ETV Bharat / city

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡೋದಿಲ್ಲ.. ಸಿಎಂ ಬಿಎಸ್‌ವೈ ಭರವಸೆ

author img

By

Published : Oct 12, 2019, 7:47 PM IST

ಶಾಸಕರ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದ್ದಾರೆ.

ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸರಿಪಡಿಸುವುದಾಗಿ ಬಿಎಸ್​ವೈ ಭರವಸೆ..!


ಬೆಂಗಳೂರು: ಶಾಸಕರ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದರು.

ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸರಿಪಡಿಸುವುದಾಗಿ ಬಿಎಸ್​ವೈ ಭರವಸೆ!

ವಿತ್ತೀಯ ಕಾರ್ಯಕಲಾಪದಲ್ಲಿ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದಾಗ, ಕಾಂಗ್ರೆಸ್-ಜೆಡಿಎಸ್​ನ ಹಲವು ಶಾಸಕರು ಅನುದಾನ ಕಡಿತ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಕೂಡ ಆಕ್ಷೇಪಿಸಿ ಮಾತನಾಡಿದಾಗ, ಸದನದಲ್ಲಿ ಗದ್ದಲ, ಗೊಂದಲ ಉಂಟಾಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕಾಗಿ ತಾತ್ಕಾಲಿಕವಾಗಿ ಅನುದಾನ ಬಿಡುಗಡೆಗೆ ತಡೆ ನೀಡಲಾಗಿದೆ. ಮುಂದೆ ತಾರತಮ್ಯವಾಗದಂತೆ ಸರಿಪಡಿಸುವುದಾಗಿ ಹೇಳಿದರು.

ಯಾವುದೇ ತಾರತಮ್ಮವಿಲ್ಲದೆ ಅನುದಾನ ಹಂಚಿಕೆ ಸರಿಪಡಿಸುವುದಾಗಿ ಹೇಳಿದರು. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಅನುದಾನ ಹಂಚಿಕೆ ವಿಚಾರದಲ್ಲಿ ವಾಗ್ವಾದ ಏರಿದ ದನಿಯಲ್ಲಿ ಮುಂದುವರೆದಿತ್ತು. ಆಗ ಮತ್ತೆ ಮಾತನಾಡಿದ ಬಿಎಸ್​ವೈ, ಈಗಾಗಲೇ ವ್ಯತ್ಯಾಸ ಸರಿಪಡಿಸುವುದಾಗಿ ಭರವಸೆ ನೀಡಿದ್ದೇನೆ. ಶಾಸಕರಿಗೆ ಆತಂಕ ಬೇಡ. ಈ ಬಗ್ಗೆ ಚರ್ಚೆ ಮುಂದುವರೆಸುವುದು ಬೇಡ ಎಂದರು.


ಬೆಂಗಳೂರು: ಶಾಸಕರ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದರು.

ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಸರಿಪಡಿಸುವುದಾಗಿ ಬಿಎಸ್​ವೈ ಭರವಸೆ!

ವಿತ್ತೀಯ ಕಾರ್ಯಕಲಾಪದಲ್ಲಿ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದಾಗ, ಕಾಂಗ್ರೆಸ್-ಜೆಡಿಎಸ್​ನ ಹಲವು ಶಾಸಕರು ಅನುದಾನ ಕಡಿತ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಕೂಡ ಆಕ್ಷೇಪಿಸಿ ಮಾತನಾಡಿದಾಗ, ಸದನದಲ್ಲಿ ಗದ್ದಲ, ಗೊಂದಲ ಉಂಟಾಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕಾಗಿ ತಾತ್ಕಾಲಿಕವಾಗಿ ಅನುದಾನ ಬಿಡುಗಡೆಗೆ ತಡೆ ನೀಡಲಾಗಿದೆ. ಮುಂದೆ ತಾರತಮ್ಯವಾಗದಂತೆ ಸರಿಪಡಿಸುವುದಾಗಿ ಹೇಳಿದರು.

ಯಾವುದೇ ತಾರತಮ್ಮವಿಲ್ಲದೆ ಅನುದಾನ ಹಂಚಿಕೆ ಸರಿಪಡಿಸುವುದಾಗಿ ಹೇಳಿದರು. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಅನುದಾನ ಹಂಚಿಕೆ ವಿಚಾರದಲ್ಲಿ ವಾಗ್ವಾದ ಏರಿದ ದನಿಯಲ್ಲಿ ಮುಂದುವರೆದಿತ್ತು. ಆಗ ಮತ್ತೆ ಮಾತನಾಡಿದ ಬಿಎಸ್​ವೈ, ಈಗಾಗಲೇ ವ್ಯತ್ಯಾಸ ಸರಿಪಡಿಸುವುದಾಗಿ ಭರವಸೆ ನೀಡಿದ್ದೇನೆ. ಶಾಸಕರಿಗೆ ಆತಂಕ ಬೇಡ. ಈ ಬಗ್ಗೆ ಚರ್ಚೆ ಮುಂದುವರೆಸುವುದು ಬೇಡ ಎಂದರು.

