ETV Bharat / city

ರಸ್ತೆಗುಂಡಿಗೆ ಯುವಕ ಸಾವು.. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ.. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

author img

By

Published : Mar 14, 2022, 3:41 PM IST

ಜಲಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು. ಬಿಬಿಎಂಪಿಗೆ ಮಾಹಿತಿ ನೀಡದೇ ರಸ್ತೆ ಅಗೆದಿದ್ದರಿಂದ ಇಂಥ ಅನಾಹುತ ಆಗಿದೆ. ಈಗಾಗಲೇ ಜಲಮಂಡಳಿ, ಬೆಸ್ಕಾಂ ಸೇರಿ ಇತರೆ ಸಂಸ್ಥೆಗಳ ವಿರುದ್ಧ 5 ಪ್ರಕರಣ ದಾಖಲು ಮಾಡಲಾಗಿದೆ ಅಂದರು. ಇನ್ನು ಮೃತ ಯುವಕನಿಗೆ ಪರಿಹಾರ ವಿಚಾರವು ಕಾನೂನಿನಲ್ಲಿ ಅವಶ್ಯಕತೆ ಇದ್ದರೆ ಪರಿಹಾರದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು..

Strict action against the guilty BBMP Commissioner
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಯುವಕ ಸಾವನ್ನಪ್ಪಿದ್ದಾನೆ. ಇಂಥ ಘಟನೆ ಆಗಬಾರದಿತ್ತು. ಆದರೆ, ನಡೆದುಹೋಗಿದೆ. ಜಲಮಂಡಳಿ ತಪ್ಪಿನಿಂದ ಇಂಥ ಅನಾಹುತ ಆಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ರಸ್ತೆಗುಂಡಿಗೆ ಯುವಕ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಕುರಿತಂತೆ ಗೌರವ್ ಗುಪ್ತಾ ಮಾತನಾಡಿರುವುದು..

ಜಲಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು. ಬಿಬಿಎಂಪಿಗೆ ಮಾಹಿತಿ ನೀಡದೇ ರಸ್ತೆ ಅಗೆದಿದ್ದರಿಂದ ಇಂಥ ಅನಾಹುತ ಆಗಿದೆ. ಈಗಾಗಲೇ ಜಲಮಂಡಳಿ, ಬೆಸ್ಕಾಂ ಸೇರಿ ಇತರೆ ಸಂಸ್ಥೆಗಳ ವಿರುದ್ಧ 5 ಪ್ರಕರಣ ದಾಖಲು ಮಾಡಲಾಗಿದೆ ಅಂದರು. ಇನ್ನು ಮೃತ ಯುವಕನಿಗೆ ಪರಿಹಾರ ವಿಚಾರವು ಕಾನೂನಿನಲ್ಲಿ ಅವಶ್ಯಕತೆ ಇದ್ದರೆ ಪರಿಹಾರದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಇಂದಿರಾ ಕ್ಯಾಂಟಿನ್​ನಲ್ಲಿ ಸಿಗ್ತಿಲ್ಲ ಕ್ವಾಲಿಟಿ ಫುಡ್ : ಇಂದಿರಾ ಕ್ಯಾಂಟಿನ್‌ ಸಂಬಂಧ ಒಂದು ಪ್ರತ್ಯೇಕ ರಿವ್ಯೂ ಮೀಟಿಂಗ್ ಮಾಡಲಾಗಿದೆ.‌ ಆ ಪ್ರಕಾರ ಇನ್ನೊಮ್ಮೆ ಯಾವ ಮಾಡೆಲ್​ನಲ್ಲಿ ಮುಂದುವರೆಸಿಕೊಂಡು ಹೋಗಬೇಕು ಅಂತಾ ಚರ್ಚೆ ಮಾಡಲಾಗುತ್ತೆ. ಈ ಬಾರಿ ಬಿಬಿಎಂಪಿ ಬಜೆಟ್​ನಲ್ಲಿ ಪ್ರತ್ಯೇಕ ಕ್ರಮಕೈಗೊಳ್ಳುತ್ತೇವೆ ಎಂದರು.

ಮಾರ್ಚ್ ಒಳಗೆ ಬಜೆಟ್ ಮಂಡನೆ : ಬಜೆಟ್​ ಕುರಿತಾದ ಸಭೆಗಳು ನಡೆಯುತ್ತಿದ್ದು, ಮಾರ್ಚ್​ ತಿಂಗಳ ಒಳಗೆ ಮಂಡಿಸಲಾಗುವುದು ಎಂದು ತಿಳಿಸಿದರು.

