ETV Bharat / city

ವೈದ್ಯರ ವಿರುದ್ಧ ದೌರ್ಜನ್ಯ ಆರೋಪ, ನಾಳೆ ರಾಜ್ಯಾದ್ಯಂತ OPD ಸೇವೆ ಸ್ಥಗಿತ - OPD bandh tomorrow : Dr. Venkatachalapath

ವೈದ್ಯರ ಮೇಲಿನ ದೌರ್ಜನ್ಯ ಖಂಡಿಸಿ ನಾಳೆ ಸಂಪೂರ್ಣವಾಗಿ ರಾಜ್ಯಾದ್ಯಂತ ಒಪಿಡಿ ಸೇವೆ ಸ್ಥಗಿತ ಮಾಡ್ತಿದ್ದೀವಿ ಎಂದು ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಾಚಲಪತಿ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಚಲಪತಿ
author img

By

Published : Nov 7, 2019, 5:01 PM IST

Updated : Nov 7, 2019, 7:43 PM IST

ಬೆಂಗಳೂರು: ಕರ್ತವ್ಯನಿರತ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು,ನಾಳೆ ಸಂಪೂರ್ಣವಾಗಿ ಹೋರ ರೋಗಿಗಳ ವಿಭಾಗಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಾಚಲಪತಿ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಚಲಪತಿ

ವೈದ್ಯರ ಮೇಲೆ ಹಲ್ಲೆ ಮಾಡಿದಾಗ ಜನರು ಯಾಕೆ ಸುಮ್ಮನಿರುತ್ತಾರೆ? ಈ ರೀತಿ ಹಲ್ಲೆಯಾದಾಗ ವೈದ್ಯರ ಬೆಂಬಲಕ್ಕೆ ಬರಬೇಕು. ಜನರ ಬೆಂಬಲವಿದ್ದರೆ ಈ ರೀತಿಯ ಹಲ್ಲೆ ನಡೆಯೋದಿಲ್ಲ. ಪ್ರತಿಭಟನಾನಿರತ ವೈದ್ಯರಿಗೆ ನಮ್ಮ ಬೆಂಬಲವಿದೆ. ಆರೋಗ್ಯ ಅಂದ್ರೆ ಏನು ಅಂತ ಜನರಿಗೆ ತೋರಿಸಬೇಕು. ಜನ ಈ ಡಾಕ್ಟರ್ ಇಲ್ಲ ಅಂದ್ರೆ, ಆ ಡಾಕ್ಟರ್ ಅಂತ ಹೋಗ್ತಾರೆ. ಅವರಿಗೆ ವೈದ್ಯರ ಮಹತ್ವದ ಅರಿವು ಮಾಡಿಸಬೇಕಿದೆ. ಹಾಗಾಗಿ ನಾಳೆ 24 ಗಂಟೆ ಒಪಿಡಿ ಸೇವೆಯನ್ನು ನಾವು ಬಂದ್​ ಮಾಡ್ತೀವಿ ಡಾ. ವೆಂಕಟಾಚಲಪತಿ ಆಕ್ರೋಶಭರಿತ ಧ್ವನಿಯಲ್ಲಿ ಹೇಳಿದ್ರು.

ವೈದ್ಯರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಅಶ್ವತ್ ನಾರಾಯಣ ಅವರು ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಷ್ಟಾದರೂ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಬೆಂಗಳೂರು: ಕರ್ತವ್ಯನಿರತ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದ್ದು,ನಾಳೆ ಸಂಪೂರ್ಣವಾಗಿ ಹೋರ ರೋಗಿಗಳ ವಿಭಾಗಗಳ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಾಚಲಪತಿ ಹೇಳಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಚಲಪತಿ

