ETV Bharat / city

ಉಪಚುನಾವಣೆಗೆ ರಣತಂತ್ರ: ಅನರ್ಹ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಗುಪ್ತ ಸಭೆ

author img

By

Published : Sep 21, 2019, 5:28 PM IST

Updated : Sep 21, 2019, 7:36 PM IST

ಉಪ ಚುನಾವಣೆ ದಿನಾಂಕ ಅಕ್ಬೋಬರ್‌ 21ಕ್ಕೆ ನಿಗದಿಯಾಗಿದ್ದು, ಅನರ್ಹ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಗುಪ್ತ ಸಭೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಅನರ್ಹ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಗುಪ್ತ ಸಭೆ

ಬೆಂಗಳೂರು: ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅನರ್ಹ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಗುಪ್ತ ಸಭೆ ನಡೆಸಿದರು.

ಸದಾಶಿವ ನಗರದ ಬಳಿಯಿರುವ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಬಿ ಸಿ ಪಾಟೀಲ್, ಮುನಿರತ್ನ, ಸೋಮಶೇಖರ್, ಆರ್​,ಶಂಕರ್, ನಾರಾಯಣ ಗೌಡ, ಸುಧಾಕರ್, ಹೆಚ್ ವಿಶ್ವನಾಥ್, ಬೈರತಿ ಬಸವರಾಜು, ಗೋಪಾಲಯ್ಯ ಹಾಗೂ ರೋಶನ್ ಬೇಗ್ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.

ಅನರ್ಹ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಗುಪ್ತ ಸಭೆ

ಮಧ್ಯಾಹ್ನ 3 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜೊತೆಗೆ ವಿವಿಧ ನಿಯೋಗಗಳ ಭೇಟಿಗೆ ಸಮಯ‌ ನಿಗದಿ ಆಗಿತ್ತು. ಆದರೆ ಅದನ್ನು ಬದಿಗೊತ್ತಿ, ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಅನರ್ಹರ ಮುಂದಿನ ನಡೆಗಳೇನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಕಾನೂನು ಹೋರಾಟ ಕುರಿತು ಮಹತ್ವದ ಚರ್ಚೆ:

ಈಗಾಗಲೇ ಉಪ ಚುನಾವಣೆ ದಿನಾಂಕ ಅ. 21ಕ್ಕೆ ಘೋಷಣೆಯಾಗಿರುವುದರಿಂದ ಅನರ್ಹ ಶಾಸಕರ ಮುಂದಿನ ಕಾನೂನು ಹೋರಾಟದ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಇದಕ್ಕಾಗಿಯೇ ಸಭೆಗೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿಯವರನ್ನು ಕರೆಸಿಕೊಂಡು ಕಾನೂನು ಸಲಹೆ ಪಡೆದಿದ್ದಾರೆ. ಅಲ್ಲದೆ ಸಭೆಗೆ ಕಾನೂನು ಹಾಗೂ ‌ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಕೂಡ ಬಂದಿದ್ದರು. ಕಾನೂನು ಹೋರಾಟದ ಕುರಿತು ‌ಮಾಧುಸ್ವಾಮಿಯಿಂದ ಅಭಿಪ್ರಾಯ ಪಡೆಯಲಾಗಿದೆ.

ಬೆಂಗಳೂರು: ಉಪ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅನರ್ಹ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಗುಪ್ತ ಸಭೆ ನಡೆಸಿದರು.

ಸದಾಶಿವ ನಗರದ ಬಳಿಯಿರುವ ಅರಣ್ಯ ಇಲಾಖೆಯ ಅತಿಥಿ ಗೃಹದಲ್ಲಿ ಬಿ ಸಿ ಪಾಟೀಲ್, ಮುನಿರತ್ನ, ಸೋಮಶೇಖರ್, ಆರ್​,ಶಂಕರ್, ನಾರಾಯಣ ಗೌಡ, ಸುಧಾಕರ್, ಹೆಚ್ ವಿಶ್ವನಾಥ್, ಬೈರತಿ ಬಸವರಾಜು, ಗೋಪಾಲಯ್ಯ ಹಾಗೂ ರೋಶನ್ ಬೇಗ್ ಜೊತೆ ಸಿಎಂ ಮಾತುಕತೆ ನಡೆಸಿದ್ದಾರೆ.

ಅನರ್ಹ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಗುಪ್ತ ಸಭೆ

ಮಧ್ಯಾಹ್ನ 3 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜೊತೆಗೆ ವಿವಿಧ ನಿಯೋಗಗಳ ಭೇಟಿಗೆ ಸಮಯ‌ ನಿಗದಿ ಆಗಿತ್ತು. ಆದರೆ ಅದನ್ನು ಬದಿಗೊತ್ತಿ, ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಅನರ್ಹರ ಮುಂದಿನ ನಡೆಗಳೇನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಕಾನೂನು ಹೋರಾಟ ಕುರಿತು ಮಹತ್ವದ ಚರ್ಚೆ:

ಈಗಾಗಲೇ ಉಪ ಚುನಾವಣೆ ದಿನಾಂಕ ಅ. 21ಕ್ಕೆ ಘೋಷಣೆಯಾಗಿರುವುದರಿಂದ ಅನರ್ಹ ಶಾಸಕರ ಮುಂದಿನ ಕಾನೂನು ಹೋರಾಟದ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಇದಕ್ಕಾಗಿಯೇ ಸಭೆಗೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿಯವರನ್ನು ಕರೆಸಿಕೊಂಡು ಕಾನೂನು ಸಲಹೆ ಪಡೆದಿದ್ದಾರೆ. ಅಲ್ಲದೆ ಸಭೆಗೆ ಕಾನೂನು ಹಾಗೂ ‌ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಕೂಡ ಬಂದಿದ್ದರು. ಕಾನೂನು ಹೋರಾಟದ ಕುರಿತು ‌ಮಾಧುಸ್ವಾಮಿಯಿಂದ ಅಭಿಪ್ರಾಯ ಪಡೆಯಲಾಗಿದೆ.

