ETV Bharat / city

ಮಂಡ್ಯ ಕಬ್ಬು ಬೆಳೆಗಾರರ ಸಮಸ್ಯೆಗೆ ಬಿಎಸ್​ವೈ ಈಗಲಾದರೂ ಸ್ಪಂದಿಸಲಿ: ಚಲುವರಾಯಸ್ವಾಮಿ

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗೆ ಈಗಲಾದರೂ ಸ್ಪಂದಿಸಬೇಕು ಎಂದು ಮಾಜಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದ್ದಾರೆ.

author img

By

Published : Oct 6, 2019, 3:48 AM IST

ಮಾಜಿ ಸಚಿವ ಎನ್​. ಚಲುವರಾಯಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗೆ ಈಗಲಾದರೂ ಎಂದು ಸ್ಪಂದಿಸಬೇಕು ಎಂದು ಮಾಜಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಎಸ್​ವೈ ರಾಜ್ಯದ ಎಲ್ಲಾ ಭಾಗವನ್ನು ಸಮಾನ ರೀತಿಯಲ್ಲಿ ಕಾಣಬೇಕು ಎಂದರು. ಇನ್ನು, ಸಿಪಿ ಯೋಗೇಶ್ವರ್​ ಭೇಟಿ ಬಗೆಗಿನ ಊಹಪೋಹಗಳಿಗೆ ತೆರೆ ಎಳೆದ ಅವರು, ನಾನು ಮತ್ತು ಯೋಗೇಶ್ವರ್ ಆಪ್ತರು ಹಾಗೂ ರಾಜಕೀಯ ಮೀರಿದ ಒಡನಾಡಿಗಳು. ಅವರು ನಮ್ಮ ಪಕ್ಕದ ಜಿಲ್ಲೆಯವರು. ಹಾಗಾಗಿ ಆಗಾಗ ಭೇಟಿ ಮಾಡ್ತಾ ಇರ್ತೇವೆ. ಅವರು ಬಿಜೆಪಿಯಲ್ಲಿ ಆರಾಮಾಗಿ ಇದ್ದಾರೆ. ಹಾಗಾಗಿ ನಾನು ಅವರನ್ನು ಕಾಂಗ್ರೆಸ್​ಗೆ ಕರೆ ತರುವ ಪ್ರಯತ್ನ ಮಾಡ್ತಿಲ್ಲ. ಅವರು ನನ್ನನ್ನು ಬಿಜೆಪಿಗೆ ಬಾ ಎಂದು ಹೇಳಿಯೂ ಇಲ್ಲ. ರಾಜಕೀಯ ಮಾಡುವಾಗ ಪಕ್ಕಾ ರಾಜಕೀಯ ಮಾಡ್ತೇವೆ. ಉಳಿದ ಸಮಯದಲ್ಲಿ ನಾವು ಪ್ಲೆಕ್ಸಿಬಲ್ ಆಗಿರ್ತೇವೆ. ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಇಲ್ಲ ಅಂತ ಬಿಜೆಪಿಗೆ ಹೋಗಿದ್ದಾರೆ ಎಂದರು.

ಕೇಂದ್ರದ ನೆರವು ಸಮಾಧಾನಕರವಲ್ಲ..!

ಕೇಂದ್ರ ಸರ್ಕಾರ 1200 ಕೋಟಿ ಮೊತ್ತದ ಪರಿಹಾರ ಧನ ಬಿಡುಗಡೆ ಮಾಡಿದೆ. ಗೃಹ ಸಚಿವ ಅಮಿತ್ ಶಾ ಬಂದು ಹೋದ ತಕ್ಷಣ ಈ ಮೊತ್ತ ನೀಡಿದ್ರೆ ಅನುಕೂಲವಾಗುತ್ತಿತ್ತು. ಈಗ ಕೊಟ್ಟಿರುವ ಹಣದ ಬಗ್ಗೆ ಸಮಾಧಾನ ಏನೂ ಇಲ್ಲ. ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು. ಬೇರೆ ರಾಜ್ಯಕ್ಕೆ ಏನು ಒತ್ತು ಕೊಡುತ್ತಿದ್ದಾರೆ ಬಿಜೆಪಿಯವರು ನಮ್ಮ ರಾಜ್ಯಕ್ಕೂ ಅದೇ ರೀತಿ ಒತ್ತುಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ರೆ ಉತ್ತಮ

