ETV Bharat / city

ಬಳ್ಳಾರಿ: ನೀರು ಕುಡಿಯಲು ಕಾಲುವೆಗೆ ಇಳಿದಾಗ ಜಾರಿ ಬಿದ್ದ ಯುವಕ ನಾಪತ್ತೆ

ನೀರು ಕುಡಿಯಲು ಕಾಲುವೆಗೆ ಇಳಿದ ಯುವಕನೊಬ್ಬ ಅಚಾನಕ್ಕಾಗಿ ಅದರಲ್ಲಿ ಬಿದ್ದು ನೀರುಪಾಲಾದ ಘಟನೆ ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ.

author img

By

Published : Oct 4, 2022, 10:20 AM IST

a-young-man-slipped-in-to-canal-to-drink-water
ರು ಕುಡಿಯಲು ಕಾಲುವೆಗೆ ಇಳಿದಾಗ ಜಾರಿ ಬಿದ್ದ ಯುವಕ ನಾಪತ್ತೆ

ಬಳ್ಳಾರಿ: ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಬಾಯಾರಿಕೆಯಾಗಿ ನೀರು ಕುಡಿಯಲು ಕಾಲುವೆಗೆ ಇಳಿದ ಯುವಕ, ಅದರಲ್ಲಿ ಬಿದ್ದು ಪ್ರಾಣತೆತ್ತ ಘಟನೆ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

ಕುರುಗೋಡು ಪಟ್ಟಣದ ಉಪ್ಪಾರಪೇಟೆಯ ಗೊಲ್ಲರ ಗೋವಿಂದಪ್ಪ ಎಂಬುವರ ಪುತ್ರ ಚಂದ್ರು (22) ಕಾಲುವೆಗೆ ಬಿದ್ದು ನೀರುಪಾಲಾದ ಯುವಕ. ಚಂದ್ರು ಜಮೀನಿನಲ್ಲಿ ಫಸಲಿಗೆ ಗೊಬ್ಬರ ಹಾಕುವ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬಾಯಾರಿಕೆಯಾಗಿ ಬಸವಪುರ ಬಳಿಯ ತುಂಗಭದ್ರಾ ಎಲ್​ಎಲ್​ಸಿ ಕಾಲುವೆಗೆ ಇಳಿದಿದ್ದಾನೆ.

ಈಜು ಬಾರದ ಈತ ಅಚಾನಕ್ಕಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ನೀರಿಗೆ ಕೊಚ್ಚಿ ಹೋಗಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಯುವಕನ ಪತ್ತೆಗಾಗಿ ಪೊಲೀಸರು ಹಾಗೂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯುವಕನ ದೇಹ ಪತ್ತೆಯಾಗಿಲ್ಲ.

ಓದಿ: ಬೆಂಗಳೂರು: ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ

ಬಳ್ಳಾರಿ: ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಬಾಯಾರಿಕೆಯಾಗಿ ನೀರು ಕುಡಿಯಲು ಕಾಲುವೆಗೆ ಇಳಿದ ಯುವಕ, ಅದರಲ್ಲಿ ಬಿದ್ದು ಪ್ರಾಣತೆತ್ತ ಘಟನೆ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.

ಕುರುಗೋಡು ಪಟ್ಟಣದ ಉಪ್ಪಾರಪೇಟೆಯ ಗೊಲ್ಲರ ಗೋವಿಂದಪ್ಪ ಎಂಬುವರ ಪುತ್ರ ಚಂದ್ರು (22) ಕಾಲುವೆಗೆ ಬಿದ್ದು ನೀರುಪಾಲಾದ ಯುವಕ. ಚಂದ್ರು ಜಮೀನಿನಲ್ಲಿ ಫಸಲಿಗೆ ಗೊಬ್ಬರ ಹಾಕುವ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬಾಯಾರಿಕೆಯಾಗಿ ಬಸವಪುರ ಬಳಿಯ ತುಂಗಭದ್ರಾ ಎಲ್​ಎಲ್​ಸಿ ಕಾಲುವೆಗೆ ಇಳಿದಿದ್ದಾನೆ.

ಈಜು ಬಾರದ ಈತ ಅಚಾನಕ್ಕಾಗಿ ಕಾಲು ಜಾರಿ ಕಾಲುವೆಗೆ ಬಿದ್ದು ನೀರಿಗೆ ಕೊಚ್ಚಿ ಹೋಗಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಯುವಕನ ಪತ್ತೆಗಾಗಿ ಪೊಲೀಸರು ಹಾಗೂ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಯುವಕನ ದೇಹ ಪತ್ತೆಯಾಗಿಲ್ಲ.

ಓದಿ: ಬೆಂಗಳೂರು: ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.