ETV Bharat / business

ಬಡ ಜನರ ಕೈಗೆ ಬಜೆಟ್​ ಹಣ ಕೊಟ್ಟು ನೋಡಿ, ಆಗ ಆರ್ಥಿಕತೆ ರೂಫಿಗೇರುತ್ತೆ..!

author img

By

Published : Jan 29, 2020, 12:52 AM IST

ಈ ಹಿಂದಿನ ಬಜೆಟ್​​ನಲ್ಲಿ ಕಡು ಬಡವರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಕೆಳ ವರ್ಗದವರನ್ನು ಕೇಂದ್ರೀಕರಿಸಿದ್ದರೂ ಇನ್ನೂ ಹೆಚ್ಚಿನ ಹಣವನ್ನು ಸಾಮಾನ್ಯ ಜನರ ಕೈಗೆ ನೀಡಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿಬರುತ್ತಿದೆ.

Budget
ಬಜೆಟ್​

ನವದೆಹಲಿ: ದೇಶದ ಆರ್ಥಿಕತೆಯು ಮಂದಗತಿಯಲ್ಲಿ ಇರುವಾಗ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2020ನೇ ಸಾಲಿನ ಬಜೆಟ್​​ನತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಈ ಹಿಂದಿನ ಬಜೆಟ್​​ನಲ್ಲಿ ಕಡುಬಡವರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಕೆಳ ವರ್ಗದವರನ್ನು ಕೇಂದ್ರೀಕರಿಸಿದ್ದರೂ ಇನ್ನೂ ಹೆಚ್ಚಿನ ಹಣವನ್ನು ಸಾಮಾನ್ಯ ಜನರ ಕೈಗೆ ನೀಡಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿಬರುತ್ತಿದೆ.

ಆದಾಯ ತೆರಿಗೆ ದರಗಳ ಕಡಿತ, ಉದ್ಯೋಗ ಸೃಷ್ಟಿ, ದ್ರವ್ಯತೆ ಪರಿಸ್ಥಿತಿ ಸುಧಾರಣೆಯ ಮೂಲಕ ಇದನ್ನು ಸಾಧಿಸಬಹುದಾಗಿದೆ. ಸೀತಾರಾಮನ್ ಅವರು ಒಂದೆರಡು ತಿಂಗಳ ಹಿಂದೆಯಷ್ಟೇ ಕಾರ್ಪೊರೇಟ್ ತೆರಿಗೆ ದರ ಕಡಿತಗೊಳಿಸಿದ್ದರು. ಕೇಂದ್ರದ ಇಂತಹ ಉತ್ತೇಜನಕರ ನಡೆ ಸಾಮಾನ್ಯ ವ್ಯಕ್ತಿಗೆ ತನಗೇನಾದರೂ ಸಿಗಬಹುದಾ ಎಂಬ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಮ್ಮದು 130 ಕೋಟಿ ಜನಸಂಖ್ಯೆ ಹೊಂದಿರುವ ದೇಶ. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಕೇವಲ 5.65 ಕೋಟಿ ಮಾತ್ರ. ಇದರ ಜೊತೆಗೆ ಹಣಕಾಸು ಸಚಿವರು ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ದರ ಸಡಿಲಗೊಳಿಸಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ.

ಪ್ರಸ್ತುತ, 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಯಾವುದೇ ತೆರಿಗೆ ಇಲ್ಲ (ರಿಯಾಯಿತಿ ಪರಿಗಣಿಸಿದ ಬಳಿಕ). ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಿಲ್ಲ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, 97 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ತೆರಿಗೆದಾರರು 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಆದಾಯವನ್ನು ತೋರಿಸಿದ್ದಾರೆ. ಈ ತೆರಿಗೆದಾರರಿಂದ ಸಂಗ್ರಹಿಸಿದ ಆದಾಯ 45,000 ಕೋಟಿ ರೂ.ನಷ್ಟಿದೆ. ಸಂಬಳ ಪಡೆಯುವವರೇ ತೆರಿಗೆ ಪಾವತಿಯಲ್ಲಿ ಸಿಂಹಪಾಲು ಹೊಂದಿದ್ದಾರೆ. ಆದರಿಂದಲೇ ಹೆಚ್ಚಿನ ತೆರಿಗೆ ವಿನಾಯಿತಿ ನಿರೀಕ್ಷಿಸುತ್ತಿದಾರೆ. ಸರ್ಕಾರವು ಆದಾಯ ತೆರಿಗೆ ಕಡಿತಗೊಳಿಸಿದರೆ ಗ್ರಾಹಕರ ಹೆಚ್ಚಿನ ಹಣದ ಖರ್ಚಿಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ನೆರವಾಗಬಲ್ಲದು ಎಂಬ ವಾದವಿದೆ.

