ETV Bharat / business

ಯಾರಿಗೆ ಸೇರಲಿದೆ ಸಹಾರಾದ ₹25 ಸಾವಿರ ಕೋಟಿ? ಹೂಡಿಕೆದಾರರ ಕತೆ ಏನು?

author img

By ETV Bharat Karnataka Team

Published : Nov 15, 2023, 1:06 PM IST

Sebi in focus after death of Subrata Roy: ಸಹಾರಾ ಕಂಪನಿಗಳ ಮುಖ್ಯಸ್ಥ ಸುಬ್ರತಾ ರಾಯ್ ನಿಧನದ ನಂತರ ಸೆಬಿಯಲ್ಲಿರುವ ಸಹಾರಾದ ನಿಧಿ ಹೇಗೆ ವಿತರಣೆಯಾಗಲಿದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

Undistributed funds worth over Rs 25000 cr with Sebi in focus after death of Subrata Roy
Undistributed funds worth over Rs 25000 cr with Sebi in focus after death of Subrata Roy

ನವದೆಹಲಿ: ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರ ನಿಧನದ ನಂತರ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಖಾತೆಯಲ್ಲಿರುವ ಯಾರಿಗೂ ಹಂಚಿಕೆಯಾಗದ ಒಟ್ಟು 25,000 ಕೋಟಿ ರೂ.ಗಿಂತ ಹೆಚ್ಚು ಹಣದ ಗತಿ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಯ್ ಮಂಗಳವಾರ ರಾತ್ರಿ ಮುಂಬೈನಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ರಾಯ್ ಒಡೆತನದ ಕಂಪನಿಗಳು ಪೊಂಜಿ ಸ್ಕೀಮ್​ಗಳ ಮೂಲಕ ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆರೋಪಗಳ ವಿರುದ್ಧ ಅವರು ನಿರಂತರವಾಗಿ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದರು.

ಸಹಾರಾ ಸಮೂಹದ ಎರಡು ಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್ಐಆರ್​ಇಎಲ್) ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್​ಮೆಂಟ್​ ಕಾರ್ಪೊರೇಷನ್ ಲಿಮಿಟೆಡ್ (ಎಸ್ಎಚ್ಐಸಿಎಲ್) ಗಳು ಐಚ್ಛಿಕವಾಗಿ ಸಂಪೂರ್ಣ ಕನ್ವರ್ಟಿಬಲ್ ಬಾಂಡ್​ಗಳು (ಒಎಫ್​ಸಿಡಿ) ಎಂದು ಕರೆಯಲ್ಪಡುವ ಕೆಲವು ಬಾಂಡ್​ಗಳ ಮೂಲಕ 3 ಕೋಟಿ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಅವರಿಗೆ ಮರುಪಾವತಿ ಮಾಡುವಂತೆ 2011ರಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶಿಸಿತ್ತು.

ಸೆಬಿಯ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಈ ಎರಡು ಸಂಸ್ಥೆಗಳು ಹಣ ಸಂಗ್ರಹಿಸಿವೆ ಎಂದು ಸೆಬಿ ತೀರ್ಪು ನೀಡಿದ ನಂತರ ಈ ಆದೇಶ ಹೊರಡಿಸಲಾಗಿತ್ತು. ಮೇಲ್ಮನವಿಗಳು ಮತ್ತು ಅಡ್ಡ ಮೇಲ್ಮನವಿಗಳ ಸುದೀರ್ಘ ಪ್ರಕ್ರಿಯೆಯ ನಂತರ, ಸುಪ್ರೀಂ ಕೋರ್ಟ್ ಆಗಸ್ಟ್ 31, 2012 ರಂದು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಶೇಕಡಾ 15ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವಂತೆ ಹೇಳಿ ಸೆಬಿಯ ನಿರ್ದೇಶನಗಳನ್ನು ಎತ್ತಿಹಿಡಿದಿತ್ತು.

