ETV Bharat / city

1 ಲಕ್ಷ ಕೋಟಿ ನಷ್ಟ ಅಂದಾಜಿಸಿದ ಕಾಂಗ್ರೆಸ್​: ಅಂಕಿ- ಅಂಶಕ್ಕೆ ಪಟ್ಟು ಹಿಡಿದ ಆಡಳಿತ ಪಕ್ಷ - Congress member Prakash rathod in Vidhana Parishath session

ವಿಧಾನ ಪರಿಷತ್ ಕಲಾಪ ಆರಂಭವಾಗಿದ್ದು, ನೆರೆ ಸಮಸ್ಯೆ ಕುರಿತು ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಚರ್ಚೆ ಆರಂಭಿಸಿದರು, ಸರ್ಕಾರ ಸೂಕ್ತವಾಗಿ ಸ್ಪಂದಿಸುವಂತೆ ಆಗ್ರಹಿಸಿದರು.

ವಿಧಾನ ಪರಿಷತ್ ಕಲಾಪ
author img

By

Published : Oct 11, 2019, 12:34 PM IST

Updated : Oct 11, 2019, 12:49 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಚರ್ಚೆ ಆರಂಭಿಸಿದ ಕಾಂಗ್ರೆಸ್​ ಸದಸ್ಯ ಪ್ರಕಾಶ್ ರಾಥೋಡ್ ನೆರೆ ಪರಿಹಾರದ ಅಂಕಿ- ಅಂಶ ಒದಗಿಸುವಂತೆ ಒತ್ತಾಯ ಮಾಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದವೂ ನಡೆಯಿತು.

ಅಕಾಲಿಕ ಮಳೆಯಿಂದ ನಷ್ಟ ಆಗುತ್ತಿದೆ. ನೆರೆಯಿಂದಾಗಿ 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. 2 ಲಕ್ಷ ಮನೆಗಳಿಗೆ ಹಾನಿ ಆಗಿದೆ. ಆದರೆ 5 ಸಾವಿರ ಮನೆಗಳಿಗೆ ಮಾತ್ರ ಪರಿಹಾರ ಹಣ ಬಿಡುಗಡೆ ಆಗಿದೆ ಎಂದು ಪ್ರಕಾಶ್ ರಾಥೋಡ್ ವಿವರಿಸಿದರು. ಈ ವೇಳೆ ಸಭಾಪತಿಗಳು ಮಧ್ಯ ಪ್ರವೇಶಿಸಿ, ಇನ್ನೂ 29 ಮಂದಿ ಮಾತನಾಡಬೇಕಿದೆ. ಮುಂದಿನವರಿಗೆ ಅವಕಾಶ ನೀಡಬೇಕು ಎಂದರು. ಆಗ ಪ್ರಕಾಶ್ ರಾಥೋಡ್ ಸದನವನ್ನು 3 ದಿನದ ಬದಲು, 15 ದಿನಕ್ಕೆ ವಿಸ್ತರಿಸಿ ಎಂದು ಸಲಹೆ ಇತ್ತರು. ಅಂತಿಮವಾಗಿ ಚರ್ಚೆಗೆ 5 ನಿಮಿಷ ಬದಲು, 10 ನಿಮಿಷ ಕಾಲಾವಕಾಶ ಕೊಡಬೇಕೆಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮನವಿ ಮಾಡಿದ್ದು, ಇದಕ್ಕೆ ಸಭಾಪತಿಗಳು ಸಮ್ಮತಿಸಿದರು.

Vidhana Parishath session
ಪ್ರಕಾಶ್ ರಾಥೋಡ್

ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ. ರವಿ, 1 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ದಾಖಲೆ ಒದಗಿಸಿ ಎಂದಾಗ ಮತ್ತೆ ಗದ್ದಲ ಏರ್ಪಟ್ಟಿತು. ಪ್ರತಿಪಕ್ಷದ ನಾಯಕರು ವಾಗ್ವಾದ ನಡೆಸಿದರು. ನೆರೆ ಪರಿಹಾರದ ನಷ್ಟದ ಮೊತ್ತದ ವಿಚಾರವಾಗಿ ದೊಡ್ಡ ಚರ್ಚೆ ಗದ್ದಲದ ನಡುವೆ ನಡೆಯಿತು. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನಷ್ಟದ ಅಂದಾಜಿನ ದಾಖಲೆ ಒದಗಿಸುತ್ತೇನೆ ಎಂದು ಪ್ರಕಾಶ್ ರಾಥೋಡ್ ಅವರು ಸಿ.ಟಿ. ರವಿಗೆ ಒದಗಿಸುವ ಭರವಸೆ ನೀಡಿದರು.