₹ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳ ಮೇಲೆ ಗರಿಷ್ಠ ತೆರಿಗೆ ದರ ಶೇ 30ರಷ್ಟು ವಿಧಿಸಲಾಗುತ್ತದೆ. ಗರಿಷ್ಠ ದರಕ್ಕೆ ಅನ್ವಯಿಸುವ ಆದಾಯ ಮಟ್ಟವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸೀತಾರಾಮನ್ ಅವರು ನಿರ್ಧಾರ ತೆಗೆದುಕೊಂಡರೇ ಅದು ಗ್ರಾಹಕ ಮಾರುಕಟ್ಟೆಯನ್ನು ವಿಸ್ತರಿಸಲು ಪ್ರೇರಣೆ ಆಗುತ್ತದೆ.

ನೇರ ತೆರಿಗೆ ಸಂಹಿತೆಯ ಕಾರ್ಯಪಡೆಯ ಸಲಹೆಯೆಂದರೆ, 20 ಲಕ್ಷ ರೂ.ಗಿಂತ ಅಧಿಕ ಆದಾಯ ಇರುವವರಿಗೆ ಶೇ 30ರಷ್ಟು ತೆರಿಗೆ. ಪ್ರಸ್ತುತ 10 ಲಕ್ಷ ರೂ. ಇರುವವರೆಗೆ ಇದು ಬೇಡ. ಶೇ 20ರಷ್ಟು ತೆರಿಗೆಯನ್ನು ₹ 10ರಿಂದ ₹ 20 ಲಕ್ಷದವರಿಗೆ ಮತ್ತು ಶೇ 10ರಷ್ಟು ತೆರಿಗೆ ₹ 2.5 ಲಕ್ಷದಿಂದ ₹ 10 ಲಕ್ಷ ನಡುವೆ ಇರುವವರಿಗೆ ನಿಗದಿಪಡಿಸಬೇಕು ಎಂದಿದೆ.

ಸ್ವಯಂ ಆಕ್ರಮಿತ ಆಸ್ತಿಯ ವಸತಿ ಸಾಲದ ಬಡ್ಡಿ (5 ಕಂತುಗಳಲ್ಲಿನ ನಿರ್ಮಾಣ ಪೂರ್ವ ಬಡ್ಡಿ ಸೇರಿ) ಕಡಿತ ₹ 2 ಲಕ್ಷ. 2019-20ನೇ ಹಣಕಾಸು ವರ್ಷದಲ್ಲಿ ಪರಿಚಯಿಸಲಾದ ಸೆಕ್ಷನ್ 80 ಇಇಎ, ಸ್ಟಾಂಪ್ ಡ್ಯೂಟಿ ಮೌಲ್ಯದ ₹ 45 ಲಕ್ಷ ಕಡಿತ, ಗೃಹ ಸಾಲ ಬಡ್ಡಿಗೆ 2 ಲಕ್ಷ ಕಡಿತವಿದೆ.