ಹೂಡಿಕೆದಾರರಿಗೆ ಅವರ ಹಣವನ್ನು ಮರುಪಾವತಿಸಲು ಅನುಕೂಲವಾಗುವಂತೆ ಅಂದಾಜು 24,000 ಕೋಟಿ ರೂ.ಗಳನ್ನು ಸೆಬಿಯಲ್ಲಿ ಠೇವಣಿ ಇಡುವಂತೆ ಸಹಾರಾಗೆ ಆಗ ಸೂಚಿಸಲಾಗಿತ್ತು. ಆದರೆ ಶೇ 95ಕ್ಕೂ ಹೆಚ್ಚು ಹೂಡಿಕೆದಾರರ ಹಣವನ್ನು ಮರುಪಾವತಿ ಮಾಡಿರುವುದಾಗಿ ಸಹಾರಾ ಹೇಳಿತ್ತು. ಆದರೆ ಕ್ಯಾಪಿಟಲ್ ಮಾರ್ಕೆಟ್ಸ್ ರೆಗ್ಯುಲೇಟರ್​ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎರಡು ಸಹಾರಾ ಗ್ರೂಪ್ ಸಂಸ್ಥೆಗಳ ಹೂಡಿಕೆದಾರರಿಗೆ 11 ವರ್ಷಗಳಲ್ಲಿ ಮರುಪಾವತಿ ಮಾಡಿದ್ದು ಕೇವಲ 138.07 ಕೋಟಿ ರೂ. ಮಾತ್ರ.

ಏತನ್ಮಧ್ಯೆ, ಮರುಪಾವತಿಗಾಗಿ ವಿಶೇಷವಾಗಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಮೊತ್ತವು 25,000 ಕೋಟಿ ರೂ.ಗಿಂತ ಹೆಚ್ಚಾಗಿದೆ. ಎರಡು ಸಹಾರಾ ಕಂಪನಿಗಳ ಬಹುಪಾಲು ಬಾಂಡ್ ಹೋಲ್ಡರ್ ಗಳಿಂದ ಕ್ಲೈಮ್ ಬಾರದೆ ಇರುವ ಕಾರಣದಿಂದ ಸೆಬಿ ಮರುಪಾವತಿ ಮಾಡಿದ ಒಟ್ಟು ಮೊತ್ತವು ಕಳೆದ 2022-23ರ ಹಣಕಾಸು ವರ್ಷದಲ್ಲಿ ಕೇವಲ 7 ಲಕ್ಷ ರೂ.ಗಳಾಗಿದೆ. ಆದರೆ ಸೆಬಿ-ಸಹಾರಾ ಮರುಪಾವತಿ ಖಾತೆಗಳಲ್ಲಿನ ಸಂಗ್ರಹವಾದ ಮೊತ್ತ ವರ್ಷದಲ್ಲಿ 1,087 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 31, 2023 ರವರೆಗೆ 53,687 ಖಾತೆಗಳನ್ನು ಒಳಗೊಂಡ 19,650 ಅರ್ಜಿಗಳು ಸೆಬಿಗೆ ಬಂದಿವೆ. ಈ ಪೈಕಿ 48,326 ಖಾತೆಗಳನ್ನು ಒಳಗೊಂಡ 17,526 ಅರ್ಜಿಗಳಿಗೆ ಸಂಬಂಧಿಸಿದಂತೆ 67.98 ಕೋಟಿ ರೂ.ಗಳ ಬಡ್ಡಿ ಮೊತ್ತ ಸೇರಿದಂತೆ ಒಟ್ಟು 138.07 ಕೋಟಿ ರೂ.ಗಳನ್ನು ಮರುಪಾವತಿ ಮಾಡಲಾಗಿದೆ. ಸಹಾರಾ ಸಮೂಹದ ಎರಡು ಸಂಸ್ಥೆಗಳು ಒದಗಿಸಿದ ದತ್ತಾಂಶದಲ್ಲಿ ದಾಖಲೆಗಳು ಪತ್ತೆಯಾಗದ ಕಾರಣ ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸೆಬಿ ಮಾರ್ಚ್ 31, 2022 ರವರೆಗೆ 17,526 ಅರ್ಜಿಗಳಿಗೆ ಸಂಬಂಧಿಸಿದಂತೆ 138 ಕೋಟಿ ರೂ.ಗಳನ್ನು ಮರುಪಾವತಿಸಿತ್ತು.

