ETV Bharat / city

ಜಿಲ್ಲಾಧಿಕಾರಿ ಸೂಚನೆ ಧಿಕ್ಕರಿಸಿ ರೈತರ ಟ್ರ್ಯಾಕ್ಟರ್ ಹೊತ್ತೊಯ್ದ ಖಾಸಗಿ ಫೈನಾನ್ಸ್ ಸಿಬ್ಬಂದಿ - ರೈತರ ಟ್ರ್ಯಾಕ್ಟರ್

ಪ್ರವಾಹದಿಂದ ಕಂಗೆಟ್ಟ ನಿರಾಶ್ರಿತರಿಗೆ ಮತ್ತು ರೈತರಿಗೆ ಸಮರ್ಪಕ ಪರಿಹಾರ ಒದಗಿಸಿ ಎಂದು ರೈತರು ಎರಡು ದಿನಗಳ ಹಿಂದೆ ಅಹೋರಾತ್ರಿ ಧರಣಿ ನಡೆಸಿದ್ದರು. ಈ ವೇಳೆ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್​ ಸಂಸ್ಥೆಗಳು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದರು. ಅವರ ಆದೇಶವನ್ನು ಗಾಳಿಗೆ ತೂರಿ ರೈತರ ಟ್ರ್ಯಾಕ್ಟರನ್ನು ಫೈನಾನ್ಸ್ ಸಂಸ್ಥೆ ತೆಗೆದುಕೊಂಡು ಹೋಗಿದೆ.

ಖಾಸಗಿ ಫೈನಾನ್ಸ್ ವಿರುದ್ಧ ರೈತರ ಆಕ್ರೋಶ
author img

By

Published : Sep 19, 2019, 6:21 PM IST

ಬೆಳಗಾವಿ : ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್​ ಸಂಸ್ಥೆಗಳು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದರೂ, ಅವರ ಆದೇಶವನ್ನು ಗಾಳಿಗೆ ತೂರಿ ರೈತರ ಟ್ರ್ಯಾಕ್ಟರ್ ತೆಗೆದುಕೊಂಡು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಖಾಸಗಿ ಫೈನಾನ್ಸ್ ವಿರುದ್ಧ ರೈತರ ಆಕ್ರೋಶ

ಪ್ರವಾಹದಿಂದ ಕಂಗೆಟ್ಟ ನಿರಾಶ್ರಿತರಿಗೆ ಮತ್ತು ರೈತರಿಗೆ ಸಮರ್ಪಕ ಪರಿಹಾರ ಒದಗಿಸಿ ಎಂದು ರೈತರು ಎರಡು ದಿನಗಳ ಹಿಂದೆ ನಡೆಸಿದ ಅಹೋರಾತ್ರಿ ಧರಣಿಗೆ ಜಿಲ್ಲಾಡಳಿತ, ರೈತರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್. ಬಿ ಬೊಮ್ಮನಹಳ್ಳಿ ತಿಳಿಸಿದ್ದರು. ಮಂಗಳವಾರ ನಡೆದ ಬ್ಯಾಂಕ್ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಬ್ಯಾಂಕ್ ಮತ್ತು ಮೈಕ್ರೋ ಪೈನಾನ್ಸ್​ಗಳು ಸಾಲ ತುಂಬುವಂತೆ ರೈತರನ್ನು ಒತ್ತಾಯಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಆದರೆ ಜಿಲ್ಲಾಧಿಕಾರಿ ಆದೇಶದ ಬೆನ್ನಲ್ಲೇ ನಗರದ ಪೈನಾನ್ಸ್ ಸಂಸ್ಥೆಯೊಂದು ಕಳೆದ ಐದು ತಿಂಗಳ ಸಾಲ ತುಂಬಿಲ್ಲವೆಂದು ರೈತರಿಗೆ ಧಮ್ಕಿ ಹಾಕಿ, ಟ್ರ್ಯಾಕ್ಟರ್ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ನಗರದ ರೈತ ರಾಮಪ್ಪಾ ರಂಕನಕೊಪ್ಪ ಮತ್ತು ಬಾಳಪ್ಪ ಮಿಸಿ ಎನ್ನುವವರು ನಗರದ ಪೈನಾನ್ಸ್​ ಸಂಸ್ಥೆಯಲ್ಲಿ ಸಾಲ ಪಡೆದು, ಎಚ್.ಎಂ.ಟಿ ಟ್ರ್ಯಾಕ್ಟರ್ ಖರೀದಿಸಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತುಗಳನ್ನು ಕಟ್ಟುತ್ತಾ ಬಂದಿದ್ದ ಅವರು, ನೆರೆ ಪ್ರವಾಹದಿಂದ ಕಳೆದ ಐದಾರು ತಿಂಗಳಿನ ಕಂತು ಕಟ್ಟಿರಲಿಲ್ಲ. ಅದಕ್ಕೆ ಪೈನಾನ್ಸ್​ ಸಂಸ್ಥೆ ರೈತರಿಗೆ ಒಂದು ನೋಟಿಸ್ ಕೂಡ ನೀಡದೇ ಮನೆಗೆ ಬಂದು ಟ್ರ್ಯಾಕ್ಟರ್ ಎಳೆದೊಯ್ದಿದ್ದಾರೆ.

