ETV Bharat / city

ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಯೋಜನೆ ಸಿದ್ಧ: ಸಚಿವ ಸಿ.ಸಿ.ಪಾಟೀಲ್‌ - vrushabhavati River Water Purification news

ಬಿಜೆಪಿ ನಾಯಕ ದಿ.ಅನಂತ್ ಕುಮಾರ್‌ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ಹರಿಯುತ್ತಿರುವ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಸಿ.ಸಿ. ಪಾಟೀಲ್‌ ತಿಳಿಸಿದರು.

ಅದಮ್ಯ ಚೇತನ ಸಂಸ್ಥೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ
author img

By

Published : Nov 3, 2019, 6:07 PM IST

ಬೆಂಗಳೂರು: ದಿವಂಗತ ಅನಂತ್ ಕುಮಾರ್‌ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಹರಿಯುತ್ತಿರುವ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಸಿ.ಸಿ ಪಾಟೀಲ್‌ ತಿಳಿಸಿದರು.

ಅದಮ್ಯ ಚೇತನ ಸಂಸ್ಥೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ವೃಷಭಾವತಿ ನದಿಯ ಶುದ್ದೀಕರಣಕ್ಕೆ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತ್ ಕುಮಾರ್‌ ಕೈಜೋಡಿಸುವ ಭರವಸೆ ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯದ ಯೋಜನೆ ಶೀಘ್ರವೇ ರೂಪಿಸಲಾಗುವುದು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್​ನಲ್ಲಿಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಗಿಡ ನೆಟ್ಟು ನೀರೆರೆದು ಮಾತನಾಡಿದ ಸಚಿವ ಪಾಟೀಲ್‌, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ. ತೇಜಸ್ವಿನಿ ಅನಂತ್ ಕುಮಾರ್‌ ಹಾಗೂ ಕುಲಪತಿ ಕೆ. ಆರ್‌. ವೇಣುಗೋಪಾಲ್‌ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಕಳೆದ 201 ವಾರಗಳಿಂದ ಗಿಡ ನೆಡುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಡಾ.ತೇಜಸ್ವಿನಿ ಅನಂತಕುಮಾರ್‌ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಇಲಾಖೆಯ ಸಚಿವ ಆಗಿರುವವರೆಗೂ ಸರ್ಕಾರ ಹಾಗೂ ಇಲಾಖೆಯಿಂದ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದ್ರು.

ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಅನಂತಕುಮಾರ್‌ ಅವರು 2016 ಜನವರಿ 3 ರಂದು ಚಾಲನೆ ನೀಡಿದ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ನಗರವನ್ನು ಮತ್ತಷ್ಟು ಹಸಿರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ವೃಷಭಾವತಿ ನದಿಯ ಬಗ್ಗೆ ಅನಂತಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡಿದಾಗ, ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು, ಇದರ ಶುದ್ದೀಕರಣಕ್ಕೆ ಅದಮ್ಯ ಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ ಎಂದು ಹೇಳಿದರು.

ಬೆಂಗಳೂರು: ದಿವಂಗತ ಅನಂತ್ ಕುಮಾರ್‌ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ನಡುವೆ ಹರಿಯುತ್ತಿರುವ ವೃಷಭಾವತಿ ನದಿ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆ ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವ ಸಿ.ಸಿ ಪಾಟೀಲ್‌ ತಿಳಿಸಿದರು.

ಅದಮ್ಯ ಚೇತನ ಸಂಸ್ಥೆ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

ವೃಷಭಾವತಿ ನದಿಯ ಶುದ್ದೀಕರಣಕ್ಕೆ ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತ್ ಕುಮಾರ್‌ ಕೈಜೋಡಿಸುವ ಭರವಸೆ ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯದ ಯೋಜನೆ ಶೀಘ್ರವೇ ರೂಪಿಸಲಾಗುವುದು ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್​ನಲ್ಲಿಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಕಾರ್ಯಕ್ರಮ ಆಯೋಜಿಸಿತ್ತು. ಈ ವೇಳೆ ಗಿಡ ನೆಟ್ಟು ನೀರೆರೆದು ಮಾತನಾಡಿದ ಸಚಿವ ಪಾಟೀಲ್‌, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ. ತೇಜಸ್ವಿನಿ ಅನಂತ್ ಕುಮಾರ್‌ ಹಾಗೂ ಕುಲಪತಿ ಕೆ. ಆರ್‌. ವೇಣುಗೋಪಾಲ್‌ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.

ಕಳೆದ 201 ವಾರಗಳಿಂದ ಗಿಡ ನೆಡುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಡಾ.ತೇಜಸ್ವಿನಿ ಅನಂತಕುಮಾರ್‌ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಇಲಾಖೆಯ ಸಚಿವ ಆಗಿರುವವರೆಗೂ ಸರ್ಕಾರ ಹಾಗೂ ಇಲಾಖೆಯಿಂದ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದ್ರು.

ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಅನಂತಕುಮಾರ್‌ ಅವರು 2016 ಜನವರಿ 3 ರಂದು ಚಾಲನೆ ನೀಡಿದ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ನಗರವನ್ನು ಮತ್ತಷ್ಟು ಹಸಿರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ವೃಷಭಾವತಿ ನದಿಯ ಬಗ್ಗೆ ಅನಂತಕುಮಾರ್‌ ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡಿದಾಗ, ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು, ಇದರ ಶುದ್ದೀಕರಣಕ್ಕೆ ಅದಮ್ಯ ಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ ಎಂದು ಹೇಳಿದರು.

Intro:ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಯೋಜನೆ: ಸಚಿವ ಸಿ ಸಿ ಪಾಟೀಲ್‌

ಬೆಂಗಳೂರು: ದಿವಂಗತ ಅನಂತಕುಮಾರ್‌ರ ಆಶಯದಂತೆ ಬೆಂಗಳೂರು ವಿಶ್ವವಿದ್ಯಾಲಯದ ಮಧ್ಯೆ ಹರಿಯುತ್ತಿರುವ ವೃಷಭಾವತಿ ನದಿಯ ನೀರು ಶುದ್ದೀಕರಣಕ್ಕೆ ಅಗತ್ಯ ಯೋಜನೆಯನ್ನು ರೂಪಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ನದಿಯ ಶುದ್ದೀಕರಣಕ್ಕೆ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಅವರು ಕೈಜೋಡಿಸುವ ಭರವಸೆಯನ್ನು ನೀಡಿದ್ದು, ಅವರ ಸಹಕಾರದಲ್ಲಿ ಶುದ್ದೀಕರಣ ಕಾರ್ಯಕ್ಕೆ ಶೀಘ್ರ ಯೋಜನೆ ರೂಪಿಸಲಾಗುವುದು ಎಂದು ಸಚಿವ ಸಿ ಸಿ ಪಾಟೀಲ್‌ ತಿಳಿಸಿದರು.

ನಗರದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ ನಲ್ಲಿಂದು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅದಮ್ಯ ಚೇತನ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 201 ರೂಪಾಯಿಗಳನ್ನು ನೀಡಿ ಗಿಡ ನೆಟ್ಟು ಸಂಭ್ರಮಿಸಿದರು.

ನಂತರ ಮಾತನಾಡಿದ ಅವರು, ವೃಷಭಾವತಿ ನದಿಯ ಶುದ್ದೀಕರಣದ ಬಗ್ಗೆ ಡಾ ತೇಜಸ್ವಿನಿ ಅನಂತಕುಮಾರ್‌ ಹಾಗೂ ಕುಲಪತಿ ಕೆ ಆರ್‌ ವೇಣುಗೋಪಾಲ್‌ ಅವರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಎರಡು ದಿನಗಳ ನಂತರ ಯೋಜನೆಯ ಜೊತೆಗೆ ಭೇಟಿಯಾಗುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಬದುಕಿದ್ದಾಗ ಅನುಸರಿಸಿದ್ದು, ಸಾವಿನ ನಂತರವೂ ಮುಂದುವರೆಯಬೇಕು ಎನ್ನುವ ಗುರಿಯನ್ನು ದಿವಂಗತ ಅನಂತ ಕುಮಾರ್‌ ಅವರು ಹೊಂದಿದ್ದರು. ಅವರು ಹಾಕಿಕೊಟ್ಟ ಗಿಡ ನೆಡುವ ಯೋಜನೆ ಬಹಳ ಶ್ಲಾಘನೀಯ. ದಿವಂಗತ ಅನಂತ ಕುಮಾರ್‌ ಅವರು ರಾಜ್ಯದ ಅಭಿವೃದ್ದಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ನೆನಪಿಸಿಕೊಂಡರು.

ಕಳೆದ 201 ವಾರಗಳಿಂದ ಗಿಡ ನೆಡುವ ಕಾರ್ಯವನ್ನು ಸತತವಾಗಿ ನಡೆಸಿಕೊಂಡು ಬರುತ್ತಿರುವ ಡಾ ತೇಜಸ್ವಿನಿ ಅನಂತಕುಮಾರ್‌ ಅವರು, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಈ ಇಲಾಖೆ ಸಚಿವ ಆಗಿರುವ ವರೆಗೂ ಸರಕಾರ ಹಾಗೂ ಇಲಾಖೆಯಿಂದ ಬೇಕಾಗಿರುವ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇನೆ ಎನ್ನುವ ಭರವಸೆ ನೀಡಿದರು.