ಪ್ರಾಣೇಶ್ ಮಧ್ಯ ಪ್ರವೇಶಿಸಿ ಅಂಕಿ ಅಂಶ ಒದಗಿಸಿ ಎಂದಾಗ ನಿಮಗೂ ದಾಖಲೆ ನೀಡುತ್ತೇನೆ ಎಂದರು. ಗಲಾಟೆ ಮುಂದುವರಿಯಿತು. ಕಾಂಗ್ರೆಸ್ ಪಕ್ಷದಿಂದ ಸಿದ್ಧಪಡಿದ ನೆರೆ ಸಮಸ್ಯೆಯ ವರದಿಯನ್ನೂ ಪ್ರಸ್ತಾಪಿಸಿದ ಪ್ರಕಾಶ್ ರಾಥೋಡ್ ಉತ್ತರಿಸುತ್ತಿರುವ ಮಧ್ಯೆಯೇ ಸಭಾಪತಿಗಳು ಕೆ.ಟಿ. ಶ್ರೀಕಂಠೇಗೌಡರಿಗೆ ಮಾತನಾಡಲು ಸೂಚಿಸಿದರು. ಪ್ರಕಾಶ್ ರಾಥೋಡ್ ಮಾತು ಮುಗಿಸುವ ಮುನ್ನ ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದರು.

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಚರ್ಚೆ ಆರಂಭಿಸಿದ ಕಾಂಗ್ರೆಸ್​ ಸದಸ್ಯ ಪ್ರಕಾಶ್ ರಾಥೋಡ್ ನೆರೆ ಪರಿಹಾರದ ಅಂಕಿ- ಅಂಶ ಒದಗಿಸುವಂತೆ ಒತ್ತಾಯ ಮಾಡಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದವೂ ನಡೆಯಿತು.

ಅಕಾಲಿಕ ಮಳೆಯಿಂದ ನಷ್ಟ ಆಗುತ್ತಿದೆ. ನೆರೆಯಿಂದಾಗಿ 1 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ. 2 ಲಕ್ಷ ಮನೆಗಳಿಗೆ ಹಾನಿ ಆಗಿದೆ. ಆದರೆ 5 ಸಾವಿರ ಮನೆಗಳಿಗೆ ಮಾತ್ರ ಪರಿಹಾರ ಹಣ ಬಿಡುಗಡೆ ಆಗಿದೆ ಎಂದು ಪ್ರಕಾಶ್ ರಾಥೋಡ್ ವಿವರಿಸಿದರು. ಈ ವೇಳೆ ಸಭಾಪತಿಗಳು ಮಧ್ಯ ಪ್ರವೇಶಿಸಿ, ಇನ್ನೂ 29 ಮಂದಿ ಮಾತನಾಡಬೇಕಿದೆ. ಮುಂದಿನವರಿಗೆ ಅವಕಾಶ ನೀಡಬೇಕು ಎಂದರು. ಆಗ ಪ್ರಕಾಶ್ ರಾಥೋಡ್ ಸದನವನ್ನು 3 ದಿನದ ಬದಲು, 15 ದಿನಕ್ಕೆ ವಿಸ್ತರಿಸಿ ಎಂದು ಸಲಹೆ ಇತ್ತರು. ಅಂತಿಮವಾಗಿ ಚರ್ಚೆಗೆ 5 ನಿಮಿಷ ಬದಲು, 10 ನಿಮಿಷ ಕಾಲಾವಕಾಶ ಕೊಡಬೇಕೆಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮನವಿ ಮಾಡಿದ್ದು, ಇದಕ್ಕೆ ಸಭಾಪತಿಗಳು ಸಮ್ಮತಿಸಿದರು.

Vidhana Parishath session
ಪ್ರಕಾಶ್ ರಾಥೋಡ್

ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ. ರವಿ, 1 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ದಾಖಲೆ ಒದಗಿಸಿ ಎಂದಾಗ ಮತ್ತೆ ಗದ್ದಲ ಏರ್ಪಟ್ಟಿತು. ಪ್ರತಿಪಕ್ಷದ ನಾಯಕರು ವಾಗ್ವಾದ ನಡೆಸಿದರು. ನೆರೆ ಪರಿಹಾರದ ನಷ್ಟದ ಮೊತ್ತದ ವಿಚಾರವಾಗಿ ದೊಡ್ಡ ಚರ್ಚೆ ಗದ್ದಲದ ನಡುವೆ ನಡೆಯಿತು. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನಷ್ಟದ ಅಂದಾಜಿನ ದಾಖಲೆ ಒದಗಿಸುತ್ತೇನೆ ಎಂದು ಪ್ರಕಾಶ್ ರಾಥೋಡ್ ಅವರು ಸಿ.ಟಿ. ರವಿಗೆ ಒದಗಿಸುವ ಭರವಸೆ ನೀಡಿದರು.