ಮೂರು ಕಂತು ಬಾಕಿ ಇದ್ದು, ಅದನ್ನ ತುಂಬುತ್ತೇವೆ. ಟ್ರ್ಯಾಕ್ಟರ್ ಒಯ್ಯಬೇಡಿ ಎಂದು ತಡೆದ ರೈತರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ರೈತರು ಆರೋಪಿಸಿದ್ದಾರೆ. ಸಂಕಷ್ಪದಲ್ಲಿರುವ ರೈತರಿಗೆ ಸಾಲದ ಹೆಸರಲ್ಲಿ ಕಷ್ಟ ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರೂ, ನಮಗೆ ಪೈನಾನ್ಸ್‌ಗಳು ಈ ರೀತಿ ತೊಂದರೆ ನೀಡುತ್ತಿದ್ದು ಜಿಲ್ಲಾಧಿಕಾರಿಗಳೇ ನಮಗೆ ನ್ಯಾಯ ಒದಗಿಸಬೇಕೆಂದು ಟ್ರ್ಯಾಕ್ಟರ್ ಕಳೆದುಕೊಂಡ ರೈತ ಮನವಿ ಮಾಡಿದ್ದಾರೆ.

ಬೆಳಗಾವಿ : ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್​ ಸಂಸ್ಥೆಗಳು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದರೂ, ಅವರ ಆದೇಶವನ್ನು ಗಾಳಿಗೆ ತೂರಿ ರೈತರ ಟ್ರ್ಯಾಕ್ಟರ್ ತೆಗೆದುಕೊಂಡು ಹೋದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಖಾಸಗಿ ಫೈನಾನ್ಸ್ ವಿರುದ್ಧ ರೈತರ ಆಕ್ರೋಶ

ಪ್ರವಾಹದಿಂದ ಕಂಗೆಟ್ಟ ನಿರಾಶ್ರಿತರಿಗೆ ಮತ್ತು ರೈತರಿಗೆ ಸಮರ್ಪಕ ಪರಿಹಾರ ಒದಗಿಸಿ ಎಂದು ರೈತರು ಎರಡು ದಿನಗಳ ಹಿಂದೆ ನಡೆಸಿದ ಅಹೋರಾತ್ರಿ ಧರಣಿಗೆ ಜಿಲ್ಲಾಡಳಿತ, ರೈತರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿ ಎಸ್. ಬಿ ಬೊಮ್ಮನಹಳ್ಳಿ ತಿಳಿಸಿದ್ದರು. ಮಂಗಳವಾರ ನಡೆದ ಬ್ಯಾಂಕ್ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಬ್ಯಾಂಕ್ ಮತ್ತು ಮೈಕ್ರೋ ಪೈನಾನ್ಸ್​ಗಳು ಸಾಲ ತುಂಬುವಂತೆ ರೈತರನ್ನು ಒತ್ತಾಯಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ್ದರು.