ಅನೇಕ ನಗರಗಳಲ್ಲಿ ರಿಯಲ್ ಎಸ್ಟೇಟ್ ದರಗಳು ಹೆಚ್ಚಿದೆ. ಆದರಿಂದ, ಗೃಹ ಮೌಲ್ಯದ ಮೇಲೆ ಯಾವುದೇ ವಿಧದ ಮಿತಿಯನ್ನು ತೆಗೆಯಬೇಕು. ವಸತಿ ದರ ಮತ್ತು ಗಾತ್ರವನ್ನು ಲೆಕ್ಕಿಸದೆ ಎಲ್ಲಾ ತೆರಿಗೆ ಪಾವತಿದಾರರಿಗೆ ಅವರ ಮೊದಲ ವಸತಿ ಖರೀದಿಗೆ ಹೆಚ್ಚಿನ ಕಡಿತ ವಿಸ್ತರಿಸುವಂತಾಗಬೇಕು. ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನ ನೀಡುತ್ತದೆ. ಖರೀದಿದಾರರಿಗೆ ಮುಕ್ತ ಆಯ್ಕೆಯ ಪರದೆ ಸಿಗುತ್ತದೆ.

ವಸತಿ ಉಳಿತಾಯಕ್ಕಾಗಿ ಸೆಕ್ಷನ್ 80ಸಿ ಅಡಿಯಲ್ಲಿನ ಕಡಿತವನ್ನು ವಾರ್ಷಿಕ 1,50,000 ರೂ.ಗೆ ಸೀಮಿತಗೊಳಿಸಲಾಗಿದೆ. ಜೀವನ ನಿರ್ವಹಣೆಯ ವೆಚ್ಚ ಏರಿಕೆಯಾಗಿದ್ದರಿಂದ ಸರ್ಕಾರ ತನ್ನ ಮಿತಿಯನ್ನು ಹೆಚ್ಚಿಸಬೇಕು. ಮಕ್ಕಳ ಬೋಧನಾ ಶುಲ್ಕ, ಜೀವ ವಿಮೆಯ ಪ್ರೀಮಿಯಂ ಮತ್ತು ವಸತಿ ಸಾಲದಂತಹ ಪ್ರಮುಖ ಪಾವತಿಗಳ ವೆಚ್ಚಗಳನ್ನು ಪ್ರತ್ಯೇಕ ಕಡಿತಗಳಿಗೆ ಅನುಮತಿಸಬೇಕು. ಎನ್‌ಪಿಎಸ್‌ಗೆ ವ್ಯಕ್ತಿ ನೀಡಿದ ಕೊಡಿಗೆಯನ್ನು ಪರಿಗಣಿಸಿ 50,000 ರೂ. ಹೆಚ್ಚುವರಿ ಕಡಿತವನ್ನು ಏರಿಕೆಮಾಡಬೇಕು ಎಂಬ ಕೂಗು ಸಹ ಇದೆ.

ಯಾವುದೇ ಇಂಡೆಕ್ಸ್​ ಪ್ರಯೋಜನವನ್ನು ಅನುಮತಿಸದೆ ಪಟ್ಟಿಮಾಡಿದ ಈಕ್ವಿಟಿ ಷೇರುಗಳನ್ನು 1 ಲಕ್ಷ ರೂ.ಗಿಂತ ಹೆಚ್ಚಿರುವ ಶೇ 10ರಷ್ಟು ವರ್ಗಾವಣೆಯಿಂದ ಬರುವ ಲಾಭಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ಮರುಪರಿಶೀಲಿಸುವ ಬೇಡಿಕೆಯೂ ಕೇಂದ್ರದ ಮುಂದಿದೆ. 1 ಲಕ್ಷ ರೂ. ಮಿತಿ ತುಂಬಾ ಕಡಿಮೆಯಾಗಿದೆ. ಅನೇಕ ವ್ಯಕ್ತಿಗಳು ಹಲವು ವರ್ಷಗಳಿಂದ ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಹೊಂದಿದ್ದಾರೆ.