ವೈದ್ಯರ ಮೇಲೆ ಹಲ್ಲೆ ಮಾಡಿದಾಗ ಜನರು ಯಾಕೆ ಸುಮ್ಮನಿರುತ್ತಾರೆ? ಈ ರೀತಿ ಹಲ್ಲೆಯಾದಾಗ ವೈದ್ಯರ ಬೆಂಬಲಕ್ಕೆ ಬರಬೇಕು. ಜನರ ಬೆಂಬಲವಿದ್ದರೆ ಈ ರೀತಿಯ ಹಲ್ಲೆ ನಡೆಯೋದಿಲ್ಲ. ಪ್ರತಿಭಟನಾನಿರತ ವೈದ್ಯರಿಗೆ ನಮ್ಮ ಬೆಂಬಲವಿದೆ. ಆರೋಗ್ಯ ಅಂದ್ರೆ ಏನು ಅಂತ ಜನರಿಗೆ ತೋರಿಸಬೇಕು. ಜನ ಈ ಡಾಕ್ಟರ್ ಇಲ್ಲ ಅಂದ್ರೆ, ಆ ಡಾಕ್ಟರ್ ಅಂತ ಹೋಗ್ತಾರೆ. ಅವರಿಗೆ ವೈದ್ಯರ ಮಹತ್ವದ ಅರಿವು ಮಾಡಿಸಬೇಕಿದೆ. ಹಾಗಾಗಿ ನಾಳೆ 24 ಗಂಟೆ ಒಪಿಡಿ ಸೇವೆಯನ್ನು ನಾವು ಬಂದ್​ ಮಾಡ್ತೀವಿ ಡಾ. ವೆಂಕಟಾಚಲಪತಿ ಆಕ್ರೋಶಭರಿತ ಧ್ವನಿಯಲ್ಲಿ ಹೇಳಿದ್ರು.

ವೈದ್ಯರ ನಿರ್ಲಕ್ಷ್ಯದಿಂದ ಕಣ್ಣು ಕಳೆದುಕೊಂಡವರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಅಶ್ವತ್ ನಾರಾಯಣ ಅವರು ಕಣ್ಣು ಕಳೆದುಕೊಂಡವರಿಗೆ 3 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಇಷ್ಟಾದರೂ ಕರವೇ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.

Intro:ಜನರಿಗೆ ಬುದ್ಧಿ ಕಲಿಸೋಕ್ಕೆ ಓಪಿಡಿ ಸೇವೆ ಸ್ಥಗಿತ ಮಾಡ್ತೀದ್ದೀವಿ- ವೈದ್ಯಕೀಯ ಸಂಘದ ಅಧ್ಯಕ್ಷನಿಂದ ಯದ್ವಾತದ್ವ ಹೇಳಿಕೆ


