ETV Bharat / city

ಬ್ರಿಟಿಷರು, ಮುಸಲ್ಮಾನರಿಗಿಂತ ಕಾಂಗ್ರೆಸ್​ನವರೇ ದೇಶವನ್ನು ಹೆಚ್ಚು ಲೂಟಿ ಮಾಡಿದ್ದಾರೆ : ಅನಂತಕುಮಾರ್​ ‌ಹೆಗಡೆ

ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಬ್ರಿಟಿಷರು, ಮುಸಲ್ಮಾನರು ಲೂಟಿ ಮಾಡಿದ್ದಕ್ಕಿಂತ ಹೆಚ್ಚು ಕಾಂಗ್ರೆಸ್ಸಿಗರು ಈ ದೇಶ ಲೂಟಿ ಮಾಡಿದ್ದಾರೆ. ಲೆಕ್ಕ ಇಲ್ಲದಷ್ಟು ಲೂಟಿ ಕಾಂಗ್ರೆಸ್​ನಿಂದ ಆಗಿದೆ ಎಂದು ಕೇಂದ್ರ ‌ಸಚಿವ ಅನಂತಕುಮಾರ್​ ‌ಹೆಗಡೆ ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

author img

By

Published : Mar 17, 2019, 8:06 PM IST

ಅನಂತಕುಮಾರ್​ ‌ಹೆಗಡೆ

ಬೆಳಗಾವಿ: ಬ್ರಿಟಿಷರು, ಮುಸಲ್ಮಾನರಿಗಿಂತ ಕಾಂಗ್ರೆಸ್​​ನವರೇ ಈ ದೇಶವನ್ನು ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಕೇಂದ್ರ ‌ಸಚಿವ ಅನಂತಕುಮಾರ್​ ‌ಹೆಗಡೆ ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಕಿತ್ತೂರು ‌ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಬ್ರಿಟಿಷರು, ಮುಸಲ್ಮಾನರು ಲೂಟಿ ಮಾಡಿದ್ದಕ್ಕಿಂತ ಹೆಚ್ಚು ಕಾಂಗ್ರೆಸ್ಸಿಗರು ಈ ದೇಶ ಲೂಟಿ ಮಾಡಿದ್ದಾರೆ. ಲೆಕ್ಕ ಇಲ್ಲದಷ್ಟು ಲೂಟಿ ಕಾಂಗ್ರೆಸ್​ನಿಂದ ಆಗಿದೆ. ಇವತ್ತು ಕೆಲಸ ಆಗಿಲ್ಲ, ನಾವು ಬಡವರು ಎಂದು ಹಲವರು ಹೇಳುತ್ತಿರುವುದಕ್ಕೆ ಕಾಂಗ್ರೆಸ್​ನವರು ಮಾಡಿದ ಪಾಪವೇ ಕಾರಣ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಂತಕುಮಾರ್​ ‌ಹೆಗಡೆ

ಈಗಾಗಲೇ ಕಾಂಗ್ರೆಸ್ ಮುಕ್ತ ಉತ್ತರ ಕನ್ನಡ ಮಾಡಲಾಗಿದೆ. ಹಲವು ವರ್ಷಗಳ ಶ್ರಮದ ಫಲವಾಗಿ ಇಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ‌ಕಿತ್ತೂರು ವಿಧಾನಸಭೆ ‌ಕ್ಷೇತ್ರವನ್ನೂ‌ ಕಾಂಗ್ರೆಸ್ ಮುಕ್ತ ಮಾಡಬೇಕಿದೆ ಎಂದರು.