ಪ್ರಾಣೇಶ್ ಮಧ್ಯ ಪ್ರವೇಶಿಸಿ ಅಂಕಿ ಅಂಶ ಒದಗಿಸಿ ಎಂದಾಗ ನಿಮಗೂ ದಾಖಲೆ ನೀಡುತ್ತೇನೆ ಎಂದರು. ಗಲಾಟೆ ಮುಂದುವರಿಯಿತು. ಕಾಂಗ್ರೆಸ್ ಪಕ್ಷದಿಂದ ಸಿದ್ಧಪಡಿದ ನೆರೆ ಸಮಸ್ಯೆಯ ವರದಿಯನ್ನೂ ಪ್ರಸ್ತಾಪಿಸಿದ ಪ್ರಕಾಶ್ ರಾಥೋಡ್ ಉತ್ತರಿಸುತ್ತಿರುವ ಮಧ್ಯೆಯೇ ಸಭಾಪತಿಗಳು ಕೆ.ಟಿ. ಶ್ರೀಕಂಠೇಗೌಡರಿಗೆ ಮಾತನಾಡಲು ಸೂಚಿಸಿದರು. ಪ್ರಕಾಶ್ ರಾಥೋಡ್ ಮಾತು ಮುಗಿಸುವ ಮುನ್ನ ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದರು.