ಪರಿಸರವನ್ನು ಉಳಿಸುವ ಅತಿಮುಖ್ಯ ವಾದ ಜವಾಬ್ದಾರಿ ನಮ್ಮ ಮೇಲಿದೆ. ರಾಜ್ಯದಲ್ಲಿ ಕೆಲ ಕಡೆ ಬರ ಇದೆ ಕೆಲ ಕಡೆ ತೀವ್ರ ಪ್ರವಾಹ ಇದೆ. ಈ ರೀತಿಯ ಪ್ರಾಕೃತಿಕ ಹಾನಿ ಆಗುತ್ತಿರುವುದು ನಮ್ಮ ಸ್ವಯಂಕೃತ ಅಫರಾಧ, ಗಿಡಗಳನ್ನು ನೆಡುತ್ತಿಲ್ಲ. ಪರಿಸರ ಹಾಗೂ ಅರಣ್ಯ ನಾಶದಿಂದ ಆಗಿರುವ ಪರಿಣಾಮ ಇದಾಗಿದೆ. ಇಂತಹ ಸಂಧರ್ಭದಲ್ಲಿ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರೂ ರಾಜ್ಯದ ಎಲ್ಲಾ ಕಡೆ ಇಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಎಂದು ಕರೆ ನೀಡಿದರು. 201 ರೂಪಾಯಿಗಳನ್ನು ನೀಡುವ ಮೂಲಕ ಒಂದು ಗಿಡ ನೆಟ್ಟಿದ್ದು ಬಹಳ ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ದಿವಂಗತ ಅನಂತಕುಮಾರ್‌ ಅವರು 2016 ಜನವರಿ 3 ರಂದು ಚಾಲನೆ ನೀಡಿದ ಕಾರ್ಯಕ್ರಮ ಇದಾಗಿದೆ. ಬೆಂಗಳೂರು ನಗರವನ್ನು ಮತ್ತಷ್ಟು ಹಸರೀಕರಣ ಮಾಡುವ ಕನಸನ್ನು ಅವರು ಕಂಡಿದ್ದರು. ಅವರ ಕನಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಒಬ್ಬ ಮನುಷ್ಯನಿಗೆ ಒಂದು ವರ್ಷ ಉಸಿರಾಡಲು ಅಗತ್ಯವಿರುವ ಆಮ್ಲಜನಕ ಉತ್ಪಾದಿಸಲು 7 ಮರಗಳು ಬೇಕು. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರು ನಗರಕ್ಕೆ 7 ಕೋಟಿ ಹಾಗೂ 6 ಕೋಟಿ ಜನಸಂಖ್ಯೆಯ ಕರ್ನಾಟಕಕ್ಕೆ ಸುಮಾರು 42 ಕೋಟಿ ಮರಗಳ ಅಗತ್ಯವಿದೆ.

201 ನೇ ಹಸಿರು ಭಾನುವಾರದ ಪ್ರಯುಕ್ತ ಪೇಪರ್‌ ನ್ಯಾಪ್‌ ಕಿನ್‌ ಬಳಕೆಯನ್ನು ಸಂಪೂರ್ಣ ನಿಲ್ಲಿಸುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು. ಅದಮ್ಯ ಚೇತನ ವತಿಯಿಂದ ಸುಮಾರು ಒಂದುವರೆ ಲಕ್ಷ ಮರಗಳನ್ನು ನೆಟ್ಟಿದ್ದು, ಇದು ಬಹಳ ಕಡಿಮೆ ಸಂಖ್ಯೆಯಾಗಿದ್ದು ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ವೃಷಭಾವತಿ ನದಿ ಹರಿಯುತ್ತಿದೆ. ವೃಷಭಾವತಿ ನದಿಯ ಬಗ್ಗೆ ದಿವಂಗತ ಅನಂತಕುಮಾರ್‌ ಅವರು, ಪ್ರಧಾನಿ ನರೇಂದ್ರ ಮೋದಿ ಭಗೀರಥರ ಮಾದರಿಯಲ್ಲಿ ಗಂಗೆಯನ್ನು ಸ್ವಚ್ಚ ಮಾಡಿದಾಗ, ನಾವು ವೃಷಭಾವತಿಯನ್ನು ಯಾಕೆ ಸ್ವಚ್ಚ ಮಾಡಬಾರದು ಎನ್ನುವ ಕನಸನ್ನು ಹೊಂದಿದ್ದರು. ಈ ಬಗ್ಗೆ ಸಚಿವರೊಂದಿಗೆ ಚರ್ಚಿಸಿದ್ದು ಇದರ ಶುದ್ದೀಕರಣಕ್ಕೆ ಅದಮ್ಯ ಚೇತನ ಸಂಸ್ಥೆ ಸಂತಸದಿಂದ ಕೈಜೊಡಿಸಲಿದೆ. ಭಾನುವಾರ ಅಲ್ಲದೆ ಬೇರೆ ದಿನಗಳಲ್ಲೂ ಈ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಹೇಳಿದರು.

KN_BNG_2_GREEN_SUNDAY_VIEDO_7201801

Body:..Conclusion:.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.