ಕಾಂಗ್ರೆಸ್ ಎಪ್ಪತ್ತು ವರ್ಷದ ಆಡಳಿತ ಅವಧಿಯಲ್ಲಿ ಈ ದೇಶದ ಜನರಿಗೆ ಕೇವಲ 6 ಕೋಟಿ ಸಿಲಿಂಡರ್ ಕೊಟ್ಟಿದ್ದಾರೆ. ಆದರೆ ಮೋದಿ ಸರ್ಕಾರದಲ್ಲಿ ದೇಶದ ಜನರಿಗೆ ಒಂಬತ್ತೂವರೆ ಕೋಟಿ ಸಿಲಿಂಡರ್, ಅದೂ ಉಚಿತವಾಗಿ ಕೊಟ್ಟಿದ್ದೇವೆ ಎಂದರು.

ಬೆಳಗಾವಿ: ಬ್ರಿಟಿಷರು, ಮುಸಲ್ಮಾನರಿಗಿಂತ ಕಾಂಗ್ರೆಸ್​​ನವರೇ ಈ ದೇಶವನ್ನು ಹೆಚ್ಚು ಲೂಟಿ ಮಾಡಿದ್ದಾರೆ ಎಂದು ಕೇಂದ್ರ ‌ಸಚಿವ ಅನಂತಕುಮಾರ್​ ‌ಹೆಗಡೆ ಪ್ರತಿಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.

ಕಿತ್ತೂರು ‌ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷ ಸಂಘಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಕಾಂಗ್ರೆಸ್ ಇರಬಾರದು. ಬ್ರಿಟಿಷರು, ಮುಸಲ್ಮಾನರು ಲೂಟಿ ಮಾಡಿದ್ದಕ್ಕಿಂತ ಹೆಚ್ಚು ಕಾಂಗ್ರೆಸ್ಸಿಗರು ಈ ದೇಶ ಲೂಟಿ ಮಾಡಿದ್ದಾರೆ. ಲೆಕ್ಕ ಇಲ್ಲದಷ್ಟು ಲೂಟಿ ಕಾಂಗ್ರೆಸ್​ನಿಂದ ಆಗಿದೆ. ಇವತ್ತು ಕೆಲಸ ಆಗಿಲ್ಲ, ನಾವು ಬಡವರು ಎಂದು ಹಲವರು ಹೇಳುತ್ತಿರುವುದಕ್ಕೆ ಕಾಂಗ್ರೆಸ್​ನವರು ಮಾಡಿದ ಪಾಪವೇ ಕಾರಣ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಂತಕುಮಾರ್​ ‌ಹೆಗಡೆ

ಈಗಾಗಲೇ ಕಾಂಗ್ರೆಸ್ ಮುಕ್ತ ಉತ್ತರ ಕನ್ನಡ ಮಾಡಲಾಗಿದೆ. ಹಲವು ವರ್ಷಗಳ ಶ್ರಮದ ಫಲವಾಗಿ ಇಲ್ಲಿ ಕಾಂಗ್ರೆಸ್ ಮುಕ್ತವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ‌ಕಿತ್ತೂರು ವಿಧಾನಸಭೆ ‌ಕ್ಷೇತ್ರವನ್ನೂ‌ ಕಾಂಗ್ರೆಸ್ ಮುಕ್ತ ಮಾಡಬೇಕಿದೆ ಎಂದರು.

ಕಾಂಗ್ರೆಸ್ ಎಪ್ಪತ್ತು ವರ್ಷದ ಆಡಳಿತ ಅವಧಿಯಲ್ಲಿ ಈ ದೇಶದ ಜನರಿಗೆ ಕೇವಲ 6 ಕೋಟಿ ಸಿಲಿಂಡರ್ ಕೊಟ್ಟಿದ್ದಾರೆ. ಆದರೆ ಮೋದಿ ಸರ್ಕಾರದಲ್ಲಿ ದೇಶದ ಜನರಿಗೆ ಒಂಬತ್ತೂವರೆ ಕೋಟಿ ಸಿಲಿಂಡರ್, ಅದೂ ಉಚಿತವಾಗಿ ಕೊಟ್ಟಿದ್ದೇವೆ ಎಂದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.