ಬೆಂಗಳೂರು: ಹಿಜಾಬ್ ಹಾಗೂ ಕೇಸರಿ ಶಾಲು ಎರಡು ಕೂಡಾ ಕಾಲೇಜು ಕ್ಯಾಂಪಸ್ಗೆ ಬರಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ 'ಸಮವಸ್ತ್ರ ನೀತಿ ಸಂಹಿತೆ' ಜಾರಿಗೊಳಿಸಿ ಸರ್ಕಾರ ಆದೇಶಿಸಿದೆ. ಕೋರ್ಟ್ ತೀರ್ಪು ಬರಬೇಕಿದೆ ಎಂದರು.
ಕಾಂಗ್ರೆಸ್ನಲ್ಲಿ ಎರಡು ವರ್ಗವಿದೆ. ಒಂದು ವರ್ಗ ಪ್ರಚೋದನೆ ಮಾಡುತ್ತದೆ. ಮತ್ತೊಂದು ವರ್ಗ ರಾಜಕೀಯವಾಗುತ್ತದೆ ಬೇಡ ಎನ್ನುತ್ತದೆ. ಅವರೇ ದ್ವಂದ್ವ ನಿಲುವು ಹೊಂದಿದ್ದಾರೆ. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ಗೆ ಏನು ಬೇಕೋ ಆ ಸ್ಟೇಟ್ಮೆಂಟ್ ನೀಡಿದ್ದಾರೆ. ಅಲ್ಲಿನ ಎಸ್ಪಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಧ್ವಜ ಇಳಿಸಿಲ್ಲ ಎಂದು ಹೇಳಿದ್ದಾರೆ. ಎಸ್ಪಿ ಹೇಳೋದು ನಿಖರ ಮಾಹಿತಿ. ಡಿಕೆಶಿ ಹೇಳಿದ್ದು ಅಲ್ಲ. ಆದ್ರೆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾರಿಸಿದ್ದು ತಪ್ಪು ಎಂದು ಅವರು ತಿಳಿಸಿದರು.