ETV Bharat / city

ವಿಜಯನಗರ ಜಿಲ್ಲೆ ರಚನೆಗೆ ಒಪ್ಪಿಗೆ ಕೊಟ್ರೆ ಬೆಂಕಿ ಹೊತ್ತಿಕೊಳ್ಳುತ್ತೆ: ರೆಡ್ಡಿ ಎಚ್ಚರಿಕೆ

author img

By

Published : Oct 1, 2019, 5:34 AM IST

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಶಾಸಕ ಸೋಮಶೇಖರ್ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದ್ರೆ ಇಡೀ ಅಖಂಡ ಬಳ್ಳಾರಿ ಬೆಂಕಿಯಲ್ಲಿ ಹೊತ್ತಿಕೊಂಡು ಬಿಡುತ್ತೆ ಎಂದಿದ್ದಾರೆ.

Galli Somashekhara Reddy

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಪ್ರಸ್ತಾವನೆಗೆ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ಸಿಕ್ಕರೆ ಇಡೀ ಅಖಂಡ ಬಳ್ಳಾರಿಯೇ ಬೆಂಕಿಯಲ್ಲಿ ಹೊತ್ತಿಕೊಂಡು ಬಿಡುತ್ತೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕ ಆನಂದ ಸಿಂಗ್ ಅವರ ಸ್ವಹಿತಾಸಕ್ತಿಗೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡೋದು ಬೇಡ. ಹಾಗೊಂದು ವೇಳೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬಂದು ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಅನುಮೋದನೆ ದೊರೆತಿದ್ದೇ ಆದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಶಾಸಕ ರೆಡ್ಡಿ ತಿಳಿಸಿದ್ದಾರೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನ ಯಾರದೋ ಸ್ವಾರ್ಥಕ್ಕಾಗಿ ಒಡೆಯಬಾರದು. ಅಖಂಡ ಜಿಲ್ಲೆಯಾಗಿ ಬಳ್ಳಾರಿ ಉಳಿಯಬೇಕು. ನಾವೆಲ್ಲ ಅಣ್ಣ- ತಮ್ಮಂದಿರ ತರ ಇದ್ದೇವೆ. ಸಚಿವ ಸಂಪುಟದ ಸಭೆಯಲ್ಲಿ ಸಚಿವ ಶ್ರೀ ರಾಮುಲು ಕೂಡ ಭಾಗಿಯಾಗಿ ವಿರೋಧ ವ್ಯಕ್ತಪಡಿಸ್ತಾರೆ. ಈ ವಿಚಾರ ಚರ್ಚೆಗೆ ಬರೋಲ್ಲ. ನನಗೆ ಸಿಎಂ ಯಡಿಯೂರಪ್ಪ ಅವರು ಕೂಡ ಫೋನ್ ಮಾಡಿದ್ರು. ನಾನು ಸಂತೋಷ್ ಅವರಿಗೆ ಸಹ ಕರೆ ಮಾಡಿ ಮಾಹಿತಿ ನೀಡಿರುವೆ ಎಂದರು.

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಪ್ರಸ್ತಾವನೆಗೆ ಸಚಿವ ಸಂಪುಟದ ಸಭೆಯಲ್ಲಿ ಅನುಮೋದನೆ ಸಿಕ್ಕರೆ ಇಡೀ ಅಖಂಡ ಬಳ್ಳಾರಿಯೇ ಬೆಂಕಿಯಲ್ಲಿ ಹೊತ್ತಿಕೊಂಡು ಬಿಡುತ್ತೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿಯಲ್ಲಿ ಮಾತನಾಡಿದ ಅವರು, ಅನರ್ಹ ಶಾಸಕ ಆನಂದ ಸಿಂಗ್ ಅವರ ಸ್ವಹಿತಾಸಕ್ತಿಗೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡೋದು ಬೇಡ. ಹಾಗೊಂದು ವೇಳೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬಂದು ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಅನುಮೋದನೆ ದೊರೆತಿದ್ದೇ ಆದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ ಎಂದು ಶಾಸಕ ರೆಡ್ಡಿ ತಿಳಿಸಿದ್ದಾರೆ.