ಒಟ್ಟಾರೆಯಾಗಿ ದೈನಂದಿನ ಬಳಕೆಯ ಸರಕುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಅವುಗಳನ್ನು ಕೈಗೆಟುಕುವಂತೆ ಮಾಡಲು ದರವನ್ನು ಕಡಿಮೆ ಮಾಡಬೇಕು. ಆರ್ಥಿಕತೆಯಲ್ಲಿ ಅನುಭೋಗದ ಪ್ರವೃತ್ತಿಯನ್ನು ಹೆಚ್ಚಿಸಲು ಮತ್ತು ಬೇಡಿಕೆಯ ಕುಸಿತವನ್ನು ಪರಿಶೀಲಿಸಿ ಆಯ್ದ ಉತ್ಪನ್ನಗಳ ಮೇಲಿನ ಜಿಎಸ್​ಟಿ ದರಗಳನ್ನು ತಗ್ಗಿಸಬಹುದು ಎಂಬ ನಿರೀಕ್ಷೆಯಿದೆ.

-ಹಿರಿಯ ಪತ್ರಕರ್ತ ಶೇಖರ್ ಅಯ್ಯರ್

ನವದೆಹಲಿ: ದೇಶದ ಆರ್ಥಿಕತೆಯು ಮಂದಗತಿಯಲ್ಲಿ ಇರುವಾಗ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2020ನೇ ಸಾಲಿನ ಬಜೆಟ್​​ನತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಈ ಹಿಂದಿನ ಬಜೆಟ್​​ನಲ್ಲಿ ಕಡುಬಡವರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಕೆಳ ವರ್ಗದವರನ್ನು ಕೇಂದ್ರೀಕರಿಸಿದ್ದರೂ ಇನ್ನೂ ಹೆಚ್ಚಿನ ಹಣವನ್ನು ಸಾಮಾನ್ಯ ಜನರ ಕೈಗೆ ನೀಡಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿಬರುತ್ತಿದೆ.

ಆದಾಯ ತೆರಿಗೆ ದರಗಳ ಕಡಿತ, ಉದ್ಯೋಗ ಸೃಷ್ಟಿ, ದ್ರವ್ಯತೆ ಪರಿಸ್ಥಿತಿ ಸುಧಾರಣೆಯ ಮೂಲಕ ಇದನ್ನು ಸಾಧಿಸಬಹುದಾಗಿದೆ. ಸೀತಾರಾಮನ್ ಅವರು ಒಂದೆರಡು ತಿಂಗಳ ಹಿಂದೆಯಷ್ಟೇ ಕಾರ್ಪೊರೇಟ್ ತೆರಿಗೆ ದರ ಕಡಿತಗೊಳಿಸಿದ್ದರು. ಕೇಂದ್ರದ ಇಂತಹ ಉತ್ತೇಜನಕರ ನಡೆ ಸಾಮಾನ್ಯ ವ್ಯಕ್ತಿಗೆ ತನಗೇನಾದರೂ ಸಿಗಬಹುದಾ ಎಂಬ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಮ್ಮದು 130 ಕೋಟಿ ಜನಸಂಖ್ಯೆ ಹೊಂದಿರುವ ದೇಶ. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಕೇವಲ 5.65 ಕೋಟಿ ಮಾತ್ರ. ಇದರ ಜೊತೆಗೆ ಹಣಕಾಸು ಸಚಿವರು ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ದರ ಸಡಿಲಗೊಳಿಸಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ.

ಪ್ರಸ್ತುತ, 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಯಾವುದೇ ತೆರಿಗೆ ಇಲ್ಲ (ರಿಯಾಯಿತಿ ಪರಿಗಣಿಸಿದ ಬಳಿಕ). ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಿಲ್ಲ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, 97 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ತೆರಿಗೆದಾರರು 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಆದಾಯವನ್ನು ತೋರಿಸಿದ್ದಾರೆ. ಈ ತೆರಿಗೆದಾರರಿಂದ ಸಂಗ್ರಹಿಸಿದ ಆದಾಯ 45,000 ಕೋಟಿ ರೂ.ನಷ್ಟಿದೆ. ಸಂಬಳ ಪಡೆಯುವವರೇ ತೆರಿಗೆ ಪಾವತಿಯಲ್ಲಿ ಸಿಂಹಪಾಲು ಹೊಂದಿದ್ದಾರೆ. ಆದರಿಂದಲೇ ಹೆಚ್ಚಿನ ತೆರಿಗೆ ವಿನಾಯಿತಿ ನಿರೀಕ್ಷಿಸುತ್ತಿದಾರೆ. ಸರ್ಕಾರವು ಆದಾಯ ತೆರಿಗೆ ಕಡಿತಗೊಳಿಸಿದರೆ ಗ್ರಾಹಕರ ಹೆಚ್ಚಿನ ಹಣದ ಖರ್ಚಿಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ನೆರವಾಗಬಲ್ಲದು ಎಂಬ ವಾದವಿದೆ.

