಿ ಕೃಷಿಕರು. ಅಡಿಕೆ ಸಸಿ, ಕರಿ ಮೆಣಸು ಬೆಳೆಯಲು ಇವರೇ ಕಸಿ ಕಟ್ಟುವುದರಿಂದ ಖರ್ಚು ಕಡಿಮೆ ಮಾಡಿಕೊಂಡಿದ್ದಾರೆ. ತೋಟದಲ್ಲಿ ಬೆವರು ಸುರಿಸಿ ದುಡಿಯುತ್ತಾರೆ. ಇದರಿಂದ ಕೂಲಿಗಾರರಿಗಾಗಿಯೇ ವೆಚ್ಚ ಮಾಡುವುದೂ ಉಳಿಯುತ್ತಿದೆ.

ಸಪೋಟ, ಪಪ್ಪಾಯ, ಪೇರಲೆ, ಸೀತಾಫಲ, ಗೆಣಸು, ಕಬ್ಬು, ಕಾಫಿ ಫಸಲು ಬಂದ ಬಳಿಕ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಸ್ವತಃ ತಾವೇ ಮಾರಾಟ ಮಾಡುತ್ತಾರೆ. ಇದೆಲ್ಲರ ಜತೆಗೆ ಕುಕ್ಕುಟೋದ್ಯಮದಲ್ಲೂ ಮೋತಿ ನಾಯ್ಕ್ ತೊಡಗಿಸಿಕೊಂಡಿದ್ದು ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ: ಸಿರಿಧಾನ್ಯಗಳ ಮೌಲ್ಯವರ್ಧನೆ: ಅಂತಾರಾಷ್ಟ್ರೀಯ ಮಾರುಕಟ್ಟೆ ಸೆಳೆದ ದಾವಣಗೆರೆ ರೈತ ಮಹಿಳೆ

ದಾವಣಗೆರೆ: ಕರಿಮೆಣಸು, ಕಾಫಿಯನ್ನು ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಬೆಳೆಯಲಾಗುತ್ತದೆ. ದಾವಣಗೆರೆಯಲ್ಲೊಬ್ಬ ಮಾದರಿ ರೈತ ತನ್ನ ಎರಡು ಎಕರೆ ಜಮೀನಿನಲ್ಲಿ ಕರಿ ಮೆಣಸು, ಕಾಫಿ ಮಾತ್ರವಲ್ಲದೇ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದು, ಕೈ ತುಂಬಾ ಆದಾಯ ಪಡೆಯುತ್ತಿದ್ದಾರೆ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮದ ಕೂಗಳತೆಯಲ್ಲಿರುವ ಕೌಳಿ ತಾಂಡದ ರೈತ ಮೋತಿ ನಾಯ್ಕ್ ಸಮಗ್ರ ಕೃಷಿ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ತೋಟದಲ್ಲೇ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಇವರು ಎರಡು ಎಕರೆ ಜಮೀನಿನಲ್ಲಿ ಕರಿಮೆಣಸು, ಕಾಫಿ ಮಾತ್ರವಲ್ಲದೆ ವಿವಿಧ ಬೆಳೆಗಳ ಕೃಷಿ ಮಾಡುತ್ತಿದ್ದಾರೆ. ದ್ರಾಕ್ಷಿ, ಶುಂಠಿ, ಪಪ್ಪಾಯ, ಸಪೋಟ, ಹಲಸು, ಬಾಳೆ, ಅರಿಶಿಣ ಹಾಗು ಅಡಿಕೆ ಹಾಕಿದ್ದಾರೆ.

ಇದಲ್ಲದೇ ಕಾಶ್ಮೀರಿ ಸೇಬು, ಮರ ಸೇಬು ಹಾಗೂ ಕಿತ್ತಳೆ ಗಿಡಗಳನ್ನು ನೆಟ್ಟಿದ್ದು ಫಸಲಿಗೆ ಕಾಯುತ್ತಿದ್ದಾರೆ. ಈ ಎಲ್ಲ ಬೆಳೆಗಳನ್ನು ಬೆಳೆಯಲು ಕೇವಲ ಎರಡು ಲಕ್ಷ ರೂಪಾಯಿ ವ್ಯಯಿಸಿರುವ ಮೋತಿ ನಾಯ್ಕ್, ವರ್ಷಕ್ಕೆ ಹದಿನೈದು ಲಕ್ಷ ರೂ.ಗಿಂತ ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ.