Intro:ಅನರ್ಹ ಶಾಸಕರ ಜೊತೆ ಸಿಎಂ ಯಡಿಯೂರಪ್ಪ ಗುಪ್ತ ಸಭೆ- ಅಡ್ವೋಕೇಟ್ ಜನರಲ್ ರಿಂದ ಕಾನೂನು ಸಲಹೆ ಪಡೆಯುತ್ತಿರುವ ಸಿಎಂ


ಬೆಂಗಳೂರು- ಉಪಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಅನರ್ಹ ಶಾಸಕರ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಗುಪ್ತ ಸಭೆ ನಡೆಸುತ್ತಿದ್ದಾರೆ.
ಸದಾಶಿವನಗರದ ಬಳಿಯಿರುವ ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಸುತ್ತಿದ್ದಾರೆ. ಸಿಎಂ ಸಭೆಯ ಹಿನ್ನಲೆ ಇತರೆ ವಾಹನಗಳ ಪ್ರವೇಶ ನಿರಾಕರಿಸಲಾಗಿದೆ.
ಬಿ ಸಿ ಪಾಟೀಲ್, ಮುನಿರತ್ನ, ಸೋಮಶೇಖರ್, ಶಂಕರ್, ನಾರಾಯಣ ಗೌಡ, ಸುಧಾಕರ್, ಎಚ್ ವಿಶ್ವನಾಥ್, ಬೈರತಿ ಬಸವರಾಜು, ಗೋಪಾಲಯ್ಯ, ರೋಶನ್ ಬೇಗ್ ಜೊತೆಗೆ ಸಭೆ ನಡೆಸುತ್ತಿದ್ದಾರೆ.
ಗೆಸ್ಟ್ ಹೌಸ್ ಒಳಗೆ ಹೋಗಿ ಮತ್ತೆ ವಾಪಸ್ಸು ಹೊರಟ ಎಸ್ ಆರ್ ವಿಶ್ವನಾಥ್, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ವಿವಿಧ ಸಭೆಗಳನ್ನು ಬದಿಗೊತ್ತಿ ಅನರ್ಹ ಶಾಸಕರ ಜೊತೆ ಸಿಎಂ ಸಭೆ ನಡೆಸುತ್ತಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜೊತೆಗೆ ವಿವಿಧ ನಿಯೋಗಗಳ ಭೇಟಿಗೆ ಸಮಯ‌ ನಿಗದಿ ಆಗಿತ್ತು. ಇದೀಗ ಆ ನಿಯೋಗಗಳ ಸಭೆ ವಿಷಯ ಬಿಟ್ಟು ಅನರ್ಹರ ಜೊತೆ ಸಭೆ ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿ ಅಮಿತ್ ಶಾ ಜೊತೆ ವಿಡಿಯೋ ಸಂವಾದ ಬಳಿಕ ನೇರವಾಗಿ ಫಾರೆಸ್ಟ್ ಐಬಿಗೆ ಸಿಎಂ ಆಗಮಿಸಿದರು.
ಚುನಾವಣೆ ಘೋಷಣೆಯಾಗಿರುವ ಹಿನ್ನಲೆ ಅನರ್ಹರ ಮುಂದಿನ ನಡೆಗಳೇನಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.


ಕಾನೂನು ಹೋರಾಟ ಕುರಿತು ಮಹತ್ವದ ಚರ್ಚೆ


ಈಗಾಗಲೇ ಚುನಾವಣೆ ದಿನಾಂಕ ಅಕ್ಟೋಬರ್ 21 ಕ್ಕೆಂದು ಘೋಷಣೆಯಾಗಿರುವುದರಿಂದ ಅನರ್ಹ ಶಾಸಕರ ಮುಂದಿನ ಕಾನೂನು ಹೋರಾಟದ ಕುರಿತು ಮಹತ್ವದ ಚರ್ಚೆ ನಡೆಸಲಾಗುತ್ತಿದೆ. ಸಭೆಗೆ ಅಡ್ವೋಕೇಟ್ ಜನರಲ್
ಪ್ರಭುಲಿಂಗ ನಾವಡಗಿಯವರನ್ನು ಕರೆಸಿಕೊಂಡು ಕಾನೂನು ಸಲಹೆ ಪಡೆಯಲಾಗುತ್ತಿದೆ.
ಅಲ್ಲದೆ ಸಭೆಗೆ ಕಾನೂನು ಹಾಗೂ ‌ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಆಗಮಿಸಿದ್ದಾರೆ. ಕಾನೂನು ಹೋರಾಟದ ಕುರಿತು ‌ಮಾಧುಸ್ವಾಮಿಯಿಂದ ಅಭಿಪ್ರಾಯ ಪಡೆಯಲಾಗುತ್ತಿದೆ.




ಸೌಮ್ಯಶ್ರೀ
Kn_bng_03_cm_meeting_7202707
Body:..Conclusion:..
Last Updated : Sep 21, 2019, 7:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.