ಅಖಂಡ ಬಳ್ಳಾರಿ ಜಿಲ್ಲೆಯನ್ನ ಯಾರದೋ ಸ್ವಾರ್ಥಕ್ಕಾಗಿ ಒಡೆಯಬಾರದು. ಅಖಂಡ ಜಿಲ್ಲೆಯಾಗಿ ಬಳ್ಳಾರಿ ಉಳಿಯಬೇಕು. ನಾವೆಲ್ಲ ಅಣ್ಣ- ತಮ್ಮಂದಿರ ತರ ಇದ್ದೇವೆ. ಸಚಿವ ಸಂಪುಟದ ಸಭೆಯಲ್ಲಿ ಸಚಿವ ಶ್ರೀ ರಾಮುಲು ಕೂಡ ಭಾಗಿಯಾಗಿ ವಿರೋಧ ವ್ಯಕ್ತಪಡಿಸ್ತಾರೆ. ಈ ವಿಚಾರ ಚರ್ಚೆಗೆ ಬರೋಲ್ಲ. ನನಗೆ ಸಿಎಂ ಯಡಿಯೂರಪ್ಪ ಅವರು ಕೂಡ ಫೋನ್ ಮಾಡಿದ್ರು. ನಾನು ಸಂತೋಷ್ ಅವರಿಗೆ ಸಹ ಕರೆ ಮಾಡಿ ಮಾಹಿತಿ ನೀಡಿರುವೆ ಎಂದರು.

