ಬೆಂಗಳೂರು: ಪ್ರಯಾಣಿಕರೊಬ್ಬರು ಮರೆತು ಹೋಗಿದ್ದ ಚಿನ್ನದ ಸರ ಹಾಗೂ ಸಾವಿರಾರು ರೂ. ಹಣವನ್ನು ಪುನಃ ಅವರಿಗೆ ಹಿಂದಿರುಗಿಸಿ ರೈಲ್ವೆ ಟಿಕೆಟ್ ಕಲೆಕ್ಟರ್ವೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಟಿಕೆಟ್ ಕೌಂಟರ್ ಚೀಫ್ ನಾಗರಾಜ್ ಪ್ರಾಮಾಣಿಕತೆ ಮೆರೆದ ಅಧಿಕಾರಿ. ಮೈಲಾಡುತುರೈ-ಮೈಸೂರು ಎಕ್ಸ್ಪ್ರೆಸ್ ರೈಲಿನಲ್ಲಿ ಹೇಮಲತಾ ಎಂಬುವರು ಪ್ರಯಾಣಿಸುತ್ತಿದ್ದರು. ರೈಲು ಇಳಿಯುವ ಅವಸರದಲ್ಲಿ ಚಿನ್ನದ ಸರ ಹಾಗೂ 13,400 ರೂ. ನಗದು ಇರುವ ಪರ್ಸ್ನ ರೈಲಿನಲ್ಲಿಯೇ ಮರೆತು ಹೋಗಿದ್ದಾರೆ.
ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಟಿಕೆಟ್ ಕಲೆಕ್ಟರ್ ನಾಗರಾಜ್, ಮಹಿಳೆ ಉಳಿದುಕೊಂಡಿದ್ದ ಸೀಟಿನ ಬಳಿ ಬಂದಾಗ ಪರ್ಸ್ ಇರುವುದು ಗೊತ್ತಾಗಿದೆ. ತಕ್ಷಣ ಪ್ಯಾಸೆಂಜರ್ ಲಿಸ್ಟ್ನಲ್ಲಿ ಹೇಮಲತಾ ಅವರು ಮಾಹಿತಿ ತಿಳಿದುಕೊಂಡು ಅವರಿಗೆ ಕಳೆದುಹೋಗಿದ್ದ ಸರ ಹಾಗೂ ಹಣ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.