ಇನ್ನು, ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ವಿಚಾರd ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಿದ್ರೆ ಉತ್ತಮ. ಪಕ್ಷ, ರಾಜ್ಯ, ಹೋರಾಟದ ವಿಚಾರಕ್ಕೆ ಬಂದ್ರೆ ಸಿದ್ದರಾಮಯ್ಯ ವಿಪಕ್ಷ ನಾಯಕನಾಗೋದು ಉತ್ತಮ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ. ಆದರೆ ನಮ್ಮ ಉನ್ನತ ಮಟ್ಟದ ನಾಯಕರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಅದು ಬೇಗನೆ ಸರಿ ಹೋಗಲಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಂತಹ ಉನ್ನತ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉತ್ತಮ ಎಂದರು.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಗೆ ಈಗಲಾದರೂ ಎಂದು ಸ್ಪಂದಿಸಬೇಕು ಎಂದು ಮಾಜಿ ಸಚಿವ ಎನ್​. ಚಲುವರಾಯಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಎಸ್​ವೈ ರಾಜ್ಯದ ಎಲ್ಲಾ ಭಾಗವನ್ನು ಸಮಾನ ರೀತಿಯಲ್ಲಿ ಕಾಣಬೇಕು ಎಂದರು. ಇನ್ನು, ಸಿಪಿ ಯೋಗೇಶ್ವರ್​ ಭೇಟಿ ಬಗೆಗಿನ ಊಹಪೋಹಗಳಿಗೆ ತೆರೆ ಎಳೆದ ಅವರು, ನಾನು ಮತ್ತು ಯೋಗೇಶ್ವರ್ ಆಪ್ತರು ಹಾಗೂ ರಾಜಕೀಯ ಮೀರಿದ ಒಡನಾಡಿಗಳು. ಅವರು ನಮ್ಮ ಪಕ್ಕದ ಜಿಲ್ಲೆಯವರು. ಹಾಗಾಗಿ ಆಗಾಗ ಭೇಟಿ ಮಾಡ್ತಾ ಇರ್ತೇವೆ. ಅವರು ಬಿಜೆಪಿಯಲ್ಲಿ ಆರಾಮಾಗಿ ಇದ್ದಾರೆ. ಹಾಗಾಗಿ ನಾನು ಅವರನ್ನು ಕಾಂಗ್ರೆಸ್​ಗೆ ಕರೆ ತರುವ ಪ್ರಯತ್ನ ಮಾಡ್ತಿಲ್ಲ. ಅವರು ನನ್ನನ್ನು ಬಿಜೆಪಿಗೆ ಬಾ ಎಂದು ಹೇಳಿಯೂ ಇಲ್ಲ. ರಾಜಕೀಯ ಮಾಡುವಾಗ ಪಕ್ಕಾ ರಾಜಕೀಯ ಮಾಡ್ತೇವೆ. ಉಳಿದ ಸಮಯದಲ್ಲಿ ನಾವು ಪ್ಲೆಕ್ಸಿಬಲ್ ಆಗಿರ್ತೇವೆ. ಯೋಗೇಶ್ವರ್, ಡಿ.ಕೆ.ಶಿವಕುಮಾರ್ ಜೊತೆ ಹೊಂದಾಣಿಕೆ ಇಲ್ಲ ಅಂತ ಬಿಜೆಪಿಗೆ ಹೋಗಿದ್ದಾರೆ ಎಂದರು.

ಕೇಂದ್ರದ ನೆರವು ಸಮಾಧಾನಕರವಲ್ಲ..!

