ETV Bharat / business

ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತದಲ್ಲಿ ಹಣದುಬ್ಬರ ಹೆಚ್ಚಳ, ಕಡಿವಾಣಕ್ಕೆ ಕ್ರಮ ಅಗತ್ಯ : ಐಎಂಎಫ್​

author img

By

Published : Apr 27, 2022, 9:04 AM IST

ಭಾರತದಲ್ಲಿ ಹಣದುಬ್ಬರ ಹೆಚ್ಚಳಕ್ಕೆ ತೈಲ ಬೆಲೆಗಳು ಕಾರಣವಾಗಿದ್ದು, ಹಣಕಾಸು ಯೋಜನೆ ಬಿಗಿಗೊಳಿಸುವುದು ಈಗಿನ ತುರ್ತು ಅಗತ್ಯವಾಗಿದೆ ಎಂದು ಐಎಂಎಫ್​ ಎಚ್ಚರಿಕೆ ನೀಡಿದೆ.

International Monetary Fund, High oil prices behind inflation in India, monetary tightening need in India, IMF officer, ಅಂತಾರಾಷ್ಟ್ರೀಯ ಹಣಕಾಸು ನಿಧಿ, ಭಾರತದಲ್ಲಿ ಹಣದುಬ್ಬರದ ಹಿಂದೆ ತೈಲ ಬೆಲೆಗಳು ಏರಿಕೆ, ಭಾರತದಲ್ಲಿ ವಿತ್ತೀಯ ಬಿಗಿ ಅಗತ್ಯ, ಐಎಂಎಫ್​ ಅಧಿಕಾರಿ,
ತೈಲ ಬೆಲೆಗಳ ಏರಿಕೆಯಿಂದಾಗಿ ಭಾರತದಲ್ಲಿ ಹಣದುಬ್ಬರ ಹೆಚ್ಚಿದೆ

ವಾಷಿಂಗ್ಟನ್: 60ಕ್ಕೂ ಹೆಚ್ಚು ದಿನ ಕಳೆದರೂ ರಷ್ಯಾ - ಉಕ್ರೇನ್‌ ಸಮರ ಮುಂದುವರಿದಿದೆ. ಸದ್ಯಕ್ಕೆ ಇದು ಮುಕ್ತಾಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ತೈಲ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಭಾರತದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗತೊಡಗುತ್ತಿದೆ. ಹೀಗಾಗಿ ಹಣದುಬ್ಬರ ನಿಯಂತ್ರಣಕ್ಕೆ ಕಡಿವಾಣ ಹಾಕುವ ಅಗತ್ಯ ಹೆಚ್ಚಾಗಿದೆ.

ಉಕ್ರೇನ್ ಯುದ್ಧದ ಕಾರಣದಿಂದಾಗಿ ತೈಲ ಬೆಲೆಗಳ ಏರಿಕೆಯಾಗ್ತಿದ್ದು, ಭಾರತದಲ್ಲಿ ಹಣದುಬ್ಬರ ಹೆಚ್ಚಳವಾಗಿದೆ. ಇದರಿಂದಾಗಿ ಹಣಕಾಸು ಯೋಜನೆ ಬಿಗಿಗೊಳಿಸುವಿಕೆ ಮತ್ತು ಬೆಳವಣಿಗೆ ಸಾಮರ್ಥ್ಯ ಸುಧಾರಿಸುವುದಕ್ಕೆ ರಚನಾತ್ಮಕ ದೌರ್ಬಲ್ಯಗಳನ್ನು ಪರಿಹರಿಸುವ ಕ್ರಮಗಳ ಅಗತ್ಯವಿದೆ ಎಂದು ಹಿರಿಯ ಐಎಂಎಫ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂದಾಜಿನ ಪ್ರಕಾರ, ದೇಶದ ಆರ್ಥಿಕತೆಯು 2022-23ರಲ್ಲಿ ಶೇ.8.2ರಷ್ಟು ಗುರುತಿಸಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 0.8 ರಷ್ಟು ಕಡಿತಗೊಂಡಿದೆ. ಕಳೆದ ವರ್ಷ ಭಾರತ ಶೇ.9ರಷ್ಟು ಆರ್ಥಿಕತೆಯಲ್ಲಿ ಏರಿಕೆ ದಾಖಲಿಸಿತ್ತು ಎಂದು ಐಎಂಎಫ್​ನ ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಅನ್ನೆ-ಮೇರಿ ಗುಲ್ಡೆ-ವುಲ್ಫ್ ಹೇಳಿದ್ದಾರೆ.

