ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಈ ಬಾರಿಯೂ ಪ್ರವಾಹ ಬರುವ ಮೂನ್ಸೂಚನೆ ಇರುವ ಕಾರಣ ಬೆಳಗಾವಿಯ ಚಿಕ್ಕೋಡಿ ಪಟ್ಟಣಕ್ಕೆ ಎನ್ಡಿಆರ್ಎಫ್ ತಂಡ ಆಗಮಿಸಿದೆ.
ಹೈದರಾಬಾದ್ನಿಂದ ಚಿಕ್ಕೋಡಿಗೆ 20 ಅಧಿಕಾರಿಗಳ ಎನ್ಡಿಆರ್ಎಫ್ ತಂಡ ಬಂದಿದೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಬರುವ ಮುನ್ನವೇ ಈ ತಂಡ ಅಧ್ಯಯನ ನಡೆಸಲಿದೆ.
ಚಿಕ್ಕೋಡಿ ತಾಲೂಕಿನ ಯಡೂರು, ಇಂಗಳಿ ಹಾಗೂ ಕಾಗವಾಡ ತಾಲೂಕಿನ ಜೂಗುಳ, ಮಂಗಾವತಿ ಸೇರಿದಂತೆ ನದಿ ತೀರದ ಪ್ರದೇಶಗಳನ್ನು ಪರಿಶೀಲನೆ ನಡೆಸಲಿದೆ. ಪ್ರವಾಹ ಬಂದರೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅಧ್ಯಯನ ಮಾಡಲಿದೆ.