₹ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳ ಮೇಲೆ ಗರಿಷ್ಠ ತೆರಿಗೆ ದರ ಶೇ 30ರಷ್ಟು ವಿಧಿಸಲಾಗುತ್ತದೆ. ಗರಿಷ್ಠ ದರಕ್ಕೆ ಅನ್ವಯಿಸುವ ಆದಾಯ ಮಟ್ಟವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸೀತಾರಾಮನ್ ಅವರು ನಿರ್ಧಾರ ತೆಗೆದುಕೊಂಡರೇ ಅದು ಗ್ರಾಹಕ ಮಾರುಕಟ್ಟೆಯನ್ನು ವಿಸ್ತರಿಸಲು ಪ್ರೇರಣೆ ಆಗುತ್ತದೆ.

ನೇರ ತೆರಿಗೆ ಸಂಹಿತೆಯ ಕಾರ್ಯಪಡೆಯ ಸಲಹೆಯೆಂದರೆ, 20 ಲಕ್ಷ ರೂ.ಗಿಂತ ಅಧಿಕ ಆದಾಯ ಇರುವವರಿಗೆ ಶೇ 30ರಷ್ಟು ತೆರಿಗೆ. ಪ್ರಸ್ತುತ 10 ಲಕ್ಷ ರೂ. ಇರುವವರೆಗೆ ಇದು ಬೇಡ. ಶೇ 20ರಷ್ಟು ತೆರಿಗೆಯನ್ನು ₹ 10ರಿಂದ ₹ 20 ಲಕ್ಷದವರಿಗೆ ಮತ್ತು ಶೇ 10ರಷ್ಟು ತೆರಿಗೆ ₹ 2.5 ಲಕ್ಷದಿಂದ ₹ 10 ಲಕ್ಷ ನಡುವೆ ಇರುವವರಿಗೆ ನಿಗದಿಪಡಿಸಬೇಕು ಎಂದಿದೆ.

ಸ್ವಯಂ ಆಕ್ರಮಿತ ಆಸ್ತಿಯ ವಸತಿ ಸಾಲದ ಬಡ್ಡಿ (5 ಕಂತುಗಳಲ್ಲಿನ ನಿರ್ಮಾಣ ಪೂರ್ವ ಬಡ್ಡಿ ಸೇರಿ) ಕಡಿತ ₹ 2 ಲಕ್ಷ. 2019-20ನೇ ಹಣಕಾಸು ವರ್ಷದಲ್ಲಿ ಪರಿಚಯಿಸಲಾದ ಸೆಕ್ಷನ್ 80 ಇಇಎ, ಸ್ಟಾಂಪ್ ಡ್ಯೂಟಿ ಮೌಲ್ಯದ ₹ 45 ಲಕ್ಷ ಕಡಿತ, ಗೃಹ ಸಾಲ ಬಡ್ಡಿಗೆ 2 ಲಕ್ಷ ಕಡಿತವಿದೆ.

ಅನೇಕ ನಗರಗಳಲ್ಲಿ ರಿಯಲ್ ಎಸ್ಟೇಟ್ ದರಗಳು ಹೆಚ್ಚಿದೆ. ಆದರಿಂದ, ಗೃಹ ಮೌಲ್ಯದ ಮೇಲೆ ಯಾವುದೇ ವಿಧದ ಮಿತಿಯನ್ನು ತೆಗೆಯಬೇಕು. ವಸತಿ ದರ ಮತ್ತು ಗಾತ್ರವನ್ನು ಲೆಕ್ಕಿಸದೆ ಎಲ್ಲಾ ತೆರಿಗೆ ಪಾವತಿದಾರರಿಗೆ ಅವರ ಮೊದಲ ವಸತಿ ಖರೀದಿಗೆ ಹೆಚ್ಚಿನ ಕಡಿತ ವಿಸ್ತರಿಸುವಂತಾಗಬೇಕು. ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನ ನೀಡುತ್ತದೆ. ಖರೀದಿದಾರರಿಗೆ ಮುಕ್ತ ಆಯ್ಕೆಯ ಪರದೆ ಸಿಗುತ್ತದೆ.