ಏತನ್ಮಧ್ಯೆ, ಸಹಾರಾ ಗ್ರೂಪ್​ನ ನಾಲ್ಕು ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟಿರುವ ಠೇವಣಿದಾರರ 5,000 ಕೋಟಿ ರೂ.ಗಳನ್ನು ಮರುಪಾವತಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆಗಸ್ಟ್​​ನಲ್ಲಿ ಆರಂಭಿಸಿದೆ. ಇದಕ್ಕೂ ಮೊದಲು, ಗೃಹ ಸಚಿವ ಅಮಿತ್ ಶಾ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಅನುಕೂಲವಾಗುವಂತೆ ಜುಲೈನಲ್ಲಿ 'ಸಿಆಆರ್​ಸಿಎಸ್​-ಸಹಾರಾ ಮರುಪಾವತಿ ಪೋರ್ಟಲ್' ಅನ್ನು ಪ್ರಾರಂಭಿಸಿದರು. ಸುಮಾರು 18 ಲಕ್ಷ ಠೇವಣಿದಾರರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ನಾಲ್ಕು ಸಹಕಾರಿ ಸಂಘಗಳ 10 ಕೋಟಿ ಹೂಡಿಕೆದಾರರಿಗೆ 9 ತಿಂಗಳೊಳಗೆ ಹಣ ಹಿಂದಿರುಗಿಸಲಾಗುವುದು ಎಂದು ಸರ್ಕಾರ ಮಾರ್ಚ್​ನಲ್ಲಿ ಘೋಷಿಸಿತ್ತು. ಸಹಾರಾ-ಸೆಬಿ ಮರುಪಾವತಿ ಖಾತೆಯಿಂದ 5,000 ಕೋಟಿ ರೂ.ಗಳನ್ನು ಸಹಕಾರಿ ಸಂಘಗಳ ಕೇಂದ್ರ ರಿಜಿಸ್ಟ್ರಾರ್ (ಸಿಆರ್​ಸಿಎಸ್​)ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಆದೇಶದ ನಂತರ ಕೇಂದ್ರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಕಳೆದೊಂದು ವರ್ಷದಲ್ಲಿ ಶೇ 21ರಷ್ಟು ಆದಾಯ ನೀಡಿದ ಚಿನ್ನ ಮತ್ತು ಬೆಳ್ಳಿ

ನವದೆಹಲಿ: ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತಾ ರಾಯ್ ಅವರ ನಿಧನದ ನಂತರ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಖಾತೆಯಲ್ಲಿರುವ ಯಾರಿಗೂ ಹಂಚಿಕೆಯಾಗದ ಒಟ್ಟು 25,000 ಕೋಟಿ ರೂ.ಗಿಂತ ಹೆಚ್ಚು ಹಣದ ಗತಿ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ರಾಯ್ ಮಂಗಳವಾರ ರಾತ್ರಿ ಮುಂಬೈನಲ್ಲಿ ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು. ರಾಯ್ ಒಡೆತನದ ಕಂಪನಿಗಳು ಪೊಂಜಿ ಸ್ಕೀಮ್​ಗಳ ಮೂಲಕ ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆರೋಪಗಳ ವಿರುದ್ಧ ಅವರು ನಿರಂತರವಾಗಿ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದರು.

ಸಹಾರಾ ಸಮೂಹದ ಎರಡು ಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಲಿಮಿಟೆಡ್ (ಎಸ್ಐಆರ್​ಇಎಲ್) ಮತ್ತು ಸಹಾರಾ ಹೌಸಿಂಗ್ ಇನ್ವೆಸ್ಟ್​ಮೆಂಟ್​ ಕಾರ್ಪೊರೇಷನ್ ಲಿಮಿಟೆಡ್ (ಎಸ್ಎಚ್ಐಸಿಎಲ್) ಗಳು ಐಚ್ಛಿಕವಾಗಿ ಸಂಪೂರ್ಣ ಕನ್ವರ್ಟಿಬಲ್ ಬಾಂಡ್​ಗಳು (ಒಎಫ್​ಸಿಡಿ) ಎಂದು ಕರೆಯಲ್ಪಡುವ ಕೆಲವು ಬಾಂಡ್​ಗಳ ಮೂಲಕ 3 ಕೋಟಿ ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಅವರಿಗೆ ಮರುಪಾವತಿ ಮಾಡುವಂತೆ 2011ರಲ್ಲಿ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಆದೇಶಿಸಿತ್ತು.

ಸೆಬಿಯ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿ ಈ ಎರಡು ಸಂಸ್ಥೆಗಳು ಹಣ ಸಂಗ್ರಹಿಸಿವೆ ಎಂದು ಸೆಬಿ ತೀರ್ಪು ನೀಡಿದ ನಂತರ ಈ ಆದೇಶ ಹೊರಡಿಸಲಾಗಿತ್ತು. ಮೇಲ್ಮನವಿಗಳು ಮತ್ತು ಅಡ್ಡ ಮೇಲ್ಮನವಿಗಳ ಸುದೀರ್ಘ ಪ್ರಕ್ರಿಯೆಯ ನಂತರ, ಸುಪ್ರೀಂ ಕೋರ್ಟ್ ಆಗಸ್ಟ್ 31, 2012 ರಂದು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಶೇಕಡಾ 15ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವಂತೆ ಹೇಳಿ ಸೆಬಿಯ ನಿರ್ದೇಶನಗಳನ್ನು ಎತ್ತಿಹಿಡಿದಿತ್ತು.

ಹೂಡಿಕೆದಾರರಿಗೆ ಅವರ ಹಣವನ್ನು ಮರುಪಾವತಿಸಲು ಅನುಕೂಲವಾಗುವಂತೆ ಅಂದಾಜು 24,000 ಕೋಟಿ ರೂ.ಗಳನ್ನು ಸೆಬಿಯಲ್ಲಿ ಠೇವಣಿ ಇಡುವಂತೆ ಸಹಾರಾಗೆ ಆಗ ಸೂಚಿಸಲಾಗಿತ್ತು. ಆದರೆ ಶೇ 95ಕ್ಕೂ ಹೆಚ್ಚು ಹೂಡಿಕೆದಾರರ ಹಣವನ್ನು ಮರುಪಾವತಿ ಮಾಡಿರುವುದಾಗಿ ಸಹಾರಾ ಹೇಳಿತ್ತು. ಆದರೆ ಕ್ಯಾಪಿಟಲ್ ಮಾರ್ಕೆಟ್ಸ್ ರೆಗ್ಯುಲೇಟರ್​ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್​ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಎರಡು ಸಹಾರಾ ಗ್ರೂಪ್ ಸಂಸ್ಥೆಗಳ ಹೂಡಿಕೆದಾರರಿಗೆ 11 ವರ್ಷಗಳಲ್ಲಿ ಮರುಪಾವತಿ ಮಾಡಿದ್ದು ಕೇವಲ 138.07 ಕೋಟಿ ರೂ. ಮಾತ್ರ.

ಏತನ್ಮಧ್ಯೆ, ಮರುಪಾವತಿಗಾಗಿ ವಿಶೇಷವಾಗಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಮೊತ್ತವು 25,000 ಕೋಟಿ ರೂ.ಗಿಂತ ಹೆಚ್ಚಾಗಿದೆ. ಎರಡು ಸಹಾರಾ ಕಂಪನಿಗಳ ಬಹುಪಾಲು ಬಾಂಡ್ ಹೋಲ್ಡರ್ ಗಳಿಂದ ಕ್ಲೈಮ್ ಬಾರದೆ ಇರುವ ಕಾರಣದಿಂದ ಸೆಬಿ ಮರುಪಾವತಿ ಮಾಡಿದ ಒಟ್ಟು ಮೊತ್ತವು ಕಳೆದ 2022-23ರ ಹಣಕಾಸು ವರ್ಷದಲ್ಲಿ ಕೇವಲ 7 ಲಕ್ಷ ರೂ.ಗಳಾಗಿದೆ. ಆದರೆ ಸೆಬಿ-ಸಹಾರಾ ಮರುಪಾವತಿ ಖಾತೆಗಳಲ್ಲಿನ ಸಂಗ್ರಹವಾದ ಮೊತ್ತ ವರ್ಷದಲ್ಲಿ 1,087 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ.

