ETV Bharat / city

ದ್ವಿತೀಯ ಪಿಯುಸಿ ಫಲಿತಾಂಶದಿಂದ 762 ವಿದ್ಯಾರ್ಥಿಗಳು ವಂಚಿತ; ಆಗಸ್ಟ್‌ನಲ್ಲಿ ಪರೀಕ್ಷೆಗೆ ಅವಕಾಶ

762 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಹಾಗೂ ಆನ್​ಲೈನ್​ ಶಾಲೆಗೆ ಹಾಜರಾಗಿಲ್ಲ ಎಂದು ಖಾಸಗಿ ಕಾಲೇಜುಗಳು ಪರೀಕ್ಷೆಗೆ ನೋಂದಣಿಯೇ ಮಾಡಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿಲ್ಲ. ಈ 762 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶುಲ್ಕ ಪಾವತಿ ಬಾಕಿ ಇದ್ದರೆ ಅದನ್ನು ಪಾವತಿಸಿ ಕಾಲೇಜಿನಿಂದ ಅನುಮತಿ ಪಡೆದುಕೊಂಡು ಬಂದರೆ ಆಗಸ್ಟ್​ನಲ್ಲಿ ಪರೀಕ್ಷೆಗೆ ಕೂರಬಹುದು.

author img

By

Published : Jul 23, 2021, 4:59 PM IST

Updated : Jul 23, 2021, 7:12 PM IST

ದ್ವಿತೀಯ ಪಿಯುಸಿ ಫಲಿತಾಂಶದಿಂದ ವಂಚಿತರಾಗಿದ್ದ 762 ವಿದ್ಯಾರ್ಥಿಗಳು
ದ್ವಿತೀಯ ಪಿಯುಸಿ ಫಲಿತಾಂಶದಿಂದ ವಂಚಿತರಾಗಿದ್ದ 762 ವಿದ್ಯಾರ್ಥಿಗಳು

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20ರಂದು ಪ್ರಕಟಗೊಂಡಿತ್ತು. ಆದರೆ ಖಾಸಗಿ ಕಾಲೇಜುಗಳ ತಂತ್ರದಿಂದ ಬರೋಬ್ಬರಿ 762 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಅಂದಹಾಗೆ, ಈ 762 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಹಾಗೂ ಆನ್​ಲೈನ್​ ಶಾಲೆಗೆ ಹಾಜರಾಗಿಲ್ಲ ಎಂದು ಖಾಸಗಿ ಕಾಲೇಜುಗಳು ಪರೀಕ್ಷೆಗೆ ನೋಂದಣಿಯೇ ಮಾಡಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿಲ್ಲ. ಆದರೆ ದಾಖಲಾತಿ ಆಧಾರದ ಮೇಲೆ ಇವರಿಗೆ ಹಾಲ್ ಟಿಕೆಟ್​ ಕಳಿಸಲಾಗಿತ್ತು‌.

ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್

ಪಿಯು ಬೋರ್ಡ್ ಮೊದಲು ಹಾಲ್ ಟಿಕೆಟ್ ನೀಡಿತ್ತು.‌ ಆದರೆ ಕಾಲೇಜುಗಳು ಪರೀಕ್ಷೆಗೆ ನೋಂದಣಿ ಮಾಡದೇ ಎಸ್ಎಸ್ಎಲ್​ಸಿ ಹಾಗೂ ಪಿಯು ಪ್ರಥಮ ವರ್ಷದ ಅಂಕ ಹಾಗೂ ಶೈಕ್ಷಣಿಕ ವರ್ಷದ ಹಾಜರಾತಿ ಅಂಕಗಳನ್ನ ನೀಡದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡದೇ ಫೇಲ್ ಮಾಡಲಾಗಿದೆ‌.‌

ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಇಲಾಖೆ:

ಶುಲ್ಕ ಕಟ್ಟಿಲ್ಲ ಅಂತ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೂಡಲು ಕಾಲೇಜುಗಳು ಮುಂದಾಗಿದ್ದವು. ಆದರೆ ಪದವಿ ಪೂರ್ವ ಕಾಲೇಜು ಇದನ್ನು ವಿಶೇಷ ಸಂದರ್ಭ ಅಂತ ಪರಿಗಣಿಸಿ ಒಟ್ಟು 762 ವಿದ್ಯಾರ್ಥಿಗಳಿಗೆ ಆಗಸ್ಟ್​ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡು ಹಾಜರಾಗಲು ಅವಕಾಶ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್, Fees not paid ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಿರಲಿಲ್ಲ. ಈ ಎಲ್ಲ ವಿದ್ಯಾರ್ಥಿಗಳು ಕಾಲೇಜು ಶುರುವಾದಾಗ ದಾಖಲು ಮಾಡಿಕೊಂಡಿದ್ದು, ನಂತರ ಕಾರಣಾಂತರಗಳಿಂದ ಶುಲ್ಕ ಕಟ್ಟಿಲ್ಲ. ತರಗತಿಗಳಿಗೂ ಹಾಜರಾಗಿಲ್ಲ. ಈ 762 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶುಲ್ಕ ಪಾವತಿ ಬಾಕಿ ಇದ್ದರೆ ಅದನ್ನ ಪಾವತಿಸಿ ಕಾಲೇಜಿನಿಂದ ಅನುಮತಿ ಪಡೆದುಕೊಂಡು ಬಂದರೆ ಆಗಸ್ಟ್​ನಲ್ಲಿ ಪರೀಕ್ಷೆಗೆ ಕೂರಬಹುದು ಎಂದರು.

ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಕಾರಣದಿಂದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಫಲಿತಾಂಶ ಜುಲೈ 20ರಂದು ಪ್ರಕಟಗೊಂಡಿತ್ತು. ಆದರೆ ಖಾಸಗಿ ಕಾಲೇಜುಗಳ ತಂತ್ರದಿಂದ ಬರೋಬ್ಬರಿ 762 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.

ಅಂದಹಾಗೆ, ಈ 762 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಹಾಗೂ ಆನ್​ಲೈನ್​ ಶಾಲೆಗೆ ಹಾಜರಾಗಿಲ್ಲ ಎಂದು ಖಾಸಗಿ ಕಾಲೇಜುಗಳು ಪರೀಕ್ಷೆಗೆ ನೋಂದಣಿಯೇ ಮಾಡಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಕ್ಕಿಲ್ಲ. ಆದರೆ ದಾಖಲಾತಿ ಆಧಾರದ ಮೇಲೆ ಇವರಿಗೆ ಹಾಲ್ ಟಿಕೆಟ್​ ಕಳಿಸಲಾಗಿತ್ತು‌.

ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್

ಪಿಯು ಬೋರ್ಡ್ ಮೊದಲು ಹಾಲ್ ಟಿಕೆಟ್ ನೀಡಿತ್ತು.‌ ಆದರೆ ಕಾಲೇಜುಗಳು ಪರೀಕ್ಷೆಗೆ ನೋಂದಣಿ ಮಾಡದೇ ಎಸ್ಎಸ್ಎಲ್​ಸಿ ಹಾಗೂ ಪಿಯು ಪ್ರಥಮ ವರ್ಷದ ಅಂಕ ಹಾಗೂ ಶೈಕ್ಷಣಿಕ ವರ್ಷದ ಹಾಜರಾತಿ ಅಂಕಗಳನ್ನ ನೀಡದ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡದೇ ಫೇಲ್ ಮಾಡಲಾಗಿದೆ‌.‌

ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟ ಇಲಾಖೆ:

ಶುಲ್ಕ ಕಟ್ಟಿಲ್ಲ ಅಂತ ವಿದ್ಯಾರ್ಥಿಗಳ ಭವಿಷ್ಯ ಬಲಿ ಕೂಡಲು ಕಾಲೇಜುಗಳು ಮುಂದಾಗಿದ್ದವು. ಆದರೆ ಪದವಿ ಪೂರ್ವ ಕಾಲೇಜು ಇದನ್ನು ವಿಶೇಷ ಸಂದರ್ಭ ಅಂತ ಪರಿಗಣಿಸಿ ಒಟ್ಟು 762 ವಿದ್ಯಾರ್ಥಿಗಳಿಗೆ ಆಗಸ್ಟ್​ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡು ಹಾಜರಾಗಲು ಅವಕಾಶ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್, Fees not paid ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಿರಲಿಲ್ಲ. ಈ ಎಲ್ಲ ವಿದ್ಯಾರ್ಥಿಗಳು ಕಾಲೇಜು ಶುರುವಾದಾಗ ದಾಖಲು ಮಾಡಿಕೊಂಡಿದ್ದು, ನಂತರ ಕಾರಣಾಂತರಗಳಿಂದ ಶುಲ್ಕ ಕಟ್ಟಿಲ್ಲ. ತರಗತಿಗಳಿಗೂ ಹಾಜರಾಗಿಲ್ಲ. ಈ 762 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶುಲ್ಕ ಪಾವತಿ ಬಾಕಿ ಇದ್ದರೆ ಅದನ್ನ ಪಾವತಿಸಿ ಕಾಲೇಜಿನಿಂದ ಅನುಮತಿ ಪಡೆದುಕೊಂಡು ಬಂದರೆ ಆಗಸ್ಟ್​ನಲ್ಲಿ ಪರೀಕ್ಷೆಗೆ ಕೂರಬಹುದು ಎಂದರು.

Last Updated : Jul 23, 2021, 7:12 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.