ಗುತ್ತಿಗೆ ವೈದ್ಯರ ಅವಧಿ ಮುಕ್ತಾಯ : ಕೋವಿಡ್ ಕಾರಣಕ್ಕೆ ಗುತ್ತಿಗೆ ವೈದ್ಯರ ನೇಮಕ ಮಾಡಲಾಗಿತ್ತು.‌ ಇದೀಗ ತೀವ್ರತೆ ಕಡಿಮೆ ಆಗಿದೆ. ಆದರೆ, ಮೇ-ಜೂನ್‌ನಲ್ಲಿ 4ನೇ ಅಲೆ ಸಾಧ್ಯತೆ ಇರುವುದರಿಂದ ಮುಂದುವರೆಸಬೇಕೋ ಬೇಡ್ವೋ ಎಂಬುದರ ಕುರಿತು ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ : ಏಕೈಕ ಪುತ್ರನ ಕಳೆದುಕೊಂಡ ಪೋಷಕರಿಂದ ದೂರು

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಯುವಕ ಸಾವನ್ನಪ್ಪಿದ್ದಾನೆ. ಇಂಥ ಘಟನೆ ಆಗಬಾರದಿತ್ತು. ಆದರೆ, ನಡೆದುಹೋಗಿದೆ. ಜಲಮಂಡಳಿ ತಪ್ಪಿನಿಂದ ಇಂಥ ಅನಾಹುತ ಆಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ರಸ್ತೆಗುಂಡಿಗೆ ಯುವಕ ಸಾವಿಗೆ ಕಾರಣರಾದವರ ಮೇಲೆ ಕಠಿಣ ಕ್ರಮಕೈಗೊಳ್ಳುವ ಕುರಿತಂತೆ ಗೌರವ್ ಗುಪ್ತಾ ಮಾತನಾಡಿರುವುದು..

ಜಲಮಂಡಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು. ಬಿಬಿಎಂಪಿಗೆ ಮಾಹಿತಿ ನೀಡದೇ ರಸ್ತೆ ಅಗೆದಿದ್ದರಿಂದ ಇಂಥ ಅನಾಹುತ ಆಗಿದೆ. ಈಗಾಗಲೇ ಜಲಮಂಡಳಿ, ಬೆಸ್ಕಾಂ ಸೇರಿ ಇತರೆ ಸಂಸ್ಥೆಗಳ ವಿರುದ್ಧ 5 ಪ್ರಕರಣ ದಾಖಲು ಮಾಡಲಾಗಿದೆ ಅಂದರು. ಇನ್ನು ಮೃತ ಯುವಕನಿಗೆ ಪರಿಹಾರ ವಿಚಾರವು ಕಾನೂನಿನಲ್ಲಿ ಅವಶ್ಯಕತೆ ಇದ್ದರೆ ಪರಿಹಾರದ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಇಂದಿರಾ ಕ್ಯಾಂಟಿನ್​ನಲ್ಲಿ ಸಿಗ್ತಿಲ್ಲ ಕ್ವಾಲಿಟಿ ಫುಡ್ : ಇಂದಿರಾ ಕ್ಯಾಂಟಿನ್‌ ಸಂಬಂಧ ಒಂದು ಪ್ರತ್ಯೇಕ ರಿವ್ಯೂ ಮೀಟಿಂಗ್ ಮಾಡಲಾಗಿದೆ.‌ ಆ ಪ್ರಕಾರ ಇನ್ನೊಮ್ಮೆ ಯಾವ ಮಾಡೆಲ್​ನಲ್ಲಿ ಮುಂದುವರೆಸಿಕೊಂಡು ಹೋಗಬೇಕು ಅಂತಾ ಚರ್ಚೆ ಮಾಡಲಾಗುತ್ತೆ. ಈ ಬಾರಿ ಬಿಬಿಎಂಪಿ ಬಜೆಟ್​ನಲ್ಲಿ ಪ್ರತ್ಯೇಕ ಕ್ರಮಕೈಗೊಳ್ಳುತ್ತೇವೆ ಎಂದರು.

ಮಾರ್ಚ್ ಒಳಗೆ ಬಜೆಟ್ ಮಂಡನೆ : ಬಜೆಟ್​ ಕುರಿತಾದ ಸಭೆಗಳು ನಡೆಯುತ್ತಿದ್ದು, ಮಾರ್ಚ್​ ತಿಂಗಳ ಒಳಗೆ ಮಂಡಿಸಲಾಗುವುದು ಎಂದು ತಿಳಿಸಿದರು.

ಗುತ್ತಿಗೆ ವೈದ್ಯರ ಅವಧಿ ಮುಕ್ತಾಯ : ಕೋವಿಡ್ ಕಾರಣಕ್ಕೆ ಗುತ್ತಿಗೆ ವೈದ್ಯರ ನೇಮಕ ಮಾಡಲಾಗಿತ್ತು.‌ ಇದೀಗ ತೀವ್ರತೆ ಕಡಿಮೆ ಆಗಿದೆ. ಆದರೆ, ಮೇ-ಜೂನ್‌ನಲ್ಲಿ 4ನೇ ಅಲೆ ಸಾಧ್ಯತೆ ಇರುವುದರಿಂದ ಮುಂದುವರೆಸಬೇಕೋ ಬೇಡ್ವೋ ಎಂಬುದರ ಕುರಿತು ಮುಂದಿನ ದಿನದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಬೈಕ್ ಸವಾರ ಬಲಿ : ಏಕೈಕ ಪುತ್ರನ ಕಳೆದುಕೊಂಡ ಪೋಷಕರಿಂದ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.