ಓದಿ: ಭಾರತೀಯ ಆರ್ಥಿಕತೆಯಲ್ಲಿ ಚೀನಾಗಿಂತ ದುಪಟ್ಟು ಏರಿಕೆ.. ಈ ಬಗ್ಗೆ ಐಎಂಎಫ್​ ಹೇಳೋದು ಹೀಗೆ..

ಉಕ್ರೇನ್​​- ರಷ್ಯಾ ನಡುವೆ ಹಣದುಬ್ಬರ ಏರಿಕೆಗೆ ಕಾರಣ ನಿಜವಾಗಿಯೂ ಉಕ್ರೇನ್‌ನಲ್ಲಿನ ಯುದ್ಧವಾಗಿದೆ. ಉಕ್ರೇನ್​ನಲ್ಲಿ ಭಾರತವು ವಿಶೇಷವಾಗಿ ತೈಲ ಮತ್ತು ಸರಕು ಆಮದುಗಳ ಮೇಲೆ ಅವಲಂಬಿತವಾಗಿದೆ ಎಂದ ಅವರು ದುರ್ಬಲ ಕುಟುಂಬಗಳನ್ನು ಬೆಂಬಲಿಸುವ ಮತ್ತು ಮೂಲಸೌಕರ್ಯ ಹೂಡಿಕೆಯತ್ತ ಗಮನ ಹರಿಸುವ ಸರಕುಗಳ ಹಣಕಾಸಿನ ನಿಲುವು ಸೂಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಐಎಂಎಫ್​ ಅಧಿಕಾರಿ ಹೇಳಿದರು.

ಹಣಕಾಸು ಯೋಜನೆ ಬಿಗಿಗೊಳಿಸುವಿಕೆ ಮತ್ತು ರಚನಾತ್ಮಕ ದೌರ್ಬಲ್ಯಗಳನ್ನು ಪರಿಶೀಲಿಸುವ ಕ್ರಮಗಳನ್ನು ಶಿಫಾರಸು ಮಾಡಿದ ಅವರು, ಕೆಲವು ವಿತ್ತೀಯ ಬಿಗಿಗೊಳಿಸುವಿಕೆಗಾಗಿ ಉತ್ತಮ ಸಂವಹನದ ಹಣಕಾಸು ನೀತಿ ಕ್ರಮಗಳು ಅಗತ್ಯವಿದೆ ಎಂದು ಅವರು ಹೇಳಿದರು.

ಭಾರತದ ಅಭಿವೃದ್ಧಿಯ ಸಾಮರ್ಥ್ಯ ಹೆಚ್ಚಿಸಲು, ದೀರ್ಘಾವಧಿಯ ಬೆಳವಣಿಗೆ ಸಾಧಿಸಲು ಮತ್ತು ಅಡಚಣೆಗಳನ್ನು ಒದಗಿಸುವ ಭಾರತೀಯ ಆರ್ಥಿಕತೆಯ ರಚನಾತ್ಮಕ ದೌರ್ಬಲ್ಯಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದು IMF ಅಧಿಕಾರಿ ಹೇಳಿದರು.

ವಾಷಿಂಗ್ಟನ್: 60ಕ್ಕೂ ಹೆಚ್ಚು ದಿನ ಕಳೆದರೂ ರಷ್ಯಾ - ಉಕ್ರೇನ್‌ ಸಮರ ಮುಂದುವರಿದಿದೆ. ಸದ್ಯಕ್ಕೆ ಇದು ಮುಕ್ತಾಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ತೈಲ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಭಾರತದಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗತೊಡಗುತ್ತಿದೆ. ಹೀಗಾಗಿ ಹಣದುಬ್ಬರ ನಿಯಂತ್ರಣಕ್ಕೆ ಕಡಿವಾಣ ಹಾಕುವ ಅಗತ್ಯ ಹೆಚ್ಚಾಗಿದೆ.