ಕೇಂದ್ರ ಸರ್ಕಾರ 1200 ಕೋಟಿ ಮೊತ್ತದ ಪರಿಹಾರ ಧನ ಬಿಡುಗಡೆ ಮಾಡಿದೆ. ಗೃಹ ಸಚಿವ ಅಮಿತ್ ಶಾ ಬಂದು ಹೋದ ತಕ್ಷಣ ಈ ಮೊತ್ತ ನೀಡಿದ್ರೆ ಅನುಕೂಲವಾಗುತ್ತಿತ್ತು. ಈಗ ಕೊಟ್ಟಿರುವ ಹಣದ ಬಗ್ಗೆ ಸಮಾಧಾನ ಏನೂ ಇಲ್ಲ. ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು. ಬೇರೆ ರಾಜ್ಯಕ್ಕೆ ಏನು ಒತ್ತು ಕೊಡುತ್ತಿದ್ದಾರೆ ಬಿಜೆಪಿಯವರು ನಮ್ಮ ರಾಜ್ಯಕ್ಕೂ ಅದೇ ರೀತಿ ಒತ್ತುಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ರೆ ಉತ್ತಮ

ಇನ್ನು, ಕಾಂಗ್ರೆಸ್​ನಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ವಿಚಾರd ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕನ ಸ್ಥಾನ ನೀಡಿದ್ರೆ ಉತ್ತಮ. ಪಕ್ಷ, ರಾಜ್ಯ, ಹೋರಾಟದ ವಿಚಾರಕ್ಕೆ ಬಂದ್ರೆ ಸಿದ್ದರಾಮಯ್ಯ ವಿಪಕ್ಷ ನಾಯಕನಾಗೋದು ಉತ್ತಮ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ. ಆದರೆ ನಮ್ಮ ಉನ್ನತ ಮಟ್ಟದ ನಾಯಕರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಅದು ಬೇಗನೆ ಸರಿ ಹೋಗಲಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಂತಹ ಉನ್ನತ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ, ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉತ್ತಮ ಎಂದರು.