ವಸತಿ ಉಳಿತಾಯಕ್ಕಾಗಿ ಸೆಕ್ಷನ್ 80ಸಿ ಅಡಿಯಲ್ಲಿನ ಕಡಿತವನ್ನು ವಾರ್ಷಿಕ 1,50,000 ರೂ.ಗೆ ಸೀಮಿತಗೊಳಿಸಲಾಗಿದೆ. ಜೀವನ ನಿರ್ವಹಣೆಯ ವೆಚ್ಚ ಏರಿಕೆಯಾಗಿದ್ದರಿಂದ ಸರ್ಕಾರ ತನ್ನ ಮಿತಿಯನ್ನು ಹೆಚ್ಚಿಸಬೇಕು. ಮಕ್ಕಳ ಬೋಧನಾ ಶುಲ್ಕ, ಜೀವ ವಿಮೆಯ ಪ್ರೀಮಿಯಂ ಮತ್ತು ವಸತಿ ಸಾಲದಂತಹ ಪ್ರಮುಖ ಪಾವತಿಗಳ ವೆಚ್ಚಗಳನ್ನು ಪ್ರತ್ಯೇಕ ಕಡಿತಗಳಿಗೆ ಅನುಮತಿಸಬೇಕು. ಎನ್‌ಪಿಎಸ್‌ಗೆ ವ್ಯಕ್ತಿ ನೀಡಿದ ಕೊಡಿಗೆಯನ್ನು ಪರಿಗಣಿಸಿ 50,000 ರೂ. ಹೆಚ್ಚುವರಿ ಕಡಿತವನ್ನು ಏರಿಕೆಮಾಡಬೇಕು ಎಂಬ ಕೂಗು ಸಹ ಇದೆ.

ಯಾವುದೇ ಇಂಡೆಕ್ಸ್​ ಪ್ರಯೋಜನವನ್ನು ಅನುಮತಿಸದೆ ಪಟ್ಟಿಮಾಡಿದ ಈಕ್ವಿಟಿ ಷೇರುಗಳನ್ನು 1 ಲಕ್ಷ ರೂ.ಗಿಂತ ಹೆಚ್ಚಿರುವ ಶೇ 10ರಷ್ಟು ವರ್ಗಾವಣೆಯಿಂದ ಬರುವ ಲಾಭಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ಮರುಪರಿಶೀಲಿಸುವ ಬೇಡಿಕೆಯೂ ಕೇಂದ್ರದ ಮುಂದಿದೆ. 1 ಲಕ್ಷ ರೂ. ಮಿತಿ ತುಂಬಾ ಕಡಿಮೆಯಾಗಿದೆ. ಅನೇಕ ವ್ಯಕ್ತಿಗಳು ಹಲವು ವರ್ಷಗಳಿಂದ ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಹೊಂದಿದ್ದಾರೆ.

ಒಟ್ಟಾರೆಯಾಗಿ ದೈನಂದಿನ ಬಳಕೆಯ ಸರಕುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಅವುಗಳನ್ನು ಕೈಗೆಟುಕುವಂತೆ ಮಾಡಲು ದರವನ್ನು ಕಡಿಮೆ ಮಾಡಬೇಕು. ಆರ್ಥಿಕತೆಯಲ್ಲಿ ಅನುಭೋಗದ ಪ್ರವೃತ್ತಿಯನ್ನು ಹೆಚ್ಚಿಸಲು ಮತ್ತು ಬೇಡಿಕೆಯ ಕುಸಿತವನ್ನು ಪರಿಶೀಲಿಸಿ ಆಯ್ದ ಉತ್ಪನ್ನಗಳ ಮೇಲಿನ ಜಿಎಸ್​ಟಿ ದರಗಳನ್ನು ತಗ್ಗಿಸಬಹುದು ಎಂಬ ನಿರೀಕ್ಷೆಯಿದೆ.

