ETV Bharat / city

ಚೀನಾ ಆ್ಯಪ್​ಗಳ ನಿಷೇಧವನ್ನೇ ಲಾಭವನ್ನಾಗಿ ಪರಿವರ್ತಿಸುವ ಅವಕಾಶ ಭಾರತಕ್ಕಿದೆ: ಕೆ. ಗಣೇಶ್​ - Bangalore news

ಆ್ಯಪ್ ಬ್ಯಾನ್ ಆಗಿರುವುದನ್ನು ಭಾರತ ಮೂಲದ ಸ್ಟಾರ್ಟ್​ಅಪ್​​ಗಳು ಅವಕಾಶ ಎಂದು ಪರಿಗಣಿಸಬೇಕು. ಚೀನಾ ದೇಶದಲ್ಲಿ ಆ್ಯಪ್​ಗಳ ಬಗ್ಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು, ಅದೇ ರೀತಿ ಭಾರತದಲ್ಲಿ ಆಗಲಿದೆ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಭಾರತ ಮೂಲದ ಆ್ಯಪ್​ಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವದಲ್ಲೂ ಹೆಸರು ಮಾಡಬಹುದು ಎಂದು ಸ್ಟಾರ್ಟ್​ಅಪ್​ಗಳ ಹೂಡಿಕೆದಾರ ಕೆ ಗಣೇಶ್ ತಿಳಿಸಿದ್ದಾರೆ.

App Ban
ಕೆ ಗಣೇಶ್
author img

By

Published : Jul 30, 2020, 1:17 PM IST

ಬೆಂಗಳೂರು: ಇತ್ತೀಚೆಗೆ ಚೀನಾ ಮೂಲದ ಹಲವಾರು ಆ್ಯಪ್​ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದನ್ನು ಸ್ಟಾರ್ಟ್​ಅಪ್​​ಗಳು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ಸ್ಟಾರ್ಟ್​ಅಪ್​ಗಳ ಹೂಡಿಕೆದಾರ ಕೆ. ಗಣೇಶ್ ಅವರು 'ಈಟಿವಿ ಭಾರತ'ಮೂಲಕ ತಿಳಿಸಿದ್ದಾರೆ.

ಭಾರತ-ಚೀನಾ ಮಧ್ಯೆ ಗಡಿ ವಿವಾದದ ಹಿನ್ನೆಲೆಯಲ್ಲಿ ಹಲವಾರು ಆ್ಯಪ್​ಗಳನ್ನು ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಕ್ರಮ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಚೀನಾ ರಾಷ್ಟ್ರ, ಆ್ಯಪ್ ಮೂಲಕ ಭಾರತೀಯರ ಡೇಟಾ ಸಂಗ್ರಹಿಸುವುದಿಲ್ಲ ಎಂದು ಸಾಬೀತಾಗುವವರೆಗೆ ಈ ನಿರ್ಧಾರ ಅವಶ್ಯಕ ಎಂದರು.

ಇದನ್ನು ಭಾರತ ಮೂಲದ ಸ್ಟಾರ್ಟ್​ಅಪ್​​ಗಳು ಅವಕಾಶವೆಂದು ಪರಿಗಣಿಸಬೇಕು. ಇಲ್ಲಿಯವರೆಗೆ ಡೇಟಾ ಸುರಕ್ಷತೆ ಬಗ್ಗೆ ಅಷ್ಟು ಜಾಗ್ರತೆ ನಮ್ಮ ದೇಶದಲ್ಲಿ ಇರಲಿಲ್ಲ. ಚೀನಾ ದೇಶದಲ್ಲಿ ಆ್ಯಪ್​ಗಳ ಬಗ್ಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು, ಅದೇ ರೀತಿ ಭಾರತದಲ್ಲಿ ಆಗಲಿದೆ ಎಂದು ಹೇಳಿದರು.

ಚೀನಾ ಆ್ಯಪ್​ ನಿಷೇಧದ ಸಂದರ್ಭವನ್ನು ಭಾರತದಲ್ಲಿ ಅವಕಾಶವನ್ನಾಗಿ ಪರಿವರ್ತಿಸಬೇಕೆಂದ ಕೆ. ಗಣೇಶ್

ಭಾರತ ಮೂಲದ ಆ್ಯಪ್​ಗಳಾದ ಟ್ರೆಲ್, ರೋಪೋಸೋ ಹಾಗೂ ಶೇರ್ ಚಾಟ್ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಭಾರತ ಮೂಲದ ಆ್ಯಪ್​ಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವದಲ್ಲೂ ಹೆಸರು ಮಾಡಬಹುದು ಎಂದು ತಿಳಿಸಿದರು.

ಹಣಗಳಿಕೆ ಕಷ್ಟ, ಅದೇ ದೊಡ್ಡ ಸವಾಲು:

ಬೇರೆ ದೇಶದ ಆ್ಯಪ್​ಗಳು ಬೇಗ ಹಣ ಗಳಿಸುವುದು ಸುಲಭ. ಅದೇ ಭಾರತದಲ್ಲಿ ಎಷ್ಟೇ ಪ್ರಸಿದ್ಧ ಆ್ಯಪ್​ ಇದ್ದರೂ ಹಣಗಳಿಕೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ 5ಜಿ ತಂತ್ರಜ್ಞಾನ, ಬಹುಭಾಷಾ ಸಾಮರ್ಥ್ಯ ಹೊಂದಿರುವ ಆ್ಯಪ್ ಹಾಗೂ 60 ಕೋಟಿಗೂ ಹೆಚ್ಚು ಇಂಟರ್​ನೆಟ್ ಬಳಕೆದಾರರನ್ನು ಹೊಂದಿರುವ ಸಂದರ್ಭದಲ್ಲಿ ಭಾರತದ ಆ್ಯಪ್​ಗಳಿಂದ ಜಗತ್ತು ಸಕಾರಾತ್ಮಕವಾಗಿ ಬದಲಾಗಲಿದೆ ಎಂಬ ಆಶಾಭಾವನೆಯನ್ನು ಗಣೇಶ್​ ವ್ಯಕ್ತಪಡಿಸಿದರು.