Intro:ಬೆಂಗಳೂರು : ಶಾಸಕರ ಕ್ಷೇತ್ರಗಳ ಅನುದಾನ ಹಂಚಿಕೆಯಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಭರವಸೆ ನೀಡಿದರು.Body:ವಿತ್ತೀಯ ಕಾರ್ಯಕಲಾಪದಲ್ಲಿ ಅನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ ಎಂದಾಗ, ಕಾಂಗ್ರೆಸ್-ಜೆಡಿಎಸ್ನ ಹಲವು ಶಾಸಕರು ಅನುದಾನ ಕಡಿತ ಮಾಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕರು ಕೂಡ ಆಕ್ಷೇಪಿಸಿ ಮಾತನಾಡಿದಾಗ, ಸದನದಲ್ಲಿ ಗದ್ದಲ, ಗೊಂದಲ ಉಂಟಾಯಿತು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬೇರೆ ಬೇರೆ ಕಾರಣಕ್ಕಾಗಿ ತಾತ್ಕಾಲಿಕವಾಗಿ ಅನುದಾನ ಬಿಡುಗಡೆಗೆ ತಡೆ ನೀಡಲಾಗಿದೆ. ಮುಂದೆ ತಾರತಮ್ಯವಾಗದಂತೆ ಸರಿಪಡಿಸುವುದಾಗಿ ಹೇಳಿದರು.
ಯಾವುದೇ ಭೇದಭಾವವಿಲ್ಲದೆ ಅನುದಾನ ಹಂಚಿಕೆಯಲ್ಲಿ ಸರಿಪಡಿಸುವುದಾಗಿ ಹೇಳಿದರು. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಅನುದಾನ ಹಂಚಿಕೆ ವಿಚಾರದಲ್ಲಿ ವಾಗ್ವಾದ ಏರಿದ ದನಿಯಲ್ಲಿ ಮುಂದುವರೆದಿತ್ತು. ಆಗ ಮತ್ತೆ ಮಾತನಾಡಿದ ಬಿಎಸ್ ವೈ, ಈಗಾಗಲೇ ವ್ಯತ್ಯಾಸ ಸರಿಪಡಿಸುವುದಾಗಿ ಭರವಸೆ ನೀಡಿದ್ದೇನೆ. ಶಾಸಕರಿಗೆ ಆತಂಕ ಬೇಡ. ಈಗಲೂ ಚರ್ಚೆ ಮುಂದುವರೆಸುವುದು ಬೇಡ ಎಂದರು.
ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಮುಖ್ಯಮಂತ್ರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ, ಗೊಂದಲ ಬೇಡ, ಚರ್ಚೆ ಮುಂದುವರೆಸುವುದು ಬೇಡ ಎಂದು ಸಮಾಧಾನ ಪಡಿಸುವ ಯತ್ನ ಮಾಡಿದರು. ಆದರೂ ಕೂಡ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರ ನಡುವೆ ಅನುದಾನ ಹಂಚಿಕೆ ಕುರಿತು ಪರಸ್ಪರ ವಾಗ್ವಾದ ಮುಂದುವರೆದಾಗ ಅಸಮಾಧಾನಗೊಂಡ ಮುಖ್ಯಮಂತ್ರಿ ನೀವೇನೇನೂ ಮಾಡಿದ್ದೀರಿ. ಹೇಳಲಾ, ಕಥೆ ಹೇಳುವುದು ಬೇಡ, ಭರವಸೆ ನೀಡಿದ ಮೇಲೆ ಮತ್ತೆ ಚರ್ಚೆ ಏಕೆ ಎಂದು ಆಕ್ರೋಶ ಭರಿತರಾದರು.
ಕಾಂಗ್ರೆಸ್ ಪಕ್ಷದ ಪಿ.ಟಿ.ಪರಮೇಶ್ವರ್ ನಾಯಕ್, ಭೀಮಾನಾಯಕ್, ಶಿವಣ್ಣ, ಜೆಡಿಎಸ್ನ ಆರ್.ಮಂಜುನಾಥ್ ಸೇರಿದಂತೆ ಹಲವು ಸದಸ್ಯರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಟೆಂಡರ್ ಆಗಿ ಕೆಲಸ ಪ್ರಾರಂಭವಾಗಿರುವುದನ್ನು ನಿಲ್ಲಿಸಲಾಗಿದೆ ಎಂದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಹಣಕಾಸು ವಿಧೇಯಕಕ್ಕೆ ಅನುಮೋದನೆ ಕೊಟ್ಟರೆ ಮೇಲ್ಮನೆಗೆ ಹೋಗಿ ಬರುವವರೆಗೂ ಕಾಲಾವಕಾಶವಿರುತ್ತದೆ ಎಂದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಐದು ನಿಮಿಷದಲ್ಲಿ ಶಾಸಕರ ಸಮಸ್ಯೆ ಬಗೆಹರಿಸಬಹುದು. ಸಮಯ ವ್ಯರ್ಥ ಮಾಡುವುದು ಬೇಡ ಎಂದರು.
ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ವೈಟ್ ಟಾಪಿಂಗ್ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಅದರ ಬಗ್ಗೆ ತನಿಖೆ ಮಾಡಲು ತಮ್ಮದೇನು ಅಭ್ಯಂತರವಿಲ್ಲ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಾರೆ 2,017 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಈ ಸರ್ಕಾರ ಬಂದ ಮೇಲೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಿ ವಿರೋಧ ಪಕ್ಷಗಳ ಕ್ಷೇತ್ರದ ಶಾಸಕರಿಗೆ ತಲಾ 250 ಕೋಟಿ ರೂ.ಗಳಿಗೆ ಇಳಿಕೆ ಮಾಡಿದ್ದಾರೆ ಎಂದು ಏರಿದ ದನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿ, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಸಾವಿರ ಕೋಟಿ ರೂ. ಕೊಡಲಿ ತಮ್ಮದೇನು ಅಭ್ಯಂತರವಿಲ್ಲ. ಆದರೆ ಹಿಂದಿನ ಸರ್ಕಾರ ನೀಡಿರುವ ಅನುದಾನ ಕಡಿತ ಮಾಡಿರುವುದು ಸರಿಯಲ್ಲ ಎಂದರು.
ವಸತಿ ಸಚಿವ ಸೋಮಣ್ಣ ಮಾತನಾಡಿ, ಮೈತ್ರಿ ಸರ್ಕಾರದ ಅವಧಿಯಲ್ಲಿ ಸಂಪುಟ ಸಭೆ ಒಪ್ಪಿಗೆ ನೀಡಿದ್ದರೂ, ಆನಂತರ ಅನುದಾನ ನೀಡಿಕೆ ವಿಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ಆಡಳಿತ ಪಕ್ಷದ ಸಿದ್ದು ಸವದಿ ಮಾತನಾಡಿ ನಿಮ್ಮ ಸರ್ಕಾರದಲ್ಲಿ ನಮಗೆ ಅನುದಾನ ಕೊಟ್ಟಿಲ್ಲ. ತಾರತಮ್ಯ ಮಾಡಿರುವುದು ನೀವೇ ಎಂದು ಪ್ರತಿಪಕ್ಷದ ಶಾಸಕರನ್ನು ಛೇಡಿಸಿದರು.
ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯಕ್ ಮಾತನಾಡಿ, ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಅನುದಾನ ಕಡಿತ ಮಾಡಿರುವುದು ಏನು ಎಂದರು.
ಆಗ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, 2017-18ರಲ್ಲಿ ನಮ್ಮ ಕ್ಷೇತ್ರದಲ್ಲಿ ಸೊನ್ನೆ ಕೊಟ್ಟಿದಿರಿ ಎಂದು ಆಕ್ಷೇಪಿಸಿದರು. ಆಗ ಶಾಸಕ ರಾಮಲಿಂಗಾರೆಡ್ಡಿ ನಾವು ಕೊಟ್ಟಿಲ್ಲ ಎಂದು ನೀವು ಕೊಡುವುದಿಲ್ಲವೇ ಎಂದಾಗ, ಸತೀಶ್ರೆಡ್ಡಿ, ರಾಮಲಿಂಗಾರೆಡ್ಡಿ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.