ಎರಡೇ ಎಕರೆ ಜಮೀನಲ್ಲಿ ಸಮಗ್ರ ಕೃಷಿ: ಕೈ ತುಂಬಾ ಆದಾಯದ ಬೆಳೆಗಳ ಫಸಲು ತೆಗೆಯುವ ರೈತ

ಅಡಿಕೆ ಗಿಡಗಳನ್ನು ಮಾರಾಟ ಮಾಡುವ ಇವರ ಬಳಿಯಿಂದ ಚಿಂತಾಮಣಿಯಿಂದ ರೈತರು ಆಗಮಿಸಿ ಹದಿನೈದು ಸಾವಿರ ಗಿಡಗಳನ್ನು ಖರೀದಿಸಿದ್ದಾರೆ. ರೈತರು ವಿವಿಧೆಡೆಯಿಂದ ಬಂದು ಬೆಳೆಗಳ ಬಗ್ಗೆ ಮಾಹಿತಿ ಪಡೆಯುತ್ತಿರುತ್ತಾರೆ. ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕೂಡ ತೋಟಕ್ಕೆ ಆಗಮಿಸಿ ಅಧ್ಯಯನ ಮಾಡುತ್ತಾರೆ ಎನ್ನುತ್ತಾರೆ ರೈತ ಮೋತಿ ನಾಯ್ಕ್.

ಎರೆಹುಳು ಗೊಬ್ಬರ: ಈ ಎಲ್ಲ ಬೆಳೆಗಳಿಗಾಗಿಯೇ ಮೋತಿನಾಯ್ಕ್ ಸ್ವತಃ ಎರೆಹುಳು ಗೊಬ್ಬರ ತಯಾರಿ ಮಾಡಿಕೊಳ್ಳುತ್ತಾರೆ. ಇದೇ ಗೊಬ್ಬರವನ್ನು ಬೆಳೆಗಳಿಗೆ ಉಪಯೋಗಿಸುತ್ತಿದ್ದಾರೆ. ಜತೆಗೆ ಬೇರೆ ಜಮೀನುಗಳಿಗೂ ಭೇಟಿ ನೀಡುವ ಇವರು ಅಲ್ಲಿಂದ ಸಸಿಗಳನ್ನು ತಂದು ಕೂಡ ತಮ್ಮ ತೋಟದಲ್ಲಿ ನೆಟ್ಟು ಸಮಗ್ರ ಕೃಷಿಯನ್ನು ಅನುಸರಿಸುತ್ತಿದ್ಧಾರೆ.

ರೈತ ಮೋತಿ ನಾಯ್ಕ್​ ಅವರು ವಿದ್ಯಾವಂತರೇನಲ್ಲ. ಆದರೂ, ಇವರು ಮಾದರಿ ಕೃಷಿಕರು. ಅಡಿಕೆ ಸಸಿ, ಕರಿ ಮೆಣಸು ಬೆಳೆಯಲು ಇವರೇ ಕಸಿ ಕಟ್ಟುವುದರಿಂದ ಖರ್ಚು ಕಡಿಮೆ ಮಾಡಿಕೊಂಡಿದ್ದಾರೆ. ತೋಟದಲ್ಲಿ ಬೆವರು ಸುರಿಸಿ ದುಡಿಯುತ್ತಾರೆ. ಇದರಿಂದ ಕೂಲಿಗಾರರಿಗಾಗಿಯೇ ವೆಚ್ಚ ಮಾಡುವುದೂ ಉಳಿಯುತ್ತಿದೆ.

ಸಪೋಟ, ಪಪ್ಪಾಯ, ಪೇರಲೆ, ಸೀತಾಫಲ, ಗೆಣಸು, ಕಬ್ಬು, ಕಾಫಿ ಫಸಲು ಬಂದ ಬಳಿಕ ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಸ್ವತಃ ತಾವೇ ಮಾರಾಟ ಮಾಡುತ್ತಾರೆ. ಇದೆಲ್ಲರ ಜತೆಗೆ ಕುಕ್ಕುಟೋದ್ಯಮದಲ್ಲೂ ಮೋತಿ ನಾಯ್ಕ್ ತೊಡಗಿಸಿಕೊಂಡಿದ್ದು ನಾಟಿ ಕೋಳಿಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ: ಸಿರಿಧಾನ್ಯಗಳ ಮೌಲ್ಯವರ್ಧನೆ: ಅಂತಾರಾಷ್ಟ್ರೀಯ ಮಾರುಕಟ್ಟೆ ಸೆಳೆದ ದಾವಣಗೆರೆ ರೈತ ಮಹಿಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.