ಆದರೆ ಜಿಲ್ಲಾಧಿಕಾರಿ ಆದೇಶದ ಬೆನ್ನಲ್ಲೇ ನಗರದ ಪೈನಾನ್ಸ್ ಸಂಸ್ಥೆಯೊಂದು ಕಳೆದ ಐದು ತಿಂಗಳ ಸಾಲ ತುಂಬಿಲ್ಲವೆಂದು ರೈತರಿಗೆ ಧಮ್ಕಿ ಹಾಕಿ, ಟ್ರ್ಯಾಕ್ಟರ್ ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ನಗರದ ರೈತ ರಾಮಪ್ಪಾ ರಂಕನಕೊಪ್ಪ ಮತ್ತು ಬಾಳಪ್ಪ ಮಿಸಿ ಎನ್ನುವವರು ನಗರದ ಪೈನಾನ್ಸ್​ ಸಂಸ್ಥೆಯಲ್ಲಿ ಸಾಲ ಪಡೆದು, ಎಚ್.ಎಂ.ಟಿ ಟ್ರ್ಯಾಕ್ಟರ್ ಖರೀದಿಸಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತುಗಳನ್ನು ಕಟ್ಟುತ್ತಾ ಬಂದಿದ್ದ ಅವರು, ನೆರೆ ಪ್ರವಾಹದಿಂದ ಕಳೆದ ಐದಾರು ತಿಂಗಳಿನ ಕಂತು ಕಟ್ಟಿರಲಿಲ್ಲ. ಅದಕ್ಕೆ ಪೈನಾನ್ಸ್​ ಸಂಸ್ಥೆ ರೈತರಿಗೆ ಒಂದು ನೋಟಿಸ್ ಕೂಡ ನೀಡದೇ ಮನೆಗೆ ಬಂದು ಟ್ರ್ಯಾಕ್ಟರ್ ಎಳೆದೊಯ್ದಿದ್ದಾರೆ.

ಮೂರು ಕಂತು ಬಾಕಿ ಇದ್ದು, ಅದನ್ನ ತುಂಬುತ್ತೇವೆ. ಟ್ರ್ಯಾಕ್ಟರ್ ಒಯ್ಯಬೇಡಿ ಎಂದು ತಡೆದ ರೈತರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ರೈತರು ಆರೋಪಿಸಿದ್ದಾರೆ. ಸಂಕಷ್ಪದಲ್ಲಿರುವ ರೈತರಿಗೆ ಸಾಲದ ಹೆಸರಲ್ಲಿ ಕಷ್ಟ ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರೂ, ನಮಗೆ ಪೈನಾನ್ಸ್‌ಗಳು ಈ ರೀತಿ ತೊಂದರೆ ನೀಡುತ್ತಿದ್ದು ಜಿಲ್ಲಾಧಿಕಾರಿಗಳೇ ನಮಗೆ ನ್ಯಾಯ ಒದಗಿಸಬೇಕೆಂದು ಟ್ರ್ಯಾಕ್ಟರ್ ಕಳೆದುಕೊಂಡ ರೈತ ಮನವಿ ಮಾಡಿದ್ದಾರೆ.

Intro:ಜಿಲ್ಲಾಧಿಕಾರಿ ಸೂಚನೆಗೆ ಧಿಕ್ಕರಿಸಿ ರೈತರ ಟ್ರಾಕ್ಟರ್ ಒಯ್ದ ಖಾಸಗಿ ಫೈನಾನ್ಸ್

ಬೆಳಗಾವಿ : ಬ್ಯಾಂಕ್ ಹಗೂ ಖಾಸಗಿ ಫೈನಾನ್ಸ್ ಗಳು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು, ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದ್ದರೂ. ಅವರ ಆದೇಶವನ್ನು ಗಾಳಿಗೆ ತುರಿದ ಫೈನಾನ್ಸ್ ಒಂದು. ರೈತರ ಟ್ರಾಕ್ಟರ್ ಒಯ್ದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪ್ರವಾಹದಿಂದ ಕಂಗೆಟ್ಟ ನಿರಾಶ್ರಿತರಿಗೆ ಮತ್ತು ರೈತರಿಗೆ ಸಮರ್ಪಕ ಪರಿಹಾರ ಒದಗಿಸಿ ಎಂದು ರೈತರು ಎರಡು ದಿನಗಳ ಹಿಂದೆ ನಡೆಸಿದ ಅಹೋರಾತ್ರಿ ಧರಣಿಗೆ ಜಿಲ್ಲಾಡಳಿತ, ರೈತರಿಗೆ ಯಾವುದೇ ತೊಂದರೆಗಳಾಗದಂತೆ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಸ್. ಬಿ ಬೊಮ್ಮನಹಳ್ಳಿ ಹೇಳಿದ್ದರು.

