ETV Bharat / city

ನಿನಗೇ ಮತ ಹಾಕದವರು, ನೀನು ಹೇಳಿದವರಿಗೆ ವೋಟ್​ ಹಾಕ್ತಾರಾ ಅಣ್ಣಾ... ಬೇಗ್​ ಕಾಲೆಳೆದ ಡಿಕೆಶಿ

author img

By

Published : Nov 29, 2019, 6:45 PM IST

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ ನಡೆಸಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

D.k.Shivakumar election campaign in Bangalore
ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಮಾತನಾಡಲ್ಲ. ಅವರು, ನಮ್ಮ ಲೆವೆಲ್ ಅಲ್ಲವೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ನಡೆಸಿದ ರೋಡ್ ಶೋನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಜಾಪ್ರಭುತ್ವವನ್ನು ತಲೆತಗ್ಗಿಸುವ ಕೆಲಸ ಮಾಡಿದೆ. ಉಪಚುನಾಣೆ ನಂತರ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ನಾವು ಇಳಿಸುವುದಿಲ್ಲ. ಅವರ ಕಡೆಯವರೇ ಇಳಿಸುತ್ತಾರೆ. ಅದಕ್ಕೆ ಟೈಮ್​​ ಹೇಳಲ್ಲ. ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಸಂತೆಯಲ್ಲಿ ಕುರಿ, ಕೋಳಿ ರೀತಿ ಶಾಸಕರನ್ನು ಖರೀದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ

ರೋಷನ್ ಬೇಗ್​​​ಗೆ ಟಿಕೆಟ್ ಕೊಟ್ಟರೆ ಮತ ಹಾಕಲ್ಲ ಎಂದು ಬಿಜೆಪಿ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅದ್ರೂ ಬೇಗ್​​ ಬಿಜೆಪಿ ಪರ ಪ್ರಚಾರಕ್ಕೆ ಹೋಗ್ತಿದ್ದಾರೆ. ನಿನಗೆ ವೋಟ್ ಹಾಕದ ಜನ, ನೀನು ಹೇಳಿದವರಿಗೆ ವೋಟ್ ಹಾಕ್ತಾರಾ ರೋಷನ್ ಬೇಗ್ ಅಣ್ಣಾ ಎಂದು ಕಾಲೆಳೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಜ್ವಾನ್, ಶಿವಾಜಿನಗರದ ಮತದಾರರು ನನ್ನ ಮೇಲೆ ಒಲವು ತೋರಿದ್ದಾರೆ. ಅಲ್ಲದೆ ಡಿ.ಕೆ. ಶಿವಕುಮಾರ್ ಅವರು ನನಗೆ ಬೆಂಬಲ ಸೂಚಿಸಿದ್ದು, ಬಲ ಬಂದಂತಾಗಿದೆ. ಖಂಡಿತ ಗೆಲುವು ನನ್ನದೇ ಎಂದರು.

ಶಿವಾಜಿನಗರ ಕೈ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಕ್ರೇನ್ ಮೂಲಕ ಬೃಹತ್ ಹೂವಿನಹಾರ ಹಾಕಿ, ಪಟಾಕಿ ಸಿಡಿಸಿದ್ರು. ರೋಡ್ ಶೋನಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಹಾಗೂ ಹಾಸ್ಯನಟ ಸಾಧು ಕೋಕಿಲ ಭಾಗವಹಿಸಿದ್ದರು.

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಮಾತನಾಡಲ್ಲ. ಅವರು, ನಮ್ಮ ಲೆವೆಲ್ ಅಲ್ಲವೆಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವಸಂತ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ನಡೆಸಿದ ರೋಡ್ ಶೋನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಜಾಪ್ರಭುತ್ವವನ್ನು ತಲೆತಗ್ಗಿಸುವ ಕೆಲಸ ಮಾಡಿದೆ. ಉಪಚುನಾಣೆ ನಂತರ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ನಾವು ಇಳಿಸುವುದಿಲ್ಲ. ಅವರ ಕಡೆಯವರೇ ಇಳಿಸುತ್ತಾರೆ. ಅದಕ್ಕೆ ಟೈಮ್​​ ಹೇಳಲ್ಲ. ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಸಂತೆಯಲ್ಲಿ ಕುರಿ, ಕೋಳಿ ರೀತಿ ಶಾಸಕರನ್ನು ಖರೀದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್​ ಅರ್ಷದ್​​ ಪರ ರೋಡ್ ಶೋ