Intro:ಪ್ರತ್ಯೇಕ ಜಿಲ್ಲೆ ರಚನೆ ಪ್ರಸ್ತಾವನೆ ಮಂಡನೆಯಾದ್ರೆ ಇಡೀ ಅಖಂಡ ಬಳ್ಳಾರಿಯೇ ಬೆಂಕಿ ಹೊತ್ತಿ ಹುರಿಯುತ್ತೆ….
ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಪ್ರಸ್ತಾವನೆ ಸಚಿವ ಸಂಪುಟದ ಸಭೆಯಲ್ಲಿ ಮಂಡನೆಯಾದ್ರೆ ಇಡೀ ಅಖಂಡ ಬಳ್ಳಾರಿ ಯೇ ಬೆಂಕಿ ಹೊತ್ತಿಕೊಂಡು ಬಿಡುತ್ತೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ಪರೋಕ್ಷವಾಗಿ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಬಳ್ಳಾರಿಯಲ್ಲಿಂದು ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಅನರ್ಹ ಶಾಸಕ ಆನಂದಸಿಂಗ್ ಅವರ ಸ್ವ ಹಿತಾಸಕ್ತಿಗೆ ಅಖಂಡ ಬಳ್ಳಾರಿ ಜಿಲ್ಲೆಯನ್ನು ಇಬ್ಭಾಗ ಮಾಡೋದು ಬ್ಯಾಡ. ಹಾಗೊಂದು ವೇಳೆ ಸಚಿವ ಸಂಪುಟದಲ್ಲಿ ಈ ವಿಷಯ ಚರ್ಚೆಗೆ ಬಂದು ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಅನು ಮೋದನೆ ದೊರೆತಿದ್ದೇ ಆದಲ್ಲಿ‌. ಬೆಂಕಿ ಹೊತ್ತಿಕೊಳ್ಳೋದು ಮಾತ್ರ ಗ್ಯಾರಂಟಿ ಎಂದಿದ್ದಾರೆ ಶಾಸಕ ಗಾಲಿ ರೆಡ್ಡಿ.
ವಿವಿಧ ಸಂಘ- ಸಂಸ್ಥೆಗಳು ನಾಳೆಯ ದಿನ ಹಮ್ಮಿಕೊಂಡಿರುವ ಅಖಂಡ ಬಳ್ಳಾರಿ ಜಿಲ್ಲೆಯನ್ನಾಗಿಸುವ ಬೇಡಿಕೆಯನ್ನು ಮುಂದಿಟ್ಟು ಕೊಂಡು ಬಳ್ಳಾರಿ ಜಿಲ್ಲೆ ಬಂದ್ ಗೆ ವೈಯಕ್ತಿಕವಾಗಿ ನನ್ನನ್ನೂ ಸೇರಿ ದಂತೆ ನಮ್ಮೆಲ್ಲ ಜಿಲ್ಲೆಯ ಶಾಸಕರು ಬಾಹ್ಯವಾಗಿ ಬೆಂಬಲ ನೀಡಿ, ಹೋರಾಟವನ್ನು ಬೆಂಬಲಿಸುತ್ತೇನೆ.‌ ಯಾಕಂದ್ರೆ ನಾವ್ ಈ ಸರ್ಕಾರ ದಲ್ಲಿದ್ದೇವೆ.‌ ಆಗಾಗಿ, ನೇರವಾಗಿ ಪಾಲ್ಗೊಳ್ಳಲು ಆಗೋದಿಲ್ಲ. ಆ ಕಾರಣಕ್ಕಾಗಿ ಬಾಹ್ಯ ಬೆಂಬಲ‌ ನೀಡೋದಾಗಿ ಶಾಸಕ ಗಾಲಿ ಸೋಮ ಶೇಖರರೆಡ್ಡಿ ಒಪ್ಪಿಕೊಂಡಿದ್ದಾರೆ.
Body:ಅಖಂಡ ಬಳ್ಳಾರಿ ಜಿಲ್ಲೆಯನ್ನ ಯಾರದೋ ಸ್ವಾರ್ಥಕ್ಕಾಗಿ ಒಡೆಯಬಾರದು. ಅಖಂಡ ಜಿಲ್ಲೆಯಾಗಿ ಬಳ್ಳಾರಿ ಉಳಿಯಬೇಕು.
ನಾವೆಲ್ಲ ಅಣ್ಣ- ತಮ್ಮಂದಿರ ಥರ ಇದ್ದೇವೆ. ಸಚಿವ ಸಂಪುಟದ ಸಭೆಯಲ್ಲಿ ಸಚಿವ ಶ್ರೀ ರಾಮುಲು ಕೂಡ ಭಾಗಿಯಾಗಿ ವಿರೋಧ ವ್ಯಕ್ತಪಡಿಸ್ತಾರೆ. ಈ ವಿಚಾರ ಚರ್ಚೆಗೆ ಬರೋಲ್ಲ, ಪೋಸ್ಟ್ ಪೋನ್ ಮಾಡ್ತಾರೆ. ನನಗೆ ಸಿಎಂ ಯಡಿಯೂರಪ್ಪ ಅವರು ಕೂಡ ಫೋನ್ ಮಾಡಿದ್ರು.
ನಾನು ಸಂತೋಷ್ ಜೀ ಅವರಿಗೆ ಕರೆ ಮಾಡಿದ್ದೆ. ಓಪನ್ ಸ್ಟೇಟ್ ಮೆಂಟ್ ಬೇಡ ಅಂದಿದ್ದಾರೆ. ಆದ್ರೆ ನಾನು ಜಿಲ್ಲೆಯ ಜನರಿಗಾಗಿ ಹೋಗಿದ್ದೇನೆ ಅಂತ ಸಂತೋಷ್ ಜೀ ಗೆ ಹೇಳಿದ್ದೇನೆ. ಈಗ ಬಳ್ಳಾರಿ ನಗರ ಒಂದೇ ಜಿಲ್ಲೆ ಮಾಡಿ ಅಂತ ನಾನು ರಾಜೀನಾಮೆ ನೀಡಿದ್ರೆ ಹೇಗೆ-?. ಕ್ಯಾಬಿನೆಟ್ ನಲ್ಲಿ ಅಪ್ರೋಲ್ ಮಾಡಲು ಬಿಡೋಲ್ಲ. ಸಚಿವ ಸಂಪುಟದಲ್ಲಿ ಶ್ರೀ ರಾಮುಲು ಇದ್ದಾರೆ. ಅವರು ವಿರೋಧ ಮಾಡ್ತಾರೆ ಎಂದಿದ್ದಾರೆ ಶಾಸಕ ರೆಡ್ಡಿ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_3_MLA_SOMASHEKAR_REDY_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.