-ಹಿರಿಯ ಪತ್ರಕರ್ತ ಶೇಖರ್ ಅಯ್ಯರ್

Intro:Body:

Summary: Budgets have previously focused on the very poor sections, farmers, unorganised labour and the lower strata. There is a clamour for some big steps to put more money on the hands of the middle class in the Union Budget 2020.



Body: Hyderabad: All eyes are on Finance Minister Nirmala Sitharaman to get the economy back to health when she presents the Budget 2020 on February 1.  



Although the Budgets have previously focused on the very poor sections, farmers, unorganised labour and the lower strata, there is a clamour for some big steps to put more money on the hands of the common man.



This can be done either by slashing income tax rates, job creation, or improving liquidity conditions.



Sitharaman cut the corporate tax rate a couple of months ago. This increased the expectation of the aam aadmi who is looking forward to changes which will increase his disposable income.



We are a country with a population of 130 crore. But number of people who file income tax returns is only 5.65 crore. Therefore, everyone expects the Finance Minister to relax the personal income tax slab rates.



Currently, there is no tax for individuals with income up to Rs 5 lakh (after considering rebate). The basic exemption limit has, however, not increased from Rs 2.5 lakh to Rs 5 lakh.



According to the tax department, over 97 lakh individual taxpayers showed income between Rs 5 lakh and Rs 10 lakh and the revenue collected from these taxpayers was more than Rs. 45,000 crore. Of them, the salaried class contributes to a large part of the tax kitty.



Therefore, it expects more tax relief. If the government cuts income tax, it will give the consumers more money spend and boost demand.



At the top of earners, the peak basic tax rate of 30% is charged on individuals having an income of Rs 10 lakh or more.



If Sitharaman can raise the income level on which peak rate is applied, it will boost the mood in the consumer market.



A suggestion of the task force on Direct Tax Code was for 30% tax for income above Rs 20 lakh and not Rs 10 lakh as at present.



A new slab of 20 % tax rate could be re-introduced for Rs 10-20 lakh income slab. There could be 10% tax for those earning between Rs 2.5 lakh to 10 lakh.



Currently, the deduction of housing loan interest (including pre-construction interest claimed in five equal instalments) for a self-occupied property is limited up to Rs 2 lakh.



Further, section 80EEA, introduced in FY 2019-20 provides additional deduction of Rs 1.5 lakh for interest payment on purchasing a house with the stamp duty value not exceeding Rs. 45 lakh. This deduction is allowed over and above the Rs. 2 lakh deduction for home loan interest.



But the real estate prices are high in many cities. Therefore, any limit on the value of the house should go. A much higher deduction could be extended to all taxpayers for their first house purchases irrespective of the cost and size of the house. This will give the much required boost to the real estate sector, freeing the buyers to make a wider choice.



Similarly, deduction under Section 80C for household savings is limited to Rs 1,50,000 per annum. The government must increase the limit because of the increased cost of living.



Expenses such as children’s tuition fees, life insurance premium and housing loan principal payments should be allowed separate deductions. There is a clamour for an increase in the additional deduction of Rs 50,000 on the individual’s contribution into NPS.



There is also a demand for a re-look at long-term capital gains tax on gains arising from the transfer of listed equity shares exceeding Rs 1 lakh at 10 percent, without allowing any indexation benefit. This limit of Rs 1 Lakh is too low as many individuals are holding equity mutual fund investments for many years.



On the whole, the prices of daily use goods are at an all-time high. They should be brought down to make them affordable. There is also an expectation that goods and service tax rates on some products could be brought down to boost consumption and check the fall in demand in the economy.



(Article by Senior Journalist Shekhar Iyer. Views expressed above are his own)


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.