ETV Bharat / city

ಮೇಲ್ಮನೆ ರದ್ದುಗೊಳಿಸುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದೇಕೆ? - ವಿಧಾನಸಭೆಯಲ್ಲಿ ನಡೆದ ಸಂವಿಧಾನ ಮೇಲಿನ ವಿಶೇಷ ಚರ್ಚೆ

ಮೇಲ್ಮನೆ ರದ್ದುಗೊಳಿಸವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ. ಜೆಡಿಎಸ್​ ಶಾಸಕ ರಾಮಸ್ವಾಮಿ ಅಭಿಪ್ರಾಯಕ್ಕೆ ಸಚಿವ ಮಾಧುಸ್ವಾಮಿ ಹಾಗೂ ಈಶ್ವರಪ್ಪ ಆಕ್ಷೇಪ.

assembly debate on the abolition of the upper house
ವಿಧಾನಸಭೆ
author img

By

Published : Mar 5, 2020, 4:37 AM IST

ಬೆಂಗಳೂರು: ಮೇಲ್ಮನೆ ತನ್ನ ಉದ್ದೇಶ ಮರೆತ‌ ಮೇಲೆ ಅದು ಉಳಿಯಬೇಕಾ? ಅಂತ ಯೋಚಿಸಬೇಕಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ನಡೆದ ಸಂವಿಧಾನದ ಮೇಲಿನ ವಿಶೇಷ ಚರ್ಚೆ

ವಿಧಾನಸಭೆಯಲ್ಲಿ ನಡೆದ ಸಂವಿಧಾನ ಮೇಲಿನ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ಮೇಲ್ಮನೆ ಮೌಲ್ಯ ಕಳೆದುಕೊಂಡಿದೆ. ತನ್ನ ಸ್ಥಾನ, ಜವಾಬ್ದಾರಿಯನ್ನು ಮೇಲ್ಮನೆ ಮರೆತಿದೆ. ಮೇಲ್ಮನೆ ಈಗ ಹಿರಿಯರ ಮನೆಯಾಗಿ ಉಳಿದಿಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ವಿಧಾನಸಭೆಯಲ್ಲಿ ನಿಂತು ವಿಧಾನಪರಿಷತ್ ರದ್ದತಿ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಕೆಳಮನೆಯಿಂದಲೇ ಮೇಲ್ಮನೆ ರಚನೆಯಾಗಿದೆ. ಹಾಗಾಗಿ ಅದರ ಬಗ್ಗೆ ಪರಾಮರ್ಶೆ ಮಾಡಿದರೆ ತಪ್ಪೇನಿಲ್ಲ ಎಂದು ಎ.ಟಿ.ರಾಮಸ್ವಾಮಿಗೆ ಸಾಥ್ ನೀಡಿದರು. ಈ‌ ವೇಳೆ ಮಧ್ಯೆ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ತು ನೂರಕ್ಕೆ ನೂರು ವಿಫಲವಾಗಿಲ್ಲ. ಎಲ್ಲೋ ಒಂದು ಕಡೆ ವೈಫಲ್ಯ ಆಗಿರಬಹುದು. ಅದನ್ನು ಹೇಗೆ ದುರಸ್ತಿ ಮಾಡಬಹುದು ಎಂಬುದನ್ನು ಯೋಚಿಸೋಣ. ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು: ಮೇಲ್ಮನೆ ತನ್ನ ಉದ್ದೇಶ ಮರೆತ‌ ಮೇಲೆ ಅದು ಉಳಿಯಬೇಕಾ? ಅಂತ ಯೋಚಿಸಬೇಕಿದೆ ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅಭಿಪ್ರಾಯಪಟ್ಟರು.

ವಿಧಾನಸಭೆಯಲ್ಲಿ ನಡೆದ ಸಂವಿಧಾನದ ಮೇಲಿನ ವಿಶೇಷ ಚರ್ಚೆ

ವಿಧಾನಸಭೆಯಲ್ಲಿ ನಡೆದ ಸಂವಿಧಾನ ಮೇಲಿನ ವಿಶೇಷ ಚರ್ಚೆ ವೇಳೆ ಮಾತನಾಡಿದ ಅವರು, ಮೇಲ್ಮನೆ ಮೌಲ್ಯ ಕಳೆದುಕೊಂಡಿದೆ. ತನ್ನ ಸ್ಥಾನ, ಜವಾಬ್ದಾರಿಯನ್ನು ಮೇಲ್ಮನೆ ಮರೆತಿದೆ. ಮೇಲ್ಮನೆ ಈಗ ಹಿರಿಯರ ಮನೆಯಾಗಿ ಉಳಿದಿಲ್ಲ ಎಂದರು. ಆಗ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ವಿಧಾನಸಭೆಯಲ್ಲಿ ನಿಂತು ವಿಧಾನಪರಿಷತ್ ರದ್ದತಿ ಬಗ್ಗೆ ಮಾತಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಕೆಳಮನೆಯಿಂದಲೇ ಮೇಲ್ಮನೆ ರಚನೆಯಾಗಿದೆ. ಹಾಗಾಗಿ ಅದರ ಬಗ್ಗೆ ಪರಾಮರ್ಶೆ ಮಾಡಿದರೆ ತಪ್ಪೇನಿಲ್ಲ ಎಂದು ಎ.ಟಿ.ರಾಮಸ್ವಾಮಿಗೆ ಸಾಥ್ ನೀಡಿದರು. ಈ‌ ವೇಳೆ ಮಧ್ಯೆ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ವಿಧಾನಪರಿಷತ್ತು ನೂರಕ್ಕೆ ನೂರು ವಿಫಲವಾಗಿಲ್ಲ. ಎಲ್ಲೋ ಒಂದು ಕಡೆ ವೈಫಲ್ಯ ಆಗಿರಬಹುದು. ಅದನ್ನು ಹೇಗೆ ದುರಸ್ತಿ ಮಾಡಬಹುದು ಎಂಬುದನ್ನು ಯೋಚಿಸೋಣ. ಅದನ್ನು ಮುಚ್ಚುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.