ರೋಷನ್ ಬೇಗ್​​​ಗೆ ಟಿಕೆಟ್ ಕೊಟ್ಟರೆ ಮತ ಹಾಕಲ್ಲ ಎಂದು ಬಿಜೆಪಿ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಅದ್ರೂ ಬೇಗ್​​ ಬಿಜೆಪಿ ಪರ ಪ್ರಚಾರಕ್ಕೆ ಹೋಗ್ತಿದ್ದಾರೆ. ನಿನಗೆ ವೋಟ್ ಹಾಕದ ಜನ, ನೀನು ಹೇಳಿದವರಿಗೆ ವೋಟ್ ಹಾಕ್ತಾರಾ ರೋಷನ್ ಬೇಗ್ ಅಣ್ಣಾ ಎಂದು ಕಾಲೆಳೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಿಜ್ವಾನ್, ಶಿವಾಜಿನಗರದ ಮತದಾರರು ನನ್ನ ಮೇಲೆ ಒಲವು ತೋರಿದ್ದಾರೆ. ಅಲ್ಲದೆ ಡಿ.ಕೆ. ಶಿವಕುಮಾರ್ ಅವರು ನನಗೆ ಬೆಂಬಲ ಸೂಚಿಸಿದ್ದು, ಬಲ ಬಂದಂತಾಗಿದೆ. ಖಂಡಿತ ಗೆಲುವು ನನ್ನದೇ ಎಂದರು.

ಶಿವಾಜಿನಗರ ಕೈ ಕಾರ್ಯಕರ್ತರು ಡಿ ಕೆ ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಕ್ರೇನ್ ಮೂಲಕ ಬೃಹತ್ ಹೂವಿನಹಾರ ಹಾಕಿ, ಪಟಾಕಿ ಸಿಡಿಸಿದ್ರು. ರೋಡ್ ಶೋನಲ್ಲಿ ಜೇವರ್ಗಿ ಶಾಸಕ ಅಜಯ್ ಸಿಂಗ್ ಹಾಗೂ ಹಾಸ್ಯನಟ ಸಾಧು ಕೋಕಿಲ ಭಾಗವಹಿಸಿದ್ದರು.