ಬೆಂಗಳೂರು: ಇತ್ತೀಚೆಗೆ ಚೀನಾ ಮೂಲದ ಹಲವಾರು ಆ್ಯಪ್​ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದನ್ನು ಸ್ಟಾರ್ಟ್​ಅಪ್​​ಗಳು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಳ್ಳಬಹುದು ಎಂದು ಸ್ಟಾರ್ಟ್​ಅಪ್​ಗಳ ಹೂಡಿಕೆದಾರ ಕೆ. ಗಣೇಶ್ ಅವರು 'ಈಟಿವಿ ಭಾರತ'ಮೂಲಕ ತಿಳಿಸಿದ್ದಾರೆ.

ಭಾರತ-ಚೀನಾ ಮಧ್ಯೆ ಗಡಿ ವಿವಾದದ ಹಿನ್ನೆಲೆಯಲ್ಲಿ ಹಲವಾರು ಆ್ಯಪ್​ಗಳನ್ನು ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಕ್ರಮ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಚೀನಾ ರಾಷ್ಟ್ರ, ಆ್ಯಪ್ ಮೂಲಕ ಭಾರತೀಯರ ಡೇಟಾ ಸಂಗ್ರಹಿಸುವುದಿಲ್ಲ ಎಂದು ಸಾಬೀತಾಗುವವರೆಗೆ ಈ ನಿರ್ಧಾರ ಅವಶ್ಯಕ ಎಂದರು.

ಇದನ್ನು ಭಾರತ ಮೂಲದ ಸ್ಟಾರ್ಟ್​ಅಪ್​​ಗಳು ಅವಕಾಶವೆಂದು ಪರಿಗಣಿಸಬೇಕು. ಇಲ್ಲಿಯವರೆಗೆ ಡೇಟಾ ಸುರಕ್ಷತೆ ಬಗ್ಗೆ ಅಷ್ಟು ಜಾಗ್ರತೆ ನಮ್ಮ ದೇಶದಲ್ಲಿ ಇರಲಿಲ್ಲ. ಚೀನಾ ದೇಶದಲ್ಲಿ ಆ್ಯಪ್​ಗಳ ಬಗ್ಗೆ ಹೆಚ್ಚು ಪ್ರೋತ್ಸಾಹ ದೊರಕುತ್ತಿದ್ದು, ಅದೇ ರೀತಿ ಭಾರತದಲ್ಲಿ ಆಗಲಿದೆ ಎಂದು ಹೇಳಿದರು.

ಚೀನಾ ಆ್ಯಪ್​ ನಿಷೇಧದ ಸಂದರ್ಭವನ್ನು ಭಾರತದಲ್ಲಿ ಅವಕಾಶವನ್ನಾಗಿ ಪರಿವರ್ತಿಸಬೇಕೆಂದ ಕೆ. ಗಣೇಶ್

ಭಾರತ ಮೂಲದ ಆ್ಯಪ್​ಗಳಾದ ಟ್ರೆಲ್, ರೋಪೋಸೋ ಹಾಗೂ ಶೇರ್ ಚಾಟ್ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಭಾರತ ಮೂಲದ ಆ್ಯಪ್​ಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೆ ವಿಶ್ವದಲ್ಲೂ ಹೆಸರು ಮಾಡಬಹುದು ಎಂದು ತಿಳಿಸಿದರು.

ಹಣಗಳಿಕೆ ಕಷ್ಟ, ಅದೇ ದೊಡ್ಡ ಸವಾಲು:

ಬೇರೆ ದೇಶದ ಆ್ಯಪ್​ಗಳು ಬೇಗ ಹಣ ಗಳಿಸುವುದು ಸುಲಭ. ಅದೇ ಭಾರತದಲ್ಲಿ ಎಷ್ಟೇ ಪ್ರಸಿದ್ಧ ಆ್ಯಪ್​ ಇದ್ದರೂ ಹಣಗಳಿಕೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ 5ಜಿ ತಂತ್ರಜ್ಞಾನ, ಬಹುಭಾಷಾ ಸಾಮರ್ಥ್ಯ ಹೊಂದಿರುವ ಆ್ಯಪ್ ಹಾಗೂ 60 ಕೋಟಿಗೂ ಹೆಚ್ಚು ಇಂಟರ್​ನೆಟ್ ಬಳಕೆದಾರರನ್ನು ಹೊಂದಿರುವ ಸಂದರ್ಭದಲ್ಲಿ ಭಾರತದ ಆ್ಯಪ್​ಗಳಿಂದ ಜಗತ್ತು ಸಕಾರಾತ್ಮಕವಾಗಿ ಬದಲಾಗಲಿದೆ ಎಂಬ ಆಶಾಭಾವನೆಯನ್ನು ಗಣೇಶ್​ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.