ETV Bharat / business

ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಕ್ಲಾಸ್​ಗೆ ಶೇ.25 ರಷ್ಟು ರಿಯಾಯಿತಿ: ವಂದೇ ಭಾರತ್, ವಿಸ್ಟಾಡೋಮ್​ಗೂ ಅನ್ವಯ

author img

By

Published : Jul 9, 2023, 8:02 AM IST

ತೀರಾ ಕಡಿಮೆ ಇರುವ ಪ್ರದೇಶಗಳಲ್ಲಿ ರೈಲ್ವೆ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ರೈಲ್ವೆ ಇಲಾಖೆ ಎಸಿ ಚೇರ್​ ಕಾರ್​ ಮತ್ತು ಎಕ್ಸಿಕ್ಯೂಟಿವ್​ ಕ್ಲಾಸ್​ ಟಿಕೆಟ್​ಗೆ ರಿಯಾಯಿತಿ ದರ ಘೋಷಿಸಿದೆ.

ರಿಯಾಯಿತಿ
ರಿಯಾಯಿತಿ

ನವದೆಹಲಿ: ಕಡಿಮೆ ಜನಸಂಚಾರ ಇರುವ ಪ್ರದೇಶದ ಆಯ್ದ ರೈಲುಗಳ ಎಸಿ ಚೇರ್​ ಕಾರ್​ ಮತ್ತು ಎಕ್ಸಿಕ್ಯೂಟಿವ್​ ಕ್ಲಾಸ್​ ಟಿಕೆಟ್​ಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ವಂದೇ ಭಾರತ್​, ವಿಸ್ಟಾಡೋಮ್​ ಹಾಗು ಅನುಭೂತಿ ಸೇರಿದಂತೆ ಇನ್ನಿತರ ರೈಲುಗಳು ರಿಯಾಯಿತಿಯಡಿ ಬರಲಿವೆ.

ಶೇಕಡಾ 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ಆಯ್ದ ಪ್ರದೇಶಗಳ ಆಯ್ದ ರೈಲುಗಳಿಗೆ ಡಿಸ್ಕೌಂಟ್​ ಟಿಕೆಟ್​ ದರ ಸಿಗಲಿದೆ. ಈ ಪ್ರದೇಶಗಳಲ್ಲಿ ರೈಲು ಸಂಚಾರವನ್ನು ಹೆಚ್ಚಿಸುವ ಸಲುವಾಗಿ ಈ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಲಾಗಿದೆ.

  • .@RailMinIndia introduces Discount Scheme in AC Chair Car and Executive Classes of all trains having AC Sitting Accommodation including Anubhuti & Vistadome Coaches

    The element of discount shall be upto maximum 25% on the basic fare

    Read here: https://t.co/WrI24I2Crt

    — PIB India (@PIB_India) July 8, 2023 " class="align-text-top noRightClick twitterSection" data=" ">

ಎಸಿ ಚೇರ್​ ಕಾರ್​ ಮತ್ತು ಎಕ್ಸಿಕ್ಯೂಟಿವ್​ ಕ್ಲಾಸ್​ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಘೋಷಿಸಲಾದ ರಿಯಾಯಿತಿ ದರದ ಯೋಜನೆಯನ್ನು ಯಾವೆಲ್ಲ ರೈಲುಗಳಿಗೆ ನೀಡಬೇಕು ಎಂಬುದನ್ನು ರೈಲ್ವೇ ವಲಯಗಳ ಪ್ರಧಾನ ವಾಣಿಜ್ಯ ವ್ಯವಸ್ಥಾಪಕರೇ ನಿರ್ಧರಿಸಬೇಕು. ಅವರಿಗೆ ಡಿಸ್ಕೌಂಟ್​ ನೀಡುವ ಅಧಿಕಾರವನ್ನು ರೈಲ್ವೆ ಸಚಿವಾಲಯ ನೀಡಿದೆ.

ಈ ರಿಯಾಯಿತಿ ಯೋಜನೆಯು ಎಲ್ಲ ಸಾಮಾನ್ಯ ರೈಲುಗಳ ಜೊತೆಗೆ ಅನುಭೂತಿ ಮತ್ತು ವಿಸ್ಟಾಡೋಮ್, ವಂದೇ ಭಾರತ್​ನ ಎಸಿ ಚೇರ್​ ಕಾರ್​, ಎಕ್ಸಿಕ್ಯೂಟಿವ್​ ಆಸನಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