ವಾರ್ಷಿಕ ವರದಿಯ ಪ್ರಕಾರ, ಮಾರ್ಚ್ 31, 2023 ರವರೆಗೆ 53,687 ಖಾತೆಗಳನ್ನು ಒಳಗೊಂಡ 19,650 ಅರ್ಜಿಗಳು ಸೆಬಿಗೆ ಬಂದಿವೆ. ಈ ಪೈಕಿ 48,326 ಖಾತೆಗಳನ್ನು ಒಳಗೊಂಡ 17,526 ಅರ್ಜಿಗಳಿಗೆ ಸಂಬಂಧಿಸಿದಂತೆ 67.98 ಕೋಟಿ ರೂ.ಗಳ ಬಡ್ಡಿ ಮೊತ್ತ ಸೇರಿದಂತೆ ಒಟ್ಟು 138.07 ಕೋಟಿ ರೂ.ಗಳನ್ನು ಮರುಪಾವತಿ ಮಾಡಲಾಗಿದೆ. ಸಹಾರಾ ಸಮೂಹದ ಎರಡು ಸಂಸ್ಥೆಗಳು ಒದಗಿಸಿದ ದತ್ತಾಂಶದಲ್ಲಿ ದಾಖಲೆಗಳು ಪತ್ತೆಯಾಗದ ಕಾರಣ ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸೆಬಿ ಮಾರ್ಚ್ 31, 2022 ರವರೆಗೆ 17,526 ಅರ್ಜಿಗಳಿಗೆ ಸಂಬಂಧಿಸಿದಂತೆ 138 ಕೋಟಿ ರೂ.ಗಳನ್ನು ಮರುಪಾವತಿಸಿತ್ತು.

ಏತನ್ಮಧ್ಯೆ, ಸಹಾರಾ ಗ್ರೂಪ್​ನ ನಾಲ್ಕು ಸಹಕಾರಿ ಸಂಘಗಳಲ್ಲಿ ಠೇವಣಿ ಇಟ್ಟಿರುವ ಠೇವಣಿದಾರರ 5,000 ಕೋಟಿ ರೂ.ಗಳನ್ನು ಮರುಪಾವತಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆಗಸ್ಟ್​​ನಲ್ಲಿ ಆರಂಭಿಸಿದೆ. ಇದಕ್ಕೂ ಮೊದಲು, ಗೃಹ ಸಚಿವ ಅಮಿತ್ ಶಾ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಅನುಕೂಲವಾಗುವಂತೆ ಜುಲೈನಲ್ಲಿ 'ಸಿಆಆರ್​ಸಿಎಸ್​-ಸಹಾರಾ ಮರುಪಾವತಿ ಪೋರ್ಟಲ್' ಅನ್ನು ಪ್ರಾರಂಭಿಸಿದರು. ಸುಮಾರು 18 ಲಕ್ಷ ಠೇವಣಿದಾರರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ನಾಲ್ಕು ಸಹಕಾರಿ ಸಂಘಗಳ 10 ಕೋಟಿ ಹೂಡಿಕೆದಾರರಿಗೆ 9 ತಿಂಗಳೊಳಗೆ ಹಣ ಹಿಂದಿರುಗಿಸಲಾಗುವುದು ಎಂದು ಸರ್ಕಾರ ಮಾರ್ಚ್​ನಲ್ಲಿ ಘೋಷಿಸಿತ್ತು. ಸಹಾರಾ-ಸೆಬಿ ಮರುಪಾವತಿ ಖಾತೆಯಿಂದ 5,000 ಕೋಟಿ ರೂ.ಗಳನ್ನು ಸಹಕಾರಿ ಸಂಘಗಳ ಕೇಂದ್ರ ರಿಜಿಸ್ಟ್ರಾರ್ (ಸಿಆರ್​ಸಿಎಸ್​)ಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಆದೇಶದ ನಂತರ ಕೇಂದ್ರ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಕಳೆದೊಂದು ವರ್ಷದಲ್ಲಿ ಶೇ 21ರಷ್ಟು ಆದಾಯ ನೀಡಿದ ಚಿನ್ನ ಮತ್ತು ಬೆಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.