ಮಂಗಳವಾರ ನಡೆದ ಬ್ಯಾಂಕ್ ಮತ್ತು ರೈತರ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಬ್ಯಾಂಕ್ ಮತ್ತು ಮೈಕ್ರೋ ಪೈನಾನ್ಸಗಳು ಸಾಲ ತುಂಬುವಂತೆ ರೈತರನ್ನು ಒತ್ತಾಯಿಸಬಾರದು ಎಂದು ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದರು.
Body:ಆದರೆ ಜಿಲ್ಲಾಧಿಕಾರಿ ಆದೇಶದ ಬೆನ್ನಲ್ಲೇ ನಗರದ ಪೈನಾನ್ಸ್ ಒಂದು. ಕಳೆದ ಐದು ತಿಂಗಳ ಸಾಲ ತುಂಬಿಲ್ಲವೆಂದು ರೈತರ ಮೇಲೆ ಧಮ್ಕಿ ಹಾಕಿ ಟ್ರಾಕ್ಟರನ್ನು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ನಗರದ ರೈತರಾದ ರಾಮಪ್ಪಾ ರಂಕನಕೊಪ್ಪ ಮತ್ತು ಬಾಳಪ್ಪ ಮಿಸಿ ಎನ್ನುವವರು ನಗರದ ಹಿಂದುಜಾ ದಿ ಪೈನಾನ್ಸನಲ್ಲಿ, ಸಾಲ ಪಡೆದು ಎಚ್.ಎಮ್.ಟಿ ಟ್ರಾಕ್ಟರಗಳನ್ನು ಖರೀದಿಸಿ ದ್ದರು. ಪ್ರತಿ ತಿಂಗಳು ಸರಿಯಾಗಿ ಕಂತುಗಳನ್ನು ಕಟ್ಟುತ್ತ ಬಂದಿದ್ದ ಅವರು ನೆರೆ ಪ್ರವಾಹದಿಂದ ಕಳೆದ ಐದಾರು ತಿಂಗಳಿನ ಕಂತನ್ನು ಕಟ್ಟಿರಲಿಲ್ಲ ಅದಕ್ಕೆ ಹಿಂದುಜಾ ದಿ ಪೈನಾನ್ಸ ರೈತರಿಗೆ ಒಂದು ನೋಟಿಸ್ ಕೂಡ ನೀಡದೆ ಮನೆಗೆ ಬಂದು ಟ್ರಾಕ್ಟರ್ ಎಳೆದೊಯ್ದಿದ್ದಾರೆ.

Conclusion:ಮೂರು ಕಂತು ಬಾಕಿ ಇದ್ದು ಅದನ್ನ ತುಂಬುತ್ತೆವೆ ಟ್ರಾಕ್ಟರ್ ಒಯ್ಯಬೇಡಿ ಎಂದು ತಡೆದ ರೈತರಿಗೆ ಧಮ್ಕಿ ಹಾಕಿದ್ದಲ್ಲದೆ ಹೊಡೆಯಲು ಮುಂದಾಗಿದ್ದರು ಎಂದು ರೈತರು ಆರೋಪಿಸಿದ್ದಾರೆ. ಸಂಕಷ್ಪದಲ್ಲಿರುವ ರೈತರಿಗೆ ಸಾಲದ ಹೆಸರಲ್ಲಿ ಕಷ್ಟ ಕೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು ನಮಗೆ ಪೈನಾನ್ಸಗಳು ಈ ರೀತಿ ತೊಂದರೆ ನೀಡುತ್ತಿದ್ದು ಜಿಲ್ಲಾಧಿಕಾರಿಗಳೆ ನಮಗೆ ನ್ಯಾಯ ಒದಗಿಸಬೇಕೆಂದು ಟ್ರಾಕ್ಟರ್ ಕಳೆದುಕೊಂಡ ರೈತರು ಮನವಿ ನೀಡಿದ್ದಾರೆ.

ಬೈಟ್ : ಮಾರುತಿ ಭಜಂತ್ರಿ (ರೈತ)

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.