Intro:ಬಿಜೆಪಿ ಅಭ್ಯರ್ಥಿ ಬಗ್ಗೆ ನಾನು ಮಾತನಾಡಲ್ಲ. ಅವ್ರು ನಮ್ಮ ಲೆವೆಲ್ ಅಲ್ಲ ಎಂದು ಮಾಜಿ ಸಚಿವ ಡಿಕೆಶಿವಕುಮಾರ್ ಹೇಳಿದ್ದಾರೆ.ವಸಂತನಗರದಲ್ಲಿ ಇಂದು ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ರೋಡ್ ಶೋ ಮೂಲಕ ಪ್ರಚಾರ ಮಾಡಿದ ಟ್ರಬಕ್ ಶೂಟರ್ ಡಿಕೆ ಶಿವಕುಮಾರ್ ಬಿಜೆಪಿ ವಿರುದ್ದ ಗುಡುಗಿದರು.
ಬಿಜೆಪಿ ಪ್ರಜಾಪ್ರಭುತ್ವವನ್ನು ತಲೆತಗ್ಗಿಸುವ ಕೆಲಸ ಮಾಡಿದೆ.
ಉಪಚುನಾಣೆ ನಂತರ ಯಡಿಯೂರಪ್ಪ ಅವರನ್ನು ನಾವೇನು ಅಧಿಕಾರದಿಂದ ಇಳಿಸಬೇಕಿಲ್ಲ.ಐದರ ನಂತರ ಅವ್ರಕಡೆಯವರೆ
ಇಳಿಸ್ತಾರೆ.ನಾನು ಇವಾಗಲೇ ಅದಕ್ಕೆ ಟೈಂ ಹೇಳಲ್ಲ. ಬಿಜೆಪಿ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಸಂತೆಯಲ್ಲಿ ಕುರಿ,ಕೋಳಿ ರೀತಿಶಾಸಕರನ್ನುಖರೀದಿಮಾಡಿದ್ದಾರೆ.
ರೋಷನ್ ಬೇಗ್ ಗೆ ಟಿಕೆಟ್ ಕೊಟ್ರೆ ಜನ ನಮಗೆ ಮತ ಹಾಕಲ್ಲ ಅಂತ ,ಬಿಜೆಪಿ ರೋಷನ್ ಬೇಗ್ ಅವರಿಗೆ ಟಿಕೆಟ್ ಕೊಟ್ಟಿಲ್ಲ.
ಅದ್ರು ರೋಷನ್ ಬೇಗ್ ಬಿಜೆಪಿ ಪರ ಪ್ರಚಾರಕ್ಕೆ ಹೋಗ್ತಿದ್ದಾರೆ
.ನಿನಗೆ ವೋಟ್ ಹಾಕದ ಜನ ನೀನು ಹೇಳಿದವರಿಗೆ ವೋಟ್ ಹಾಕ್ತಾರ ರೋಷನ್ ಬೇಗ್ ಅಣ್ಣಾ ಎಂದು ಡಿಕೆಶಿ ರೋಷನ್ ಬೇಗ್ ಕಾಲೆಳೆದರು.ಯಾರು ತಾಯಿಗೆ ವಂಚಿಸಿದ್ದಾರೆ ಅವ್ರಿಗೆ ಮತದಾರ ಪಾಠ ಕಲಿಸ್ತಾನೆ.ನಿಮ್ಮ ಸೇವೆಗೆ ಸೋನಿಯಾ ಗಾಂಧಿ ಅವರು ಒಳ್ಳೆ ಯುವ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅದ್ದರಿಂದ ಶಿವಾಜಿನಗರ ಮತದಾರರು ರಿಜ್ವಾನ್ ಆರ್ಷದ್ ಗೆ ಮತದಾನ ಮಾಡಿ ವಿಧಾನ ಸೌದಕ್ಕೆ ಕಳಿಸಿಕೊಡಿ ಎಂದು ಡಿಕೆ ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ರು.ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಿಜ್ವಾನ್ ಶಿವಾಜಿನಗರದ ಮತದಾರರು ನನ್ನ ಮೇಲೆ ಒಲವು ತೋರಿದ್ದಾರೆ.ಅಲ್ಲದೆ ಇಂದು ನಮ್ಮ ಪಕ್ಷದ ಹಿರಿಯ ನಾಯಕರಾದ ಡಿಕೆ ಶಿವಕುಮಾರ್ ನನಗೆ ಬೆಂಬಲ ಸೂಚಿಸಿರುವುದು ನನಗೆಸಂತೋಷದವಿಷಯವಾಗಿದೆ
.ನಾನು ಖಂಡಿತ ಈ ಚುನಾವಣೆಯಲ್ಲಿ ಗೆಲ್ತೇನೆ.ನಮ್ಮ ಪಕ್ಷದ ಎಲ್ಲಾ ನಾಯಕರು ನನ್ನ ಜೊತೆ ಇದ್ದಾರೆ ಎಂದು ರಿಜ್ವಾನ್ ಹೇಳಿದ್ರು.


Body:ಇನ್ನೂ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದ ಶಿವಾಜಿನಗರ ಕೈ ಕಾರ್ಯಕರ್ತರು,
ಕ್ರೇನ್ ಮೂಲಕ ಬೃಹತ್ ಹೂವುನ‌ಹಾರ ಹಾಕುವ ಮೂಲಕ ,ಪಟಾಕಿ ಸಿಡಿದಿ ಕನಕಪುರ ಬಂಡೆಗೆ ಭರ್ಜರಿಯಾಗಿ ಸ್ವಾಗತ ಮಾಡಿದ್ರು.ಅಲ್ಲದೆ ರಸ್ತೆಯುದ್ದಕ್ಕೂ ಬ್ಯಾಂಡ್ ಸೆಟ್ ತಮಟೆ ವಾದ್ಯಕ್ಕೆ ಸ್ಟೆಪ್ ಹಾಕಿದ ಕೈ ಕಾರ್ಯಕರ್ತರು. ಭರ್ಜರಿಯಾಗಿ ರೋಡ್ ಶೋ ಮಾಡಿದ್ರು. ಇನ್ನೂ ಈ ರೋಡ್ ಶೋ ನಲ್ಲಿ ಕೈ ಅಭ್ಯರ್ಥಿ ರಿಜ್ವಾನ್ ಹರ್ಷದ್ ,ಜೇವರ್ಗಿ ಶಾಸಕ ಅಜಯ್ ಸಿಂಗ್, ಹಾಗೂ ಹಾಸ್ಯ ನಟ ಸಾಧು ಕೋಕಿಲ ಭಾಗವಹಿಸಿ ರಿಜ್ವಾನ್ ಪರ ಮತಯಾಚನೆ ಮಾಡಿದ್ರು.

ಸತೀಶ ಎಂಬಿ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.