ETV Bharat / city

ಯುವತಿ ಮೇಲೆ ಆ್ಯಸಿಡ್ ದಾಳಿ: ಪಾಗಲ್ ಪ್ರೇಮಿಯ ಪೋಷಕರು ಪೊಲೀಸ್​​ ವಶಕ್ಕೆ

author img

By

Published : Apr 30, 2022, 12:53 PM IST

ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ​ ಪ್ರೇಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಪಾಗಲ್ ಪ್ರೇಮಿಯ ಪೋಷಕರನ್ನು ಕಾಮಾಕ್ಷಿ ಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Acid attack on a woman in Bengaluru
ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದಲಿ ಪಾಗಲ್ ಪ್ರೇಮಿ ನಾಗೇಶ್ ಸಹೋದರ ಹಾಗೂ ಪೋಷಕರನ್ನು ಕಾಮಾಕ್ಷಿ ಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಬಳಿಕ ಆರೋಪಿ ನಾಗೇಶ್ ಅಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದನಂತೆ.

ಪ್ರಕರಣದ ಬಳಿಕ ಪರಾರಿಯಾಗಿ ಮಾಗಡಿ ಸಮೀಪದಲ್ಲಿ ಅಡಗಿದ್ದ ನಾಗೇಶ್ ಅಣ್ಣ ರಮೇಶ್ ಬಾಬು ಹಾಗೂ ಆತನ ತಂದೆ ತಾಯಿಯನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಇವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ, ನಾಗೇಶ್ ಪೋಷಕರು 'ಆತನ ಕೃತ್ಯದಿಂದ ಭಯಭೀತರಾಗಿ ನಾವೆಲ್ಲರೂ ಮನೆ ಬಿಟ್ಟು ಓಡಿ ಹೋಗಿದ್ದೆವು' ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ತೀವ್ರ ವಿಚಾರಣೆ ಮುಂದುವರೆದಿದೆ. ಆದರೆ, ಆರೋಪಿ ನಾಗೇಶ್ ಇದುವರೆಗೂ ನಾಪತ್ತೆಯಾಗಿಯೇ ಉಳಿದಿದ್ದು, ಪೋಷಕರ ಮಾಹಿತಿ ಮೂಲಕ ಆತನ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ...!

ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದಲಿ ಪಾಗಲ್ ಪ್ರೇಮಿ ನಾಗೇಶ್ ಸಹೋದರ ಹಾಗೂ ಪೋಷಕರನ್ನು ಕಾಮಾಕ್ಷಿ ಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಬಳಿಕ ಆರೋಪಿ ನಾಗೇಶ್ ಅಣ್ಣನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದನಂತೆ.

ಪ್ರಕರಣದ ಬಳಿಕ ಪರಾರಿಯಾಗಿ ಮಾಗಡಿ ಸಮೀಪದಲ್ಲಿ ಅಡಗಿದ್ದ ನಾಗೇಶ್ ಅಣ್ಣ ರಮೇಶ್ ಬಾಬು ಹಾಗೂ ಆತನ ತಂದೆ ತಾಯಿಯನ್ನ ವಶಕ್ಕೆ ಪಡೆಯಲಾಗಿದೆ. ಸದ್ಯ ಇವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ, ನಾಗೇಶ್ ಪೋಷಕರು 'ಆತನ ಕೃತ್ಯದಿಂದ ಭಯಭೀತರಾಗಿ ನಾವೆಲ್ಲರೂ ಮನೆ ಬಿಟ್ಟು ಓಡಿ ಹೋಗಿದ್ದೆವು' ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ತೀವ್ರ ವಿಚಾರಣೆ ಮುಂದುವರೆದಿದೆ. ಆದರೆ, ಆರೋಪಿ ನಾಗೇಶ್ ಇದುವರೆಗೂ ನಾಪತ್ತೆಯಾಗಿಯೇ ಉಳಿದಿದ್ದು, ಪೋಷಕರ ಮಾಹಿತಿ ಮೂಲಕ ಆತನ ಪತ್ತೆಗೆ ಬಲೆ ಬೀಸಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ...!

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.