Intro:newsBody:ವಿಧಾನ ಪರಿಷತ್ ಕಲಾಪ ಆರಂಭ, ಮುಂದುವರೆದ ನೆರೆ ಸಮಸ್ಯೆ ಚರ್ಚೆ

ಬೆಂಗಳೂರು: ವಿಧಾನ ಪರಿಷತ್ ಕಲಾಪ ಆರಂಭದಲ್ಲಿಯೇ ಸಿಎಂ ಪರವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು 2019-20 ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ ಮಂಡಿಸಲಾಯಿತು.
ವರದಿ ಮಂಡನೆ ನಂತರ ಸದಸ್ಯೆ ವೀಣಾ ಅಚ್ಚಯ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ 2018-19 ನೇ ಸಾಲಿನ 35 ನೇ ವರದಿ ಮಂಡಿಸಿದರು. ಎನ್.ಎಸ್. ಬೋಸರಾಜು ಅವರು ಅಧಿನ ಶಾಸನ ರಚನಾ ಸಮಿತಿಯ 2018-19 ನೇ ಸಾಲಿನ 47 ನೇ ವರದಿ ಮಂಡಿಸಿದರು.
ಇದಾದ ಬಳಿಕ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ನೆರೆ ಸಮಸ್ಯೆ ಕುರಿತು ನಡೆಸಿದ ಚರ್ಚೆಯಲ್ಲಿ ಮಾತನಾಡಿ, ಮೇಲ್ಮನೆಯಲ್ಲಿ ಮಾಧ್ಯಮ ಚರ್ಚೆಗೆ ಅವಕಾಶ ನೀಡಲಾಗಿದೆ, ಕೆಳಮನೆಯಲ್ಲಿ ಈ ಸಂಪ್ರದಾಯ ಆಚರಣೆಗೆ ಅವಕಾಶ ಸಿಗಲಿ ಎಂದು ಹೇಳಿದಾಗ ಸದನದಲ್ಲಿ ಕೆಲ ಕಾಲ ಗದ್ದಲ ನಡೆಯಿತು. ಸಭಾಪತಿಗಳು ವಿಷಯಕ್ಕೆ ಬನ್ನಿ ಎಂದು ಸೂಚಿಸಿದರು. ಪ್ರವಾಹದ ವಿಚಾರವಾಗಿ ತಮ್ಮ ವಿವರ ಮಂಡಿಸಿ ಅಕಾಲಿಕ ಮಳೆಯಿಂದ ನಷ್ಟ ಆಗುತ್ತಿದೆ. ಸಿಡಿಲಿಗೆ ರಾಜ್ಯದಲ್ಲಿ ನಾಲ್ವರು ನಾಗರಿಕರು, 25 ಕುರಿಗಳ ಸಾವಾಗಿದೆ. ಸರ್ಕಾರ ಸೂಕ್ತ ಸ್ಪಂಧನೆ ನೀಡಬೇಕು. 2 ಸಾವಿರ ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಇದೆ. 10 ಸಾವಿರ ರೂ. ಪರಿಹಾರವನ್ನು ಮೊದಲ ಹಂತದಲ್ಲಿ ಬಿಡುಗಡೆ ಆಗಿದೆ ಬ ಮಾಹಿತಿ ಇದೆ. 49 ಸಾವಿರ ಕೋಟಿ ಬಿಡುಗಡೆ ಆಗಿದೆ. 2 ಲಕ್ಷ ಮನೆಗಳಿಗೆ ಹಾನಿ ಆಗಿದೆ. 5 ಸಾವಿರ ಮನೆಗೆ ಮಾತ್ರ ಹಣ ಬಿಡುಗಡೆ ಆಗಿದೆ ಎಂದರು. ಸಭಾಪತಿ ಗಳು ಮಧ್ಯ ಪ್ರವೇಶಿದಿ 29 ಮಂದಿ ಮಾತನಾಡಬೇಕಿದೆ. ಮುಂದಿನವರಿಗೆ ಅವಕಾಶ ನೀಡಬೇಕು ಎಂದರು. ಆಗ ಪ್ರಕಾಶ್ ರಾಥೋಡ್ ಸದನವನ್ನು 3 ದಿನದ ಬದಲು, 15 ದಿನಕ್ಕೆ ವಿಸ್ತರಿಸಿ ಎಂದು ಸಲಹೆ ಇತ್ತರು. ಅಂತಿಮವಾಗಿ ಚರ್ಚೆಗೆ 5 ನಿಮಿಷ ಬದಲು, 10 ನಿಮಿಷ ಕಾಲಾವಕಾಶ ಕೊಡಬೇಕೆಂದು ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಮನವಿ ಮಾಡಿದರು. ಸಭಾಪತಿಗಳು ಸಮ್ಮತಿಸಿದರು.
ಚರ್ಚೆ ವೇಳೆ ಮಧ್ಯಪ್ರವೇಶಿಸಿದ ಸಚಿವ ಸಿ.ಟಿ. ರವಿ ಅವರು 1 ಲಕ್ಷ ಕೋಟಿ ನಷ್ಟವಾಗಿದೆ ಎಂಬ ಆರೋಪಕ್ಕೆ ದಾಖಲೆ ಒದಗಿಸಿ ಎಂದಾಗ ಮತ್ತೆ ಗದ್ದಲ ಏರ್ಪಟ್ಟಿತು. ಆಡಳಿತ ಪ್ರತಿಪಕ್ಷದ ನಾಯಕರು ವಾಗ್ವಾದ ನಡೆಸಿದರು. ನೆರೆ ಪರಿಹಾರದ ನಷ್ಟದ ಮೊತ್ತದ ವಿಚಾರವಾಗಿ ದೊಡ್ಡ ಚರ್ಚೆ ಗದ್ದಲದ ನಡುವೆ ನಡೆಯಿತು. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನಷ್ಟದ ಅಂದಾಜಿನ ದಾಖಲೆ ಒದಗಿಸುತ್ತೇನೆ ಎಂದು ಪ್ರಕಾಶ್ ರಾಥೋಡ್ ಅವರು ಸಿ.ಟಿ. ರವಿಗೆ ಒದಗಿಸುವ ಭರವಸೆ ನೀಡಿದರು. ಪ್ರಾಣೇಶ್ ಮಧ್ಯ ಪ್ರವೇಶಿಸಿ ಅಂಕಿ ಅಂಶ ಒದಗಿಸಿ ಎಂದಾಗ ನಿಮಗೂ ದಾಖಲೆ ನೀಡುತ್ತೇನೆ ಎಂದರು. ಗಲಾಟೆ ಮುಂದುವರಿಯಿತು. ಅನಗತ್ಯ ಗದ್ದಲ ಮಾಡಿದರೆ ಮಾತು, ಮಾಹಿತಿ ನೀಡಲಾಗದು ಎಂದು ಕಾಂಗ್ರೆಸ್ ನಾಯಕರು ವಿವರಿಸಿದರು. ಕಾಂಗ್ರೆಸ್ ಪಕ್ಷದಿಂದ ಸಿದ್ಧಪಡಿದ ನೆರೆ ಸಮಸ್ಯೆಯ ವರದಿಯನ್ನೂ ಪ್ರಸ್ತಾಪಿಸಿದ ಪ್ರಕಾಶ್ ರಾಥೋಡ್ ಉತ್ತರಿಸುತ್ತಿರುವ ಮಧ್ಯೆಯೇ ಸಭಸಪತಿಗಳು ಕೆ.ಟಿ. ಶ್ರೀಕಂಠೇಗೌಡರಿಗೆ ಮಾತನಾಡಲು ಸೂಚಿಸಿದರು. ಪ್ರಕಾಶ್ ರಾಥೋಡ್ ಮಾತು ಮುಗಿಸುವ ಮುನ್ನ ಆದಷ್ಟು ಬೇಗ ಪರಿಹಾರ ನೀಡುವಂತೆ ಮನವಿ ಮಾಡಿದರು.Conclusion:news
Last Updated : Oct 11, 2019, 12:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.