ಒಂದು ಹಂತದಲ್ಲಿ ಶಾಸಕಿ ಸೌಮ್ಯರೆಡ್ಡಿ ಫಲಕವೊಂದನ್ನು ಪ್ರದರ್ಶಿಸಿ ಅನುದಾನ ಕಡಿತ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯವರು ಸಮಚಿತ್ತದಿಂದ ಎಲ್ಲಾ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಸರಿಪಡಿಸುವ ಭರವಸೆಯನ್ನೂ ನೀಡಿದ್ದಾರೆ ಎಂದು ಹೇಳುತ್ತಾ, 28 ಕ್ಷೇತ್ರಗಳಿಗೆ 2013-14ರಿಂದ 2018-19ರವರೆಗೆ ನೀಡಲಾಗಿದ್ದ ಅನುದಾನ ಮಾಹಿತಿಯನ್ನು ನೀಡಿದರು.
ಬೊಮ್ಮನಹಳ್ಳಿಗೆ 476 ಕೋಟಿ ರೂ., ರಾಜರಾಜೇಶ್ವರಿ ನಗರಕ್ಕೆ 1273ಕೋಟಿ ರೂ., ಬಿಟಿಎಂ ಲೇಔಟ್ಗೆ 868 ಕೋಟಿ ರೂ., ಬ್ಯಾಟರಾಯನಪುರಕ್ಕೆ 969 ಕೋಟಿ ರೂ., ಹೀಗೆ ಪ್ರತಿಕ್ಷೇತ್ರದ ಅಂಕಿಅಂಶ ನೀಡಿದರು.
ಆಗ ಸತೀಶ್ರೆಡ್ಡಿ ಒಂದೊಂದು ಕ್ಷೇತ್ರಕ್ಕೆ 800 ರಿಂದ 900 ಕೋಟಿ ರೂ. ನೀಡಿದ್ದರೆ ನಮ್ಮ ಕ್ಷೇತ್ರಕ್ಕೆ ಕೇವಲ 400 ಕೋಟಿ ರೂ. ನೀಡದ್ದಾರೆ ಎಂದು ಆಕ್ಷೇಪಿಸಿದರು. ಈ ಹಂತದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಹೆಚ್ಚು ತೆರಿಗೆ ನೀಡುತ್ತಿರುವುದು ಮಹದೇವಪುರ ಕ್ಷೇತ್ರ, ಆದರೆ ಕೊಡುತ್ತಿರುವುದು ಕಸ, ಕೊಳಚೆ ನೀರು. ಕಳೆದ ವರ್ಷ ಅನುದಾನವನ್ನೇ ಕೊಟ್ಟಿಲ್ಲ. ಅನ್ಯಾಯವಾಗಿದ್ದರೆ ಮುಖ್ಯಮಂತ್ರಿಯವರ ಬಳಿ ಕೇಳಿ ಸರಿಪಡಿಸುತ್ತಾರೆ. ಬೆಂಗಳೂರು ಸಮಗ್ರ ಅಭಿವೃದ್ಧಿಯಾದರೆ ರಾಜ್ಯದ ಅಭಿವೃದ್ಧಿಯೂ ಆಗುತ್ತದೆ ಎಂದರು.
ಆಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲಾ ಕ್ಷೇತ್ರದ ಶಾಸಕರು ಲಿಂಬಾವಳಿ ವಿರುದ್ಧ ತಿರುಗಿಬಿದ್ದರು. ಮತ್ತೆ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಅವಧಿಯಲ್ಲಿ ಸಾಧ್ಯವಾದಷ್ಟು ವಾಸ್ತವಾಂಶದ ತೀರ್ಮಾನವನ್ನು ಕೈಗೊಂಡಿದ್ದೇವೆ. ಕೆಲವೊಂದು ವ್ಯತ್ಯಾಸ ಆಗಿರಬಹುದು. ಯಶವಂತಪುರ ಮತ್ತು ದಾಸರಹಳ್ಳಿ ವಿಧಾನಸಭಾಕ್ಷೇತ್ರದಲ್ಲಿ ಅತಿವೃಷ್ಠಿಯಿಂದ ಜನರು ಬೀದಿಗೆ ಬಂದಿದ್ದಾರೆ. ಬೆಂಗಳೂರು ನಗರದ ಶಾಸಕರ ಸಭೆ ಕರೆದು ಅಸಮಾಧಾನ ಹೋಗಲಾಡಿಸುವ ರೀತಿಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಸಲಹೆ ಮಾಡಿದರು. ಆಗ ಮುಖ್ಯಮಂತ್ರಿಗಳು ಸಮಸ್ಯೆ ಸರಿಪಡಿಸುವ ಭರವಸೆ ಈಗಾಗಲೇ ನೀಡಿದ್ದೇನೆ ಎಂದಾಗ ಅನುದಾನ ಹಂಚಿಕೆ ತಾರತಮ್ಯದ ವಿಚಾರದ ಚರ್ಚೆಗೆ ತೆರೆ ಬಿದ್ದಿತು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.