ಬೆಂಗಳೂರು : ಕೊರೊನಾ ಭೀತಿ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಲಾಕ್ಡೌನ್ ಕರೆಗೆ ಕ್ಯಾರೇ ಎನ್ನದ ಬೆಂಗಳೂರಿನ ಜನತೆ ಹಬ್ಬದ ಸಾಮಗ್ರಿಗಳನ್ನ ಕೊಳ್ಳೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಇಂದು ಯುಗಾದಿ ಹಬ್ಬವಾದ ಕಾರಣ ನಗರದ ಕೆಆರ್ಪುರಂದಲ್ಲಿ ಬೆಳಗ್ಗೆ ಜಮಾಯಿಸಿ ಜನರು ಹಬ್ಬದ ಸಾಮಗ್ರಿಗಳನ್ನ ಖರೀದಿಸಲು ಮುಗಿಬಿದ್ದರು. ಗುಂಪು ಚದುರಿಸಲು ಕೈನಲ್ಲಿ ಲಾಠಿ ಹಿಡಿದ ಪೊಲೀಸರು, ವ್ಯಾಪಾರಸ್ಥರಿಗೆ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದ್ರು.
ಕೊರೊನಾ ವೈರಸ್ ತಡೆಗಟ್ಟಲು ಸರ್ಕಾರ ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.