ಉಕ್ರೇನ್ ಯುದ್ಧದ ಕಾರಣದಿಂದಾಗಿ ತೈಲ ಬೆಲೆಗಳ ಏರಿಕೆಯಾಗ್ತಿದ್ದು, ಭಾರತದಲ್ಲಿ ಹಣದುಬ್ಬರ ಹೆಚ್ಚಳವಾಗಿದೆ. ಇದರಿಂದಾಗಿ ಹಣಕಾಸು ಯೋಜನೆ ಬಿಗಿಗೊಳಿಸುವಿಕೆ ಮತ್ತು ಬೆಳವಣಿಗೆ ಸಾಮರ್ಥ್ಯ ಸುಧಾರಿಸುವುದಕ್ಕೆ ರಚನಾತ್ಮಕ ದೌರ್ಬಲ್ಯಗಳನ್ನು ಪರಿಹರಿಸುವ ಕ್ರಮಗಳ ಅಗತ್ಯವಿದೆ ಎಂದು ಹಿರಿಯ ಐಎಂಎಫ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಂದಾಜಿನ ಪ್ರಕಾರ, ದೇಶದ ಆರ್ಥಿಕತೆಯು 2022-23ರಲ್ಲಿ ಶೇ.8.2ರಷ್ಟು ಗುರುತಿಸಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 0.8 ರಷ್ಟು ಕಡಿತಗೊಂಡಿದೆ. ಕಳೆದ ವರ್ಷ ಭಾರತ ಶೇ.9ರಷ್ಟು ಆರ್ಥಿಕತೆಯಲ್ಲಿ ಏರಿಕೆ ದಾಖಲಿಸಿತ್ತು ಎಂದು ಐಎಂಎಫ್​ನ ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕ ಅನ್ನೆ-ಮೇರಿ ಗುಲ್ಡೆ-ವುಲ್ಫ್ ಹೇಳಿದ್ದಾರೆ.

ಓದಿ: ಭಾರತೀಯ ಆರ್ಥಿಕತೆಯಲ್ಲಿ ಚೀನಾಗಿಂತ ದುಪಟ್ಟು ಏರಿಕೆ.. ಈ ಬಗ್ಗೆ ಐಎಂಎಫ್​ ಹೇಳೋದು ಹೀಗೆ..

ಉಕ್ರೇನ್​​- ರಷ್ಯಾ ನಡುವೆ ಹಣದುಬ್ಬರ ಏರಿಕೆಗೆ ಕಾರಣ ನಿಜವಾಗಿಯೂ ಉಕ್ರೇನ್‌ನಲ್ಲಿನ ಯುದ್ಧವಾಗಿದೆ. ಉಕ್ರೇನ್​ನಲ್ಲಿ ಭಾರತವು ವಿಶೇಷವಾಗಿ ತೈಲ ಮತ್ತು ಸರಕು ಆಮದುಗಳ ಮೇಲೆ ಅವಲಂಬಿತವಾಗಿದೆ ಎಂದ ಅವರು ದುರ್ಬಲ ಕುಟುಂಬಗಳನ್ನು ಬೆಂಬಲಿಸುವ ಮತ್ತು ಮೂಲಸೌಕರ್ಯ ಹೂಡಿಕೆಯತ್ತ ಗಮನ ಹರಿಸುವ ಸರಕುಗಳ ಹಣಕಾಸಿನ ನಿಲುವು ಸೂಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ ಎಂದು ಐಎಂಎಫ್​ ಅಧಿಕಾರಿ ಹೇಳಿದರು.

ಹಣಕಾಸು ಯೋಜನೆ ಬಿಗಿಗೊಳಿಸುವಿಕೆ ಮತ್ತು ರಚನಾತ್ಮಕ ದೌರ್ಬಲ್ಯಗಳನ್ನು ಪರಿಶೀಲಿಸುವ ಕ್ರಮಗಳನ್ನು ಶಿಫಾರಸು ಮಾಡಿದ ಅವರು, ಕೆಲವು ವಿತ್ತೀಯ ಬಿಗಿಗೊಳಿಸುವಿಕೆಗಾಗಿ ಉತ್ತಮ ಸಂವಹನದ ಹಣಕಾಸು ನೀತಿ ಕ್ರಮಗಳು ಅಗತ್ಯವಿದೆ ಎಂದು ಅವರು ಹೇಳಿದರು.

ಭಾರತದ ಅಭಿವೃದ್ಧಿಯ ಸಾಮರ್ಥ್ಯ ಹೆಚ್ಚಿಸಲು, ದೀರ್ಘಾವಧಿಯ ಬೆಳವಣಿಗೆ ಸಾಧಿಸಲು ಮತ್ತು ಅಡಚಣೆಗಳನ್ನು ಒದಗಿಸುವ ಭಾರತೀಯ ಆರ್ಥಿಕತೆಯ ರಚನಾತ್ಮಕ ದೌರ್ಬಲ್ಯಗಳನ್ನು ಪರಿಹರಿಸುವುದು ಮುಖ್ಯವಾಗಿದೆ ಎಂದು IMF ಅಧಿಕಾರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.