Intro:newsBody:ಮಂಡ್ಯ ರೈತರ ಬಗ್ಗೆ ಸಿಎಂ ಬಿಎಸ್ ವೈ ಈಗಲಾದರೂ ಸ್ಪಂದಿಸಲಿ: ಚೆಲುವರಾಯಸ್ವಾಮಿ

ಬೆಂಗಳೂರು: ಈಗಲಾದರೂ ಸಿಎಂ ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆಯನ್ನು ರೈತರ ಸಮಸ್ಯೆ ಸ್ಪಂದಿಸಬೇಕು ಎಂದು ಮಾಜಿ ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ನ 7 ಶಾಸಕರಿದ್ದಾರೆ ಅಂತ ಸಿಎಂ ಯಡಿಯೂರಪ್ಪನವರು ಹಾಗೆ ಇರಬಾರದು. ಅವರು ರಾಜ್ಯದ ಎಲ್ಲ ಭಾಗವನ್ನು ಸಮಾನರೀತಿಯಲ್ಲಿ ಕಾಣಬೇಕು ಎಂದು ಹೇಳಿದರು.
ಪಾಂಡವಪುರದಲ್ಲಿ ರೈತ ಆತ್ಮಹತ್ಯೆ ವಿಚಾರ ಮಾತನಾಡಿ, ನಿನ್ನೆ ಕುಮಾರಸ್ವಾಮಿ ಹೋಗಿ ಪ್ರೆಸ್ ಮೀಟ್ ಮಾಡಿದ್ದಾರೆ. ಯಾರೊಬ್ಬರನ್ನು ನಾನು ಹೊಣೆ ಮಾಡಲ್ಲ. ಮಂಡ್ಯದಲ್ಲಿ 2 ಫ್ಯಾಕ್ಟರಿ ಮುಚ್ಚಿದ್ದಾವೆ ಅದರಿಂದ ಕಬ್ಬನ್ನು ಅರೆಯಲು ಆಗುತ್ತಿಲ್ಲ. ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ನಾನು ಮತ್ತು ಯೋಗಿಶ್ವರ್ ಆಪ್ತರು
ನಾನು ಸಿಪಿ ಯೋಗಿಶ್ವರ್ ರಾಜಕೀಯ ಮೀರಿದ ಒಡನಾಡಿಗಳು. ಅವರು ನಮ್ಮ ಪಕ್ಕದ ಜಿಲ್ಲೆಯವರು. ಹಾಗಾಗಿ ಆಗಾಗ ಭೇಟಿ ಮಾಡ್ತಾ ಇರ್ತೇವೆ. ಅವರು ಬಿಜೆಪಿಯಲ್ಲಿ ಆರಾಮಾಗಿ ಇದ್ದಾರೆ. ಹಾಗಾಗಿ ನಾನು ಅವರನ್ನು ಕಾಂಗ್ರೆಸ್ ಗೆ ಕರೆ ತರುವ ಪ್ರಯತ್ನ ಮಾಡ್ತಿಲ್ಲ. ಅವರು ನನ್ನನ್ನು ಬಿಜೆಪಿಗೆ ಬಾ ಎಂದು ಹೇಳಿಯೂ ಇಲ್ಲ. ರಾಜಕೀಯ ಮಾಡುವಾಗ ಪಕ್ಕಾ ರಾಜಕೀಯ ಮಾಡ್ತೇವೆ. ಉಳಿದ ಸಮಯದಲ್ಲಿ ನಾವು ಪ್ಲೆಕ್ಸಿಬಲ್ ಆಗಿರ್ತೇವೆ. ಯೋಗಿಶ್ವರ್ ಡಿಕೆ ಶಿವಕುಮಾರ್ ಜೊತೆ ಹೊಂದಾಣಿಕೆ ಇಲ್ಲ ಅಂತ ಬಿಜೆಪಿಗೆ ಹೋಗಿದ್ದಾರೆ. ಅಲ್ಲಿ ಅವರು ಆರಾಮ್ ಇದ್ದಾರೆ. ಅವರನ್ನು ಕಾಂಗ್ರೆಸ್ ಗೆ ಕರೆದಿಲ್ಲ.
ಕೇಂದ್ರದ ನೆರವು ಸಮಾಧಾನಕರವಲ್ಲ
ಕೇಂದ್ರ ಸರ್ಕಾರ 1200 ಕೋಟಿ ಮೊತ್ತದ ಪರಿಹಾರ ಧನ ಕೊಟ್ಟಿದ್ದಾರೆ. ಗೃಹ ಸಚಿವ ಅಮಿತ್ ಶಾ ಬಂದು ಹೋದ ತಕ್ಷಣ ಈ ಮೊತ್ತ ನೀಡಿದರೆ ಅನುಕೂಲವಾಗುತ್ತಿತ್ತು. ಈಗ ಕೊಟ್ಟಿರುವ ಹಣದ ಬಗ್ಗೆ ಸಮಾಧಾನ ಏನೂ ಇಲ್ಲ. ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಬೇಕು. ಬೇರೆ ರಾಜ್ಯಕ್ಕೆ ಏನು ಒತ್ತು ಕೊಡುತ್ತಿದ್ದಾರೆ ಬಿಜೆಪಿಯವರು ನಮ್ಮ ರಾಜ್ಯಕ್ಕೂ ಅದೇ ರೀತಿ ಒತ್ತುಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯಗೆ ನೀಡಿದರೆ ಉತ್ತಮ
ಕಾಂಗ್ರೆಸ್ ನಲ್ಲಿ ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ ವಿಚಾರ ಮಾತನಾಡಿ, ಸಿದ್ದರಾಮಯ್ಯರಿಗೆ ವಿಪಕ್ಷ ನಾಯಕನ ಸ್ಥಾನ ನೀಡಿದ್ರೆ ಉತ್ತಮ. ಪಕ್ಷ, ರಾಜ್ಯ, ಹೋರಾಟದ ವಿಚಾರಕ್ಕೆ ಬಂದ್ರೆ ಸಿದ್ದರಾಮಯ್ಯ ವಿಪಕ್ಷ ನಾಯಕನಾಗೋದು ಉತ್ತಮ. ಸಿದ್ದರಾಮಯ್ಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಾರೆ. ಆದರೆ ನಮ್ಮ ಉನ್ನತ ಮಟ್ಟದ ನಾಯಕರು ಸ್ವಲ್ಪ ಭಿನ್ನಾಭಿಪ್ರಾಯ ಇದೆ. ಅದು ಬೇಗನೆ ಸರಿಹೋಗಲಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಅವರಂತಹ ಉನ್ನತ ನಾಯಕರು ಒಟ್ಟಾಗಿ ಕುಳಿತು ಚರ್ಚಿಸಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಉತ್ತಮ ಎಂದಿದ್ದಾರೆ.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.