ಬೆಂಗಳೂರು- ಕರ್ತವ್ಯ ನಿರತ ಕಿರಿಯ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಆದ್ರೆ ಈ ವೇಳೆ ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ ಡಾ.ವೆಂಕಟಚಲಪತಿ ಯದ್ವಾತದ್ವಾ ಹೇಳಿಕೆ ನೀಡಿದ್ದಾರೆ.
ವೈದ್ಯರ ಮೇಲೆ ಹಲ್ಲೆ ಮಾಡಿದಾಗ ಜನ ಯಾಕೆ ಸುಮ್ಮನಿರುತ್ತಾರೆ? ವೈದ್ಯರ ಮೇಲೆ ಹಲ್ಲೆ ಜನರು ಬೆಂಬಲಕ್ಕೆ ಬರಬೇಕು. ಜನರ ಬೆಂಬಲ ಇದ್ದರೆ ಈ ರೀತಿಯ ಹಲ್ಲೆ ನಡೆಯೋದಿಲ್ಲ. ಪ್ರತಿ ಸಲ ವೈದ್ಯರ ಮೇಲೆ ಹಲ್ಲೆ ನಟೆಯುತ್ತಲೇ ಇದೆ. ಹೀಗಾಗಿ ಜನರಿಗೆ
ಜನರಿಗೆ ಬುದ್ಧಿ ಕಲಿಸೋಕ್ಕೆ ನಾಳೆ ಸಂಪೂರ್ಣವಾಗಿ ಓಪಿಡಿ ಸೇವೆ ಸ್ಥಗಿತ ಮಾಡ್ತೀದ್ದೀವಿ ಎಂದರು.
ಪ್ರತಿಭಟನಾ ನಿರತ ವೈದ್ಯರಿಗೆ ನಮ್ಮ ಬೆಂಬಲ ಇದೆ. ಆರೋಗ್ಯ ಅಂದ್ರೆ ಏನು ಅಂತ ಜನರಿಗೆ ತೋರಿಸಬೇಕು. ಈ ಡಾಕ್ಟರ್ ಇಲ್ಲ ಅಂದ್ರೆ ಆ ಡಾಕ್ಟರ್ ಅಂತ ಜನ ಹೋಗ್ತಾರೆ. ಅವರಿಗೆ ವೈದ್ಯರು ಅಂದ್ರೆ ಏನು ಅಂತ ತೋರಿಸಬೇಕು. ಅನ್ಯಾಯ ಆದ ವೈದ್ಯರಿಗೆ ಸಪೋರ್ಟ್ ಆಗಿ ನಾಳೆಯಿಂದ ೨೪ ಗಂಟೆಗಳ ಓಪಿಡಿ ಸೇವೆಯನ್ನು ನಾವು ಬಂದ್ ಮಾಡ್ತಾ ಇದ್ದೀವಿ. ಜನಕ್ಕೆ, ಸರ್ಕಾರಕ್ಕೆ ತಿಳಿಸಲು ಈ ಹೋರಾಟ ಮುಂದುವರೆಸಲಿದ್ದೇವೆ. ನಾವು ಜನಗಳಿಗೋಸ್ಕರ ಕೆಲಸ ಮಾಡ್ತಿರೋದು. ಆದ್ರೆ ವೈದ್ಯರ ಮೇಲೆ ಹಲ್ಲೆ ನಡೆದಾಗ ಜನ ಓಡಿ ಹೋಗ್ತಾರೆ. ಹಲ್ಲೆ ನಡೆದಾಗ ಜನ ವೈದ್ಯರ ಪರ ನಿಲ್ಲಬೇಕು. ಜನ ಸಪೋರ್ಟ್ ಕೊಟ್ಟರೆ ಸರ್ಕಾರ ನಮ್ಮ ಜೊತೆ ಬರುತ್ತೆ. ಡಾಕ್ಟರ್ ಗೆ ಯಾಕೆ ಹೊಡಿತೀರಿ ಅಂತ ಜನ ಕೇಳಬೇಕು. ವೈದ್ಯರಿಗೆ ಬುದ್ಧಿ ಇಲ್ವಾ ೬ ದಿನ ಕೂತು ಪ್ರತಿಭಟನೆ ಮಾಡೋಕ್ಕೆ ಎಂದು ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು.
ಇನ್ನು ವೈದ್ಯರ ನಿರ್ಲಕ್ಷ್ಯದಿಂದ ಕಣ್ಣ ಕಳೆದುಕೊಂಡವರ ಬಗ್ಗೆ ಪ್ರತಿಕ್ರಿಯಿಸಿ, ಅಶ್ವತ್ ನಾರಾಯಣ ಕಣ್ಣು ಕಳೆದುಕೊಂಡವರಿಗೆ ೩ ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ. ಇಷ್ಟಾದರೂ ಕರವೇ ಪ್ರತಿಭಟನೆ ಮಾಡಿದ್ದು ಯಾಕೆ? ಎಂದರು ಪ್ರಶ್ನಿಸಿದರು.


Byte- ಡಾ. ವೆಂಕಟಾಚಲಪತಿ, ಭಾರತೀಯ ವೈದ್ಯಕೀಯ ಸಂಘದ ಬೆಂಗಳೂರು ಅಧ್ಯಕ್ಷ


ಸೌಮ್ಯಶ್ರೀ
Kn_bng_03_Minto_byte_7202707Body:..Conclusion:..
Last Updated : Nov 7, 2019, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.