ರಿಸರ್ವೇಶನ್​ ರಿಯಾಯಿತಿ ಇಲ್ಲ: ಮೂಲ ಟಿಕೆಟ್​ನ ದರದಲ್ಲಿ ಮಾತ್ರ ಗರಿಷ್ಠ ಶೇ.25ರಷ್ಟು ರಿಯಾಯಿತಿ ಸಿಗಲಿದೆ. ರಿಸರ್ವೇಶನ್​ ಶುಲ್ಕ, ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್​​ಟಿ, ಇತರ ಶುಲ್ಕಗಳು ಈಗಿನಂತೆಯೇ ಇರಲಿವೆ. ಈ ರಿಯಾಯಿತಿಯನ್ನು ಜನಸಂಚಾರದ ಆಧಾರದ ಮೇಲೆ ಯಾವುದೇ ರೈಲು ಅಥವಾ ಕ್ಲಾಸ್​ಗಳಿಗೆ ಅನ್ವಯಿಸಬಹುದು ಎಂದೂ ರೈಲ್ವೆ ತಿಳಿಸಿದೆ.

ಕಳೆದ ಒಂದು ತಿಂಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಬುಕ್ಕಿಂಗ್​ ಆದ ರೈಲುಗಳು, ಮಾರ್ಗಗಳಿಗೆ ಈ ಯೋಜನೆಯನ್ನು ನೀಡಬಹುದು. ಇದು ಪ್ರಯಾಣಿಕರ ಆರಂಭದ ನಿಲ್ದಾಣದಿಂದ ಕಡೆಯ ನಿಲ್ದಾಣದವರೆಗೆ, ನಿಲ್ದಾಣದಿಂದ ಮುಂದಿನ ನಿಲ್ದಾಣ, ಮಧ್ಯದ ನಿಲ್ದಾಣಗಳಿಗೂ ಈ ರಿಯಾಯಿತಿ ಸಿಗಲಿದೆ.

ಈಗಾಗಲೇ ಟಿಕೆಟ್​ ಬುಕ್​ ಮಾಡಿದವರಿಗೆ ಹಣ ವಾಪಸ್​ ಸಿಗುವುದಿಲ್ಲ. ರಜೆ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಬಿಡುವ ಯಾವುದೇ ರೈಲುಗಳಿಗೆ ರಿಯಾಯಿತಿ ಅನ್ವಯಿಸುವುದಿಲ್ಲ. ಯೋಜನೆಯನ್ನು ತಕ್ಷಣಕ್ಕೆ ಅನ್ವಯಿಸುವಂತೆ ಜಾರಿಗೆ ತರಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಲಬುರಗಿ-ಬೀದರ್​ ಪ್ಯಾಸೆಂಜರ್ ರೈಲಿನ ಮೇಲೆ‌ ಕಿಡಿಗೇಡಿಗಳಿಂದ ಕಲ್ಲು ತೂರಾಟ; ಮಹಿಳೆಗೆ ಗಾಯ

ನವದೆಹಲಿ: ಕಡಿಮೆ ಜನಸಂಚಾರ ಇರುವ ಪ್ರದೇಶದ ಆಯ್ದ ರೈಲುಗಳ ಎಸಿ ಚೇರ್​ ಕಾರ್​ ಮತ್ತು ಎಕ್ಸಿಕ್ಯೂಟಿವ್​ ಕ್ಲಾಸ್​ ಟಿಕೆಟ್​ಗೆ ಶೇಕಡಾ 25ರಷ್ಟು ರಿಯಾಯಿತಿ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ವಂದೇ ಭಾರತ್​, ವಿಸ್ಟಾಡೋಮ್​ ಹಾಗು ಅನುಭೂತಿ ಸೇರಿದಂತೆ ಇನ್ನಿತರ ರೈಲುಗಳು ರಿಯಾಯಿತಿಯಡಿ ಬರಲಿವೆ.

ಶೇಕಡಾ 50ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚರಿಸುವ ಆಯ್ದ ಪ್ರದೇಶಗಳ ಆಯ್ದ ರೈಲುಗಳಿಗೆ ಡಿಸ್ಕೌಂಟ್​ ಟಿಕೆಟ್​ ದರ ಸಿಗಲಿದೆ. ಈ ಪ್ರದೇಶಗಳಲ್ಲಿ ರೈಲು ಸಂಚಾರವನ್ನು ಹೆಚ್ಚಿಸುವ ಸಲುವಾಗಿ ಈ ರಿಯಾಯಿತಿಯನ್ನು ಘೋಷಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೇಳಲಾಗಿದೆ.

  • .@RailMinIndia introduces Discount Scheme in AC Chair Car and Executive Classes of all trains having AC Sitting Accommodation including Anubhuti & Vistadome Coaches

    The element of discount shall be upto maximum 25% on the basic fare

    Read here: https://t.co/WrI24I2Crt

    — PIB India (@PIB_India) July 8, 2023 " class="align-text-top noRightClick twitterSection" data=" ">

ಎಸಿ ಚೇರ್​ ಕಾರ್​ ಮತ್ತು ಎಕ್ಸಿಕ್ಯೂಟಿವ್​ ಕ್ಲಾಸ್​ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಘೋಷಿಸಲಾದ ರಿಯಾಯಿತಿ ದರದ ಯೋಜನೆಯನ್ನು ಯಾವೆಲ್ಲ ರೈಲುಗಳಿಗೆ ನೀಡಬೇಕು ಎಂಬುದನ್ನು ರೈಲ್ವೇ ವಲಯಗಳ ಪ್ರಧಾನ ವಾಣಿಜ್ಯ ವ್ಯವಸ್ಥಾಪಕರೇ ನಿರ್ಧರಿಸಬೇಕು. ಅವರಿಗೆ ಡಿಸ್ಕೌಂಟ್​ ನೀಡುವ ಅಧಿಕಾರವನ್ನು ರೈಲ್ವೆ ಸಚಿವಾಲಯ ನೀಡಿದೆ.

ಈ ರಿಯಾಯಿತಿ ಯೋಜನೆಯು ಎಲ್ಲ ಸಾಮಾನ್ಯ ರೈಲುಗಳ ಜೊತೆಗೆ ಅನುಭೂತಿ ಮತ್ತು ವಿಸ್ಟಾಡೋಮ್, ವಂದೇ ಭಾರತ್​ನ ಎಸಿ ಚೇರ್​ ಕಾರ್​, ಎಕ್ಸಿಕ್ಯೂಟಿವ್​ ಆಸನಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದೆ.

ರಿಸರ್ವೇಶನ್​ ರಿಯಾಯಿತಿ ಇಲ್ಲ: ಮೂಲ ಟಿಕೆಟ್​ನ ದರದಲ್ಲಿ ಮಾತ್ರ ಗರಿಷ್ಠ ಶೇ.25ರಷ್ಟು ರಿಯಾಯಿತಿ ಸಿಗಲಿದೆ. ರಿಸರ್ವೇಶನ್​ ಶುಲ್ಕ, ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್​​ಟಿ, ಇತರ ಶುಲ್ಕಗಳು ಈಗಿನಂತೆಯೇ ಇರಲಿವೆ. ಈ ರಿಯಾಯಿತಿಯನ್ನು ಜನಸಂಚಾರದ ಆಧಾರದ ಮೇಲೆ ಯಾವುದೇ ರೈಲು ಅಥವಾ ಕ್ಲಾಸ್​ಗಳಿಗೆ ಅನ್ವಯಿಸಬಹುದು ಎಂದೂ ರೈಲ್ವೆ ತಿಳಿಸಿದೆ.

ಕಳೆದ ಒಂದು ತಿಂಗಳಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಬುಕ್ಕಿಂಗ್​ ಆದ ರೈಲುಗಳು, ಮಾರ್ಗಗಳಿಗೆ ಈ ಯೋಜನೆಯನ್ನು ನೀಡಬಹುದು. ಇದು ಪ್ರಯಾಣಿಕರ ಆರಂಭದ ನಿಲ್ದಾಣದಿಂದ ಕಡೆಯ ನಿಲ್ದಾಣದವರೆಗೆ, ನಿಲ್ದಾಣದಿಂದ ಮುಂದಿನ ನಿಲ್ದಾಣ, ಮಧ್ಯದ ನಿಲ್ದಾಣಗಳಿಗೂ ಈ ರಿಯಾಯಿತಿ ಸಿಗಲಿದೆ.

ಈಗಾಗಲೇ ಟಿಕೆಟ್​ ಬುಕ್​ ಮಾಡಿದವರಿಗೆ ಹಣ ವಾಪಸ್​ ಸಿಗುವುದಿಲ್ಲ. ರಜೆ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಬಿಡುವ ಯಾವುದೇ ರೈಲುಗಳಿಗೆ ರಿಯಾಯಿತಿ ಅನ್ವಯಿಸುವುದಿಲ್ಲ. ಯೋಜನೆಯನ್ನು ತಕ್ಷಣಕ್ಕೆ ಅನ್ವಯಿಸುವಂತೆ ಜಾರಿಗೆ ತರಲಾಗುವುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕಲಬುರಗಿ-ಬೀದರ್​ ಪ್ಯಾಸೆಂಜರ್ ರೈಲಿನ ಮೇಲೆ‌ ಕಿಡಿಗೇಡಿಗಳಿಂದ ಕಲ್ಲು ತೂರಾಟ; ಮಹಿಳೆಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.